Homeಅಂಕಣಗಳುಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಹುಟ್ಟಿದ ಮೇಲೆ ನೈಸರ್ಗಿಕ ನಿಯಮವಾದ ಸಾವನ್ನು ಗೆಲ್ಲಲೆಂದಲ್ಲ, ಆದರೆ ಸಾವಿನ ಭಯವನ್ನು ಗೆಲ್ಲಲು’ ಎನ್ನುತ್ತದೆ ಈ ಮಂತ್ರ. ಸಾವಿಗೆ ಹೆದರುವುದು ಲೌಕಿಕ. ಸಾವಿನ ಭಯವಿಲ್ಲದಿರುವುದು ಅಲೌಕಿಕ ಮತ್ತು ತಾತ್ವಿಕ. ಮಂತ್ರವು ಮ್ಯಾಜಿಕಲ್ ಅಲ್ಲ, ಫಿಲಾಸಫಿಕಲ್

- Advertisement -
- Advertisement -

ಕೊರೊನಾದಿಂದ ಪಾರಾಗಲು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕೆಂದು ವಾಟ್ಸಪ್ಪು ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಕಸಿನ್ ಒಬ್ಬಳೂ ಕೂಡಾ ನನಗೆ ಇದನ್ನು ಕಳುಹಿಸಿದ್ದಳು. ಅವಳಿಗೂ ಮತ್ತು ಇನ್ನಿತರರಿಗೂ ನಾನು ಕಂಡುಕೊಂಡಿರುವ ಈ ಮಹಾಮೃತ್ಯುಂಜಯ ಮಂತ್ರದ ಒಳನೋಟವನ್ನು ಹಂಚಿಕೊಳ್ಳಲು ಇದನ್ನು ಬರೆಯಬೇಕಾಯ್ತು.

“ಓಂ ತ್ಯಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ, ಊರ್ವಾರುಕಮಿವ ಬಂಧನಾತ್
ಮೃತ್ಯೋರ್ಮುಕ್ಷೀಯಮಾಮೃತಾತ್”

ಮಂತ್ರವು ಸುಂದರವೂ ತಾತ್ವಿಕವೂ ಆಗಿದೆ. ‘ಹುಟ್ಟಿದ ಮೇಲೆ ನೈಸರ್ಗಿಕ ನಿಯಮವಾದ ಸಾವನ್ನು ಗೆಲ್ಲಲೆಂದಲ್ಲ, ಆದರೆ ಸಾವಿನ ಭಯವನ್ನು ಗೆಲ್ಲಲು’ ಎನ್ನುತ್ತದೆ ಈ ಮಂತ್ರ. ಸಾವಿಗೆ ಹೆದರುವುದು ಲೌಕಿಕ. ಸಾವಿನ ಭಯವಿಲ್ಲದಿರುವುದು ಅಲೌಕಿಕ ಮತ್ತು ತಾತ್ವಿಕ. ಮಂತ್ರವು ಮ್ಯಾಜಿಕಲ್ ಅಲ್ಲ. ಫಿಲಾಸಫಿಕಲ್. ಸಾಲುಗಳ ನಡುವೆ ಮತ್ತು ಪ್ರತಿಮೆಗಳ ಮೀರಿ ಅರ್ಥವನ್ನು ಗ್ರಹಿಸುವ ಅಗತ್ಯವಿರುತ್ತದೆ. ಏಕೆಂದರೆ ಮಂತ್ರಗಳೆಂದರೆ ಒಗಟುಗಳೂ ಕೂಡಾ. ಪ್ರತಿಯೊಂದು ಮಂತ್ರಕ್ಕೂ ಹಿನ್ನೆಲೆಯಿರುತ್ತದೆ. ತಾತ್ವಿಕತೆ ಇರುತ್ತದೆ. ತಾತ್ವಿಕತೆಯೇ ಆಸೆ ಮತ್ತು ಭಯಗಳಿಂದ ಲೌಕಿಕದಲ್ಲಿ ನರಳುವವರಿಗೆ ಶಕ್ತಿಯನ್ನು ಕೊಡುವುದು. ಮಹಾಮೃತ್ಯುಂಜಯ ಮಂತ್ರವೂ ಅದೇ ರೀತಿ.

ಋಗ್ವೇದದಲ್ಲಿಯೇ (7.59.12) ಈ ಮಂತ್ರ ಇರುವುದೆಂದಾದರೂ ನಮಗೆ ಈ ಮಂತ್ರದ ಸಂಬಂಧ ಸಿಗುವುದು ಮಾರ್ಕಂಡೇಯ ಋಷಿಯಿಂದ. ಮೃಕಂಡು ಮುನಿದಂಪತಿಯರಿಗೆ ಮಕ್ಕಳಿಲ್ಲದೇ ತಪಸ್ಸನ್ನಾಚರಿಸಿ ಶಿವನಿಂದ 12 ವರ್ಷಗಳ ಅಲ್ಪಾಯುಷಿ ಮಗ ಮಾರ್ಕಂಡೇಯನನ್ನು ಪಡೆದರು. ಆಯಸ್ಸು ತೀರುವ ಸಮಯಕ್ಕೆ ಮಾರ್ಕಂಡೇಯನಿಗೆ ವಿಷಯ ತಿಳಿದು ಮಹಾಮೃತ್ಯುಂಜಯ ಮಂತ್ರೋಪದೇಶ ಪಡೆದು ತನ್ನನ್ನು ಮರಣದಿಂದ ಕಾಪಾಡು ಎಂದು ಶಿವನಿಗೆ ತಪಸ್ಸನ್ನು ಮಾಡುವನು. ಕಾಲದ ನಿಯಮಾನುಸಾರ ಆಯಸ್ಸು ಮುಗಿದಾಗ ಯಮನು ಬಾಲಕನನ್ನು ಕರೆದೊಯ್ಯಲು ಬರುವನು. ಆದರೆ ಶಿವನು ಬಾಲಕನನ್ನು ರಕ್ಷಿಸುವನು. ಇದು ಸಾಯಲಿದ್ದ ಹುಡುಗ ತನ್ನ ಶಿವಭಕ್ತಿಯಿಂದ ಸಾವನ್ನು ಗೆದ್ದ ಒಂದೆಳೆ ಕತೆ.

ಈ ಕತೆಯಿಂದಲೇ ಮಹಾಮೃತ್ಯುಂಜಯ ಮಂತ್ರದ ಒಗಟನ್ನು ಬಿಡಿಸಬಹುದಾದರೂ ಮೊದಲು ಮಂತ್ರದ ಅರ್ಥ ತಿಳಿದುಕೊಳ್ಳೋಣ.

ಮಧುರವಾದ ಸುವಾಸನೆಯುಳ್ಳ ಮತ್ತು ಶಕ್ತಿಯನ್ನು ವೃದ್ಧಿಸುವಂತಹ ಮುಕ್ಕಣ್ಣನಿಗೆ ಶರಣಾಗುತ್ತೇನೆ. ಸೌತೇಕಾಯಿಯು ಸಹಜವಾಗಿ ತನ್ನ ಬಳ್ಳಿಯಿಂದ ಕಳಚಿಕೊಳ್ಳುವಂತೆ ಮೃತ್ಯುವಿನ ಬಂಧನದಿಂದ ಕಳಚಿಕೊಳ್ಳಬೇಕೇ ಹೊರತು ಅಮೃತತ್ವದಿಂದಲ್ಲ.

ವಿಶ್ವದ ಮತ್ತು ಅಸ್ತಿತ್ವದಲ್ಲಿರುವ ಪ್ರತಿಯೊಂದರ ಲಯದ ಪ್ರತಿಮಾ ರೂಪ ಮುಕ್ಕಣ್ಣನಾದ ಶಿವ. ಲಯವೆಂದರೆ ಅದು ನಾಶವೆಂದರ್ಥವಲ್ಲ. ಲಯದಲ್ಲಿಯೇ ಸ್ಥಿತಿಯಿದೆ ಮತ್ತು ಮರುಹುಟ್ಟಿದೆ. ಅಸ್ತಿತ್ವದಲ್ಲಿ ಯಾವುದೂ ಹುಟ್ಟುವುದಿಲ್ಲ ಮತ್ತು ನಾಶಗೊಳ್ಳುವುದೂ ಇಲ್ಲ, ಬರಿದೇ ರೂಪಾಂತರಗೊಳ್ಳುತ್ತಿರುತ್ತದೆ ಎಂಬ ವೈಜ್ಞಾನಿಕ ಮತ್ತು ತಾತ್ವಿಕ ಗ್ರಹಿಕೆಯಂತೆ ನಾಶವೆಂಬುದು ಇಲ್ಲ. ಅಲ್ಲಿರುವುದು ಬರಿದೇ ರೂಪಾಂತರಗೊಳ್ಳುತ್ತಿರುವ ಪ್ರಕ್ರಿಯೆ. ಸೃಷ್ಟಿ ಸ್ಥಿತಿ ಮತ್ತು ಲಯಗಳೆಂಬ ಮೂರೂ ಈ ರೂಪಾಂತರದ ಪ್ರಕ್ರಿಯೆಯ ಆಯಾಮಗಳು. ಸಾವಿಗೂ ಈ ಮೂರೂ ಆಯಾಮವಿದೆ. ಹಾಗಾಗಿಯೇ ಲಯದ ಪ್ರತಿಮಾರೂಪವಾದ ಶಿವನಿಗೆ ಮೂರು ಕಣ್ಣುಗಳು. ಈ ಸಾವಿನ ಯಮಕ್ಕೆ (ನಿಯಮ) ಅದರದೇ ನೈಸರ್ಗಿಕ ಸೌಂದರ್ಯವಿದೆ. ಹುಟ್ಟು ಬದುಕು ಮತ್ತು ಸಾವು ಈ ಮೂರೂ ಪ್ರಕೃತಿಯಲ್ಲಿ ಸತ್ಯವೂ ಶಿವವೂ (ಮಂಗಳಮಯವೂ) ಮತ್ತು ಸುಂದರವೂ ಆಗಿದೆ. ಹಾಗಾಗಿ ಸಾವು ಎಂದಕೂಡಲೇ ಭಯದಿಂದ ಅದಕ್ಕೆ ಪ್ರತಿರೋಧ ಒಡ್ಡುವ ಹೋರಾಟದ ಬದಲಿಗೆ ಸೌತೇಕಾಯಿಯ ಬಳ್ಳಿಯಲ್ಲಿ ಕಾಯಿಯು ಮಾಗಿದಾಗ ತಂತಾನೇ ತೊಟ್ಟು ಕಳಚಿಕೊಳ್ಳುವಂತೆ ಮಾನಸಿಕವಾಗಿ ಪ್ರಶಾಂತರಾದಾಗ ಭಯವು ಇಲ್ಲವಾಗುತ್ತದೆ. ಮೃತ್ಯುವಿನ ಭಯವಿಲ್ಲದವನಿಗೆ ಅಮೃತತ್ವದ ದರ್ಶನವಾಗುತ್ತದೆ. ಅವನು ಹುಟ್ಟುವುದು, ಇರುವುದು ಮತ್ತು ಇಲ್ಲವಾಗುವುದು ಈ ಮೂರನ್ನು ಮೀರಿದ ಅಸ್ತಿತ್ವದಲ್ಲಿ ಎರಡಿಲ್ಲದಂತೆ ಒಂದಾಗಿರುತ್ತಾನೆ. ಅದೇ ಅಮೃತತ್ವ.

ಬದುಕಿಗೆ ಆಸೆ ಪಡುವುದು ಮತ್ತು ಸಾವಿಗೆ ಹೆದರುವುದು ಲೌಕಿಕವೆಂದು ಗ್ರಹಿಸಿದ ಮಂತ್ರದೃಷ್ಟಾರರು ನೀಡಿದ ಮಾರ್ಗೋಪಾಯ ಈ ಮಂತ್ರ. ಸಾವಿನ ಭಯವನ್ನು ಮೀರಿ, ಆಸೆ ಮತ್ತು ಭಯಗಳಿಂದ ಆವರಿಸಿ ಲೌಕಿಕದಲ್ಲಿರುವವರಿಗೆ ಅಲೌಕಿಕವಾದ ತಾತ್ವಿಕತೆಯನ್ನು ಪರಿಚಯಿಸಿ, ರೂಪಾಂತರದ ಪ್ರಕ್ರಿಯೆಯಲ್ಲಿರುವ ಆ ಹಂತವನ್ನೂ ಪ್ರಶಾಂತವಾಗಿ ಒಪ್ಪುವುದನ್ನು ತಿಳಿಹೇಳುವ ಮಂತ್ರವಿದು.

ಈ ಮಂತ್ರವು ತನ್ನ ಅರಿವನ್ನು ಬಸವಣ್ಣನವರ ವಚನಗಳಲ್ಲಿ ಹರಳಿನಂತೆ ಮತ್ತಷ್ಟು ಅರಳುತ್ತದೆ.

“ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ ದೇವರೆಂಬವರೆತ್ತ ಹೋದರೆನಿಂ ಭೋ” ಎಂದು ಪ್ರಶ್ನಿಸುವ ಬಸವಣ್ಣ, ತಾತ್ವಿಕವಾಗಿ ಹಾಗೂ ಭಾವನಾತ್ಮಕವಾಗಿ ಬಲಗೊಳ್ಳದ ಹೊರತು ದೇವರ ಭಜನೆ ಕೀರ್ತನೆಗಳಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳುತ್ತಾ, “ನಾದಪ್ರಿಯ ಶಿವನೆಂಬರು” ವಚನದಲ್ಲಿ ನಾದವ ನುಡಿಸಿದ ರಾವಣನಿಗೆ ಅರೆ ಆಯುಷ್ಯವಾಯ್ತು, ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು ಎನ್ನುತ್ತಾ ಭಕ್ತಿಪ್ರಿಯ ನಮ್ಮ ಕೂಡಲ ಸಂಗಮದೇವ ಎಂದು ಅನಂತ ಅಸ್ತಿತ್ವವನ್ನು ತಮ್ಮ ಕೂಡಲ ಸಂಗಮದೇವನೆಂದು ಸಂಕೇತಿಸುತ್ತಾರೆ. ಹಾಗೆಯೇ, “ಭಕ್ತಿಯೆಂಬ ಪೃಥ್ವಿಯ ಮೇಲೆ” ವಚನದಲ್ಲಿ ಒಬ್ಬ ವ್ಯಕ್ತಿಯು ತನ್ನ ಭಕ್ತಿ ಮತ್ತು ವಿರಕ್ತಿಯ ಸಂಸ್ಕಾರದಿಂದ ಪಕ್ವವಾಗಿ ಬಾಳುತ್ತಾ ಕೊನೆಗೆ “ನಿಷ್ಫತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ” ಎಂಬ ರೂಪಕದಲ್ಲಿ ಸಾವನ್ನು ಪ್ರಸ್ತುತಪಡಿಸುತ್ತಾರೆ. ಬಳ್ಳಿಯಿಂದ ಸೌತೇಕಾಯಿ ಕಳಚಿಕೊಂಡು ಬೀಳುವುದು ಅಣ್ಣನ ವಚನದಲ್ಲಿ ಹಣ್ಣು ತೊಟ್ಟು ಕಳಚಿ ಬೀಳುವುದರಲ್ಲಿ ನನಗೆ ಸಾಮ್ಯತೆ ಕಾಣುತ್ತದೆ. ಎರಡರ ತಾತ್ವಿಕ ಭಾವ ಒಂದೇ ಆಗಿದೆ.

ಬಸವಣ್ಣನವರು ತಾತ್ವಿಕವಾಗಿ ಅದೆಷ್ಟೇ ಗಟ್ಟಿಯಾಗಿದ್ದರೂ ತಮ್ಮ ಪ್ರಸ್ತುತಿಯಲ್ಲಿ ಸಾತ್ವಿಕತನವನ್ನು ಸಾಮಾನ್ಯವಾಗಿ ಬಿಟ್ಟುಕೊಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಟು ಮತ್ತು ಬಿರುಸಿನ ಧ್ವನಿಗಳು ಅಲ್ಲಲ್ಲಿ ಕಂಡರೂ ಅವರದು ಸಾತ್ವಿಕ ಮಂಡನೆಯೇ. ಆದರೆ ಲದ್ದೆಯ ಸೋಮಣ್ಣ ಎಂಬ ಶರಣರು ಇದೇ ತಾತ್ವಿಕತೆಯನ್ನು ಹೊಂದಿದ್ದರೂ ಲೌಕಿಕ ಭಾಷೆಯಲ್ಲಿಯೇ ವಿಷಯವನ್ನು ಮಂಡಿಸುತ್ತಾರೆ.

“ಆವ ಕಾಯಕವಾದಡೂ ಸ್ವಕಾಯಕವ ಮಾಡಿ” ಎನ್ನುವ ತಮ್ಮ ವಚನದಲ್ಲಿ “ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ” ಎನ್ನುವ ಗಟ್ಟಿ ಮತ್ತು ನೇರ ಧ್ವನಿ. ಇದನ್ನೇ ತಮ್ಮ ದನಿಯಲ್ಲಿ ಡಿವಿಜಿಯವರೂ ಕೂಡಾ ಧ್ವನಿಸುವರು.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ.

ದೊಡ್ಡದು ಚಿಕ್ಕದು ಅನ್ನದೇ ಕಾಯಕವನ್ನು ಮಾಡು. ಪಡೆದುದ್ದನ್ನು ಗೌರವದಿಂದ ಪ್ರಸಾದ ಎಂದು ಸ್ವೀಕರಿಸು. ಹೊಣೆಗಾರಿಕೆ ಹೊರಬೇಕಾದುದನ್ನೆಲ್ಲಾ ಹೊತ್ತು ಬಾಳು, ಬದುಕು. ಸಾವು ಬಂದಾಗ ಹೋಗಲೇಬೇಕೆನ್ನುವ ತಾತ್ವಿಕತೆಯನ್ನು ಅರಿತುಕೊಂಡು ನೆಮ್ಮದಿಯಿಂದ ಸಾಯಿ. ಅಷ್ಟೇ!


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...