Homeಮುಖಪುಟಯೆಮೆನ್ ಮತ್ತು ಸೌದಿ-ಇರಾನ್ ಶಾಂತಿ ಒಪ್ಪಂದ

ಯೆಮೆನ್ ಮತ್ತು ಸೌದಿ-ಇರಾನ್ ಶಾಂತಿ ಒಪ್ಪಂದ

- Advertisement -
- Advertisement -

ಇತ್ತೀಚಿನ ಸೌದಿ ಅರೇಬಿಯಾ ಅಧಿಪತ್ಯ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವಿನ ಶಾಂತಿ ಒಪ್ಪಂದದ ಕಾರಣದಿಂದ ಯೆಮೆನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಕೊನೆಗೊಳ್ಳುವ ಭರವಸೆಗಳು ಮೂಡುತ್ತಿವೆ. ಈ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಚೀನ. ಈ ಸಂಘರ್ಷದಲ್ಲಿ ಚೀನ ತಟಸ್ಥ ನೀತಿಯನ್ನು ಅನುಸರಿಸಿತ್ತು. 1990ರಿಂದಲೂ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಸಂಘರ್ಷದ ಫಲಿತಾಂಶವೇ ಯೆಮೆನ್‌ನ ಈ ಅಂತರ್ಯುದ್ಧ. ಅಂತಾರಾಷ್ಟ್ರೀಯ ವೀಕ್ಷಣಕಾರರು ಈ ಸಂಘರ್ಷವನ್ನು ಸೌದಿ ಅರೇಬಿಯ ಮತ್ತು ಇರಾನ್‌ಗಳ ನಡುವಿನ ಮುಸುಕು ಯುದ್ಧವೆಂದೇ ಕರೆದಿದ್ದರು. ಸೌದಿ ಅರೇಬಿಯಾ ಸರ್ಕಾರ 2015ರಲ್ಲಿ ತನ್ನನ್ನು ತಾನೇ ನೇರವಾಗಿ ಈ ಸಂಘರ್ಷದಲ್ಲಿ ತೊಡಗಿಸಿಕೊಂಡಿತ್ತು. ಇದೇ ಸಮಯದಲ್ಲಿ ಶಿಯಾಗಳ ಮುಂದಾಳತ್ವದ ಹೋತಿ ಸರ್ಕಾರ ಯೆಮೆನ್‌ನಲ್ಲಿ ಅಧಿಕಾರ ವಹಿಸಿಕೊಂಡಿತ್ತು.

ಸೌದಿ ಅರೇಬಿಯ ಯೆಮೇನಿ ಸಮ್ಮಿಶ್ರ ಸರ್ಕಾರ ಮತ್ತು ಹೋತಿ ಬಂಡುಕೋರರ ನಡುವೆ ಎಂಟು ತಿಂಗಳ ಯುದ್ಧ ವಿರಾಮಕ್ಕೋಸ್ಕರ ಮಧ್ಯಸ್ಥಿಕೆ ವಹಿಸಿತ್ತು, ಅದಲ್ಲದೇ ದೇಶದ ಭವಿಷ್ಯದ ಬಗ್ಗೆ ಎರಡು ವರ್ಷಗಳಷ್ಟು ಕಾಲ ಮಾತುಕತೆ ನಡೆಸಿತ್ತು. ಈ ಒಪ್ಪಂದ ಸೌದಿ ಅರೇಬಿಯ ಮತ್ತು ಇರಾನ್‌ಗಳ ನಡುವಿನ ಸಂದಿಗ್ಧದ ರಾಯಭಾರೀ ಸಂಬಂಧಗಳನ್ನು ಪುನಃಸ್ಥಾಪಿಸಲು ನೆರವಾಯಿತು. ಒಬ್ಬ ಪ್ರಮುಖ ಶಿಯಾ ಕ್ಲೆರಿಕ್‌ನನ್ನು ಗಲ್ಲಿಗೇರಿಸಿದ ಕಾರಣಕ್ಕೋಸ್ಕರ ಯಾವಾಗ ಟೆಹ್ರಾನ್‌ನ ಸೌದಿ ಅರೇಬಿಯಾ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆದಿತ್ತೋ, ಆಗ ಸೌದಿ ಅರೇಬಿಯ ಮತ್ತು ಇರಾನ್‌ಗಳ ನಡುವೆ 2016ರಿಂದಲೂ ಈ ರೀತಿಯ ಮಾರ್ಗಗಳಿನ್ನೂ ತೆರೆದಿರಲಿಲ್ಲ. ಈ ಘಟನೆಗಳ ನಂತರ ಎರಡೂ ದೇಶಗಳ ನಡುವಿನ ಸಂಬಂಧ ಕೆಡುತ್ತಾ ಹೋಯಿತು. ಈಗಿನ ಶಾಂತಿಯ ಒಪ್ಪಂದದ ನಂತರ, ಪರಸ್ಪರವಾಗಿ ಒಪ್ಪಿಕೊಂಡ ವಿಷಯಗಳು ಇಂತಿವೆ:

  •  ಯೆಮೆನ್‌ನಲ್ಲಿ ಯುದ್ಧವಿರಾಮ ಉಂಟಾಗಬೇಕು. ಈ ಯುದ್ಧವಿರಾಮ ಆರು ತಿಂಗಳ ಕಾಲ ಪರಸ್ಪರ ವಿಶ್ವಾಸವನ್ನು ಸ್ಥಾಪಿಸುವ ಮೊದಲನೇ ಹಂತವನ್ನೂ ಒಳಗೊಂಡಿದೆ.
  •  ಮೊದಲನೇ ಹಂತದ ವಿಶ್ವಾಸವನ್ನು ಸ್ಥಾಪಿಸುವ ಪ್ರಕ್ರಿಯೆಯ ನಂತರ, ಮುಂದಿನ ಮೂರು ತಿಂಗಳುಗಳ ಸಂಧಾನಗಳ ಕಾಲದಲ್ಲಿ, ಅದರ ಮುಂದಿನ ಎರಡು ವರ್ಷಗಳ ಪರಿವರ್ತನೆಯ ಹಂತವನ್ನು ತಲುಪಲು ಕೆಲಸ ಮಾಡಬೇಕು.
  •  ಯೆಮೆನ್‌ನಲ್ಲಿನ ಸರ್ಕಾರೀ ಕೆಲಸಗಾರರಿಗೆ ಸಂಬಳವನ್ನು ಸರ್ಕಾರೀ ಸ್ವಾಮ್ಯದಲ್ಲಿರುವ ತೈಲ ಮತ್ತು ಅನಿಲದಿಂದ ಉತ್ಪತ್ತಿಯಾಗುವ ಆದಾಯದಿಂದ ಭರಿಸತಕ್ಕದ್ದು. ಮತ್ತು ಯೆಮೇನಿ ಬಂದರುಗಳ ಮೇಲಿನ ಎಲ್ಲಾ ನಿರ್ಬಂಧಗಳನ್ನೂ ತೆಗೆಯಲಾಗುವುದು.
  •  ಸೌದಿ ಅರೇಬಿಯಾ ವಿರುದ್ಧ ಪ್ರತೀಕಾರದ ಆಕ್ರಮಣಗಳನ್ನು ಮಾಡದಿರುವಂತೆ ಭರವಸೆ ನೀಡಲು 1300 ಕಿ.ಮೀ. ಗಡಿಯುದ್ದಕ್ಕೂ ಸೌದಿ ಅರೇಬಿಯ ಮತ್ತು ಯೆಮೆನ್ ನಡುವೆ ಸಂಘರ್ಷಣಾರಹಿತ ವಲಯವನ್ನು ನಿರ್ಮಿಸಲಾಗುವುದು.

ಯೆಮೆನ್‌ನಲ್ಲಿನ ಯುದ್ಧ

ಹೋತಿ ಯೆಮೆನ್‌ನಲ್ಲಿ ಶಿಯಾ ಮುಸ್ಲಿಮರ ಒಂದು ಪ್ರಮುಖವಾದ ಆಂದೋಲನ. ಹೋತಿಗಳು ಯೆಮೆನ್‌ನ ಉತ್ತರದ ಪ್ರಾಂತ್ಯವಾದ ಸಾದದಿಂದ ಬಂದವರು, ಮತ್ತು ಅಲ್ಲಿ ಅವರು ಯೆಮೆನ್‌ನ ಸರ್ಕಾರದ ಜೊತೆ ತಮ್ಮನ್ನು ಸಂಘರ್ಷದಲ್ಲಿ ತೊಡಗಿಸಿಕೊಂಡಿದ್ದರು. ಜೈದಿ ಸಮುದಾಯದವರಿಗೆ ಹೆಚ್ಚಿನ ಆರ್ಥಿಕ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ನೀಡಿ ಶಾಂತಿಯ ಒಡಂಬಡಿಕೆಯನ್ನು ಮಾಡಿಕೊಳ್ಳಲು ಯೆಮೆನಿ ಸರ್ಕಾರ ಪ್ರಯತ್ನಿಸಿದಾಗ 1990ರ ವೇಳೆಗೆ ಈ ಸಮುದಾಯ ಬೆಳವಣಿಗೆಯನ್ನು ಕಂಡಿತು. ಆದರೆ ಯೆಮೇನಿ ಸರ್ಕಾರ ಒಪ್ಪಂದವನ್ನು ಈಡೇರಿಸದೇ ಇದ್ದಾಗ, ಜೈದಿ ಸಮುದಾಯದ ಸದಸ್ಯರುಗಳು ಒಟ್ಟಿಗೆ ಸೇರಿ ಹೋತಿ ಆಂದೋಲನವನ್ನು ಪ್ರಾರಂಭಿಸಿದರು. ಶಿಯಾ ಗೆರಿಲ್ಲಾ ಆಂದೋಲನಗಳು ಹೋಲಿಕೆಯಿಂದ ಬಹಳಷ್ಟು ವಿಕೇಂದ್ರೀಕರಣದಿಂದ ಕೂಡಿದ್ದು, ಅದರ ಸ್ಥಳೀಯ ನಾಯಕರುಗಳು ಒಂದೇ ಗುರಿಯನ್ನು ಮುಂದಿಟ್ಟುಕೊಂಡು ಜನರನ್ನು ಸಜ್ಜುಗೊಳಿಸಿದರು. ಇದು ಕೇಂದ್ರೀಕೃತ ನಾಯಕತ್ವದ ಆಡಳಿತ ವ್ಯವಸ್ಥೆಯ ಮೇಲಿನ ಪ್ರತಿರೋಧವನ್ನು ಪರಿಣಾಮಕಾರಿಯನ್ನಾಗಿ ಮೂಡಿಸಲು ಸಾಧ್ಯವಾಯಿತು.

ಈ ಆಂದೊಲನ ಬಹಳ ವರ್ಷಗಳ ಕಾಲ ಬೆಳೆಯುತ್ತಾ ಬಂದಿತು. 2004ರಲ್ಲಿ, ಹೋತಿ ಯೆಮೆನ್ ಸರ್ಕಾರದ ವಿರುದ್ಧ ಬಂಡಾಯವೇಳಲು ಪ್ರಾರಂಭಿಸಿತು. ಈ ಬಂಡಾಯ, ಸುದೀರ್ಘವಾದ ಹೋತಿಗಳ ಮತ್ತು ಯೆಮೆನ್ ದೇಶದ ನಡುವಿನ ಅಂತರ್ಯುದ್ಧಕ್ಕೆ ನಾಂದಿಯಾಯಿತು.

ಇದನ್ನೂ ಓದಿ: ಸುಡಾನ್ ಬಿಕ್ಕಟ್ಟಿನ ಮೂಲವೇನು?

2011ರಲ್ಲಿ, ಹೋತಿಗಳು ಸರ್ಕಾರದ ವಿರುದ್ಧ ಸಾಮೂಹಿಕ ಪ್ರತಿಭಟನೆಯನ್ನು ಹಮ್ಮಿಕೊಂಡರು, ಇದರಿಂದ ಅಧ್ಯಕ್ಷ ಆಲಿ ಅಬ್ದುಲ್ಲಾ ಸಾಲೆಹ್, ಮೂವತ್ತು ವರ್ಷಗಳ ಅಧಿಕಾರಾವಧಿಯ ನಂತರ ಪದಚ್ಯುತಿಗೊಳ್ಳಬೇಕಾಯಿತು. ಯುದ್ಧ ಹಾಗೆಯೇ ಮುಂದುವರಿಯಿತು, ಮತ್ತು 2014ರಲ್ಲಿ ಅವರು ಯೆಮೆನ್‌ನ ರಾಜಧಾನಿಯಾದ ಸಾನ ನಗರವನ್ನು ವಶಪಡಿಸಿಕೊಂಡರು. ಹೋತಿಯ ಈ ಆಕ್ರಮಣವನ್ನು ಮಿಡಲ್ ಈಸ್ಟ್‌ನ ಅನೇಕ ರಾಷ್ಟ್ರಗಳು, ವಿಶಿಷ್ಟವಾಗಿ ಸೌದಿ ಅರೇಬಿಯ ವಿರೋಧಿಸಿದವು. ಹೋತಿ ಒಂದು ಶಿಯಾಗಳ ಗುಂಪಾಗಿದ್ದು, ಅವರು ಸ್ವಾಭಾವಿಕವಾಗಿಯೇ ಇರಾನ್‌ನ ಜೊತೆ ಮೈತ್ರಿಯಾಗಿದ್ದಾರೆ ಎಂದು ಸೌದಿ ಅರೇಬಿಯಾ ಸರ್ಕಾರ ಪ್ರತಿಪಾದಿಸಿತು. ಮಾರ್ಚ್ 2015ರಲ್ಲಿ ಸೌದಿ ಅರೇಬಿಯಾದ ಸರ್ಕಾರ ಯೆಮೆನ್ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿತು; ಈಗ ಯೆಮೆನ್‌ನಲ್ಲಿ ಮುಂದುವರಿಯುತ್ತಿದ್ದ ಯುದ್ಧಕ್ಕೆ ಅದೇ ಕಾರಣ.

ಸೌದಿ ಅರೇಬಿಯಾದ ಆಕ್ರಮಣ ಬಹಳ ಕ್ರೌರ್ಯದಿಂದ ಕೂಡಿತ್ತು. ಆಗಲೇ ಯೆಮೆನ್ ಪ್ರಪಂಚದಲ್ಲಿ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿತ್ತು, ಮತ್ತು ಈ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ ಸುಮಾರು ಎರಡು ಲಕ್ಷ, ಮತ್ತು ಲಕ್ಷಾಂತರ ಮಂದಿ ತಮ್ಮ ಮನೆಮಠಗಳನ್ನು ಕಳೆದುಕೊಂಡರು.

ಆಲಿ ಅಬ್ದುಲ್ಲಾ ಸಾಲೆಹ್

ಈ ಹೋತಿ ಅನ್ನುವುದು ಒಂದು ಆಂದೋಲನವಾಗಿರುವುದರಿಂದ, ಅವರಿಗೆ ಅತ್ಯಂತ ತಳಮಟ್ಟದಲ್ಲಿ ಸೌದಿ ಅರೇಬಿಯಾದ ಆಕ್ರಮಣದ ವಿರುದ್ಧ ಜನರನ್ನು ಸಜ್ಜುಗೊಳಿಸಲು ಸಾಧ್ಯವಾಯಿತು, ಮತ್ತು ಅವರಿಗೆ ಸೌದಿ ಅರೇಬಿಯಾದ ಆಕ್ರಮಣದ ವಿರುದ್ಧ ಗೆರಿಲ್ಲಾ ರೀತಿಯ ಯುದ್ಧ ತಂತ್ರಗಳನ್ನು ನಿಯೋಜಿಸಲು ಅನುಕೂಲಕರವಾಯಿತು.

ಈ ಸಂಘರ್ಷವನ್ನು ಮಿಡಲ್ ಈಸ್ಟ್‌ನಲ್ಲಿ ಸೃಷ್ಟಿಯಾಗುತ್ತಿರುವ ಶೀತಲ ಸಮರ ಎಂದು ಪರಿಗಣಿಸಲಾಯಿತು. ಅಂದರೆ ಅಮೆರಿಕದ ಮೈತ್ರಿಕೂಟ ಒಂದು ಕಡೆ, ಮತ್ತು ಇರಾನ್ ಇನ್ನೊಂದು ಕಡೆ. ಇರಾನ್, ಯೆಮೆನ್ ಜೊತೆಯಲ್ಲಿ ಸೇರಿಕೊಂಡರೆ ಅದಕ್ಕೆ ಬಹಳಷ್ಟು ಲಾಭ ಉಂಟಾಗುವುದಂತೂ ನಿಜ. ಯೆಮೆನ್ ಇರುವುದು ಗಲ್ಫ್‌ನ ಆಯಕಟ್ಟಿನ ಪ್ರದೇಶದಲ್ಲಿ, ಮತ್ತು ಅದಕ್ಕೆ ಗಟ್ಟಿಯಾದ ಸಾಂಸ್ಕೃತಿಕ ನಂಟು ಇರಾನ್ ಜೊತೆಯಲ್ಲಿದೆ. ಯೆಮೆನ್ ಇರುವುದು ಕೆಂಪು ಸಮುದ್ರ ಪ್ರಾರಂಭವಾಗುವ ಕಡೆಯಲ್ಲಿ, ಮತ್ತು ಅಲ್ಲಿನ ತೈಲದ ಸರಬರಾಜಿನ ಚಲನವಲನದ ಬಗ್ಗೆ ಆ ದೇಶ ಪ್ರಭಾವ ಬೀರಬಲ್ಲದು.

ಯೆಮೆನ್‌ನಲ್ಲಿನ ಪರಿಸ್ಥಿತಿ

ಯೆಮೆನ್ ಪ್ರಪಂಚದ ಅತಿಯಾದ ಬಡ ದೇಶಗಳಲ್ಲಿ ಒಂದು. ಹೊರದೇಶದಿಂದ ಬರುವ ಹಣದ ಆರ್ಥಿಕತೆಯ ಮೇಲೆ ಯೆಮೆನ್ ಅವಲಂಬಿತವಾಗಿದೆ, ಆದರೆ, ಕಳೆದ ಕೆಲವು ದಶಕಗಳಿಂದ ಅದರ ಆರ್ಥಿಕವಾದ ಪ್ರತ್ಯೇಕೀಕರಣದ ಕಾರಣದಿಂದ ಅದರ ಆರ್ಥಿಕತೆ ಬಹಳ ದುರ್ಬಲಗೊಂಡಿತು. ಅಲ್ಲಿನ ಮೂರು ಕೋಟಿ ಜನಗಳಲ್ಲಿನ ಮೂರನೇ ಎರಡು ಭಾಗದ ಜನರು ಆಹಾರದ ವಿಷಯದಲ್ಲಿ ಅಭದ್ರರಾಗಿದ್ದಾರೆ. ಈಗ ಮುಂದುವರಿಯುತ್ತಿರುವ ಯುದ್ಧದ ಕಾರಣಕ್ಕೆ ಬಹಳಷ್ಟು ಜನರು ಆಹಾರ ಮತ್ತು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಯೆಮೆನ್ ಬಹಳ ಪರ್ವತಗಳಿಂದ ಕೂಡಿದ ಪ್ರದೇಶ, ಮತ್ತು ದೂರದ ಪ್ರದೇಶಗಳನ್ನು ತಲುಪುವುದು ಬಹಳ ಕಷ್ಟ. ಇದು ಪ್ರತಿರೋಧದ ಆಂದೋಲನಕ್ಕೆ, ಅದರಲ್ಲೂ ಸೌದಿ ಅರೇಬಿಯಾದ ಸೈನ್ಯದ ವಿರುದ್ಧದ ಯುದ್ಧದಲ್ಲಿ ಸಹಕಾರಿಯಾಗಿದ್ದರೂ, ಅದೇ ಸಮಯದಲ್ಲಿ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಪಡೆಯುವುದು ಕೂಡ ಕಷ್ಟಕರವಾಗಿದೆ.

ಸೌದಿ ಅರೇಬಿಯಾ ಮತ್ತು ಇರಾನ್

ಸೌದಿ ಅರೇಬಿಯಾ ಮತ್ತು ಇರಾನ್, ಇವೆರಡೂ ಮಧ್ಯ ಪ್ರಾಚ್ಯದಲ್ಲಿ ಎರಡು ಪ್ರಮುಖವಾದ ಬಲಿಷ್ಟ ರಾಷ್ಟ್ರಗಳು ಮತ್ತು ಈ ಒಪ್ಪಂದ ಬಹಳ ಪ್ರಾಮುಖ್ಯತೆಯನ್ನು ಪಡೆದಂತಹ ಒಂದು ಘಟನೆ. ಈ ಪೈಪೋಟಿ ಪ್ರಾಥಮಿಕವಾಗಿ ಆರ್ಥಿಕ ಮತ್ತು ಸೈನಿಕ ಅಂಶಗಳಿಂದ ಕೂಡಿದೆ. ಸೌದಿ ಅರೇಬಿಯ ಅಮೆರಿಕದ ಜೊತೆಯಲ್ಲಿ ಮೈತ್ರಿಯನ್ನು ಹೊಂದಿದೆ ಮತ್ತು ಅಮೆರಿಕ ಸರ್ಕಾರದ ಕಾರಣದಿಂದ ಅಂತಾರಾಷ್ಟ್ರೀಯವಾಗಿ ಇರಾನ್‌ನನ್ನು ಒಂಟಿ ಮಾಡಲಾಗಿದೆ. ಇತ್ತೀಚೆಗೆ ಎರಡೂ ದೇಶಗಳು ವಿಪರೀತವಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇರಾನ್‌ನ ಆರ್ಥಿಕ ಪರಿಸ್ಥಿತಿ ಅತಿಯಾದ ಸಂಕಷ್ಟಕ್ಕೆ ಒಳಗಾಗಬೇಕಾಯಿತು ಮತ್ತು ಅಮೆರಿಕ ಮತ್ತು ಸೌದಿಯ ಸಂಬಂಧ ಮೊದಲಿದ್ದುದಕ್ಕೆ ಹೋಲಿಸಿದರೆ ಈಗ ಬಹಳ ದುರ್ಬಲಗೊಂಡಿತ್ತು. ಮಿಡಲ್‌ಈಸ್ಟ್‌ನಾದ್ಯಂತ ನಡೆಯುತ್ತಿದ್ದ ಸಂಘರ್ಷಗಳಲ್ಲಿ ಮೌನ ಸೌದಿ ಅರೇಬಿಯಾದ ಉಪಸ್ಥಿತಿ ಇರುತ್ತಿತ್ತು, ಮತ್ತು ಇದರ ಪರಿಣಾಮವಾಗಿ ಸಿರಿಯಾ ಮತ್ತು ಇರಾಕ್‌ಗಳಲ್ಲಿ ಪ್ರಕ್ಷುಬ್ಧತೆ ಮತ್ತು ಅಸ್ಥಿರತೆ ಉಂಟಾಗಿತ್ತು. ಮಿಡಲ್ ಈಸ್ಟ್‌ನಾದ್ಯಂತ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಮತ್ತು ಬೆಂಬಲವನ್ನು ನೀಡುತ್ತಿದೆ ಎಂದು ಇರಾನ್‌ನನ್ನು ದೂಷಿಸಲಾಯಿತು. ವಿಶಿಷ್ಟವಾಗಿ ಲೆಬೆನಾನ್, ಪ್ಯಾಲಿಸ್ಟೀನ್ ಮತ್ತು ಸಿರಿಯಾಗಳಿಗೆ. ಈ ಎರಡೂ ಶಕ್ತಿಗಳು ಇನ್ನೂ ಬೇಲಿಯ ಎದುರುಬದುರೇ ಇದ್ದವು. ಅಮೆರಿಕ ಶಸ್ತ್ರಾಸ್ತ್ರಗಳನ್ನು ನೀಡಿತ್ತು, ಸೈನ್ಯದ ಬೆಂಬಲ ಮತ್ತು ರಾಯಭಾರಿ ಸಹಾಯವನ್ನು ಸೌದಿ ಅರೇಬಿಯಾಗೆ ನೀಡಿತು. ಆದರೂ ಇತ್ತೀಚಿನ ವರ್ಷಗಳಲ್ಲಿ, ಮಿಡಲ್ ಈಸ್ಟ್‌ನ ತೈಲದ ಮೇಲೆ ಅವಲಂಬಿತವಾಗುವುದು ಕಡಿಮೆಯಾಗುತ್ತಾ ಬಂದಿರುವುದರಿಂದ, ಅನೇಕ ಪರಿಣಿತರ ಪ್ರಕಾರ ಅಮೆರಿಕ ಮತ್ತು ಸೌದಿ ಅರೇಬಿಯಾದ ಸಂಬಂಧ ದಿನಕಳೆದಂತೆ ಕ್ಷೀಣಿಸುತ್ತಾ ಹೋಗುತ್ತದೆಯೆಂದು. ಇರಾನ್‌ನಲ್ಲಿನ ಆರ್ಥಿಕ ಅಭದ್ರತೆ ಕೂಡ ಅಲ್ಲಿನ ನಾಯಕತ್ವದ ವಿಷಯದಲ್ಲಿ ಬಿಕ್ಕಟ್ಟು ಉಂಟಾಗಲು ಕಾರಣವಾಗಿದೆ; ಅದರ ಅರ್ಥ ಈ ಮುಂದುವರಿಯುತ್ತಿರುವ ಸಂಘರ್ಷಗಳನ್ನು ಸಹಿಸಿಕೊಳ್ಳುವುದು ಅದಕ್ಕೆ ಕಷ್ಟವಾಗುತ್ತಿದೆ ಎಂದು. ಅಮೆರಿಕದಲ್ಲಿನ ಬೈಡನ್‌ನ ಸರ್ಕಾರ ಇರಾನ್ ಜೊತೆಯಲ್ಲಿ ಹೆಚ್ಚು ಸ್ನೇಹಪರತೆಯಿಂದ ಕೆಲಸ ಮಾಡಲು ಪೂರ್ವಭಾವೀ ಮುನ್ಸೂಚನೆಗಳನ್ನು ಕಳುಹಿಸುತ್ತಿದೆ. ಆದ್ದರಿಂದ ಈ ಸಂಘರ್ಷಗಳ ಅಂತ್ಯ ಈ ಸಂದರ್ಭದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಒಳ್ಳೆಯದು.

ಕನ್ನಡಕ್ಕೆ: ಕೆ. ಶ್ರೀನಾಥ್

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...