Homeಮುಖಪುಟಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

ಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

- Advertisement -
- Advertisement -

ಅವನೇ ಶ್ರೀಮನ್ ನಾರಾಯಣ ಸ್ಯಾಂಡಲ್‌ವುಡ್ ನಲ್ಲಿ ತಯಾರಾಗಿರೋ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ ಅಂತ ಸೂಪರ್ ಹಿಟ್ ಸಿನಿಮಾಗಳನ್ನ ಬ್ಯಾಕ್ ಟು ಬ್ಯಾಕ್ ಕೊಟ್ಟ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಟ ರಕ್ಷಿತ್ ಶೆಟ್ಟಿ ಅದೇ ಹುಮ್ಮಸ್ಸಿನಲ್ಲಿ, ಗೆಲುವಿನ ಅಲೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಕ್ಕೆ ಕೈ ಹಾಕಿ, ಈಗ ಆ ಸಾಹಸವನ್ನ ರಿಲೀಸ್ ಹಂತಕ್ಕೆ ತಂದಿದ್ದಾರೆ. ಈಗಾಗ್ಲೇ ಅವನೇ ಶ್ರೀಮನ್ ನಾರಾಯಣ ಸಿನಿಮಾ ಕನ್ನಡದ ಅತಿದೊಡ್ಡ ಸಿನಿಮಾ, ಬಹುಭಾಷೆಯಲ್ಲಿ ತಯಾರಾಗಿರೋ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಕಾರಣಕ್ಕೆ ಸಖತ್ ಸುದ್ದಿಯಾಗ್ತಿದೆ.

ಇತ್ತೀಚೆಗಷ್ಟೇ ಅವನೇ ಶ್ರೀಮನ್ ನಾರಾಯಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ, ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ, ಮಾಡಲು ಹೊರಟಿರೋ ಸಾಹಸವನ್ನ ಕಂಡು, ಇಡೀ ಉದ್ಯಮ ಶಾಕ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವನ್ನ ರಿಲೀಸ್ ಮಾಡ್ತಿವಿ. ಬರೊಬ್ಬರಿ 300ಕೋಟಿ ಬ್ಯುಸಿನೆಸ್ ಮಾಡ್ತೀವಿ ಅಂತ ನಿರ್ಮಾಪಕರು ದಿಲ್ದಾರಾಗಿ ಹೇಳಿಕೊಂಡಿದ್ದಾರೆ. ಇದು ಒಂದು ಕಡೆ ಸ್ಯಾಂಡಲ್ವುಡ್ ಗೆ ಶಾಕ್ ಕೊಟ್ರೆ. ಮತ್ತೆಂದು ಕಡೆ ಇದು ವರ್ಕೌಟ್ ಆದ್ರೀ ಆಗಬಹುದು ಅನ್ನೋ ಲೆಕ್ಕಾಚಾರದ ಮಾತುಗಳು ಕೇಳಿ ಬರ್ತಿವೆ..

80ಕೋಟಿ ಬಜೆಟ್.. 300 ಕೋಟಿ ಟಾರ್ಗೆಟ್…!!!
ಅವನೇ ಶ್ರೀಮನ್ ನಾರಾಯಣ ಸಿನಿಮಾದ ಮೇಲೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬರೊಬ್ಬರಿ 80ಕೋಟಿ ಸುರಿದಿದ್ದಾರೆ. ಹಳೇ ಸಿನಿಮಾಗಳಿಂದ ಗಳಿಸಿದ್ದು, ಬ್ಯುಸಿನೆಸ್ ನಲ್ಲಿ ಗಳಿಸಿದ್ದರ ಜೊತೆಗೆ ಸಾಲ ಸೋಲ ಮಾಡಿ ಈ ಚಿತ್ರದ ಮೇಲೆ ಇಷ್ಟು ದೊಡ್ಡ ಬಂಡವಾಳ ಹೂಡಿದ್ದಾರೆ. ಗೆಲ್ಲೋ ಸೂತ್ರ ನನಗೆ ಗೊತ್ತಿದೆ. ಈ ಸಿನಿಮಾದಿಂದ 300 ಕೋಟಿ ಬ್ಯುಸಿನೆಸ್ ಆಗೇ ಆಗುತ್ತೆ ಅನ್ನೋ ಕಾನ್ಫಿಡೆನ್ಸ್ ನಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ರಿಸ್ಕ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಶ್ರೀಮನ್ ನಾರಾಯಣ ಸಿನಿಮಾದ ಜೊತೆಗೆ ನಾಲ್ಕು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಮುಂದಿನ ಆರೇಳು ತಿಂಗಳಲ್ಲಿ ಪುಷ್ಕರ್ ಬರೊಬ್ಬರಿ 5-6 ಚಿತ್ರಗಳನ್ನ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಪುಷ್ಕರ್ ಮಲ್ಲಿಕಾರ್ಜುನಯ್ಯ ನೂರು ಕೋಟಿಗೂ ಹೆಚ್ಚು ಬಂಡವಾಳವನ್ನ ಸಿನಿಮಾಗಳ ಮೇಲೆ ಹೂಡಿದ್ದಾರೆ.

ಕೆ.ಜಿ.ಎಫ್ ಸಿನಿಮಾ ಸ್ಫೂರ್ತಿಯಿಂದ ಈ ರಿಸ್ಕ್
ಅವನೇ ಶ್ರೀಮನ್ ನಾರಾಯಣ ಸಿನಿಮಾ ಮೇಲೆ 80ಕೋಟಿಯಷ್ಟು ದೊಡ್ಡ ಬಜೆಟ್ ನ ರಿಸ್ಕ್ ತಗೆದುಕೊಂಡಿದ್ದರು, ಚಿತ್ರದ ಕಥೆ ಮತ್ತು ಮೇಕಿಂಗ್ ಅಷ್ಟೇ ಕ್ವಾಲಿಟಿಯಾಗಿ ಮೂಡಿ ಬಂದಿದೆಯಂತೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾ ದೇಶದಾದ್ಯಂತ ಸೃಷ್ಟಿಸಿದ ಸಂಚಲನ ಮತ್ತು ಆ ಚಿತ್ರವನ್ನ ನಿರ್ಮಿಸಿದ್ದ ರೀತಿ ಪುಷ್ಕರ್ ಮತ್ತು ರಕ್ಷಿತ್ ಶೆಟ್ಟಿಗೆ ಸ್ಫೂರ್ತಿ ತುಂಬಿದೆ. ಅದೇ ಸ್ಫೂರ್ತಿಯಲ್ಲಿ, ಅಂತಹದ್ದೇ ಮ್ಯಾಜಿಕ್ ರಕ್ಷಿತ್ ಶೆಟ್ಟಿ ಸಿನಿಮಾನೂ ಮಾಡುತ್ತೆ. ಒಳ್ಳೆಯ ಯೂನಿವರ್ಸಲ್ ಕಥೆ, ಒಳ್ಳೆಯ ಸ್ಟಾರ್ ಕಾಸ್ಟ್, ಕ್ವಾಲಿಟಿ ಮೇಕಿಂಗ್ ಇವೆಲ್ಲದ್ರ ಜೊತೆಗೆ ಎಲ್ಲಾ ಕಡೆ ಸಲ್ಲುವ, ಎಲ್ಲಾ ಕಾಲಕ್ಕೂ ಸಲ್ಲುವ ರಂಜನೀಯ ಅಂಶಗಳನ್ನ ಹದವಾಗಿ ಮಿಶ್ರಣಗೊಳಿಸಿದ್ರೆ, ಸಾಕು ಸಿನಿಮಾ ವರ್ಕೌಟ್ ಆಗುತ್ತೆ. ಗೆದ್ದೆ ಗೆಲ್ಲುತ್ತೆ ಅನ್ನೋ ಭರವಸೆಯಲ್ಲಿ ಅವನೇ ಶ್ರೀಮನ್ ನಾರಾಯಣನ ಮೇಲೆ ಅಷ್ಟು ಕೋಟಿ ಸುರಿದಿದ್ದಾರೆ.
ಕಿರಿಕ್ ಪಾರ್ಟಿ ರಿಲೀಸ್ ಡೇಟ್ಗೆ ಶ್ರೀಮನ್ ನಾರಾಯಣ ರಿಲೀಸ್

ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡಿ ದೊಡ್ಡ ಸಕ್ಸಸ್ ಪಡೆದಿದ್ದ ಕಿರಿಕ್ ಪಾರ್ಟಿ ರಿಲೀಸ್ ಆದ ಅದೃಷ್ಟದ ಡೇಟ್ಗೆನೇ ಅವನೇ ಶ್ರೀಮನ್ ನಾರಾಯಣ ಸಿನಿಮಾವನ್ನ ರಿಲೀಸ್ ಮಾಡೋದಕ್ಕೆ ಚಿತ್ರತಂಡ ನಿರ್ಧರಿಸಿದ್ದು, ಆಗ್ಲೇ ನಾವು ಇದೇ ಡಿಸೆಂಬರ್ 27ಕ್ಕೆ ವರ್ಲ್ಡ್ ವೈಡ್ ಸಿನಿಮಾವನ್ನ ರಿಲೀಸ್ ಮಾಡ್ತೀವಿ ಅಂತ ಅನೌನ್ಸ್ ಮಾಡಿದೆ.
ಅವನೇ ಶ್ರೀಮನ್ ನಾರಾಯಣದ ಮೈನ್ ಸ್ಟ್ರೆಂಥ್ ಅಂದ್ರೆ ಅದು ರಕ್ಷಿತ್ ಶೆಟ್ಟಿ ಒಬ್ಬರೇ, ನೇಮೂ ಫೇಮೂ ಇರೋದು ಇವರೊಬ್ಬರದೇ. ಅದ್ರೆ ಜೊತೆಗೆ ಪುಷ್ಕರ್ ಫಿಲಂಸ್ ಬ್ಯಾನರ್ ವಿಚಾರವಾಗಿ ಹೆಸರು ಮಾಡಿದೆ. ಅದು ಬಿಟ್ರೆ, ಸಚಿನ್ ರವಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ, ಅಜನೀಶ್ ಲೋಕನಾಥ್ ರಕ್ಷಿತ್ ಶೆಟ್ಟಿ ನೆಚ್ಚಿನ ಸಂಗೀತ ನಿರ್ದೇಶಕನಾಗಿರೋದಿಂದ, ಈ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ವರ್ಕೌಟ್ ಆಗೋ ಸೂಚನೆ ಸಿಕ್ಕಿದೆ. ಚಿತ್ರದಲ್ಲಿ ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿಶ್ರೀವಾತ್ಸವ್ ಕಾಣಿಸಿಕೊಂಡಿದ್ದು, ಬಾಲಾಜಿ ಮೋಹನ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂದ್ದಾರೆ.

ಕೆ.ಜಿ.ಎಫ್ ಹಿಂದೆ ಬಂದ ಕುರುಕ್ಷೇತ್ರ, ಪೈಲ್ವಾನ್ ವರ್ಕ್ ಆಗ್ಲಿಲ್ಲ
ಅಂದ್ಹಾಗೆ ಕೆ.ಜಿ.ಎಫ್ ಸಿನಿಮಾದ ಪ್ಯಾನ್ ಇಂಡಿಯಾ ಸಕ್ಸಸ್ ನೋಡಿದ್ಮೇಲೆ, ಅದೇ ತರಹ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಭರದಲ್ಲಿ, ಕಿಚ್ಚ ಸುದೀಪ್ ಪೈಲ್ವಾನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಚಿತ್ರಗಳನ್ನ ಬಹುಭಾಷೆಯಲ್ಲಿ ರಿಲೀಸ್ ಮಾಡಿದ್ರೂ, ಆದ್ರೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಈ ಎರಡೂ ಚಿತ್ರಗಳು ವರ್ಕೌಟ್ ಆಗ್ಲಿಲ್ಲ. ಕೆ.ಜಿ.ಎಫ್ ಸಿನಿಮಾಗಿದ್ದ ಕಂಟೆಂಟ್ ಕ್ವಾಲಿಟಿಯಾಗ್ಲಿ, ಮೇಕಿಂಗ್ ಕ್ವಾಲಿಟಿಯಾಗ್ಲಿ ಈ ಚಿತ್ರಗಳಲ್ಲಿ ಇರಲಿಲ್ಲ ಅನ್ನೋ ರೆಸ್ಪಾನ್ಸ್ ರಿಸಲ್ಟ್ ಆಚೆ ಬಂದಾಯ್ತು.
ಅವನೇ ಶ್ರೀಮನ್ನಾರಾಯಣ ಏನಾಗಬಹುದು…?

ಯಶ್ ಎರಡು ವರ್ಷದ ಪರಿಶ್ರಮಕ್ಕೆ ಕೆ.ಜಿ.ಎಫ್ ಪ್ಯಾನ್ ಇಂಡಿಯಾ ಸಕ್ಸಸ್ ಕೊಟ್ಟಿತ್ತು. ಆದ್ರೆ ದರ್ಶನ್, ಸುದೀಪ್ ಅಂತಹ ಕನ್ನಡದ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವ್ವೆಲ್ ನಲ್ಲಿ ಮಕ್ಕಾಡೆ ಮಲಗಿದ್ವು. ಹೀಗಿರೋವಾಗ ಅದ್ರ ಬೆನ್ನಿಗೇನೇ ಬರ್ತಿರೋ ಅವನೇ ಶ್ರೀಮನ್ ನಾರಾಯಣ ಸಿನಿಮಾ ಏನಾಗಬಹುದು ಅನ್ನೋ ಪ್ರಶ್ನೆಗಳು ಈಗ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ. ಅವನೇ ಶ್ರೀಮನ್ ನಾರಾಯಣ ನಿರ್ಮಾಪಕರು ತೆಗೆದುಕೊಂಡಿರೋ ರಿಸ್ಕ್ ಕಂಡು ಬೆಚ್ಚಿ ಬಿದ್ದಿದೆ. ಕೆ.ಜಿ.ಎಫ್ ಹುಟ್ಟಿಸಿದ್ದ ಭರವಸೆ, ವಿಸ್ತರಿಸಿರೋ ಮಾರುಕಟ್ಟೆಯನ್ನ, ಲಾಸ್ಟ್ ಎರಡು ಸಿನಿಮಾಗಳ ಸೋಲು ಕುಗ್ಗಿಸಿವೆ. ಇದನ್ನ ಕಂಡು ಚಿತ್ರರಂಗ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಹೆದರಿ ನಿಂತಿದೆ. ಇಂತಹ ಸಮಯದಲ್ಲಿ ಅವನೇ ಶ್ರೀಮನ್ ನಾರಾಯಣ ಚಿತ್ರತಂಡ ನಾವು ಕೆಜಿಎಫ್ ಗಿಂತ ಯಾವುದ್ರಲ್ಲೂ ಕಡಿಮೆಯಿಲ್ಲ. ನಮ್ಮ ಸಿನಿಮಾ ಅವ್ರಿಗಿಂತ ಒಂದು ಪಟ್ಟು ಜಾಸ್ತೀನಿ ಅನ್ನೋ ಓವರ್ ಕಾನ್ಫಿಡೆನ್ಸ್ ನಲ್ಲಿದೆ.
ಯಡವಟ್ಟಾದ್ರೆ ಬೀದಿಗೆ ಬರ್ತಾರೆ ನಿರ್ಮಾಪಕರು

ಅವನೇ ಶ್ರೀಮನ್ ನಾರಾಯಣ ಸಿನಿಮಾ ನಿರ್ಮಾಪಕರು ಅಂದುಕೊಂಡಂತೆ ಆಗಲಿಲ್ಲ ಅಂದ್ರೆ, ಖಂಡಿತ ನಿರ್ಮಾಪಕರು ಬೀದಿಗೆ ಬರ್ತಾರೆ. ಇರೋಬರೋದನ್ನೆಲ್ಲಾ ಈ ಸಿನಿಮಾ ಮೇಲೆ ಹಾಕಿ, ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿರೋ ಪುಷ್ಕರ್ ಮಲ್ಲಿಕಾರ್ಜುನಯ್ಯರಿಗೆ, ಬರೀ ಕನ್ನಡದಲ್ಲಿ ಮಾತ್ರ ಸಿನಿಮಾ ವರ್ಕೌಟ್ ಆದ್ರೂ ಕಷ್ಟ. ಶತಾಯಗತಾಯ ಎಲ್ಲಾ ಭಾಷೆಯಲ್ಲೂ ಈ ಸಿನಿಮಾ ಚೆನ್ನಾಗಿ ಓಡಿದ್ರೆ ಮಾತ್ರ ಇವ್ರು ಹಾಕಿದ ಬಂಡವಾಳ ವಾಪಸ್ ಬರುತ್ತೆ. ಲಾಭ ಬರುತ್ತೆ. ಇಲ್ಲವಾದಲ್ಲಿ, ಭಾರಿ ತೊಂದರೆ ಎದುರಾಗುತ್ತೆ. ಸಿನಿಮಾ ನಿರ್ಮಾಣದ ಹಂತದಲ್ಲೇ ಕನ್ನಡದವತರಣಿಕೆಯ ಸ್ಯಾಟಿಲೈಟ್ ಮತ್ತಿ ಡಿಜಿಟಲ್ ರೈಟ್ಸ್ ನ ಸೇಲ್ ಮಾಡಿರೋ ಪುಷ್ಕರ್, ಪರಭಾಷೆಯ ಸ್ಯಾಟಿಲೈಟ್ ಮತ್ತು ಡಿಜಿಟಲ್ ರೈಟ್ಸ್ ಒಳ್ಳೆಯ ಬೆಲೆಗೆ ಸೇಲ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಕೆ.ಜಿ.ಎಫ್ ಸಿನಿಮಾ ರಿಲೀಸ್ಗೂ ಎರಡು ತಿಂಗಳ ಮೊದ್ಲೇ ಎಲ್ಲಾ ಭಾಷೆಯ ವಿತರಣೆಯ ಹಕ್ಕು, ಡಿಜಿಟಲ್, ಸ್ಯಾಟಿಲೈಟ್ ಹಕ್ಕನ್ನ ವ್ಯಾಪಾರ ಮಾಡಿಕೊಂಡು, ಪ್ರತಿಭಾಷೆಯಲ್ಲೂ ಪ್ರಚಾರ ಕಾರ್ಯವನ್ನ ಆರಂಭಿಸಿದ್ರು, ಆದ್ರೆ ಹಾಗೇ ಕಂಪೇರ್ ಮಾಡೋದಾದ್ರೆ, ಅವನೇ ಶ್ರೀಮನ್ ನಾರಾಯಣ ತಂಡದಿಂದ ಅಂತಹ ಯಾವುದೇ ದೊಡ್ಡಮಟ್ಟದ ಪ್ರೋಗ್ರೇಸೀವ್ ಕೆಲಸ ಆಗಿಲ್ಲ. ಹಾಗಾಗಿ, ಮೂಲಗಳು ಹೇಳೋ ಪ್ರಕಾರ ಈ ಚಿತ್ರದ ಕಂಟೆಂಟ್ ಚೆನ್ನಾಗಿದೇ ಆದ್ರೂ, ಈ ಚಿತ್ರತಂಡ ಮಾಡಿರೋ ಸಾಹಸ ಪ್ರಯೋಗಕ್ಕೆ, ಇವರು ನಿರೀಕ್ಷಿಸಿರೋ 300ಕೋಟಿ ಬರೋದು ದೂರದ ಮಾತು ಅಂತ ಗಾಂಧಿನಗರದ ಸಿನಿಮಾ ಬ್ಯುಸಿನೆಸ್ ಪಂಡಿತರು ಹೇಳ್ತಿದ್ದಾರೆ. ಅದೇನೆ ಇದ್ರೂ ಈ ವರ್ಷಾಂತ್ಯಕ್ಕೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಲಿದೆ. ಆದ್ರೆ ಅದು ಪಾಸಿಟೀವಾ..? ನೆಗೆಟೀವಾ..? ಅನ್ನೋದೇ ಸದ್ಯ ಗಾಂಧಿನಗರವನ್ನ ಕಾಡ್ತಿರೋ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...