Homeಮುಖಪುಟಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

ಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

- Advertisement -
- Advertisement -

ಅವನೇ ಶ್ರೀಮನ್ ನಾರಾಯಣ ಸ್ಯಾಂಡಲ್‌ವುಡ್ ನಲ್ಲಿ ತಯಾರಾಗಿರೋ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ ಅಂತ ಸೂಪರ್ ಹಿಟ್ ಸಿನಿಮಾಗಳನ್ನ ಬ್ಯಾಕ್ ಟು ಬ್ಯಾಕ್ ಕೊಟ್ಟ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಟ ರಕ್ಷಿತ್ ಶೆಟ್ಟಿ ಅದೇ ಹುಮ್ಮಸ್ಸಿನಲ್ಲಿ, ಗೆಲುವಿನ ಅಲೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಕ್ಕೆ ಕೈ ಹಾಕಿ, ಈಗ ಆ ಸಾಹಸವನ್ನ ರಿಲೀಸ್ ಹಂತಕ್ಕೆ ತಂದಿದ್ದಾರೆ. ಈಗಾಗ್ಲೇ ಅವನೇ ಶ್ರೀಮನ್ ನಾರಾಯಣ ಸಿನಿಮಾ ಕನ್ನಡದ ಅತಿದೊಡ್ಡ ಸಿನಿಮಾ, ಬಹುಭಾಷೆಯಲ್ಲಿ ತಯಾರಾಗಿರೋ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಕಾರಣಕ್ಕೆ ಸಖತ್ ಸುದ್ದಿಯಾಗ್ತಿದೆ.

ಇತ್ತೀಚೆಗಷ್ಟೇ ಅವನೇ ಶ್ರೀಮನ್ ನಾರಾಯಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ, ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ, ಮಾಡಲು ಹೊರಟಿರೋ ಸಾಹಸವನ್ನ ಕಂಡು, ಇಡೀ ಉದ್ಯಮ ಶಾಕ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವನ್ನ ರಿಲೀಸ್ ಮಾಡ್ತಿವಿ. ಬರೊಬ್ಬರಿ 300ಕೋಟಿ ಬ್ಯುಸಿನೆಸ್ ಮಾಡ್ತೀವಿ ಅಂತ ನಿರ್ಮಾಪಕರು ದಿಲ್ದಾರಾಗಿ ಹೇಳಿಕೊಂಡಿದ್ದಾರೆ. ಇದು ಒಂದು ಕಡೆ ಸ್ಯಾಂಡಲ್ವುಡ್ ಗೆ ಶಾಕ್ ಕೊಟ್ರೆ. ಮತ್ತೆಂದು ಕಡೆ ಇದು ವರ್ಕೌಟ್ ಆದ್ರೀ ಆಗಬಹುದು ಅನ್ನೋ ಲೆಕ್ಕಾಚಾರದ ಮಾತುಗಳು ಕೇಳಿ ಬರ್ತಿವೆ..

80ಕೋಟಿ ಬಜೆಟ್.. 300 ಕೋಟಿ ಟಾರ್ಗೆಟ್…!!!
ಅವನೇ ಶ್ರೀಮನ್ ನಾರಾಯಣ ಸಿನಿಮಾದ ಮೇಲೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬರೊಬ್ಬರಿ 80ಕೋಟಿ ಸುರಿದಿದ್ದಾರೆ. ಹಳೇ ಸಿನಿಮಾಗಳಿಂದ ಗಳಿಸಿದ್ದು, ಬ್ಯುಸಿನೆಸ್ ನಲ್ಲಿ ಗಳಿಸಿದ್ದರ ಜೊತೆಗೆ ಸಾಲ ಸೋಲ ಮಾಡಿ ಈ ಚಿತ್ರದ ಮೇಲೆ ಇಷ್ಟು ದೊಡ್ಡ ಬಂಡವಾಳ ಹೂಡಿದ್ದಾರೆ. ಗೆಲ್ಲೋ ಸೂತ್ರ ನನಗೆ ಗೊತ್ತಿದೆ. ಈ ಸಿನಿಮಾದಿಂದ 300 ಕೋಟಿ ಬ್ಯುಸಿನೆಸ್ ಆಗೇ ಆಗುತ್ತೆ ಅನ್ನೋ ಕಾನ್ಫಿಡೆನ್ಸ್ ನಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ರಿಸ್ಕ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಶ್ರೀಮನ್ ನಾರಾಯಣ ಸಿನಿಮಾದ ಜೊತೆಗೆ ನಾಲ್ಕು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಮುಂದಿನ ಆರೇಳು ತಿಂಗಳಲ್ಲಿ ಪುಷ್ಕರ್ ಬರೊಬ್ಬರಿ 5-6 ಚಿತ್ರಗಳನ್ನ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಪುಷ್ಕರ್ ಮಲ್ಲಿಕಾರ್ಜುನಯ್ಯ ನೂರು ಕೋಟಿಗೂ ಹೆಚ್ಚು ಬಂಡವಾಳವನ್ನ ಸಿನಿಮಾಗಳ ಮೇಲೆ ಹೂಡಿದ್ದಾರೆ.

ಕೆ.ಜಿ.ಎಫ್ ಸಿನಿಮಾ ಸ್ಫೂರ್ತಿಯಿಂದ ಈ ರಿಸ್ಕ್
ಅವನೇ ಶ್ರೀಮನ್ ನಾರಾಯಣ ಸಿನಿಮಾ ಮೇಲೆ 80ಕೋಟಿಯಷ್ಟು ದೊಡ್ಡ ಬಜೆಟ್ ನ ರಿಸ್ಕ್ ತಗೆದುಕೊಂಡಿದ್ದರು, ಚಿತ್ರದ ಕಥೆ ಮತ್ತು ಮೇಕಿಂಗ್ ಅಷ್ಟೇ ಕ್ವಾಲಿಟಿಯಾಗಿ ಮೂಡಿ ಬಂದಿದೆಯಂತೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾ ದೇಶದಾದ್ಯಂತ ಸೃಷ್ಟಿಸಿದ ಸಂಚಲನ ಮತ್ತು ಆ ಚಿತ್ರವನ್ನ ನಿರ್ಮಿಸಿದ್ದ ರೀತಿ ಪುಷ್ಕರ್ ಮತ್ತು ರಕ್ಷಿತ್ ಶೆಟ್ಟಿಗೆ ಸ್ಫೂರ್ತಿ ತುಂಬಿದೆ. ಅದೇ ಸ್ಫೂರ್ತಿಯಲ್ಲಿ, ಅಂತಹದ್ದೇ ಮ್ಯಾಜಿಕ್ ರಕ್ಷಿತ್ ಶೆಟ್ಟಿ ಸಿನಿಮಾನೂ ಮಾಡುತ್ತೆ. ಒಳ್ಳೆಯ ಯೂನಿವರ್ಸಲ್ ಕಥೆ, ಒಳ್ಳೆಯ ಸ್ಟಾರ್ ಕಾಸ್ಟ್, ಕ್ವಾಲಿಟಿ ಮೇಕಿಂಗ್ ಇವೆಲ್ಲದ್ರ ಜೊತೆಗೆ ಎಲ್ಲಾ ಕಡೆ ಸಲ್ಲುವ, ಎಲ್ಲಾ ಕಾಲಕ್ಕೂ ಸಲ್ಲುವ ರಂಜನೀಯ ಅಂಶಗಳನ್ನ ಹದವಾಗಿ ಮಿಶ್ರಣಗೊಳಿಸಿದ್ರೆ, ಸಾಕು ಸಿನಿಮಾ ವರ್ಕೌಟ್ ಆಗುತ್ತೆ. ಗೆದ್ದೆ ಗೆಲ್ಲುತ್ತೆ ಅನ್ನೋ ಭರವಸೆಯಲ್ಲಿ ಅವನೇ ಶ್ರೀಮನ್ ನಾರಾಯಣನ ಮೇಲೆ ಅಷ್ಟು ಕೋಟಿ ಸುರಿದಿದ್ದಾರೆ.
ಕಿರಿಕ್ ಪಾರ್ಟಿ ರಿಲೀಸ್ ಡೇಟ್ಗೆ ಶ್ರೀಮನ್ ನಾರಾಯಣ ರಿಲೀಸ್

ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡಿ ದೊಡ್ಡ ಸಕ್ಸಸ್ ಪಡೆದಿದ್ದ ಕಿರಿಕ್ ಪಾರ್ಟಿ ರಿಲೀಸ್ ಆದ ಅದೃಷ್ಟದ ಡೇಟ್ಗೆನೇ ಅವನೇ ಶ್ರೀಮನ್ ನಾರಾಯಣ ಸಿನಿಮಾವನ್ನ ರಿಲೀಸ್ ಮಾಡೋದಕ್ಕೆ ಚಿತ್ರತಂಡ ನಿರ್ಧರಿಸಿದ್ದು, ಆಗ್ಲೇ ನಾವು ಇದೇ ಡಿಸೆಂಬರ್ 27ಕ್ಕೆ ವರ್ಲ್ಡ್ ವೈಡ್ ಸಿನಿಮಾವನ್ನ ರಿಲೀಸ್ ಮಾಡ್ತೀವಿ ಅಂತ ಅನೌನ್ಸ್ ಮಾಡಿದೆ.
ಅವನೇ ಶ್ರೀಮನ್ ನಾರಾಯಣದ ಮೈನ್ ಸ್ಟ್ರೆಂಥ್ ಅಂದ್ರೆ ಅದು ರಕ್ಷಿತ್ ಶೆಟ್ಟಿ ಒಬ್ಬರೇ, ನೇಮೂ ಫೇಮೂ ಇರೋದು ಇವರೊಬ್ಬರದೇ. ಅದ್ರೆ ಜೊತೆಗೆ ಪುಷ್ಕರ್ ಫಿಲಂಸ್ ಬ್ಯಾನರ್ ವಿಚಾರವಾಗಿ ಹೆಸರು ಮಾಡಿದೆ. ಅದು ಬಿಟ್ರೆ, ಸಚಿನ್ ರವಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ, ಅಜನೀಶ್ ಲೋಕನಾಥ್ ರಕ್ಷಿತ್ ಶೆಟ್ಟಿ ನೆಚ್ಚಿನ ಸಂಗೀತ ನಿರ್ದೇಶಕನಾಗಿರೋದಿಂದ, ಈ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ವರ್ಕೌಟ್ ಆಗೋ ಸೂಚನೆ ಸಿಕ್ಕಿದೆ. ಚಿತ್ರದಲ್ಲಿ ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿಶ್ರೀವಾತ್ಸವ್ ಕಾಣಿಸಿಕೊಂಡಿದ್ದು, ಬಾಲಾಜಿ ಮೋಹನ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂದ್ದಾರೆ.

ಕೆ.ಜಿ.ಎಫ್ ಹಿಂದೆ ಬಂದ ಕುರುಕ್ಷೇತ್ರ, ಪೈಲ್ವಾನ್ ವರ್ಕ್ ಆಗ್ಲಿಲ್ಲ
ಅಂದ್ಹಾಗೆ ಕೆ.ಜಿ.ಎಫ್ ಸಿನಿಮಾದ ಪ್ಯಾನ್ ಇಂಡಿಯಾ ಸಕ್ಸಸ್ ನೋಡಿದ್ಮೇಲೆ, ಅದೇ ತರಹ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಭರದಲ್ಲಿ, ಕಿಚ್ಚ ಸುದೀಪ್ ಪೈಲ್ವಾನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಚಿತ್ರಗಳನ್ನ ಬಹುಭಾಷೆಯಲ್ಲಿ ರಿಲೀಸ್ ಮಾಡಿದ್ರೂ, ಆದ್ರೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಈ ಎರಡೂ ಚಿತ್ರಗಳು ವರ್ಕೌಟ್ ಆಗ್ಲಿಲ್ಲ. ಕೆ.ಜಿ.ಎಫ್ ಸಿನಿಮಾಗಿದ್ದ ಕಂಟೆಂಟ್ ಕ್ವಾಲಿಟಿಯಾಗ್ಲಿ, ಮೇಕಿಂಗ್ ಕ್ವಾಲಿಟಿಯಾಗ್ಲಿ ಈ ಚಿತ್ರಗಳಲ್ಲಿ ಇರಲಿಲ್ಲ ಅನ್ನೋ ರೆಸ್ಪಾನ್ಸ್ ರಿಸಲ್ಟ್ ಆಚೆ ಬಂದಾಯ್ತು.
ಅವನೇ ಶ್ರೀಮನ್ನಾರಾಯಣ ಏನಾಗಬಹುದು…?

ಯಶ್ ಎರಡು ವರ್ಷದ ಪರಿಶ್ರಮಕ್ಕೆ ಕೆ.ಜಿ.ಎಫ್ ಪ್ಯಾನ್ ಇಂಡಿಯಾ ಸಕ್ಸಸ್ ಕೊಟ್ಟಿತ್ತು. ಆದ್ರೆ ದರ್ಶನ್, ಸುದೀಪ್ ಅಂತಹ ಕನ್ನಡದ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವ್ವೆಲ್ ನಲ್ಲಿ ಮಕ್ಕಾಡೆ ಮಲಗಿದ್ವು. ಹೀಗಿರೋವಾಗ ಅದ್ರ ಬೆನ್ನಿಗೇನೇ ಬರ್ತಿರೋ ಅವನೇ ಶ್ರೀಮನ್ ನಾರಾಯಣ ಸಿನಿಮಾ ಏನಾಗಬಹುದು ಅನ್ನೋ ಪ್ರಶ್ನೆಗಳು ಈಗ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ. ಅವನೇ ಶ್ರೀಮನ್ ನಾರಾಯಣ ನಿರ್ಮಾಪಕರು ತೆಗೆದುಕೊಂಡಿರೋ ರಿಸ್ಕ್ ಕಂಡು ಬೆಚ್ಚಿ ಬಿದ್ದಿದೆ. ಕೆ.ಜಿ.ಎಫ್ ಹುಟ್ಟಿಸಿದ್ದ ಭರವಸೆ, ವಿಸ್ತರಿಸಿರೋ ಮಾರುಕಟ್ಟೆಯನ್ನ, ಲಾಸ್ಟ್ ಎರಡು ಸಿನಿಮಾಗಳ ಸೋಲು ಕುಗ್ಗಿಸಿವೆ. ಇದನ್ನ ಕಂಡು ಚಿತ್ರರಂಗ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಹೆದರಿ ನಿಂತಿದೆ. ಇಂತಹ ಸಮಯದಲ್ಲಿ ಅವನೇ ಶ್ರೀಮನ್ ನಾರಾಯಣ ಚಿತ್ರತಂಡ ನಾವು ಕೆಜಿಎಫ್ ಗಿಂತ ಯಾವುದ್ರಲ್ಲೂ ಕಡಿಮೆಯಿಲ್ಲ. ನಮ್ಮ ಸಿನಿಮಾ ಅವ್ರಿಗಿಂತ ಒಂದು ಪಟ್ಟು ಜಾಸ್ತೀನಿ ಅನ್ನೋ ಓವರ್ ಕಾನ್ಫಿಡೆನ್ಸ್ ನಲ್ಲಿದೆ.
ಯಡವಟ್ಟಾದ್ರೆ ಬೀದಿಗೆ ಬರ್ತಾರೆ ನಿರ್ಮಾಪಕರು

ಅವನೇ ಶ್ರೀಮನ್ ನಾರಾಯಣ ಸಿನಿಮಾ ನಿರ್ಮಾಪಕರು ಅಂದುಕೊಂಡಂತೆ ಆಗಲಿಲ್ಲ ಅಂದ್ರೆ, ಖಂಡಿತ ನಿರ್ಮಾಪಕರು ಬೀದಿಗೆ ಬರ್ತಾರೆ. ಇರೋಬರೋದನ್ನೆಲ್ಲಾ ಈ ಸಿನಿಮಾ ಮೇಲೆ ಹಾಕಿ, ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿರೋ ಪುಷ್ಕರ್ ಮಲ್ಲಿಕಾರ್ಜುನಯ್ಯರಿಗೆ, ಬರೀ ಕನ್ನಡದಲ್ಲಿ ಮಾತ್ರ ಸಿನಿಮಾ ವರ್ಕೌಟ್ ಆದ್ರೂ ಕಷ್ಟ. ಶತಾಯಗತಾಯ ಎಲ್ಲಾ ಭಾಷೆಯಲ್ಲೂ ಈ ಸಿನಿಮಾ ಚೆನ್ನಾಗಿ ಓಡಿದ್ರೆ ಮಾತ್ರ ಇವ್ರು ಹಾಕಿದ ಬಂಡವಾಳ ವಾಪಸ್ ಬರುತ್ತೆ. ಲಾಭ ಬರುತ್ತೆ. ಇಲ್ಲವಾದಲ್ಲಿ, ಭಾರಿ ತೊಂದರೆ ಎದುರಾಗುತ್ತೆ. ಸಿನಿಮಾ ನಿರ್ಮಾಣದ ಹಂತದಲ್ಲೇ ಕನ್ನಡದವತರಣಿಕೆಯ ಸ್ಯಾಟಿಲೈಟ್ ಮತ್ತಿ ಡಿಜಿಟಲ್ ರೈಟ್ಸ್ ನ ಸೇಲ್ ಮಾಡಿರೋ ಪುಷ್ಕರ್, ಪರಭಾಷೆಯ ಸ್ಯಾಟಿಲೈಟ್ ಮತ್ತು ಡಿಜಿಟಲ್ ರೈಟ್ಸ್ ಒಳ್ಳೆಯ ಬೆಲೆಗೆ ಸೇಲ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಕೆ.ಜಿ.ಎಫ್ ಸಿನಿಮಾ ರಿಲೀಸ್ಗೂ ಎರಡು ತಿಂಗಳ ಮೊದ್ಲೇ ಎಲ್ಲಾ ಭಾಷೆಯ ವಿತರಣೆಯ ಹಕ್ಕು, ಡಿಜಿಟಲ್, ಸ್ಯಾಟಿಲೈಟ್ ಹಕ್ಕನ್ನ ವ್ಯಾಪಾರ ಮಾಡಿಕೊಂಡು, ಪ್ರತಿಭಾಷೆಯಲ್ಲೂ ಪ್ರಚಾರ ಕಾರ್ಯವನ್ನ ಆರಂಭಿಸಿದ್ರು, ಆದ್ರೆ ಹಾಗೇ ಕಂಪೇರ್ ಮಾಡೋದಾದ್ರೆ, ಅವನೇ ಶ್ರೀಮನ್ ನಾರಾಯಣ ತಂಡದಿಂದ ಅಂತಹ ಯಾವುದೇ ದೊಡ್ಡಮಟ್ಟದ ಪ್ರೋಗ್ರೇಸೀವ್ ಕೆಲಸ ಆಗಿಲ್ಲ. ಹಾಗಾಗಿ, ಮೂಲಗಳು ಹೇಳೋ ಪ್ರಕಾರ ಈ ಚಿತ್ರದ ಕಂಟೆಂಟ್ ಚೆನ್ನಾಗಿದೇ ಆದ್ರೂ, ಈ ಚಿತ್ರತಂಡ ಮಾಡಿರೋ ಸಾಹಸ ಪ್ರಯೋಗಕ್ಕೆ, ಇವರು ನಿರೀಕ್ಷಿಸಿರೋ 300ಕೋಟಿ ಬರೋದು ದೂರದ ಮಾತು ಅಂತ ಗಾಂಧಿನಗರದ ಸಿನಿಮಾ ಬ್ಯುಸಿನೆಸ್ ಪಂಡಿತರು ಹೇಳ್ತಿದ್ದಾರೆ. ಅದೇನೆ ಇದ್ರೂ ಈ ವರ್ಷಾಂತ್ಯಕ್ಕೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಲಿದೆ. ಆದ್ರೆ ಅದು ಪಾಸಿಟೀವಾ..? ನೆಗೆಟೀವಾ..? ಅನ್ನೋದೇ ಸದ್ಯ ಗಾಂಧಿನಗರವನ್ನ ಕಾಡ್ತಿರೋ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...