Homeಮುಖಪುಟ'ಸನಾತನ ಚಿಂತನೆಯ ಮರುಸೃಷ್ಟಿ' ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ

‘ಸನಾತನ ಚಿಂತನೆಯ ಮರುಸೃಷ್ಟಿ’ ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ

"ಯಡಿಯೂರಪ್ಪ ಅವರೆ ನಿಮಗೆ ಅಕ್ಷರದ ಅರಿವಿದ್ದರೆ ವಚನಗಳನ್ನು ಓದಿ. ಅಜ್ಞಾನಿಯಾಗಿದ್ದರೆ ಜ್ಞಾನದ ಶಿಖರ ಮಾದಾರ ಚನ್ನಯ್ಯನ ಮನಯಂಗಳದಲ್ಲಿ ವಿದ್ಯಾರ್ಥಿಯಾಗಿ ಅರಿವು ಪಡೆಯಿರಿ. ಸನಾತನ ಮತ್ತು ಪ್ರಗತಿಪರ ಎಂಬುದು ವಿರುದ್ಧಾರ್ಥಕ ತತ್ವಗಳು"

- Advertisement -
- Advertisement -

ಬಸವಣ್ಣನನ್ನು ಹೈಜಾಕ್ ಮಾಡಲು ಹೊರಟಿರುವ ಮೋದಿ, ಯಡಿಯೂರಪ್ಪ ಮತ್ತು ಬಿಜೆಪಿ ಇಂದು (ಜನವರಿ 6) ಪತ್ರಿಕೆಗಳಿಗೆ ನೀಡಿರುವ ಜಾಹಿರಾತಿನಲ್ಲಿ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಬಸವ ತತ್ವದ ಪ್ರತಿಪಾದಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸನಾತನ ಮತ್ತು ವೈದಿಕತೆಯನ್ನು ಜೀವನ ಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಬಸವಾದಿ ಶರಣರು, ಇದನ್ನು ತಮ್ಮ ವಚನಗಳಲ್ಲಿಯೂ ವ್ಯಕ್ತಪಡಿಸಿದ್ದರು. ಬಹುಶಃ ಬುದ್ಧನ ನಂತರ ವೈದಿಕತೆಯನ್ನು ಶರಣರಷ್ಟು ಟೀಕಿಸಿದವರು ಮತ್ತೊಬ್ಬರಿಲ್ಲ. ಇಂತಹ ಬಸವಣ್ಣನವರನ್ನು ಅಂದೇ ಇದೇ ವೈದಿಕರು ಕೊಂದಿದ್ದರು. ಆದರೆ ಇಂದು ಬಸವಣ್ಣನವರನ್ನೇ ಹೈಜಾಕ್ ಮಾಡಿ, ಅವರ ಚಿಂತನೆಯೇ ಸನಾತನ ಪ್ರಗತಿಪರ ಚಿಂತನೆ ಎಂದು ಹೇಳುತ್ತಿರುವ ಬಿಜೆಪಿ ಮತ್ತು ಯಡಿಯೂರಪ್ಪನವರ ಧೋರಣೆಯ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ‘ಅನುಭವ ಮಂಟಪ’ದ ಭೂಮಿ ಪೂಜೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಇಂದು ಜಾಹೀರಾತು ನೀಡಿದ್ದು, ಅದರಲ್ಲಿ “ಸನಾನತ ಪ್ರಗತಿಪರ ಚಿಂತನೆಯ ಮರುಸೃಷ್ಟಿ” ಎಂದು ಬರೆಯಲಾಗಿದೆ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಜಾಮದಾರ್‌ ಮತ್ತು ಕಾರ್ಯದರ್ಶಿ ಜಿ.ಬಿ.ಪಾಟೀಲರು ಸೇರಿದಂತೆ ಹತ್ತಾರು ಚಿಂತಕರು ಈ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಬಸವಣ್ಣನ ಪ್ರತಿಮೆಗೆ ಹಾನಿ ಮಾಡಿದ ದುಷ್ಕರ್ಮಿಗಳು

ಈ ಕುರಿತು ಫೇಸ್‌ಬುಕ್ ಪೋಸ್ಟ್‌ ಮಾಡಿರುವ ಜಿ ಬಿ ಪಾಟೀಲರು, “#ಸನಾತನ #ಪ್ರಗತಿಪರ #ಚಿಂತನೆಯ #ಮರುಸೃಷ್ಠಿ. ಏನಿದರ ಅರ್ಥ? ಕ್ರಿ.ಶ 1150 ರ ಸುಮಾರಿಗೆ ಬಸವಾದಿ ಶರಣರು ಸನಾತನವನ್ನು ತೊರೆದು ಸಮ ಸಮಾಜದ ಸಿದ್ಧಾಂತದತ್ತ ಮುಖ ಮಾಡಿದರು. ಸನಾತನದಲ್ಲಿಯ ನ್ಯೂನ್ಯತೆಗಳನ್ನು ಚರ್ಚಿಸಲು ಸ್ಥಾಪಿತವಾಗಿದ್ದು ಅನುಭವ ಮಂಟಪ. ಮಾನವನ ಏಳ್ಗೆಗಾಗಿ ಧರ್ಮ ಇರಬೇಕು ಶೋಷಣೆಗಾಗಿ ಧರ್ಮವನ್ನು ಬಳಸುವದು ಬೇಡವೆಂದು ಬಸವಣ್ಣನವರು ಅಲ್ಲಮ ಪ್ರಭುಗಳೂ ಹಾಗು 770 ಶರಣರು ಮನುಕುಲದ ಎಳಿಗೆಗಾಗಿ ಹೊಸ ಸಿದ್ಧಾಂತಗಳೊಂದಿಗೆ ಲಿಂಗಾಯತ ಧರ್ಮ ಸ್ಥಾಪಿಸಿದರು. ಇಂದು ನಮಗೆ ಸನಾತನ ಅನುಭವ ಮಂಟಪದ ಅವಶ್ಯಕತೆ ಇಲ್ಲ. ನಮಗೆ ಇನ್ನೊಂದು ಸ್ಥಾವರದ ಅವಶ್ಯಕತೆಯೂ ಇಲ್ಲ. ನಮಗೆ ಬೇಕಿರುವದು ಜಂಗಮ (ಬಸವ ಚಿಂತನೆಗಳನ್ನು ಅಳವಡಿಸಲು, ಚರ್ಚಿಸಲು ಕಟ್ಟಡ ಬೇಕಾಗಿದೆ) ಬಸವ ಚಿಂತನೆಗಾಗಿ ಸ್ಥಳ ಬೇಕಿರುವದು. ಯಡಿಯೂರಪ್ಪನವರ ಸರಕಾರ ಬಸವ ಚಿಂತನೆಗೆ ಅವಕಾಶ ಮಾಡಿಕೊಡುತ್ತಿದೆಯಲ್ಲ ಎಂದು ಸಂತೋಷ ಪಟ್ಟಿದ್ದೆವು. ಅವರು ನಮಗೆ ಮತ್ತೊಂದು ಸ್ಥಾವರವನ್ನು ನೀಡುತ್ತಿದ್ದಾರೆಂದೂ ಅದರಲ್ಲಿಯೂ #ಬಿಕ್ಷೆ# ಎಂಬಂತೆ, ಸನಾತನ ಪ್ರಗತಿಪರ ಚಿಂತನೆಯ ಅಂದರೆ ಬಸವಣ್ಣನವರ ಪ್ರತಿಪಾದಿಸಿದ ಲಿಂಗಾಯತ ಧರ್ಮವನ್ನು ಅವರು ಸಿದ್ಧಾಂತಗಳು “ಸನಾತನ ಸಿದ್ಧಾಂತದ ಪ್ರಗತಿಪರ ಚಿಂತನೆ” ಎಂಬುದನ್ನು ನಾವು ಒಪ್ಪುವದಿಲ್ಲ. ಅದನ್ನು ಖಂಡಿಸುತ್ತೆವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ನೀಲಾ ಕೆ ಗುಲ್ಬರ್ಗ ಎಂಬುವವರು, “#ಧಿಕ್ಕಾರಯಡಿಯೂರಪ್ಪಮೋದಿಬಿಜೆಪಿ# “ವೇದಕ್ಕೆ ಒರೆಯ ಕಟ್ಟಿದರು, ಶಾಸ್ತ್ರಕ್ಕೆ ನಿಗಳವನಿಕ್ಕಿದರು. ತರ್ಕದ ಬೆನ್ನ ಬಾರನೆತ್ತಿದರು ನಮ್ಮ ಶರಣರು. ಪುರಾಣವೆಂಬುದು ಪುಂಡರ ಗೋಷ್ಠಿ, ಶಾಸ್ತ್ರವೆಂಬುದು ಸುಳ್ಳರ ಸಂತೆ, ತರ್ಕವೆಂಬುದು ತಗರ ಹೋರಟೆ” ಎಂದರು ನಮ್ಮ ಬಸವಣ್ಷ ಮತ್ತು ಎಲ್ಲ ಶರಣರು. ಅಂದರೆ ಸನಾತನಿ ತತ್ವವನ್ನು ಸಾರಾಸಗಟಾಗಿ ತಿರಸ್ಕರಿಸಿದರು ಎಂದರ್ಥ. “ಮಾದಾರ ಚನ್ನಯ್ಯನ ಮನೆಯ ದಾಸಿಯ ಮಗ ಡೋಹಾರ ಕಕ್ಕಯ್ಯನ ಮನೆಯ ದಾಸಿಯ ಮಗಳು ಬೆರಣಿಗೆಂದು ಹೋಗಿ ಸಂಗವ ಮಾಡಿದಲ್ಲಿ ಅವರಿಗೆ ಹುಟ್ಟಿದ ಮಗ ತಾನು” ಎಂದು ಘೋಷಿಸುವ ಮೂಲಕ ಬ್ರಾಹ್ಮಣ್ಯದ ಚಾತುರ್ವರ್ಣ ವ್ಯವಸ್ಥೆಯ ಕ್ರೌರ್ಯವನ್ನು ಧಿಕ್ಕರಿಸಿ ಮನುಷ್ಯ ತತ್ವವನ್ನು ಸಮಾನತಾ ತತ್ವವನ್ನು ನಡೆ ನುಡಿಯಲ್ಲಿ ಜಾರಿಗೊಳಿಸಿದವರು ಬಸವಣ್ಣನವರು. ಯಡಿಯೂರಪ್ಪ ಅವರೆ ನಿಮಗೆ ಅಕ್ಷರದ ಅರಿವಿದ್ದರೆ ವಚನಗಳನ್ನು ಓದಿ. ಅಜ್ಞಾನಿಯಾಗಿದ್ದರೆ ಜ್ಞಾನದ ಶಿಖರ ಮಾದಾರ ಚನ್ನಯ್ಯನ ಮನಯಂಗಳದಲ್ಲಿ ವಿದ್ಯಾರ್ಥಿಯಾಗಿ ಅರಿವು ಪಡೆಯಿರಿ. ಸನಾತನ ಮತ್ತು ಪ್ರಗತಿಪರ ಎಂಬುದು ವಿರುದ್ಧಾರ್ಥಕ ತತ್ವಗಳು. ಅವುಗಳನ್ನು ಒಟ್ಟುಗೂಡಿಸುವ ನಿಮ್ಮ ಸಂಘಿ ವಿಚಾರಗಳು ಲಿಂಗಾಯತ ತತ್ವವನ್ನು ನಾಶ ಮಾಡುವ ಹುನ್ನಾರ ಹೊಂದಿವೆ. ವಚನಗಳೊಳಗೆ ಸನಾತನ ವಿಚಾರಗಳಿಗೆ ಪ್ರವೇಶ ಸಿಗದು ಎನ್ನುವ ಕಾರಣಕ್ಕೆ ಸ್ಥಾವರ ಕಟ್ಟಿ ಅದಕ್ಕೆ ಸನಾತನ ಚಿಂತನೆಗಳ ಪ್ರೋಕ್ಷಣೆ ಮಾಡಿ ಜನತೆಯನ್ನು ದಿಕ್ತಪ್ಪಿಸಲು ಹೊರಟಿರುವಿರಿ. ಬಸವಾದಿ ಪ್ರಥಮರ ತತ್ವ ಒಪ್ಪಿದವರೆಲ್ಲ ನಿಮ್ಮ ಈ ಷಡ್ಯಂತ್ರ ಅರಿಯುವರು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ನೆನಪಿಡಿ. ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಡಿ ಎಂಬ ಶರಣತತ್ವವಿರೋಧಿ ನಿಲುವಿಗೆ ಇದೋ ನಮ್ಮೆಲ್ಲರ ಧಿಕ್ಕಾರ” ಎಂದು ಯಡಿಯೂರಪ್ಪನವರ ನಿಲುವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರ ಈ ನಡೆಯನ್ನು ವಿರೋಧಿಸಿ ಹತ್ತಾರು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಇದನ್ನೂ ಓದಿ: ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ಇದನ್ನೂ ಓದಿ: ಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಇದನ್ನೂ ಓದಿ: ಶರಣ ಚಳವಳಿ ನುಡಿ ಬಳಕೆಯ ಪಾಠಗಳು ಮತ್ತು ಕನ್ನಡ ರಾಶ್ಟ್ರೀಯತೆ: ಡಾ.ರಂಗನಾಥ್ ಕಂಟನಕುಂಟೆ

ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರ ಮಾಡಿರುವ ಈ ಪ್ರಮಾದವನ್ನು ಒಂದು ಅವಮಾನ ಎಂದು ಜರಿಯುವುದಕ್ಕಿಂತ ಇದರ ಹಿಂದಿರುವ ಮತ್ತೊಂದು ದೊಡ್ಡ ಅಪಾಯವನ್ನು ನಾವೆಲ್ಲರೂ ಮನಗಾಣಬೇಕಿದೆ. ಇಲ್ಲದಿದ್ದರೆ ಈಗಾಗಲೇ ಬುದ್ದನನ್ನು ಹತ್ತನೇ ಅವತಾರ ಎಂದವರು ಬಸವಣ್ಣನವರೆಗೆ ಬರಲು ಹೇಸುವುದಿಲ್ಲ. ಹೀಗೆ ಬರುವುದರ ಮೊದಲ ಹೆಜ್ಜೆಯೇ ಈ ಜಾಹೀರಾತು. ಇದನ್ನು ರಾಜ್ಯದ ಜನತೆ ಒಕ್ಕೊರಲಿನಿಂದ ವಿರೋಧಿಸಬೇಕಿದೆ.


ಇದನ್ನೂ ಓದಿ: ಕಾಯಕ ಸಿದ್ಧಾಂತವೆಂಬ ಅಭಿವೃದ್ಧಿ ಪ್ರಣಾಳಿಕೆ : ಡಾ.ಟಿ.ಆರ್ ಚಂದ್ರಶೇಖರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...