ಇಂಡಿಯಾ ಟುಡೆ ಸಮೂಹದ ಮುಖ್ಯಸ್ಥ ಅರುಣ್ ಪುರಿ ಹಾಗೂ ಪತ್ರಕರ್ತರಾದ ರಾಜ್ ದೀಪ್ ಸರ್ದೇಸಾಯಿ ಮತ್ತು ಹಿರಿಯ ಸಂಪಾದಕ ಶಿವ್ ಅರೂರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನಹಾನಿ, ವಂಚನೆ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
2016ರಲ್ಲಿ ತಮ್ಮ ಮೇಲೆ ಕುಟುಕು ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಶಾಸಕ ಬಿ.ಆರ್.ಪಾಟೀಲ್ ಅವರು ಹಿರಿಯ ಪತ್ರಕರ್ತರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು.
ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಡಾ.ಎಸ್.ಮುರಳೀಧರ್ ವಾದ ಮಂಡಿಸಿದ್ದರು.
ನ್ಯಾಯಮೂರ್ತಿ ಆರ್ ನಟರಾಜ್ ಅವರ ಕರ್ನಾಟಕ ಹೈಕೋರ್ಟ್ ಪೀಠವು ಡಿಸೆಂಬರ್ 18 ರಂದು ಹಿರಿಯ ಪತ್ರಕರ್ತರ ಮೇಲಿನ ಕ್ರಿಮಿನಲ್ ಆರೋಪಗಳನ್ನು ರದ್ದುಗೊಳಿಸಲು ಸಿಆರ್ಪಿಸಿಯ ಎಸ್. 482 ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ನಿರಾಕರಿಸಿತು. ಸುದ್ದಿ ವಾಹಿನಿಯು ತಮ್ಮ “ರಾಜ್ಯಸಭಾ ಬಜಾರ್” ಸ್ಟೋರಿಯಲ್ಲಿ ಕುಟುಕು ಕಾರ್ಯಾಚರಣೆಯನ್ನು ಪ್ರಸಾರ ಮಾಡಿದೆ. ಸ್ಟೋರಿಯಲ್ಲಿ ಬಿಆರ್ ಪಾಟೀಲ್ ಅವರನ್ನು ಭ್ರಷ್ಟ ರಾಜಕಾರಣಿ ಎಂದು ಬಿಂಬಿಸಲಾಗಿತ್ತು.
ಹಿರಿಯ ಪತ್ರಕರ್ತರ ವಿರುದ್ಧ ಸೆಕ್ಷನ್ 417, 420, 468,153ಎ, 120ಬಿ ಅಡಿಯಲ್ಲಿ 1860ರ ಸೆಕ್ಷನ್ 34 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿದಂತೆ ವಿವಿಧ ಸೆಕ್ಸನ್ಗಳಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
11.06.2016 ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಋಣಾತ್ಮಕವಾಗಿ ಪ್ರಚಾರ ಮಾಡಲು ಸುಳ್ಳು ಕುಟುಕು ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು. ಕುಟುಕು ಕಾರ್ಯಾಚರಣೆಯಲ್ಲಿ ಮಾಜಿ ಶಾಸಕರು ಹಾಗೂ ಇತರ ಶಾಸಕರು ‘ಮತಕ್ಕಾಗಿ ನಗದು ಹಗರಣ’ದಲ್ಲಿ ಭಾಗಿಯಾಗಿದ್ದಾರೆ ಎಂದು ಚಿತ್ರಿಸಲಾಗಿದೆ. ಆಪಾದಿತ ಸ್ಟಿಂಗ್ ವಿಡಿಯೋವನ್ನು ಪರಿಶೀಲಿಸಿದ್ದ ಹೈಕೋರ್ಟ್, ಮಾಜಿ ಶಾಸಕರು ವಿತ್ತೀಯ ಪರಿಗಣನೆಗೆ ಮತ ಚಲಾಯಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿದ ಉದಾಹರಣೆ ಇಲ್ಲ ಎಂದು ಗಮನಿಸಿತ್ತು. ಕ್ರಿಮಿನಲ್ ಆರೋಪಗಳನ್ನು ರದ್ದುಗೊಳಿಸಲು ಕೋರಿದ್ದನ್ನು ವಜಾಗೊಳಿಸಿತ್ತು.
BREAKING: Supreme Court stays criminal defamation proceedings against India Today head Arun Poorie, and senior anchors Rajdeep Sardesai and Shiv Aroor in connection with a sting operation over 2016 cash for votes scandal over the then Rajya Sabha elections for Karnataka.… pic.twitter.com/B3gaQ7ysc3
— Bar & Bench (@barandbench) April 1, 2024
ಇದನ್ನು ಓದಿ: ಇಸ್ರೇಲ್ನಿಂದ ವೈಮಾನಿಕ ದಾಳಿ: ಇರಾನ್ನ ಇಬ್ಬರು ಉನ್ನತ ಕಮಾಂಡರ್ಗಳು ಸೇರಿ 7 ಜನರ ಹತ್ಯೆ