Homeಮುಖಪುಟವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

ವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

- Advertisement -
- Advertisement -

ಈಚಿತ್ರವನ್ನು ಗಮನಿಸಿ. ಏನು ಕಾಣುತ್ತಿದೆ? ಹೌದು. ಸಮುದ್ರದಲ್ಲಿ ಒಂದು ಹಡಗು ತೇಲುತ್ತಿರುವಂತಿದೆ. ನೀರಿನ ಮೇಲಲ್ಲ ಗಾಳಿಯಲ್ಲಿ ಹಾರುತ್ತಿದೆ ಅಲ್ಲವೇ? ಇದು ಹೇಗೆ ಸಾಧ್ಯ? ಇದು ನಿಜವಾದ ಚಿತ್ರಾನ? ಏನೋ ಎಡಿಟ್ ಮಾಡಿರಬೇಕು ಅಂತ ಯೋಚನೆ ಮಾಡುತ್ತಿದ್ದಿರಾ. ಹಾಗಾದರೆ ಇಲ್ಲಿ ಕೇಳಿ,

ಇಂಗ್ಲೆಂಡ್‌ನ ಕಾರ್ನಾವಾಲ್‌ನಲ್ಲಿ, ಡೇವಿಡ್ ಮಾರಿಸ್ ಎನ್ನುವ ವ್ಯಕ್ತಿ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರ ಇದು. ಈ ಚಿತ್ರದಲ್ಲಿ ಯಾವುದನ್ನೂ ಎಡಿಟ್ ಮಾಡಿಲ್ಲ. ಚಿತ್ರದಲ್ಲಿ ಹಡಗು ಗಾಳಿಯಲ್ಲಿ ಹಾರುತ್ತಿರುವಂತೆ ನೀವು ಕಾಣುತ್ತಿರುವುದು ನಿಜ! ಚಿತ್ರ ತೆಗೆದ ಡೇವಿಡ್ ಕೂಡ ಇದನ್ನು ನೋಡಿ ಅಚ್ಚರಿಯಾಗಿದ್ದರು. ಈ ಚಿತ್ರ ಅಂರ್ಜಾಲದಲ್ಲಿ ಸಂಚಲನ ಮೂಡಿಸಿದ್ದು ಕೂಡ ನಿಜ.

ಅರೆರೆ ಏನಿದು, ವಿಜ್ಞಾನಿಗಳು ಗಾಳಿಯಲ್ಲಿ ಹಾರುವ ಹಡಗನ್ನು ಕಂಡುಹಿಡಿದು ಬಿಟ್ಟರಾ ಅಂತ ಯೋಚನೆ ಮಾಡ್ತಿದ್ದೀರಾ. ಅದರ ಅವಶ್ಯಕತೆ ಏನು ಎಂಬ ಚಿಂತೆ ಮೂಡಿತಾ? ಇಲ್ಲಾ ಇದು ಹಾರುವ ಹಡಗಲ್ಲ. ಇದು ನೀರಿನ ಮೇಲೆ ಚಲಿಸುತ್ತಿರುವ ಹಡಗೇ! ಹಡಗು ಗಾಳಿಯಲ್ಲಿ ಹಾರುತ್ತಿರುವಂತೆ ಕಾಣುತ್ತಿರುವುದು ಚಿತ್ರದಲ್ಲಿ ಮಾತ್ರ ಅಲ್ಲಾ, ಚಿತ್ರ ತೆಗೆದ ಡೇವಿಡ್ ಮಾರಿಸ್ ಅವರ ಬರಿಗಣ್ಣಿಗೂ ಇದು ಹಾರುತ್ತಿರುವಂತೆಯೇ ಕಂಡಿದೆ.

ಹಿಗೆ ಗೋಚರಿಸುವುದಕ್ಕೆ ಕಾರಣ ನಿಸರ್ಗದಲ್ಲಿ ಕಾಣುವ ಅಪರೂಪದ ದೃಷ್ಟಿಭ್ರಮೆ (Optical Illusion) ವಿಧ್ಯಮಾನದಿಂದ. ಇದನ್ನು ಮಿರಾಜ್ (mirage) ಎಂದು ಕರೆಯುತ್ತಾರೆ. ಕನ್ನಡದಲ್ಲಿ ಮಿರಾಜ್‌ಗೆ ಬಿಸಿಲುಕುದುರೆ, ಮರೀಚಿಕೆ, ಭ್ರಮೆ ಎಂಬ ಪದಗಳು ಬಳಕೆಯಲ್ಲಿವೆ.

ಹಾಗಿದ್ದರೆ ಹಡಗು ನಿಜಕ್ಕೂ ಹಾರಿದ್ದು ಹೇಗೆ?

ಡೇವಿಡ್ ಮೋರಿಸ್‌ರವರು ಸಮುದ್ರದ ತಟದಿಂದ ಬಹಳ ದೂರದಲ್ಲಿ ಕಾಣುವ ಹಡಗಿನ ಚಿತ್ರವನ್ನು ತೆಗೆದಿದ್ದಾರೆ. ಸಾಮಾನ್ಯವಾಗಿ ಸಮುದ್ರದ ನೀರು ತಂಪಾಗಿರುತ್ತದೆ. ಈ ಕಾರಣದಿಂದ, ನೀರಿನ ಹತ್ತಿರ ಇರುವ ಗಾಳಿಯು ತಂಪಾಗಿರುತ್ತದೆ. ಸಮುದ್ರದ ನೀರಿನ ಮಟ್ಟದಿಂದ ಮೇಲಕ್ಕೆ ಚಲಿಸಿದಂತೆ, ಅಂದಿನ ಆ ಸ್ಥಳದ ವಾತಾವರಣದ ಹವಾಮಾನಕ್ಕೆ ತಕ್ಕಂತೆ, ಗಾಳಿಯ ತಾಪಮಾನವು ಹೆಚ್ಚುತ್ತಿರುತ್ತದೆ. ಅಲ್ಲದೆ, ತಂಪಾಗಿರುವ ಗಾಳಿಯ ಸಾಂದ್ರತೆ (density) ಹೆಚ್ಚಿದ್ದು, ಬಿಸಿಯಾಗಿರುವ ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ, ತಂಪಾದ ಗಾಳಿಯ ಪದರ ಕೆಳಗಿದ್ದು, ಬಿಸಿಯಾದ ಗಾಳಿಯ ಪದರ ಅದರ ಮೇಲಿರುತ್ತದೆ. ಹೀಗೆ, ಸಮುದ್ರದಿಂದ ಮೇಲ್ಮುಖವಾಗಿ ಏರಿಕೆಯ ತಾಪಮಾನದ ಗಾಳಿಯ ಪದರಗಳು ರಚಿಸಲ್ಪಟ್ಟಿರುತ್ತವೆ.

ಅಲ್ಲದೆ, ನಾವು ಯಾವುದಾದರೊಂದು ವಸ್ತುವನ್ನು ನೋಡುತ್ತೇವೆ ಎಂದರೆ, ಆ ವಸ್ತುವಿನ ಮೇಲೆ ಬೆಳಕು ಬಿದ್ದು, ಅದು ನಮ್ಮಕಣ್ಣಿನ ಮೇಲೆ ಬಿದ್ದರೆ ಮಾತ್ರ ಆ ವಸ್ತು ನಮಗೆ ಕಾಣುತ್ತದೆ. ಬೆಳಕು ಸರಳರೇಖೆಯಲ್ಲಿಯೇ ಚಲಿಸುತ್ತದೆ ಎಂದು ತಿಳಿದಿದ್ದೇವೆ. ಆದುದರಿಂದಲೆ ನಮಗೆ ಕಾಣುವ ವಸ್ತು ಬೆಳಕಿನ ಕಿರಣಗಳ ಸರಳ ರೇಖೆಯ ದಿಕ್ಕಿನಲ್ಲಿದೆ ಎಂದು ನಾವು ಗ್ರಹಿಸುವುದು. ಆದರೆ ಬೆಳಕು, ಒಂದು ಸಾಂದ್ರತೆ ಇರುವ ಮಾಧ್ಯಮದಿಂದ (medium) ಮತ್ತೊಂದು ಸಾಂದ್ರತೆಇರುವ ಮಾಧ್ಯಮಕ್ಕೆ ಚಲಿಸಿದಾಗ ಹೆಚ್ಚು ಸಾಂದ್ರತೆ ಇರುವ ಮಾಧ್ಯಮದ ಕಡೆಗೆ ಬಾಗುತ್ತದೆ. ಇದನ್ನು ವಕ್ರೀಭವನ (refraction) ಎಂದು ಕರೆಯುತ್ತೇವೆ.

ಈಗ ಈ ಚಿತ್ರ ನೋಡಿ, ಈ ಚಿತ್ರದಲ್ಲಿ ಹಡಗಿನಿಂದ ಬರುತ್ತಿರುವ ಬೆಳಕಿನ ಕಿರಣಗಳು ನೇರವಾಗಿ (ಸರಳ ರೇಖೆಯಲ್ಲಿ) ಚಲಿಸದೆ ಬಾಗಿ ದಡದಲ್ಲಿರುವ ವ್ಯಕ್ತಿಯಕಣ್ಣಿಗೆ ಬೀಳುತ್ತಿದೆ. ಇದು ಏಕೆ ಎಂದು ಹೆಳಬಲ್ಲಿರಾ?

ಹೌದು, ನಾವು ಈಗಾಗಲೇ ತಿಳಿದಂತೆ, ವಾತಾವರಣದ ಹವಾಮಾನದಿಂದ ಸಮುದ್ರದ ನೀರಿನ ಬಳಿ ಹೆಚ್ಚು ಸಾಂದ್ರತೆ ಉಳ್ಳ ತಂಪಾದ ಗಾಳಿಯ ಪದರವಿದೆ. ಸಮುದ್ರದಿಂದ ಮೇಲ್ಮುಖವಾಗಿ ಚಲಿಸಿದಂತೆ ಕಡಿಮೆ ಸಾಂದ್ರತೆಯ, ಹೆಚ್ಚು ಉಷ್ಣವುಳ್ಳ ಗಾಳಿಯ ಪದರಗಳಿರುವುದರಿಂದ, ಬೆಳಕು ಹೆಚ್ಚು ಸಾಂದ್ರತೆಯ ಗಾಳಿಯ ಪದರದಿಂದ ಕಡಿಮೆ ಸಾಂದ್ರತೆಯ ಗಾಳಿಯ ಪದರದ ಕಡೆಗೆ ಚಲಿಸಿದಾಗ, ಹೆಚ್ಚು ಸಾಂದ್ರತೆವುಳ್ಳ ಗಾಳಿಯ ಪದರದ ಕಡೆಗೆ ಬಾಗುತ್ತಿದೆ. ಈ ಕಾರಣದಿಂದ ಹಡಗಿನಿಂದ ಬರುವ ಬೆಳಕಿನ ಕಿರಣಗಳು ಸಮುದ್ರ ಮಟ್ಟದಿಂದ ತಾಪಮಾನ ಹೆಚ್ಚಾಗುತ್ತಿರುವ ಗಾಳಿಯ ಪದರಗಳ ಮೂಲಕ ಹಾದು ಹಲವು ಬಾರಿ ವಕ್ರೀಭವನಗೊಂಡು ವ್ಯಕ್ತಿಯ ಕಣ್ಣಿಗೆ ಬೀಳುತ್ತಿದೆ.

ಬೆಳಕಿನ ಕಿರಣಗಳು ಆ ವ್ಯಕ್ತಿಯ ಕಣ್ಣಿಗೆ ಬಿದ್ದಾಗ, ಅದು ನೇರವಾಗಿ ಬಂದಿದ್ದರೆ ಯಾವ ಸ್ಥಳದಿಂದ ಬರುತ್ತಿತ್ತೋ ಆ ಸ್ಥಳದಲ್ಲಿಯೇ ಹಡಗು ಇದೆ ಎಂಬ ಚಿತ್ರ ವ್ಯಕ್ತಿಗೆ ಕಾಣುತ್ತದೆ. ಆತನ ಸ್ಥಾನದಲ್ಲಿ ಕ್ಯಾಮರಾ ಇದ್ದರೂ, ಅದೂ ಕೂಡ ಇದೆ ರೀತಿಯ ಚಿತ್ರವನ್ನು ಸೆರೆ ಹಿಡಿಯುತ್ತದೆ. ಆದರೆ ಇದು ನೈಜ ಚಿತ್ರವಲ್ಲ. ಬೆಳಕಿನ ವಕ್ರೀಭವನದಿಂದ ಉಂಟಾದ ದೃಷ್ಟ ಭ್ರಮೆಯ ಚಿತ್ರ ಇದಾಗಿದೆ. ಇದೆ ಹಾರುವ ಹಡಗಿನ ಚಿತ್ರದ ಹಿಂದಿನ ವಿಜ್ಞಾನ ರಹಸ್ಯ.

ಇಂತಹ ದೃಷ್ಟಭ್ರಮೆಯನ್ನು ಮಿರಾಜ್ ಎಂದು ಹೆಚ್ಚು ಜನಪ್ರಿಯವಾಗಿದೆ. ಮಿರಾಜ್ ಮೂಡುವುದು, ವಾತಾವರಣದ ಹವಾಮಾನ (ತಾಪಮಾನ), ಗಾಳಿಯ ವೇಗ ಮತ್ತು ಸೂರ್ಯನ ಬಿಸಿಲಿನ ಸೂಕ್ಷ್ಮ ಬದಲಾವಣೆಗಳಿಂದ. ಹಾಗಾಗಿ ಹಲವು ಸ್ಥಳಗಳಲ್ಲಿ ಇಂತಹ ವಿದ್ಯಮಾನಗಳನ್ನು ಕಾಣುವುದು ಅತೀ ಅಪರೂಪ.

ಮರಳು ಭೂಮಿಯಲ್ಲಿ ದೂರದಲ್ಲಿ ನೀರಿರುವಂತೆ ಕಾಣುವುದು, ಬೇಸಿಗೆಯಂದು ಹೆದ್ದಾರಿಗಳಲ್ಲಿ ವಾಹನಗಳ ಪ್ರತಿಫಲನವನ್ನು ರಸ್ತೆಯಲ್ಲಿ ಕಾಣುವುದು ಇವೆಲ್ಲವೂ ಮಿರಾಜ್‌ಗಳೆ. ಕೆಲವೊಮ್ಮೆ, ಕಡಲ ಕಿನಾರೆ ಬಳಿ ಸೂರ್ಯಾಸ್ತವನ್ನು ಕಂಡು ವಾಪಸ್ಸಾಗುವಾಗ ಮತ್ತೊಮ್ಮೆ ಸೂರ್ಯನನ್ನು ಕಾಣಬಹುದು. ಇದು ಕೂಡ ಹಾರುವ ಹಡಗಿನ ಚಿತ್ರದಂತೆಯೇ. ಮುಂದೊಮ್ಮೆ ಎಂದಾದರೂ ಸೂರ್ಯಾಸ್ತ ನೋಡುವಾಗ ಇದರ ಬಗ್ಗೆ ಗಮನ ಕೊಡಿ. ಅಂದಿನ ಹವಾಮಾನ ’ನಮ್ಮ ವೈಜ್ಞಾನಿಕ ಮನೋಭಾವ’ ವೃದ್ಧಿಗೆ ಸಹಕರಿಸಿದರೆ, ಸೂರ್ಯನ ಅತೀ ಅಪರೂಪದ ಮಿರಾಜ್‌ಅನ್ನು ಕಣ್ತುಂಬಿಕೊಳ್ಳಬಹುದು.

ವಿಶ್ವ ಕೀರ್ತಿ ಎಸ್.

ವಿಶ್ವ ಕೀರ್ತಿ ಎಸ್.
ವಿಜ್ಞಾನ ಮತ್ತು ಖಗೋಳ sದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಸರ್ಕಾರದ ಸಂವಹನಕ್ಕೆ ಸಚಿವರ ಚರ್ಚೆಯ ವರದಿ; ಕಳೆ ಕೀಳುವ ನೆಪದಲ್ಲಿ ತೆನೆ ಚಿವುಟುವ ಹುನ್ನಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...