Homeಮುಖಪುಟರಫಿ ಹಾಡುಗಳಿಗೆ ಕನ್ನಡ ಸ್ಪರ್ಶ

ರಫಿ ಹಾಡುಗಳಿಗೆ ಕನ್ನಡ ಸ್ಪರ್ಶ

- Advertisement -
- Advertisement -

ಮಹಮ್ಮದ್ ರಫಿ, ಮುಖೇಶ್ ಕುಮಾರ್, ಕಿಶೋರ್ ಕುಮಾರ್, ಮಹೇಂದ್ರ ಕಪೂರ್, ಲತಾ ಮಂಗೇಶ್ಕರ್ ಇವೆಲ್ಲ ಕೇವಲ ಹೆಸರುಗಳಷ್ಟೇ ಅಲ್ಲ, ಬದಲಿಗೆ ಭಾರತೀಯ ಸಂಗೀತಾಸಕ್ತರ ಪಾಲಿಗೆ ದಶಕಗಳ ಕಾಲ ಜೀವ ತಣಿಸುವ ನಾಡಿಮಿಡಿತವೇ ಆಗಿಹೋಗಿದ್ದ ಅಚ್ಚರಿಗಳು.

ದೂರದರ್ಶನ ಆಗಿನ್ನು ದೂರದ ಮಾತು ಬಿಡಿ, ಅಂತಹ ಕಾಲದಲ್ಲಿ ರೇಡಿಯೋ ಮೂಲಕ ದೇಶದ ಮೂಲೆಮೂಲೆಗೂ ಸಂಗೀತವನ್ನು ತಲುಪಿಸಿದ, ಹಿಂದಿ-ಉರ್ದು ಭಾಷೆಯ ಪರಿಚಯ ಇಲ್ಲದವರ ಬಾಯಲ್ಲೂ ಅಪರೂಪದ ಚಿತ್ರಗೀತೆಗಳನ್ನು, ಘಜಲ್‌ಗಳನ್ನು ಗುನುಗಿಸಿದ ಕೀರ್ತಿ ಈ ಎಲ್ಲಾ ಸಂಗೀತ ದಿಗ್ಗಜರಿಗೆ ಸಲ್ಲುತ್ತದೆ.

ಅದರಲ್ಲೂ 50ರಿಂದ 70ರ ದಶಕಗಳಲ್ಲಿ, ಭಾರತದಲ್ಲಿ ಮಹಮ್ಮದ್ ರಫಿ ಉಂಟುಮಾಡಿದ್ದ ಮೋಡಿ ಇದೆಯಲ್ಲ ಅದನ್ನು ಪದಗಳಲ್ಲಿ ಹಿಡಿದಿಡುವುದು ಅಷ್ಟು ಸುಲಭದ ಮಾತಲ್ಲ.

ಗಣೇಶ್ ಪ್ರಸಾದ್

ದಿಲ್ ಕೆ ಜಾ ರೋಕೆ ಮೆ, ಯೇ ಮೇರಾ ಪ್ರೇಮ್ ಪತ್ರ ಪದಕಾರ್, ಯೇ ಚಾಂದ್ ಸಾ ರೋಷಾನ್ ಚೆಹೆರಾ, ಬದನ್ ಪೇ ಸಿತಾರೆ ಹೀಗೆ ಒಂದೊಂದೆ ಹಾಡುಗಳ ಮೂಲಕ ಜನರನ್ನು ಮೋಡಿ ಮಾಡಿದ ಮೋಡಿಗಾರ ಎಂದೇ ಮಹಮ್ಮದ್ ರಫಿ ಅವರನ್ನು ಗುರುತಿಸಲಾಗುತ್ತದೆ. ಭಾರತದ ಮಟ್ಟಿಗೆ ಚಲನಚಿತ್ರಗಳಿಗೂ ಘಜಲ್ ಸಾಹಿತ್ಯ ಸಂಗೀತವನ್ನು ಪರಿಚಯಿಸಿ ಅದನ್ನು ಉತ್ತುಂಗಕ್ಕೆ ಕೊಂಡೊಯ್ದ ಅಪರೂಪದ ಕಲಾವಿದ ಮಹಮ್ಮದ್ ರಫಿ.

ಬಾಲಿವುಡ್ ಮತ್ತು ಹಿಂದಿ ಭಾಷಿಕ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಿಂದಿ ಭಾಷೆಗೆ ಇರುವಷ್ಟೇ ಪ್ರಾಮುಖ್ಯತೆ ಉರ್ದು ಭಾಷೆಗೂ ಇದೆ. ಮಿರ್ಜಾ ಗಾಲಿಬ್‌ನಂತೆ ಉರ್ದು ಭಾಷೆಯಲ್ಲಿ ಸಾವಿರಾರು ಘಜಲ್‌ಗಳನ್ನು ರಚಿಸಿದ ಅನೇಕರು ಇಂದು ಇತಿಹಾಸದ ಪುಟ ಸೇರಿದ್ದಾರೆ. ಅಂತಹ ಘಜಲ್‌ಗಳನ್ನು ತಮ್ಮ ಅಪರೂಪದ ಕಂಠಸಿರಿಯ ಮೂಲಕ ಮನೆಮನೆಗೂ ತಲುಪಿಸಿದ ಕೀರ್ತಿ ಮಹಮ್ಮದ್ ರಫಿ ಅವರದ್ದು.

50ರಿಂದ 70ರ ದಶಕಗಳ ಕಾಲದಲ್ಲಿ ಹಿಂದಿ ಚಿತ್ರಲೋಕವನ್ನು ಸಂಪೂರ್ಣ ಆವರಿಸಿದ್ದ ರಫಿ ಹಾಡಿಗೆ ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿಗಳಿದ್ದರು. ಅವರು ಕನ್ನಡದಲ್ಲಿ ’ನೀನೆಲ್ಲಿ ನಡೆವೆ ದೂರ’ (ಒಂದೇ ಬಳ್ಳಿಯ ಹೂಗಳು) ಎಂಬ ಹಾಡನ್ನು ಹಾಡಿದ್ದರು ಎಂಬುದು ಕೂಡ ವಿಶೇಷ.

ಒಮ್ಮೆ ಯೋಚಿಸಿ, ರೇಡಿಯೋ ಕಾಲದಲ್ಲಿ, ದೂರದರ್ಶನ ಎಂಬ ಏಕೈಕ ಸರ್ಕಾರಿ ಚಾನೆಲ್ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಹಿಂದಿ ಚಿತ್ರಗೀತೆಗಳ ಮೂಲಕ, ಘಜಲ್ ಹಾಡುಗಳ ಮೂಲಕ ನಮ್ಮನ್ನು ರಂಜಿಸಿದ್ದ ಮಹಮ್ಮದ್ ರಫಿ ಹಾಡುಗಳು ಇಂದು ಕನ್ನಡದಲ್ಲೇ, ಕನ್ನಡ ಸೊಗಡಿನ ಸಾಹಿತ್ಯದಲ್ಲೇ ಕೇಳುವಂತಾದರೆ ಹೇಗಿರಬಹುದು! ಇಂತಹ ರೋಮಾಂಚನಕಾರಿ ಸಾಹಸಕ್ಕೆ ಇದೀಗ ಓರ್ವ ಉತ್ಸಾಹಿ ಹಿರಿಜೀವ ಕೈಹಾಕಿದೆ. ಅಷ್ಟೇ ಅಲ್ಲ ತಮ್ಮ ಪ್ರಯತ್ನದಲ್ಲಿ ದೊಡ್ಡ ಯಶಸ್ಸನ್ನೂ ಅವರು ಸಾಧಿಸಿದ್ದಾರೆ. ಅಂತಹ ಅಪರೂಪದ ಕನ್ನಡ ಸಾಹಸಿಯೇ ಗಣೇಶ್ ಪ್ರಸಾದ್!

ಕವಿ ರಾಗ ಮಾರ್ಗ ಎಂಬ ಸಂಗೀತಾಮೃತ

ಕನ್ನಡದಲ್ಲಿ ಈ ಹೆಸರಿನಲ್ಲಿ ಒಂದು ಯೂಟ್ಯೂಬ್ ಚಾನೆಲ್ (https://www.youtube.com/channel/UCJ9FYIKjFrIJFK96quimBNA) ಕಳೆದ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದೆ. ಅದರ ಸೂತ್ರಧಾರ ಇದೇ ಗಣೇಶ್ ಪ್ರಸಾದ್. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಅಂತದ್ದೇನು ವಿಶೇಷ? ಎಂಬ ಪ್ರಶ್ನೆಗೆ ಉತ್ತರ ಮಹಮ್ಮದ್ ರಫಿ, ಕಿಶೋರ್ ಕುಮಾರ್ ಅವರ ಪ್ರಖ್ಯಾತ ಹಿಂದಿ ಹಾಡುಗಳು ಇದೀಗ ಅದೇ ಸೊಗಡಿನಲ್ಲಿ ಕನ್ನಡೀಕರಣಗೊಂಡು ಕನ್ನಡ ಸಂಗೀತ ಆಸಕ್ತರನ್ನು ರಂಜಿಸುತ್ತಿದೆ. ಅಲ್ಲದೆ, ಕಳೆದ ಶತಮಾನದ ದಿಗ್ಗಜರ ಸಂಗೀತಾಮೃತವನ್ನು ಇಂದಿನ ನವ ತಲೆಮಾರಿಗೂ ದಾಟಿಸುತ್ತಿದೆ.

ಯಾರೀ ಗಣೇಶ್ ಪ್ರಸಾದ್?

ಮೂಲತಃ ಮೈಸೂರಿನವರಾದ, ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಗಣೇಶ್ ಪ್ರಸಾದ್ ಅವರಿಗೆ ರಫಿ ಹಾಡುಗಳೆಂದರೆ ಎಲ್ಲಿಲ್ಲದ ಪ್ರೀತಿ. ಸಂಗೀತದ ಪರಿಚಯವೂ ಇದ್ದ ಅವರು 80-90ರ ದಶಕದಲ್ಲಿ ಮೈಸೂರಿನಲ್ಲಿ ಪ್ರಖ್ಯಾತವಾಗಿದ್ದ ಮೋಹನ್ ಆರ್ಕೆಸ್ಟ್ರಾದಲ್ಲಿ ಹಾಡುಗಾರರಾಗಿ ಸಾಕಷ್ಟು ಹೆಸರು ಮಾಡಿದ್ದರು.

ಶರತ್

ಹಿಂದಿ ಭಾಷೆಯಲ್ಲಿ ಅಷ್ಟೇನೂ ಹಿಡಿತವಿಲ್ಲದಿದ್ದರೂ, ಗಣೇಶ್ ಅವರು ರಫಿ ಮೇಲಿನ ಪ್ರೀತಿಯಿಂದಾಗಿ ಕ್ಲಾಸಿಕಲ್ ಸಂಗೀತವನ್ನು ಕಲಿತು ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದಾರೆ. ಈ ಎಲ್ಲಾ ಹಾಡುಗಳನ್ನು ಕನ್ನಡೀಕರಿಸಬೇಕು, ಈ ಹಾಡುಗಳಿಗೆ ಕನ್ನಡದಲ್ಲಿ ಸಾಹಿತ್ಯ ಬರೆಯಬೇಕು ಎಂಬ ಅವರ ಕನಸಿಗೆ ಆಗಲೇ ರೆಕ್ಕೆಪುಕ್ಕ ಹುಟ್ಟಿತ್ತು. ಆದರೆ, ಅದು ಸಫಲವಾಗಿದ್ದು ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಎಂಬುದು ವಿಶೇಷ.

ಕೊರೊನಾ ಕಾಲದಲ್ಲಿ ನಡೆದಿತ್ತು ಅದ್ಭುತ

ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಗಣೇಶ್ ಇದೀಗ ದಾವಣಗೆರೆಯ ಸಿದ್ಧಗಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಕಾಲೇಜು ಕೆಲಸ ಇಲ್ಲದ ಕಾರಣ ಎಲ್ಲರಂತೆ ಅವರೂ ಮನೆಯಲ್ಲೇ ಕೂರುವಂತಾಗಿತ್ತು. ಈ ಸಂದರ್ಭದಲ್ಲೇ ಅವರ ಹಳೆಯ ಕನಸು ಮತ್ತೆ ರೆಕ್ಕೆ ಬಿಚ್ಚಿಕೊಂಡಿದ್ದು. ಈ ಕನಸಿಗೆ ಕೈಜೋಡಿಸಿದ್ದು ಅವರ ಗೆಳೆಯರಾದ ನಾರಾಯಣ್ ಮತ್ತು ಅವರಲ್ಲೇ ಇಂಗ್ಲಿಷ್ ಕಲಿತಿದ್ದ ವಿದ್ಯಾರ್ಥಿ ಶರತ್ ಆರೋಹಣ. ಈ ತಂಡಕ್ಕೆ ನೆರವಾದವರಲ್ಲಿ ಚೇತನ್ ಸುಬ್ಬಯ್ಯ, ವಾಸುಕಿ ರಾಘವನ್ ಮತ್ತು ಪ್ರದೀಪ್ ವಿ ಕೂಡ ಇದ್ದಾರೆ.

ಮಹಮ್ಮದ್ ರಫಿ ಅವರ ಬಹುತೇಕ ಎಲ್ಲಾ ಹಾಡುಗಳನ್ನೂ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ ನಾಸೀರ್ ಎಂಬುವವರು ಈಗಾಗಲೇ ತಮ್ಮದೇ ಹೆಸರಿನ ಬ್ಲಾಗ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೀಗಾಗಿ ಇಂಗ್ಲಿಷ್‌ನಲ್ಲಿರುವ ಹಾಡುಗಳ ಸಾಹಿತ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಇಂಗ್ಲಿಷ್ ಪ್ರಾಧ್ಯಾಪಕರಾದ ಗಣೇಶ್ ಅವರಿಗೆ ಅಷ್ಟೇನು ಕಷ್ಟವಾಗಲಿಲ್ಲ. ಇದರ ಜೊತೆಗೆ ಹಿಂದಿಯಲ್ಲಿ ಪರಿಣತಿ ಪಡೆದಿದ್ದ ಅವರ ಗೆಳೆಯರಾದ ನಾರಾಯಣ್ ಸಹ ಈ ವೇಳೆ ಸಹಕಾರ ನೀಡಿದ್ದಾರೆ. ಅಲ್ಲದೆ, ಯೂಟ್ಯೂಬ್‌ಗೆ ’ಕವಿ ರಾಗ ಮಾರ್ಗ’ ಎಂಬ ಹೆಸರನ್ನೂ ಅವರೇ ಸೂಚಿಸಿದ್ದಾರೆ.

ನಾರಾಯಣ್

ಹೀಗೆ ಲಾಕ್‌ಡೌನ್ ಕಾಲದಲ್ಲಿ ಆರಂಭವಾದ ಹೊಸ ಬಗೆಯ ಕನ್ನಡದ ಸಂಗೀತ ಚಾನೆಲ್ ಒಂದು ಇದೀಗ ರಾಜ್ಯದಲ್ಲಿ ಮೋಡಿ ಮಾಡುತ್ತಿದೆ. 2020 ಅಕ್ಟೋಬರ್ 25ರ ವಿಜಯದಶಮಿಯಂದು ಆರಂಭವಾದ ಈ ಚಾನೆಲ್‌ನಲ್ಲಿ ಮಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರ 50ಕ್ಕೂ ಅಧಿಕ ಹಾಡುಗಳನ್ನು ಕನ್ನಡೀಕರಿಸಿ, ಮೂಲ ರಾಗಸಂಯೋಜನೆಯಲ್ಲಿಯೇ ಹಾಡಲಾಗಿದೆ. ಪ್ರತಿ ಶನಿವಾರ ಒಂದು ಪ್ರೀಮಿಯಂ ಹಾಡನ್ನು ಬಿಡುಗಡೆ ಮಾಡುವುದು ಈ ಚಾನೆಲ್‌ನ ವಿಶೇಷ. ಇಷ್ಟು ದಿನ ಮಹಮ್ಮದ್ ರಫಿ ಅವರ ಹಾಡುಗಳನ್ನು ನೀಡುತ್ತಿದ್ದ ಗಣೇಶ್ ಅವರು ಇದೀಗ ಕಿಶೋರ್ ಕುಮಾರ್ ಅವರ ಸರಣಿಯನ್ನು ಆರಂಭಿಸಿದ್ದಾರೆ. ಈವರೆಗೆ 1.5 ಲಕ್ಷ ವೀಕ್ಷಕರು ಈ ಚಾನೆಲ್‌ನ ಹಾಡುಗಳನ್ನು ನೋಡಿ ಆನಂದಿಸಿದ್ದಾರೆ ಎಂಬುದೇ ಹೆಚ್ಚುಗಾರಿಕೆ.

ರಫಿ ಅವರನ್ನು ಕನ್ನಡದಲ್ಲಿ ಪರಿಚಯಿಸಿದ ಕೀರ್ತಿ ನಮಗಿರಲಿ

ಮಹಮ್ಮದ್ ರಫಿ ದೇಶವನ್ನೇ ಬೆರಗುಗೊಳಿಸಿದ ಬಹುದೊಡ್ಡ ಸಂಗೀತ ಗಾರುಡಿಗ. ನಮ್ಮ ತಲೆಮಾರಿನ
ಬಹುದೊಡ್ಡ ಅದ್ಭುತ. ಅವರ ಹಾಡುಗಳಲ್ಲಿನ ಸಾಹಿತ್ಯಕ್ಕೆ ಮಾರುಹೋಗದವರು ಯಾರೂ ಇಲ್ಲ. ಆದರೆ, ಅಂತಹ ಉತ್ಕೃಷ್ಟ ಸಾಹಿತ್ಯವನ್ನು ನಮ್ಮದೇ ಕನ್ನಡ ಭಾಷೆಯಲ್ಲಿ ಸವಿಯುವಂತಾಗಬೇಕು ಎಂಬುದು ನನ್ನ ಬಹುದಿನದ ಕನಸು. ಇದೇ ಕಾರಣಕ್ಕೆ ಈ ಯೂಟ್ಯೂಬ್ ಚಾನೆಲ್ ಆರಂಭಿಸಲಾಗಿದೆ. ಇದರಿಂದ ಹಣ ಗಳಿಸುವುದು ನಮ್ಮ ಉದ್ದೇಶವಲ್ಲ. ಬದಲಿಗೆ ರಫಿ ಅವರನ್ನು ಈ ತಲೆಮಾರಿಗೂ ಪರಿಚಯಿಸಿದ ಮತ್ತು ಅವರ ಹಾಡುಗಳನ್ನು ಕನ್ನಡದಲ್ಲಿ ನೀಡಿದ ಕೀರ್ತಿ ನಮಗಿರಲಿ ಎಂಬುದೇ ನಮ್ಮ ಉದ್ದೇಶ.
ಗಣೇಶ್ ಪ್ರಸಾದ್


ಇದನ್ನೂ ಓದಿ: ‘ಧೀರ ಭಗತ್ ರಾಯ್‌’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...