ತನ್ನ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಹಾಗೂ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
“ಆರ್ಟಿಕಲ್ 32 ರ ಅಡಿಯಲ್ಲಿ ಎಫ್ಐಆರ್ ಅನ್ನು ರದ್ದುಗೊಳಿಸುವಂತಿಲ್ಲ. ಸಮರ್ಥ ನ್ಯಾಯಾಲಯದ ಮುಂದೆ ವಾದ ಮುಂದುವರಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ” ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಎಮ್. ಆರ್ ಷಾ ಅವರ ಪೀಠವು ಈ ತೀರ್ಮಾನ ಕೈಗೊಂಡಿದ್ದು ಮೇ 11 ರಂದು ಸಲ್ಲಿಕೆಯಾದ ರಿಟ್ ಅರ್ಜಿಯ ಆದೇಶಗಳನ್ನು ಕಾಯ್ದಿರಿಸಿದೆ.
ಏಪ್ರಿಲ್ 24 ರಂದು ಅಂಗೀಕರಿಸಿದ ಹಿಂದಿನ ಮಧ್ಯಂತರ ಆದೇಶವನ್ನು ನ್ಯಾಯಪೀಠ ದೃಢಪಡಿಸಿದ್ದು, ಹಲವಾರು ಎಫ್ಐಆರ್ಗಳನ್ನು ಕ್ರೋಡೀಕರಿಸಲು ಮತ್ತು ಅವುಗಳನ್ನು ಮುಂಬೈಗೆ ವರ್ಗಾಯಿಸಲು ಅವಕಾಶ ಮಾಡಿಕೊಟ್ಟಿದೆ.
ಎಫ್ಐಆರ್ಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಪಡೆಯಲು ಏಪ್ರಿಲ್ 24 ರಂದು ನೀಡಲಾದ ಮಧ್ಯಂತರ ರಕ್ಷಣೆಯನ್ನು ಇನ್ನೂ ಮೂರು ವಾರಗಳವರೆಗೆ ವಿಸ್ತರಿಸಲಾಗಿದೆ. ಮುಂಬೈ ಪೊಲೀಸ್ ಆಯುಕ್ತರಿಗೆ ರಕ್ಷಣೆ ನೀಡುವಂತೆ ನಿರ್ದೇಶನ ನೀಡಿದೆ.
BREAKING: Supreme Court extends protection of #ArnabGoswami against coercive steps by three weeks. Goswami allowed to pursue appropriate remedy. Mumbai Commissioner ordered to ensure protection of Goswami.
— Live Law (@LiveLawIndia) May 19, 2020
Order:
All FIRs and Complaints arising out of the same broadcast made by Petitioner. The language content and sequencing of complaints is identical. #ArnabGoswami
— Live Law (@LiveLawIndia) May 19, 2020
ಏನಿದು ಪ್ರಕರಣ ?
ಬಾಂದ್ರಾ ಮಸೀದಿ ಬಳಿಯಲ್ಲಿ ವಲಸೆ ಕಾರ್ಮಿಕರು ಸೇರಿರುವ ಘಟನೆಯನ್ನು ಅರ್ನಬ್ ಕೋಮು ದ್ವೇಷಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರಾಝಾ ಎಜುಕೇಷನಲ್ ವೆಲ್ಫೇರ್ ಸೊಸೈಟಿಯ ಕಾರ್ಯದರ್ಶಿ ಇರ್ಫಾನ್ ಅಬೂಬಕರ್ ಶೇಖ್ ಹಾಕಿದ್ದ ಕೇಸನ್ನು ರದ್ದು ಮಾಡುವಂತೆ ಅರ್ನಬ್ ಕೋರ್ಟಿಗೆ ಮನವಿ ಮಾಡಿದ್ದರು.
ತೀರ್ಪು ನೀಡುವವರೆಗೂ ಎಫ್ಐಆರ್ ಮೇಲಿನ ಬಂಧನದ ಕ್ರಮದಿಂದ ಮಧ್ಯಂತರ ರಕ್ಷಣೆಯನ್ನು ನ್ಯಾಯಪೀಠ ನೀಡಿತ್ತು.
ಓದಿ: ಅರ್ನಾಬ್ ಗೋಸ್ವಾಮಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ