Homeಅಂಕಣಗಳುಕೊರಗರ ಹಕ್ಕೊತ್ತಾಯಗಳಿಗಾಗಿ ರಾಜಿರಹಿತವಾಗಿ ದುಡಿಯುತ್ತಿರುವ ಹೋರಾಟಗಾರ್ತಿ ಸುಶೀಲ ನಾಡ

ಕೊರಗರ ಹಕ್ಕೊತ್ತಾಯಗಳಿಗಾಗಿ ರಾಜಿರಹಿತವಾಗಿ ದುಡಿಯುತ್ತಿರುವ ಹೋರಾಟಗಾರ್ತಿ ಸುಶೀಲ ನಾಡ

- Advertisement -
- Advertisement -
ಎಲೆ ಮರೆ – 15

`ಹೋರಾಟ ಚಳವಳಿ ಅಂದ್ರೆ ಒಬ್ರದೆ ಆಗಿರಲ್ಲ. ಎಲ್ರೂ ಒಟ್ಟು ಸೇರಿ ಮಾಡಿರ್ತೀವಿ, ಸಮುದಾಯದ ಸಮಸ್ಯೆ ಬಂದಾಗ ಎಲ್ರೂ ಸೇರಿ ಕೆಲಸ ಮಾಡ್ತೀವಿ. ಅದ್ರಲ್ಲಿ ಒಬ್ರು ಇಬ್ರನ್ನ ಬೇರೆ ಮಾಡಿ ನೋಡೋಕಾಗಲ್ಲ. ಹಂಗಾಗಿ ನನ್ನ ಬಗ್ಗೆ ಇಂತಿಂತಾದೆಲ್ಲ ನಾನು ಮಾಡಿದೆ ಅಂತೇಳಿದ್ರೆ ತಪ್ಪಾಗ್ತದೆ. ನಾವು ಮಾಡೋ ಎಲ್ಲಾ ಕೆಲಸದಲ್ಲೂ ಎಲ್ಲರ ಪಾಲು ಇರ್ತದೆ. ಎಲ್ಲವನ್ನೂ ಕೂಡಿಸಿ ಒಗ್ಗಟ್ಟು ಮಾಡೋದ್ರಲ್ಲಿ, ಒತ್ತಡ ಹಾಕೋದ್ರಲ್ಲಿ ಚೂರು ನಮ್ಮ ಪಾಲಿರ್ತದೆ. ಅಂತ ಸಮಯದಲ್ಲಿ ಗುಂಪಲ್ಲಿ ಮುಂದಿರ್ತೀವಿ ಅನ್ನೋದಷ್ಟೇ ನಮ್ಮದು’ ಹೀಗೆ ತನ್ನ ಸಮುದಾಯ ಪರವಾದ ಚಳವಳಿ ಹೋರಾಟ ನನ್ನ ಒಬ್ಬಳದಲ್ಲ ಎಂದು ಸಮುದಾಯದ ಪಾಲುದಾರಿಕೆ ಜತೆ ತನ್ನನ್ನು ಗುರುತಿಸಿಕೊಳ್ಳುವ ಉಡುಪಿ ಜಿಲ್ಲೆ ಬೈಂದೂರು ತಾಲೂಕು ನಾಡ ಗ್ರಾಮದ ಸುಶೀಲ ಅವರು 2007 ರಿಂದ ಕೊರಗ ಸಮುದಾಯ ಹಕ್ಕೊತ್ತಾಯಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ.

ದಕ್ಷಿಣ ಕನ್ನಡ ಮತ್ತು ಕರ್ನಾಟಕ ಕೇರಳದ ಗಡಿಭಾಗದಲ್ಲಿ ಹೆಚ್ಚಿರುವ ಈ ಭಾಗದ ಮೂಲನಿವಾಸಿಗಳಾದ ಕೊರಗರು ನಿರಂತರವಾಗಿ ತನ್ನ ಹಕ್ಕುಗಳಿಗಾಗಿ ಹೋರಾಟವನ್ನು ಜೀವಂತವಾಗಿಟ್ಟುಕೊಂಡ ಸಮುದಾಯ. ಈ ಕಾರಣಕ್ಕೆ ಕರ್ನಾಟಕದ ಬುಡಕಟ್ಟುಗಳಲ್ಲಿಯೇ ಕೊರಗ ಸಮುದಾಯಕ್ಕೆ ವಿಶಿಷ್ಟವಾದ ಚಳವಳಿಯ ಚರಿತ್ರೆಯಿದೆ.

ಆಗಸ್ಟ್ 18, 1993 ಕೊರಗ ಸಮುದಾಯದ ಐತಿಹಾಸಿಕ ಮೈಲುಗಲ್ಲಿನ ದಿನ. ಕಾಲ್ನಡಿಗೆಯಲ್ಲಿ ಮಂಗಳೂರಿನ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿಗಳ ಕಚೇರಿತನಕ ಹೋಗಿ ಕೊರಗ ಸಮುದಾಯ ತಮ್ಮ ಹಕ್ಕೊತ್ತಾಯಗಳಿಗಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ದಿನ. ಪರಿಣಾಮ ಆಗ ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಮಹಮದ್ ಪೀರ್ ಅವರ ಅಧ್ಯಕ್ಷತೆಯಲ್ಲಿ ಅಧ್ಯಯನ ನಡೆಸಿ 1994 ರಲ್ಲಿ ವರದಿ ಸಲ್ಲಿಸಿತು. ಈ ವರದಿ ಕೊರಗ ಸಮುದಾಯದ ಪ್ರತಿ ಕುಟುಂಬಕ್ಕೆ 2 ಎಕರೆ ಜಮೀನು ನೀಡಬೇಕೆಂದು ಶಿಫಾರಸ್ಸು ಮಾಡಿತು. ಇದನ್ನು ಆಧರಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಜಾಗೃತವಾಯಿತು. ಆಗ ಈ ಸಂಘಟನೆಯ ಅಧ್ಯಕ್ಷರಾಗಿದ್ದ ಪಿ.ಗೋಕುಲದಾಸ ಅವರ ನೇತೃತ್ವದ ಕಾಳತ್ತೂರ್ ಚಲೋ ತೀವ್ರವಾದಾಗ 300 ಎಕರೆ ಜಾಗವನ್ನು 270 ಕುಟುಂಬಗಳಿಗೆ ಹಂಚಿ `ಕೊರಗರ ಭೂಮಿಹಕ್ಕು ಅಭಿಯಾನಕ್ಕೆ’ ಯಶಸ್ಸು ಸಿಕ್ಕಿತ್ತು. ಹೀಗೆ 1993 ರಲ್ಲಿ ಆರಂಭಗೊಂಡ ಭೂಮಿಹಕ್ಕು ಪ್ರತಿಪಾದನಾ ಅಭಿಯಾನ 450 ಕ್ಕೂ ಹೆಚ್ಚು ಕುಟುಂಬಗಳು 490 ಎಕರೆ ಜಮೀನಿನ ಹಕ್ಕುಪತ್ರ ಪಡೆಯಲು ಸಾಧ್ಯವಾಗಿದೆ.

ಮತ್ತೊಂದೆಡೆ ಅಜಲು ಎಂಬ ಅಮಾನವೀಯ ಕ್ರೌರ್ಯವನ್ನು ತಡೆಯಲು ಕೊರಗ ಸಮುದಾಯ ಸತತ ಎಂಟು ವರ್ಷ ಹೋರಾಡಿದ ಫಲವಾಗಿ 2000 ರ ಆಗಸ್ಟ್ 17 ರಂದು ಆಗಿನ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿಯವರು `ಅಜಲು ನಿಷೇಧ ಕಾಯ್ದೆ’ ತಂದರು. ಅಸ್ಪøಶ್ಯ ಸಮುದಾಯವೊಂದು ತನ್ನ ಇರುವಿಕೆಗಾಗಿ ಧ್ವನಿ ಎತ್ತಿದ ದಿನ, ಅಜಲು ಎಂಬ ಹೀನ ಪದ್ಧತಿಯಿಂದ ಮುಕ್ತಿ ಪಡೆದು ಕೊರಗ ಸಮುದಾಯಕ್ಕೆ ಹೊಸ ದಿನವಾಗಿ, ಕೊರಗ ಸಮುದಾಯದ ಸ್ವಾತಂತ್ರ್ಯ ಮತ್ತು ಭೂಮಿಹಕ್ಕಿನ ಯಶಸ್ಸಿನ ಹಿನ್ನೆಲೆಯಲ್ಲಿ ಕೊರಗರು ಆಗಸ್ಟ್ 18 ರಂದು ಪ್ರತಿವರ್ಷ `ಭೂಮಿಹಬ್ಬ’ ಆಚರಿಸುತ್ತಾರೆ. ಈ ಹೋರಾಟ ಪರಂಪರೆ ಕೊರಗ ಸಮುದಾಯ ಹೊಸ ತಲೆಮಾರನ್ನು ಚಳವಳಿಗೆ ಅಣಿಗೊಳಿಸಿದೆ. ಇಂತಹ ಚಳವಳಿಯ ಕಾವು ಪಡೆದು ಸಮುದಾಯಕ್ಕಾಗಿ ದಿಟ್ಟವಾಗಿ ಧ್ವನಿ ಎತ್ತುವ ಕೊರಗ ಸಮುದಾಯದ ಶಿಕ್ಷಿತ ಹೊಸ ತಲೆಮಾರು ಜಾಗೃತಗೊಂಡಿದೆ. ಹೀಗೆ ಗಮನ ಸೆಳೆದವರಲ್ಲಿ ಸುಶೀಲ ನಾಡ ಕೂಡ ಒಬ್ಬರು.

ಕೊರಗ ಸಮುದಾಯದ ಆರಂಭದ ದಿನಗಳ 1993ರ ಹೋರಾಟ ನಡೆಯುತ್ತಿದ್ದಾಗ ಸುಶೀಲ ಆಗಿನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಹುಡುಗಿ. ಹತ್ತನೆ ತರಗತಿತನಕ ಓದಿದ ಸುಶೀಲಾಗೆ ಮುಂದೆ ಓದಲು ಆಗಲಿಲ್ಲ. ಹಾಗಾಗಿ ತನ್ನೂರು ನಾಡದಲ್ಲಿಯೇ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಿಧಾನಕ್ಕೆ ನಮ್ಮ ಸಮುದಾಯವನ್ನು ಯಾಕೆ ಅಸ್ಪೃಶ್ಯರನ್ನಾಗಿ ನೋಡುತ್ತಾರೆ, ನಮ್ಮಲ್ಲೇಕೆ ಇನ್ನೂ ಬಡತನ ಅನಕ್ಷರತೆ ಇದೆ? ಇಂತಹ ಪ್ರಶ್ನೆಗಳೆಲ್ಲಾ ಕಾಡತೊಡಗಿ ಸಮುದಾಯದ ಪರವಾದ ಹಕ್ಕೊತ್ತಾಯಗಳಲ್ಲಿ ಭಾಗಿಯಾಗತೊಡಗಿದರು. 1998 ರಲ್ಲಿ ಸುಶೀಲಾ ಅವರಿಗೆ ಅಂಗನವಾಡಿ ಕಾರ್ಯಕರ್ತೆಯ ಕೆಲಸ ಸಿಗುತ್ತದೆ. ಅಲ್ಲಿಂದ ಸಮುದಾಯದ ಬಗ್ಗೆ ಮತ್ತಷ್ಟು ಅರಿವು ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಇದೇ ಸಂದರ್ಭಕ್ಕೆ `ಸಮಗ್ರ ಗ್ರಾಮೀಣ ಆಶ್ರಮ’ ಕೊರಗರ ಅಭಿವೃದ್ಧಿಗಾಗಿ ಕೆಲಸ ಮಾಡಲು ಸುಶೀಲಾರಂತಹ ಕೊರಗ ಸಮುದಾಯದ ಯುವ ಶಿಕ್ಷಿತರನ್ನು ಒಳಗೊಳ್ಳುತ್ತಾರೆ. ಆಗ ಸುಶೀಲ ನಾಡ ಅವರು `ಸಮಗ್ರ ಗ್ರಾಮೀಣ ಆಶ್ರಮ’ ದ ಸಂಘಟಿತ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಸುಶೀಲ ಅವರು ಸಮಾರು 27 ವರ್ಷವಿದ್ದಾಗ 2007 ರಿಂದ ಕೊರಗ ಸಮುದಾಯದ ಚಳವಳಿಯ ಭಾಗವಾಗಿ ಸಕ್ರಿಯರಾಗುತ್ತಾರೆ.

ಸುಶೀಲ ಅವರ ಕೊರಗ ಸಮುದಾಯದ ದೈನಂದಿನ ಸಮಸ್ಯೆಗಳ ಬಗೆಗೆ ಇತರರ ಜೊತೆ ಸೇರಿ ರಾಜಿಯಿಲ್ಲದ ಸಣ್ಣ ಸಣ್ಣ ಹೋರಾಟ ಚಳವಳಿಗಳನ್ನು ರೂಪಿಸತೊಡಗಿದರು. ಕೊರಗ ಸಮುದಾಯದ ಸಂಘಟನೆಯಲ್ಲಿ ಮಹಿಳೆ ಪುರುಷರು ಅಂತ ಭೇದವಿಲ್ಲ. ಒಮ್ಮೆ ಒಕ್ಕೂಟದ ಅಧ್ಯಕ್ಷರು ಗಂಡಸರಾದರೆ, ಮತ್ತೊಮ್ಮೆ ಮಹಿಳೆಯರಾಗುತ್ತಾರೆ. ಇದರ ಫಲವಾಗಿ ಸುಶೀಲ ಅವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆಯಾಗಿ 2011 ರಿಂದ 2013 ರ ತನಕ ಸಮರ್ಥವಾಗಿ ಸಮುದಾಯಕ್ಕಾಗಿ ದುಡಿದರು. ಇದೀಗ ಅಂಗನವಾಡಿ ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾಗಿಯೂ ಅಂಗನವಾಡಿ ನೌಕರರ ಪರವಾದ ಹೋರಾಟದಲ್ಲೂ ಸುಶೀಲ ತೊಡಗಿಕೊಂಡಿದ್ದಾರೆ.

ಸುಶೀಲ ಅವರು `ಅಂಗನವಾಡಿ ಕಾರ್ಯಕರ್ತೆಯಾಗಿದ್ದೂ ರಜಾದಿನಗಳಲ್ಲಿಯೂ, ಇರುವ ರಜಾ ಸೌಲಭ್ಯಗಳನ್ನು ಬಳಸಿಯೂ ಸಮುದಾಯಕ್ಕಾಗಿ ಹೋರಾಟ ಮಾಡುತ್ತಿರುವೆ. ನಾವು ನಮ್ಮ ಹಕ್ಕುಗಳನ್ನು ಕೇಳುವುದು ಸರಕಾರದ ವಿರುದ್ಧವಾಗುವುದಿಲ್ಲ, ಮೇಲಾಗಿ ಅಂಗನವಾಡಿ ನೌಕರರು ಸರಕಾರಿ ನೌಕರರೆಂದು ಸರಕಾರವೇ ಪರಿಗಣಿಸಿಲ್ಲ. ಹಾಗಾಗಿ ಹೋರಾಟಗಳಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ.

ಮುಂದುವರಿದು, `ಕೊರಗರಲ್ಲಿ ಶಿಕ್ಷಣದ ಜಾಗೃತಿ ಮೂಡಿದರೂ ಡ್ರಾಪೌಟ್ ಆಗೋದು ಬಾಳ, ಏಳು, ಎಂಟನೆ ತರಗತಿಗೆ ಶಾಲೆ ಬಿಟ್ಟು ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ತೊಡಗುತ್ತಾರೆ. ಇಷ್ಟು ವರ್ಷಕ್ಕೆ ಈಗ ಕೊರಗ ಸಮುದಾಯದಲ್ಲಿ ಮೊದಲ ವಿದ್ಯಾರ್ಥಿನಿ ಮೆಡಿಕಲ್ ಓದಿಗೆ ಸೇರಿಕೊಂಡಿದ್ದಾಳೆ. ಕಾನೂನುಪ್ರಕಾರ ಅಜಲು ಪದ್ಧತಿ ನಿಷೇಧವಾದರೂ, ದೊಡ್ಡದೊಡ್ಡ ಶ್ರೀಮಂತ ವ್ಯಕ್ತಿಗಳು ಈಗಲೂ ಅಜಲು ಮಾಡಿಸುತ್ತಾರೆ. ನನ್ನದು ಹೋರಾಟ ಚಳವಳಿ ಅಂತೇನು ಅಲ್ಲ, ನಮ್ಮ ಅಂಗನವಾಡಿ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಸಮುದಾಯಕ್ಕೆ ಒಂದಷ್ಟು ಸಮಯ ಇಡೋದಷ್ಟೇ.

ನಮ್ಮ ಸಮುದಾಯಕ್ಕೆ ಸಮಸ್ಯೆ ಬಂದಾಗ ಅದನ್ನ ಪರಿಶೀಲಿಸೋದು, ಆ ಸಮಸ್ಯೆ ಈಡೇರೋತನಕ ಪಟ್ಟು ಬಿಡದೆ ಅದಕ್ಕಾಗಿ ಕೆಲಸ ಮಾಡೋದು. ಇದು ನಮ್ಮ ಹೋರಾಟದ ರೀತಿ. ನನಗೆ ಓದಿಗಿಂತ ಹೋರಾಟದ ಅನುಭವ ಕಲಿಸಿದ್ದೇ ಜಾಸ್ತಿ. ಹೋರಾಟಕ್ಕಾಗಿನೆ ಓದಬೇಕು ಅಂತೆಲ್ಲಾ ಕೂರೋದಿಲ್ಲ. ಯಾರಾದ್ರೂ ಬುಕ್ಸ್ ಕೊಟ್ರೆ ಓದ್ತೇನೆ. ನಿರಂಜನರ ಚಿರಸ್ಮರಣೆ..ಹೀಗೆ ಕೆಲವು ಪುಸ್ತಕಗಳನ್ನು ಹೆಸರಿಸಬಹುದು. ಕೊರಗ ಸಮುದಾಯದ ಬಗ್ಗೆ ಬಂದ ಪುಸ್ತಕಗಳನ್ನೆಲ್ಲಾ ಓದಿದ್ದೇನೆ. ಈಗ ವಾಟ್ಸಪ್ಪು, ಪೇಸ್‍ಬುಕ್ಕೂ ಬಳಸೋದ್ರಿಂದ. ವಾಟ್ಸಪ್ಪಿಗೆ ಬರುವ ನ್ಯಾಯಪಥದ ಎಲ್ಲಾ ಲೇಖನಗಳನ್ನು ಓದ್ತೀನಿ, ಟ್ರೂಥ್ ಇಂಡಿಯಾ ಅಂತ ಒಂದರಿಂದ ಲೇಖನಗಳು ಬರ್ತಾವೆ ಅದನ್ನೆಲ್ಲಾ ಓದ್ತೀನಿ. ಚಳವಳಿಯೇ ನನಗೆ ಓದುಬರಹ ಎಲ್ಲಾ ಆಗಿದೆ. ಭೂಮಿ ಹೋರಾಟ ಆಗಿದ್ದಾಗಲೂ, ಆ ನಂತರದ ಕೆಲಸಗಳು ತುಂಬಾ ಇರ್ತಾವೆ. ಭೂಮಿ ಹಕ್ಕುಪತ್ರಗಳ ಸಮಸ್ಯೆ, ಪುನರ್ವಸತಿ ಸಮಸ್ಯೆ, ನೀರಿನ ಸಮಸ್ಯೆ, ಆಧಾರ್‍ಕಾರ್ಡ್ ಮಾಡ್ಸೋದು, ರೇಷನ್ ಕಾರ್ಡ್ ಮಾಡ್ಸೋದು ಹೀಗೆ ಸಮುದಾಯದ ದಿನನಿತ್ಯದ ಸಮಸ್ಯೆಗಳನ್ನೂ ಚಳವಳಿ ಮಾಡಿ ಪಡಕೊಳ್ಳೋ ಸ್ಥಿತಿ ಇದೆ’ ಇಂದು ವಿವರಿಸುತ್ತಾರೆ.

ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಬಿತ ಕೊರಗ ಅವರು `ಸುಶೀಲ ನಾಡ ಕೊರಗ ಸಮುದಾಯವನ್ನು ಜಾಗೃತಗೊಳಿಸುವಲ್ಲಿ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ. ಸಮುದಾಯದ ಅಭಿವೃದ್ಧಿಗೆ ಆಯಾ ಸಮುದಾಯದ ಒಳಗಿಂದಲೇ ಪ್ರಜ್ಞಾವಂತರು ರೂಪುಗೊಳ್ಳಬೇಕಿದೆ’ ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...