Homeಮುಖಪುಟ'ಸನಾತನ ಚಿಂತನೆಯ ಮರುಸೃಷ್ಟಿ' ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ

‘ಸನಾತನ ಚಿಂತನೆಯ ಮರುಸೃಷ್ಟಿ’ ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ

"ಯಡಿಯೂರಪ್ಪ ಅವರೆ ನಿಮಗೆ ಅಕ್ಷರದ ಅರಿವಿದ್ದರೆ ವಚನಗಳನ್ನು ಓದಿ. ಅಜ್ಞಾನಿಯಾಗಿದ್ದರೆ ಜ್ಞಾನದ ಶಿಖರ ಮಾದಾರ ಚನ್ನಯ್ಯನ ಮನಯಂಗಳದಲ್ಲಿ ವಿದ್ಯಾರ್ಥಿಯಾಗಿ ಅರಿವು ಪಡೆಯಿರಿ. ಸನಾತನ ಮತ್ತು ಪ್ರಗತಿಪರ ಎಂಬುದು ವಿರುದ್ಧಾರ್ಥಕ ತತ್ವಗಳು"

- Advertisement -
- Advertisement -

ಬಸವಣ್ಣನನ್ನು ಹೈಜಾಕ್ ಮಾಡಲು ಹೊರಟಿರುವ ಮೋದಿ, ಯಡಿಯೂರಪ್ಪ ಮತ್ತು ಬಿಜೆಪಿ ಇಂದು (ಜನವರಿ 6) ಪತ್ರಿಕೆಗಳಿಗೆ ನೀಡಿರುವ ಜಾಹಿರಾತಿನಲ್ಲಿ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಬಸವ ತತ್ವದ ಪ್ರತಿಪಾದಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸನಾತನ ಮತ್ತು ವೈದಿಕತೆಯನ್ನು ಜೀವನ ಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಬಸವಾದಿ ಶರಣರು, ಇದನ್ನು ತಮ್ಮ ವಚನಗಳಲ್ಲಿಯೂ ವ್ಯಕ್ತಪಡಿಸಿದ್ದರು. ಬಹುಶಃ ಬುದ್ಧನ ನಂತರ ವೈದಿಕತೆಯನ್ನು ಶರಣರಷ್ಟು ಟೀಕಿಸಿದವರು ಮತ್ತೊಬ್ಬರಿಲ್ಲ. ಇಂತಹ ಬಸವಣ್ಣನವರನ್ನು ಅಂದೇ ಇದೇ ವೈದಿಕರು ಕೊಂದಿದ್ದರು. ಆದರೆ ಇಂದು ಬಸವಣ್ಣನವರನ್ನೇ ಹೈಜಾಕ್ ಮಾಡಿ, ಅವರ ಚಿಂತನೆಯೇ ಸನಾತನ ಪ್ರಗತಿಪರ ಚಿಂತನೆ ಎಂದು ಹೇಳುತ್ತಿರುವ ಬಿಜೆಪಿ ಮತ್ತು ಯಡಿಯೂರಪ್ಪನವರ ಧೋರಣೆಯ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ‘ಅನುಭವ ಮಂಟಪ’ದ ಭೂಮಿ ಪೂಜೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಇಂದು ಜಾಹೀರಾತು ನೀಡಿದ್ದು, ಅದರಲ್ಲಿ “ಸನಾನತ ಪ್ರಗತಿಪರ ಚಿಂತನೆಯ ಮರುಸೃಷ್ಟಿ” ಎಂದು ಬರೆಯಲಾಗಿದೆ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಜಾಮದಾರ್‌ ಮತ್ತು ಕಾರ್ಯದರ್ಶಿ ಜಿ.ಬಿ.ಪಾಟೀಲರು ಸೇರಿದಂತೆ ಹತ್ತಾರು ಚಿಂತಕರು ಈ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಬಸವಣ್ಣನ ಪ್ರತಿಮೆಗೆ ಹಾನಿ ಮಾಡಿದ ದುಷ್ಕರ್ಮಿಗಳು

ಈ ಕುರಿತು ಫೇಸ್‌ಬುಕ್ ಪೋಸ್ಟ್‌ ಮಾಡಿರುವ ಜಿ ಬಿ ಪಾಟೀಲರು, “#ಸನಾತನ #ಪ್ರಗತಿಪರ #ಚಿಂತನೆಯ #ಮರುಸೃಷ್ಠಿ. ಏನಿದರ ಅರ್ಥ? ಕ್ರಿ.ಶ 1150 ರ ಸುಮಾರಿಗೆ ಬಸವಾದಿ ಶರಣರು ಸನಾತನವನ್ನು ತೊರೆದು ಸಮ ಸಮಾಜದ ಸಿದ್ಧಾಂತದತ್ತ ಮುಖ ಮಾಡಿದರು. ಸನಾತನದಲ್ಲಿಯ ನ್ಯೂನ್ಯತೆಗಳನ್ನು ಚರ್ಚಿಸಲು ಸ್ಥಾಪಿತವಾಗಿದ್ದು ಅನುಭವ ಮಂಟಪ. ಮಾನವನ ಏಳ್ಗೆಗಾಗಿ ಧರ್ಮ ಇರಬೇಕು ಶೋಷಣೆಗಾಗಿ ಧರ್ಮವನ್ನು ಬಳಸುವದು ಬೇಡವೆಂದು ಬಸವಣ್ಣನವರು ಅಲ್ಲಮ ಪ್ರಭುಗಳೂ ಹಾಗು 770 ಶರಣರು ಮನುಕುಲದ ಎಳಿಗೆಗಾಗಿ ಹೊಸ ಸಿದ್ಧಾಂತಗಳೊಂದಿಗೆ ಲಿಂಗಾಯತ ಧರ್ಮ ಸ್ಥಾಪಿಸಿದರು. ಇಂದು ನಮಗೆ ಸನಾತನ ಅನುಭವ ಮಂಟಪದ ಅವಶ್ಯಕತೆ ಇಲ್ಲ. ನಮಗೆ ಇನ್ನೊಂದು ಸ್ಥಾವರದ ಅವಶ್ಯಕತೆಯೂ ಇಲ್ಲ. ನಮಗೆ ಬೇಕಿರುವದು ಜಂಗಮ (ಬಸವ ಚಿಂತನೆಗಳನ್ನು ಅಳವಡಿಸಲು, ಚರ್ಚಿಸಲು ಕಟ್ಟಡ ಬೇಕಾಗಿದೆ) ಬಸವ ಚಿಂತನೆಗಾಗಿ ಸ್ಥಳ ಬೇಕಿರುವದು. ಯಡಿಯೂರಪ್ಪನವರ ಸರಕಾರ ಬಸವ ಚಿಂತನೆಗೆ ಅವಕಾಶ ಮಾಡಿಕೊಡುತ್ತಿದೆಯಲ್ಲ ಎಂದು ಸಂತೋಷ ಪಟ್ಟಿದ್ದೆವು. ಅವರು ನಮಗೆ ಮತ್ತೊಂದು ಸ್ಥಾವರವನ್ನು ನೀಡುತ್ತಿದ್ದಾರೆಂದೂ ಅದರಲ್ಲಿಯೂ #ಬಿಕ್ಷೆ# ಎಂಬಂತೆ, ಸನಾತನ ಪ್ರಗತಿಪರ ಚಿಂತನೆಯ ಅಂದರೆ ಬಸವಣ್ಣನವರ ಪ್ರತಿಪಾದಿಸಿದ ಲಿಂಗಾಯತ ಧರ್ಮವನ್ನು ಅವರು ಸಿದ್ಧಾಂತಗಳು “ಸನಾತನ ಸಿದ್ಧಾಂತದ ಪ್ರಗತಿಪರ ಚಿಂತನೆ” ಎಂಬುದನ್ನು ನಾವು ಒಪ್ಪುವದಿಲ್ಲ. ಅದನ್ನು ಖಂಡಿಸುತ್ತೆವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ನೀಲಾ ಕೆ ಗುಲ್ಬರ್ಗ ಎಂಬುವವರು, “#ಧಿಕ್ಕಾರಯಡಿಯೂರಪ್ಪಮೋದಿಬಿಜೆಪಿ# “ವೇದಕ್ಕೆ ಒರೆಯ ಕಟ್ಟಿದರು, ಶಾಸ್ತ್ರಕ್ಕೆ ನಿಗಳವನಿಕ್ಕಿದರು. ತರ್ಕದ ಬೆನ್ನ ಬಾರನೆತ್ತಿದರು ನಮ್ಮ ಶರಣರು. ಪುರಾಣವೆಂಬುದು ಪುಂಡರ ಗೋಷ್ಠಿ, ಶಾಸ್ತ್ರವೆಂಬುದು ಸುಳ್ಳರ ಸಂತೆ, ತರ್ಕವೆಂಬುದು ತಗರ ಹೋರಟೆ” ಎಂದರು ನಮ್ಮ ಬಸವಣ್ಷ ಮತ್ತು ಎಲ್ಲ ಶರಣರು. ಅಂದರೆ ಸನಾತನಿ ತತ್ವವನ್ನು ಸಾರಾಸಗಟಾಗಿ ತಿರಸ್ಕರಿಸಿದರು ಎಂದರ್ಥ. “ಮಾದಾರ ಚನ್ನಯ್ಯನ ಮನೆಯ ದಾಸಿಯ ಮಗ ಡೋಹಾರ ಕಕ್ಕಯ್ಯನ ಮನೆಯ ದಾಸಿಯ ಮಗಳು ಬೆರಣಿಗೆಂದು ಹೋಗಿ ಸಂಗವ ಮಾಡಿದಲ್ಲಿ ಅವರಿಗೆ ಹುಟ್ಟಿದ ಮಗ ತಾನು” ಎಂದು ಘೋಷಿಸುವ ಮೂಲಕ ಬ್ರಾಹ್ಮಣ್ಯದ ಚಾತುರ್ವರ್ಣ ವ್ಯವಸ್ಥೆಯ ಕ್ರೌರ್ಯವನ್ನು ಧಿಕ್ಕರಿಸಿ ಮನುಷ್ಯ ತತ್ವವನ್ನು ಸಮಾನತಾ ತತ್ವವನ್ನು ನಡೆ ನುಡಿಯಲ್ಲಿ ಜಾರಿಗೊಳಿಸಿದವರು ಬಸವಣ್ಣನವರು. ಯಡಿಯೂರಪ್ಪ ಅವರೆ ನಿಮಗೆ ಅಕ್ಷರದ ಅರಿವಿದ್ದರೆ ವಚನಗಳನ್ನು ಓದಿ. ಅಜ್ಞಾನಿಯಾಗಿದ್ದರೆ ಜ್ಞಾನದ ಶಿಖರ ಮಾದಾರ ಚನ್ನಯ್ಯನ ಮನಯಂಗಳದಲ್ಲಿ ವಿದ್ಯಾರ್ಥಿಯಾಗಿ ಅರಿವು ಪಡೆಯಿರಿ. ಸನಾತನ ಮತ್ತು ಪ್ರಗತಿಪರ ಎಂಬುದು ವಿರುದ್ಧಾರ್ಥಕ ತತ್ವಗಳು. ಅವುಗಳನ್ನು ಒಟ್ಟುಗೂಡಿಸುವ ನಿಮ್ಮ ಸಂಘಿ ವಿಚಾರಗಳು ಲಿಂಗಾಯತ ತತ್ವವನ್ನು ನಾಶ ಮಾಡುವ ಹುನ್ನಾರ ಹೊಂದಿವೆ. ವಚನಗಳೊಳಗೆ ಸನಾತನ ವಿಚಾರಗಳಿಗೆ ಪ್ರವೇಶ ಸಿಗದು ಎನ್ನುವ ಕಾರಣಕ್ಕೆ ಸ್ಥಾವರ ಕಟ್ಟಿ ಅದಕ್ಕೆ ಸನಾತನ ಚಿಂತನೆಗಳ ಪ್ರೋಕ್ಷಣೆ ಮಾಡಿ ಜನತೆಯನ್ನು ದಿಕ್ತಪ್ಪಿಸಲು ಹೊರಟಿರುವಿರಿ. ಬಸವಾದಿ ಪ್ರಥಮರ ತತ್ವ ಒಪ್ಪಿದವರೆಲ್ಲ ನಿಮ್ಮ ಈ ಷಡ್ಯಂತ್ರ ಅರಿಯುವರು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ನೆನಪಿಡಿ. ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಡಿ ಎಂಬ ಶರಣತತ್ವವಿರೋಧಿ ನಿಲುವಿಗೆ ಇದೋ ನಮ್ಮೆಲ್ಲರ ಧಿಕ್ಕಾರ” ಎಂದು ಯಡಿಯೂರಪ್ಪನವರ ನಿಲುವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರ ಈ ನಡೆಯನ್ನು ವಿರೋಧಿಸಿ ಹತ್ತಾರು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಇದನ್ನೂ ಓದಿ: ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ಇದನ್ನೂ ಓದಿ: ಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಇದನ್ನೂ ಓದಿ: ಶರಣ ಚಳವಳಿ ನುಡಿ ಬಳಕೆಯ ಪಾಠಗಳು ಮತ್ತು ಕನ್ನಡ ರಾಶ್ಟ್ರೀಯತೆ: ಡಾ.ರಂಗನಾಥ್ ಕಂಟನಕುಂಟೆ

ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರ ಮಾಡಿರುವ ಈ ಪ್ರಮಾದವನ್ನು ಒಂದು ಅವಮಾನ ಎಂದು ಜರಿಯುವುದಕ್ಕಿಂತ ಇದರ ಹಿಂದಿರುವ ಮತ್ತೊಂದು ದೊಡ್ಡ ಅಪಾಯವನ್ನು ನಾವೆಲ್ಲರೂ ಮನಗಾಣಬೇಕಿದೆ. ಇಲ್ಲದಿದ್ದರೆ ಈಗಾಗಲೇ ಬುದ್ದನನ್ನು ಹತ್ತನೇ ಅವತಾರ ಎಂದವರು ಬಸವಣ್ಣನವರೆಗೆ ಬರಲು ಹೇಸುವುದಿಲ್ಲ. ಹೀಗೆ ಬರುವುದರ ಮೊದಲ ಹೆಜ್ಜೆಯೇ ಈ ಜಾಹೀರಾತು. ಇದನ್ನು ರಾಜ್ಯದ ಜನತೆ ಒಕ್ಕೊರಲಿನಿಂದ ವಿರೋಧಿಸಬೇಕಿದೆ.


ಇದನ್ನೂ ಓದಿ: ಕಾಯಕ ಸಿದ್ಧಾಂತವೆಂಬ ಅಭಿವೃದ್ಧಿ ಪ್ರಣಾಳಿಕೆ : ಡಾ.ಟಿ.ಆರ್ ಚಂದ್ರಶೇಖರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....