Homeಅಂಕಣಗಳುಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

- Advertisement -
- Advertisement -

ಶಿವಮೊಗ್ಗ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಎಡೂರಪ್ಪನವರ ಹೆಸರಿಡಲು ಮುಖ್ಯಮಂತ್ರಿ ಬೊಮ್ಮಾಯಿ ತೀರ್ಮಾನಿಸಿದ್ದಾರಂತಲ್ಲಾ. ಕಾರಣ ಹುಡುಕಿದರೆ ಎಡೂರಪ್ಪನ ಆಡಳಿತದ ವೈಖರಿಯಿಂದಲೇ ತಮಗೆ ಮುಖ್ಯಮಂತ್ರಿ ಪಟ್ಟಸಿಕ್ಕಿತು. ಒಂದು ವೇಳೆ ಅವರು ಹೈಕಮಾಂಡ್ ಮೆಚ್ಚುವಂತಹ ಆಡಳಿತ ನೀಡಿದ್ದರೆ ಈ ಜನ್ಮದಲ್ಲಿ ನಾನು ಮುಖ್ಯಮಂತ್ರಿಯಾಗುವಂತಿರಲಿಲ್ಲ. ಈ ಜನ್ಮದಲ್ಲಿ ತೀರಿಸಲಾಗದಂತಹ ಉಪಕಾರ ಮಾಡಿರುವ ಎಡೂರಪ್ಪನವರಿಗೆ ತಕ್ಕ ಉಪಕಾರ ಎಂದರೆ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು. ಎಡೂರಪ್ಪನವರ ಇನ್ನೊಂದು ಸಾಧನೆಯೂ ಇಲ್ಲಿ ಪರಿಗಣಿತವಾಗುತ್ತದೆ. ಎಂತಹವರನ್ನೇ ಆಗಲಿ ಮುಖ್ಯಮಂತ್ರಿ ಮಾಡುವುದರಲ್ಲಿ ಅವರು ಎತ್ತಿದ ಕೈ. ಅವರು ಮನಸ್ಸು ಮಾಡಿದ್ದರಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿಯಾದದ್ದು, ಅವರಿಂದಲೇ ಅಲ್ಲವೆ ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತೆ ನನ್ನಂಥವನು ಮುಖ್ಯಮಂತ್ರಿಯಾಗಿ ಹೆಲಿಕಾಪ್ಟರಿನಲ್ಲಿ ಹಾರಾಡುವಂತಾದದ್ದು. ಅದಕ್ಕೆ ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಟ್ಟದ್ದದು ಎಂದರಂತಲ್ಲಾ, ಥೂತ್ತೇರಿ.

******

ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಡಲು ಮುಖ್ಯ ಕಾರಣ ಕೊಡುವ ಅವರ ಭಕ್ತರ ಪ್ರಕಾರ, “ನೋಡಿ ಸಾರ್ ಎಡೂರಪ್ಪ ಬೂಕನಕೆರೆಯಿಂದ ಬರಿಗೈಲಿ ಶಿಕಾರಿಪುರಕ್ಕೆ ಬಂದು ಶಿಕಾರಿ ಶುರುಮಾಡಿಕೊಂಡ್ರು; ಶಿಕಾರಿಪುರದ ಮುನಿಸಿಪಾಲಿಟಿಯಿಂದ ವಿಧಾನಸೌಧಕ್ಕೆ ಹೋದ್ರು. ವಿರೋಧಪಕ್ಷದ ನಾಯಕರಾದ್ರು; ಒಂದಲ್ಲ ಅಂತ ಮೂರುಸಲ ಮುಖ್ಯಮಂತ್ರಿಯಾದ್ರು. ಬೇಕಾದಷ್ಟು ಹಣ ಆಸ್ತಿ ಮಾಡಬಹುದಿತ್ತು ಮಾಡಲಿಲ್ಲ. ಕಾಲೇಜು, ಕಾಲೇಜಿಗೆ ಹಾಸ್ಟಲು, ಸ್ಟಾರ್ ಹೋಟ್ಲು ಕಟ್ಟಬಹುದಿತ್ತು, ಕಟ್ಟಲಿಲ್ಲ. ಯಾವನೋ ಚೆಕ್ ಮುಖಾಂತರ ಲಂಚಕೊಡಕ್ಕೆ ಬಂದ, ತಗಳ್ಳಿಲ್ಲ. ಪರಿಣಾಮ ಇವುರೇ ಜೈಲಿಗೋಗುವ ಸ್ಥಿತಿ ಬಂತು, ಹೆದರಲಿಲ್ಲ. ಹೋಗಿ ಬಂದ್ರು. ನಮ್ಮ ಶೋಭಕ್ಕನ್ನ ಬೆಳೆಸಿದ್ರು, ಕೈ ಬಿಡಲಿಲ್ಲ. ಇವತ್ತು ಯಾವುದೇ ನಾಯಕನಿಗೆ ನಮ್ಮ ಎಡೂರಪ್ಪನೋರ ಹೋಲಸಂಗೇಯಿಲ್ಲ. ಅದ್ಕೆ ವಿಮಾನ ನಿಲ್ದಾಣಕ್ಕೆ ಅವರೆಸರೇ ಸೂಕ್ತ ಸಾರು” ಅಂದನಲ್ಲ, ಥೂತ್ತೇರಿ.

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಖಾಲಿ ವಿಮಾನ!
PC: ISTOCK

******

ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಸೂಕ್ತ ಎಂಬ ಚರ್ಚೆ ನಡೆದಿರುವ ಸಮಯದಲ್ಲಿ, ಹಲವಾರು ದಿಕ್ಕಿನಿಂದ ಸಲಹೆ ಸೂಚನೆ ಬರತೊಡಗಿವೆಯೆಲ್ಲಾ. ಸಾಹಿತಿಗಳ ದಿಕ್ಕಿನಿಂದ “ನೋಡಿ ಸಾರ್ ನಮ್ಮ ಕುವೆಂಪು ಕಾವ್ಯ ಬರೀಬೇಕಾದ್ರೆ ಲೌಖಿಕ ಜೀವನದಿಂದ ಶುರುಮಾಡಿ ಪಾರಮಾರ್ಥಿಕಕ್ಕೆ ಹೋಗತಿದ್ರು. ಉದಾಹರಣೆಗೆ: ’ನಾನಿನಗೆ ನೀನನಗೆ ಜೇನಾಗುವ, ರಸದೇವಗಂಗೆಯಲ್ಲಿ ಮೀನಾಗುವ’ ಅಂತ ಎರಡನೇ ಜಿಗಿತಕ್ಕೆ ಆಕಾಶಕ್ಕೆ ಹಾರತಿದ್ರು, ಜೊತೆಗೆ ಎತ್ತರದ ಕನಸು ಕಾಣತಿದ್ರು, ಅವರು ಯಾವಾಗಲೂ ಊರ್ದ್ವಮುಖಿ. ’ನಾನೇರುವೆತ್ತರಕೆ ನೀನೇರಬಲ್ಲೆಯ’ ಅಂತಿದ್ರು. ’ಮನುಜಮತ ವಿಶ್ವಪಥ’ ಅಂತಿದ್ರು” ಅನ್ನುವ ವಾದ ಬಂತಂತೆಲ್ಲಾ. ಅವುರೆಸರು ಸೂಕ್ತ ಅನ್ನುವುದಾದರೆ ಅಳಿದುಳಿದ ರಾಜಕಾರಣಿಗಳ ಪ್ರಕಾರ, ಈ ದೇಶಕಂಡ ಅಪ್ರತಿಮ ರಾಜಕಾರಣಿ
ಗೋಪಾಲಗೌಡ ಹೆಸರಿಡಲು ಕೊಡುವ ಕಾರಣವೆಂದರೆ: “ಗೋಪಾಲಗೌಡ ಗುಡಿಸಲಿಂದ ಬಂದವರು. ಮೂರುಬಾರಿ ಶಾಸಕರಾದರೂ ಮನೆ ಇರಲಿಲ್ಲ, ಸೈಟ್ ಇರಲಿಲ್ಲ. ಬ್ಯಾಂಕ್‌ನ ಅಕೌಂಟೇ ಇರಲಿಲ್ಲ. ಇದ್ದ ಎರಡು ಮೂರು ಜುಬ್ಬ ಅಜೀಜ್ ಸೇಠ್ ಹೊಲಿಸಿಕೊಟ್ಟಿದ್ದು. ಇಂತಹ ವ್ಯಕ್ತಿಯ ನೆನಪನ್ನು ಹಸಿರಾಗಿಡಬೇಕಾದರೆ ಅಕಾಶದಲ್ಲಿ ಹಾರಾಡುವ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಬೇಕೆಂದರಲ್ಲಾ”, ಥೂತ್ತೇರಿ.

*****

ಅಜೀಜ್ ಸೇಠ್ ಎಂದಕೂಡಲೇ ನೆನಪಾಯ್ತು. ಗೋಪಾಲಗೌಡರ ಹರಿದ ಜುಬ್ಬ ನೋಡಿ ಮನಕರಗಿದ ಸೇಠ್ ಜುಬ್ಬ ಹೊಲಿಸಿಕೊಟ್ಟಂತೆ, ನಮ್ಮ ನಡುವಿನ ಸಾಬರು ಹಳ್ಳಿಗಾಡಿನ ರೈತನ ಪಾಡಿನಲ್ಲಿ ಅನಾದಿಕಾಲದಿಂದ ಭಾಗಿಯಾಗುತ್ತ ಬಂದಿರುವುದು ಸಂಘಿಗಳ ಗಮನಕ್ಕೆ ಬಂದಿಲ್ಲವಂತಲ್ಲಾ. ಈಗ ಸಾಬರ ಬಳಿ ಮಾವಿನ ಹಣ್ಣು ಕೊಳ್ಳಬೇಡಿ ಎಂದು ಫತ್ವಾ ಹೊರಡಿಸಿರುವುದರ ಪರಿಣಾಮ ಮಾವಿನ ಹಣ್ಣಿನ ಕಂಟ್ರಾಕ್ಟಿಗೆ ಸಾಬರು ಬರುತ್ತಿಲ್ಲವಲ್ಲಾ. ಈ ಪುರೋಹಿತಶಾಹಿಗಳ ತಲೆಯಿಂದ ಮಂತ್ರಗಳು ಮಾಯವಾಗಿ ಮುಸ್ಲಿಂ ದ್ವೇಷ ತುಂಬಿಕೊಂಡ ಫಲವಾಗಿ ರೈತ ಬೆಳೆದ ಮಾವಿನಹಣ್ಣು, ವಾಣಿಜ್ಯ ಬೆಳೆಗಳಾದ ಹೊಂಗೆಬೀಜ, ಇಪ್ಪೆ ಅಳ್ಳು, ಬೇವಿನಬೀಜ, ಹಲಸಿನಹಣ್ಣು ಕೊಳ್ಳುವವರಿಲ್ಲವಾಗಿದೆಯಂತಲ್ಲಾ. ಇದಿನ್ನೂ ದೊಡ್ಡದಾಗಿ ಬೆಳೆದು, ಸದ್ಯದಲ್ಲೇ ದೇಶ ದಿವಾಳಿ ಎದ್ದು ಶ್ರೀಲಂಕಾದಂತಾಗುವ ಎಲ್ಲಾ ಸೂಚನೆಗಳು ಕಾಣುತ್ತಿವೆಯಲ್ಲಾ. ಅದಕ್ಕಿಂತ ಮುಖ್ಯ ಎತ್ತಿಗೆ ಲಾಳ ಕಟ್ಟುತ್ತಿದ್ದ ಸಾಬರು ಹಳ್ಳಿಕಡೆ ಬಾರದೆಯಿರುವುದರಿಂದ ಎತ್ತುಗಳ ಗೊರಸು ಸವೆದು ಕುಂಟತೊಡಗಿವೆ. ಇದೀಗ ರೈತರು ಎಚ್ಚೆತ್ತು “ಬಾರೊ ನಮ್ಮ ಎತ್ತಿಗೆ ಲಾಳ ಕಟ್ಟು” ಅಂದರೆ ಸಂಘಿಗಳ ಕತೆಯೇನೆಂದು ಉದ್ಘಾರ ತೆಗೆದರಲ್ಲಾ, ಥೂತ್ತೇರಿ.

*******

ಈ ಬಿಜೆಪಿಗಳು ಆಡಳಿತ ನಡೆಸಲು ಅಳವಡಿಸಿಕೊಂಡಿರುವುದು ಗೋಳವಲಕರನ ಅರ್ಥ ವ್ಯವಸ್ಥೆಯಂತಲ್ಲಾ. ಆತನ ಅರ್ಥಶಾಸ್ತ್ರದ ಪ್ರಕಾರ ನಾವು ಸುಖವಾಗಿ ಭೋಜನ ಬಾರಿಸುತ್ತ ಗರ್ಭಗುಡಿಯಲ್ಲಿರಬೇಕಾದರೆ ಈ ದೇಶದಲ್ಲಿ ಬಡವರಿರಬೇಕು ಅವರು ಆಸ್ತಿವಂತರಾಗಬಾರದು, ಅಕಸ್ಮಾತ್ ಆದರೆ ನಮ್ಮ ಮಾತನ್ನ ಕೇಳುವುದಿಲ್ಲ; ನಾವೇಳಿದ ಕೆಲಸ ಮಾಡುವುದಿಲ್ಲ; ಆದ್ದರಿಂದ ಅವರು ಆಸ್ತಿವಂತರಾಗದಂತೆ ನೋಡಿಕೊಳ್ಳಬೇಕು; ಅದರಲ್ಲೂ ಮುಸ್ಲಿಮರು ಆರ್ಥಿಕವಾಗಿ ಮುಂದೆ ಬರಲೇಬಾರದು ಎಂದಿದೆಯಂತಲ್ಲಾ. ಅದರ ಫಲವಾಗಿ ಚರ್ಮೋದ್ಯಮ ನಾಶವಾಯ್ತು. ಹಳ್ಳಿಗಳ ಕಡೆ ಹಬ್ಬವಾದರೆ ಚರ್ಮ ಕೊಳ್ಳಲು ಸಾಬರು ಬರುತ್ತಿದ್ದರು. ಈಗ ಗುಂಡಿ ತೆಗೆದು ಚರ್ಮವನ್ನೂ ಹೂಳುತ್ತಿದ್ದಾರೆ. ಇಲ್ಲಿಂದ ಶುರುವಾದ ಮುಸ್ಲಿಮರ ಆರ್ಥಿಕ ಅವನತಿ, ರೈತರ ಕಡೆಗೂ ತಿರುಗಿ ಸದ್ಯದಲ್ಲೇ ರೈತರ ಪತನವಾಗಿ ಅವರೆಲ್ಲಾ ಇನ್ನೂ ಬಡವರಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ, ಥೂಥೂ ಥೂತ್ತೇರಿ.


ಇದನ್ನೂ ಓದಿ: ಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...