Homeಮುಖಪುಟ`ನಿಮ್ಮ ಜೋಳಿಗೆ ಎತ್ತಿಕೊಂಡು ಹೊರಟು ಬಿಡಿ!' - ಪ್ರಧಾನಿ ಮೋದಿಗೆ ಅರುಂಧತಿ ರಾಯ್ ಪತ್ರ

`ನಿಮ್ಮ ಜೋಳಿಗೆ ಎತ್ತಿಕೊಂಡು ಹೊರಟು ಬಿಡಿ!’ – ಪ್ರಧಾನಿ ಮೋದಿಗೆ ಅರುಂಧತಿ ರಾಯ್ ಪತ್ರ

- Advertisement -
- Advertisement -

ನಮಗೊಂದು ಸರ್ಕಾರ ಬೇಕು. ಅತ್ಯಗತ್ಯವಾಗಿ, ತಕ್ಷಣವೇ ಬೇಕು. ಆದರೆ ನಮಗೀಗ ಸರ್ಕಾರ ಎಂಬುದಿಲ್ಲ. ನಮಗೆ ಉಸಿರಾಡಲಾಗುತ್ತಿಲ್ಲ. ನಮ್ಮ ಪ್ರಾಣ ಹಾರಿ ಹೋಗುತ್ತಿದೆ. ಸಿಗುವ ಸಹಾಯವನ್ನಾದರೂ ಪಡೆದುಕೊಳ್ಳಲು ನಾವು ಏನು ಮಾಡಬೇಕೆಂದು ತಿಳಿಸುವ ವ್ಯವಸ್ಥೆಗಳಾವುದೂ ಕಾರ್ಯನಿರ್ವಾಹಿಸುತ್ತಿಲ್ಲ.

ಬೇರೇನು ಮಾಡಬೇಕು? ಈ ಕ್ಷಣ, ಈ ಸ್ಥಳದಲ್ಲಿ ನಮ್ಮ ಕರ್ತವ್ಯವೇನು?

ನಾವು 2024 ರವರೆಗೆ ಕಾಯಲಾರೆವು. ಯಾವುದೇ ವಿಚಾರಕ್ಕಾದರೂ ಸರಿಯೇ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿನಂತಿಸಿಕೊಳ್ಳುವ ದಿನವೊಂದು ಬರುವುದೆಂಬ ಊಹೆ ನನ್ನ ಸುತ್ತಮುತ್ತಲಿನ ಜನಕ್ಕೆ ಎಂದೂ ಬಂದಿರಲಿಕ್ಕಿಲ್ಲ. ವೈಯುಕ್ತಿಕವಾಗಿ ತನ್ನಷ್ಟಕ್ಕೆ ನಾನೇ ಅಂತಹ ವಿನಂತಿ ಮಾಡುವುದಕ್ಕಿಂತ ಜೈಲಿಗೆ ಹೋಗುವುದೇ ಉತ್ತಮವೆಂದು ಭಾವಿಸಿದ್ದೆ.

ಇದನ್ನೂ ಓದಿ: ಇತಿಹಾಸ: 60 ಲಕ್ಷ ಜನರ ಹತ್ಯಾಕಾಂಡದ ರೂವಾರಿ ‘ಅಡಾಲ್ಫ್‌ ಹಿಟ್ಲರ್‌‌’ ಆತ್ಮಹತ್ಯೆ ಮಾಡಿಕೊಂಡ

ಆದರೆ ಇಂದು ನಾವು ನಮ್ಮ ಮನೆಗಳಲ್ಲಿ, ಬೀದಿಗಳಲ್ಲಿ, ಆಸ್ಪತ್ರೆಗಳ ಕಾರ್ ಪಾರ್ಕಿಂಗ್ ಪ್ರದೇಶಗಳಲ್ಲಿ, ಮಹಾನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ, ಗ್ರಾಮಗಳಲ್ಲಿ, ಅರಣ್ಯಗಳಲ್ಲಿ, ಹೊಲ-ಗದ್ದೆಗಳಲ್ಲಿ – ಎಲ್ಲೆಂದರಲ್ಲಿ ಬಿದ್ದು ಸಾಯುತ್ತಿದ್ದರೆ ಒಬ್ಬ ಸಾಮಾನ್ಯ ಪ್ರಜೆಯಾದ ನಾನು ನನ್ನ ಆತ್ಮಗೌರವವನ್ನು ಮರೆತು, ಕೋಟ್ಯಾಂತರ ಜನ ಸಹಚರರ ಜೊತೆ ಧ್ವನಿಗೂಡಿಸುತ್ತಿದ್ದೇನೆ. ಸ್ವಾಮಿ ದಯವಿಟ್ಟು… ದಯವಿಟ್ಟು.. ರಾಜಿನಾಮೆ ನೀಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಕನಿಷ್ಟ ಪಕ್ಷ ಈಗಲಾದರೂ ಪಕ್ಕಕ್ಕೆ ತೊಲಗಿ. ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಕೆಳಗಿಳಿಯಿರಿ.

ಈ ಬಿಕ್ಕಟ್ಟನ್ನು ನೀವೇ ಸೃಷ್ಟಿಸಿದ್ದೀರಿ. ಇದನ್ನು ಬಗೆಹರಿಸುವುದು ನಿಮ್ಮ ಕೈಗಳಲ್ಲಿ ಇಲ್ಲ. ನೀವು ಇದನ್ನು ಮತ್ತಷ್ಟು ದಾರುಣವಾಗಿ ಮಾತ್ರವೇ ಮಾರ್ಪಡಿಸಬಲ್ಲಿರಿ. ಭಯ, ದ್ವೇಷ, ಅಜ್ಞಾನ ತುಂಬಿದ ವಾತಾವರಣದಲ್ಲಿ ಈ ವೈರಸ್ ಮತ್ತಷ್ಟು ಬಲಗೊಳ್ಳುತ್ತದೆ. ಧ್ವನಿಯೆತ್ತಿ ಮಾತನಾಡಬಲ್ಲ ಧ್ವನಿಗಳನ್ನು ನೀವು ಹತ್ತಿಕ್ಕಿದಾಗ ಈ ವೈರಸ್ ವಿಸ್ತರಿಸುತ್ತದೆ. ಸತ್ಯ ಏನೆಂದರೆ ಅಂತರಾಷ್ಟ್ರೀಯ ಪ್ರಚಾರ ಸಾಧನಗಳಲ್ಲಿ ಮಾತ್ರವೇ ಪ್ರಕಟವಾಗುವಂತೆ ನೀವು ದೇಶದಲ್ಲಿರುವ ಪ್ರಚಾರ ಸಾಧನಗಳನ್ನು ನಿಮ್ಮ ಗುಲಾಮಗಿರಿಯಲ್ಲಿರಿಸಿಕೊಂಡಾಗ ಈ ವೈರಸ್ ದಿಕ್ಕು ದಿಕ್ಕುಗಳಿಗೂ ವ್ಯಾಪಿಸುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಒಟ್ಟಾರೆ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕೂಡ ನಿರ್ವಹಿಸದ, ಇಷ್ಟು ಭಯಾನಕ ವಾತಾವರಣದಲ್ಲಿಯೂ ಕೂಡ ಎದುರಿನಲ್ಲಿರುವವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪ್ರಧಾನ ಮಂತ್ರಿ ಇದ್ದಾಗ ಈ ವೈರಸ್ ಮತ್ತಷ್ಟು ರೌದ್ರನರ್ತನ ಮಾಡುತ್ತದೆ.

ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ನೀವೀಗ ಅಧಿಕಾರದಿಂದ ಕೆಳಗಿಳಿಯದಿದ್ದರೆ ನಮ್ಮಲ್ಲಿ ಸಾವಿರಾರು, ಲಕ್ಷಾಂತರ ಮಂದಿ ಅನಾವಶ್ಯಕವಾಗಿ ಮರಣ ಹೊಂದುತ್ತಾರೆ. ಹಾಗಾಗಿ ನೀವು ಹೊರಡಿ, ನಿಮ್ಮ ಜೋಳಿಗೆ ಎತ್ತಿಕೊಂಡು. ನೀವು ಗೌರವಯುತವಾಗಿ ಇಳಿಯುವ ಅವಕಾಶವಿದ್ದಾಗಲೇ ಇಳಿದುಬಿಡಿ. ನಿಮಗೆ ಧ್ಯಾನದಲ್ಲಿ, ಏಕಾಂತದಲ್ಲಿ ಉಜ್ವಲವಾದ ಭವಿಷ್ಯವಿದೆ. ನಿಮಗೆ ಬೇಕಾದುದು ಅದೇ ಎಂದು ಈ ಹಿಂದೆ ನೀವೇ ಹೇಳಿದ್ದೀರಿ. ಈಗಾಗಲೇ ನಡೆಯುತ್ತಿರುವ ಸಾಮೂಹಿಕ ಮಾರಣಹೋಮ ಹೀಗೆ ಮುಂದುವರೆದರೆ ನಿಮಗೆ ಅದೂ ಕೂಡ ಸಾಧ್ಯವಾಗದೇ ಹೋಗಬಹುದು.

ಈಗಾಗಲೇ ನಿಮ್ಮ ಸ್ಥಾನವನ್ನು ಅಲಂಕರಿಸಲು ನಿಮ್ಮ ಪಕ್ಷದಲ್ಲೇ ಬಹಳಷ್ಟು ಮಂದಿ ಇದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ವಿರೋಧ ಪಕ್ಷಗಳ ಜೊತೆ ಸಾಮರಸ್ಯವಾಗಿ ಇರಬೇಕೆಂದು ತಿಳಿದವರು. ನಿಮ್ಮ ಪಕ್ಷದಿಂದಲೇ, ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಅನುಮತಿಯೊಂದಿಗೆ, ಯಾರಾದರೂ ಆಗಲಿಬಿಡಿ. ಸರ್ಕಾರವನ್ನು, ಪ್ರಸ್ತುತ ವಾಗಿ ಇರುವ ಬಿಕ್ಕಟ್ಟು ನಿರ್ವಹಣೆಯ ತಂಡವನ್ನು ನಡೆಸಬಲ್ಲವು.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ಮೂಲಕ ಎಲ್ಲಾ ಪಕ್ಷಗಳಿಗೂ ಪ್ರತಿನಿಧಿತ್ವ ದೊರೆಯಬಹುದು. ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್‌ಗೂ ಆ ಬಿಕ್ಕಟ್ಟು ನಿರ್ವಹಣೆ ಯ ತಂಡದಲ್ಲಿ ಸ್ಥಾನ ಇರಬಹುದು. ಹಾಗೆಯೇ ವಿಜ್ಞಾನಿಗಳು, ಜನಾರೋಗ್ಯ ತಜ್ಞರು, ವೈದ್ಯರು, ಅನುಭವಿಗಳಾದ ಉನ್ನತಾಧಿಕಾರಿಗಳು ಇರಬಹುದು. ಇದೆಲ್ಲಾ ನಿಮಗೆ ಅರ್ಥವಾಗದಿರಬಹುದು, ಆದರೆ ಇದನ್ನೇ ಪ್ರಜಾತಂತ್ರ ಎನ್ನುತ್ತಾರೆ. ನೀವು ಅಂದುಕೊಳ್ಳುತ್ತಿರಬಹುದು, ಪ್ರತಿಪಕ್ಷ ಮುಕ್ತ ಪ್ರಜಾತಂತ್ರ ಎಂಬುದು ಇರದು. ಒಂದು ವೇಳೆ ಇದ್ದರೆ ಅದನ್ನು ನಿರಂಕುಶತ್ವ ಎನ್ನುತ್ತಾರೆ. ಈಗಿರುವ ವೈರಸ್‌ಗೆ ನಿರಂಕುಶತ್ವ ಎಂದರೆ ಬಹಳ ಇಷ್ಟ.

ನೀವೀಗ ಈ ಕೆಲಸ ಮಾಡದಿದ್ದರೆ, ಪ್ರಸ್ತುತ ಇರುವ ವಾತಾವರಣ ಹಂತ ಹಂತವಾಗಿ ಬೆಳೆದು ಅಂತರಾಷ್ಟ್ರೀಯ ಸಮಸ್ಯೆಯಾಗಿ, ಪ್ರಪಂಚಕ್ಕೇ ಅಪಾಯಕಾರಿ ಎಂದು ಕಾಣುತ್ತಿದೆ. ಇದು – ನಿಮ್ಮ ಅಸಾಮರ್ಥ್ಯ ಬೇರೆ ದೇಶಗಳಿಗೆ ನಮ್ಮ ಆತಂರಿಕ ವ್ಯವಹಾರಗಳಲ್ಲಿ ಮೂಗು ತೂರಿಸಲು ಪ್ರಯತ್ನಿಸುವುದಕ್ಕೆ ಮತ್ತು ಅಧಿಕಾರ ಹಿಡಿಯಲು ಪ್ರಯತ್ನಿಸುವುದಕ್ಕೆ ನ್ಯಾಯಯುತವಾದ ಅವಕಾಶವನ್ನು ನೀಡುತ್ತದೆ. ನಾವು ಕಷ್ಟಪಟ್ಟು ಹೋರಾಡಿ ಸಾಧಿಸಿಕೊಂಡ ಸಾರ್ವಭೌಮತ್ವ ಅಪಾಯದಲ್ಲಿ ಸಿಲುಕುತ್ತದೆ. ಪುನಃ ನಮ್ಮ ದೇಶ ಒಂದು ವಸಾಹತುವಾಗಿ ಮಾರ್ಪಡುತ್ತದೆ. ಇದೊಂದು ಗಂಭೀರವಾದ ಅಪಾಯಕಾರಿ ಅವಕಾಶ. ಇದನ್ನು ಕಡೆಗಣಿಸಬೇಡಿ.

ಆದ್ದರಿಂದ ಮಹಾನುಭಾವಾ, ದಯವಿಟ್ಟು ನೀವು ದಯಮಾಡಿಸಿ…ನೀವು ಮಾಡಬಹುದಾದ ಅತ್ಯಂತ ಜವಾಬ್ದಾರಿಯುತ ಕೆಲಸವಿದು. ನಮಗೆ ಪ್ರಧಾನ ಮಂತ್ರಿಯಾಗಿರುವ ನೈತಿಕ ಅಧಿಕಾರವನ್ನು ನೀವು ಕಳೆದುಕೊಂಡಿದ್ದೀರಿ.

ಕೃಪೆ: scroll. In
ಅನುವಾದ ರೇಣುಕಾ ಭಾರತಿ ಚಿಕ್ಕಮಗಳೂರು

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. Modi illade hodre e deshada stiti adhogati.. please don’t express your nexel mentality in this situation.this is not suitable time for that.

  2. Madam ಅರುಂಧತಿ ರಾಯ್. ನಿಮ್ಮ ನಿವೇದನೆ ಪೂರ್ವಕ ಆಗ್ರಹ, ಆಕ್ರೋಶ ನ್ಯಾಯಸಮ್ಮತವಾದುದು ಹಾಗೂ ೧೦೦ಕೋಟಿ ಭಾರತೀಯರ ಅಭಿಲಾಶೆಯಾಗಿದೆ. ಮಾನಗೆಟ್ಟ್ ಪರಧಾನಿಯೇ ಕೋಟ್ಯಾಧಿಪತಿ ಉದ್ಯಮಿಗಳಿಗಾಗಿ ಅಧಿಕಾರ ಚಲಾಯಿಸುತ್ತಿರುವ ನೀಚನೆ ತೊಲಗು ಈ ಗೌರವಾನ್ವಿತ ಹುದ್ದೆಯಿಂದ. ನೀನಾಗಿ ನೀನೆ ಅಧಿಕಾರದಿಂದ ಇಳಿಯದಿದ್ದರೆ ನಾವೆಲ್ಲ ನಿನ್ನನ್ನ ಕಲ್ಲು ಹೊಡೆದ ಅಧಿಕಾರದಿಂದ ಇಳಿಸುವ ಸಾಮರ್ಥ್ಯ ಹೊಂದಿದೇವೆ. ಈ ಮಟ್ಟಕ್ಕೆ ಇಳಿಯಬೇಡ.

  3. Madam ಅರುಂಧತಿ ರಾಯ್ ಅವ್ರೆ, ? ನಿಮ್ಮ ದೇಶದ ಕಾಳಜಿ ಶ್ಲಾಘನೀಯ. ಸಧ್ಯದ ಕೊರೋನ ಹೆಚ್ಚಳದಿಂದುಂಟಾದ ಉದ್ವಿಗ್ನ ಪರಿಸ್ಥಿತಿಯಿಂದ ಕರುಳು ಕಿತ್ತು ಬರುವಂತಹ ಪರಿಸ್ಥಿತಿ ನೋಡಿ ಮನಸ್ಸು ವ್ಯಗ್ರಗೊಂಡಿದೆ. ಸ್ವತಂತ್ರ ಪೂರ್ವ ಬ್ರಿಟಿಷರನ್ನೊಳಗೊಂಡು ದಾಳಿಕೋರರಾದಿಯಾಗಿ ಇಲ್ಲಿಯತನಕ ಕೆಲವು ಮುತ್ಸದ್ದಿಗಳನ್ನು ಹೊರತು ಪಡಿಸಿ ಎಲ್ಲರೂ ಜೋಳಿಗೆ ತುಂಬಿಸಿಕೊಂಡು ಹೋಗೋಕೆ ಬಂದೋರೆ. ಅದರಲ್ಲಿ ಎರಡು ಮಾತಿಲ್ಲ. ಮೋದಿ ಜೋಳಿಗಿ ಎತ್ತಿಕೊಂಡು ಹೋದ್ರೆ ಇನ್ನೂ ದೊಡ್ಡ ಜೋಳಿಗಿ ಹಿಡ್ಕೊಂಡು ತುಂಬಿಸಿಕೊಳ್ಳೋಕೆ ಕೆಲವರು ಕಾಯ್ತಾ ಇರ್ಬಹುದು. ಪ್ರಶ್ನೆ ಅದಲ್ಲ. ಇಂತ ಸಂಧಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡಬಹುದು ಅನ್ನುವಂತ ಸಲಹೆ ಸೂಚನೆಗಳನ್ನು ಕೊಡಬಹುದಿತ್ತೇನೋ ಅನ್ನೋದು ಅನೀಸಿಕೆ ಮಾತ್ರ . ಈ ಜೋಳಿಗಿ ಎತ್ತಿಕೊಂಡು ಹೋಗುವಂತೆ ಮಾಡೋದು, ತಮ್ಮ ಜೋಳಿಗಿ ತುಂಬಿಸಿಕೊಳ್ಲಿಕ್ಕೆ /ದೇಶದ ಜೋಳಿಗಿ ತುಂಬಲಿಕ್ಕೆ ಅವಕಾಶ ಮಾಡಿಕೊಡೋದು ಎಲ್ಲ ಜನರ ಕೈಯಲ್ಲಿಯೇ ಇದೆ. ಧನ್ಯವಾದಗಳು ಮೇಡಂ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...