ಪ್ರಧಾನಿ ಮೋದಿಯವರು ತಮ್ಮ 5 ವರ್ಷಗಳ ಆಡಳಿತ ವ್ಯರ್ಥವಾಗಲು ಅಧಿಕಾರಿಗಳು ಕಾರಣ ಎಂದು ಆರೋಪಿಸಿದ್ದಾರೆ. ಪ್ರಧಾನಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ನಿರೀಕ್ಷೆಯಂತೆ ಸ್ವಯಂಪಾಪದ ಹೊಣೆಯನ್ನು ಬೇರೆಯವರ ಮೇಲೆ ಹೊರಿಸಿದ್ದಾರೆ. ಆ ಹೊರೆಯನ್ನು ಹೊರಬೇಕಾಗಿ ಬಂದ ಅಧಿಕಾರಿಗಳ ಬಗ್ಗೆ ಅನುಕಂಪಗಳು ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ತಮ್ಮ 5 ವರ್ಷಗಳ ಆಡಳಿತ ವ್ಯರ್ಥವಾಗಲು ಅಧಿಕಾರಿಗಳು ಕಾರಣ ಎಂದು ಆರೋಪಿಸಿದ್ದಾರೆ. ಪ್ರಧಾನಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು.
ನಿರೀಕ್ಷೆಯಂತೆ ಸ್ವಯಂಪಾಪದ ಹೊಣೆಯನ್ನು ಬೇರೆಯವರ ಮೇಲೆ ಹೊರಿಸಿದ್ದಾರೆ. ಆ ಹೊರೆಯನ್ನು ಹೊರಬೇಕಾಗಿ ಬಂದ ಅಧಿಕಾರಿಗಳ ಬಗ್ಗೆ ಅನುಕಂಪಗಳು. pic.twitter.com/7heNsKYvs8— Siddaramaiah (@siddaramaiah) November 6, 2019
ಕಳೆದ ತಿಂಗಳು ಏಕ್ ಭಾರತ್, ಶ್ರೇಷ್ಠ ಭಾರತ್ ಕಾರ್ಯಕ್ರಮದಲ್ಲಿ ಮೋದಿ ಮಾತಾಡಿದ್ದ ಮಾತುಗಳು ನಿನ್ನೆ ಮಾಧ್ಯಮಗಳಲ್ಲಿ ಸುದ್ದಿಯಾಗಿವೆ. ಅದರಲ್ಲಿ ಮೋದಿಯವರು ಎನ್ಡಿಎ ಮೊದಲ 5 ವರ್ಷಗಳ ಆಡಳಿತ ಮಂದ ಅಧಿಕಾರಿಗಳಿಂದ ಹಾಳಾಗಿದೆ ಎಂದು ಆರೋಪಿಸಿದ್ದರು. ಹಾಗಾಗಿ ಅಂತಹ ಅಧಿಕಾರಿಗಳನ್ನು ಕೈಬಿಟ್ಟು ಚುರುಕಿನ, ಯುವ ಅಧಿಕಾರಿಗಳಗೆ ಮಣೆ ಹಾಕಲಾಗುವುದು ಎಂದಿದ್ದರು.
ಮೋದಿಯವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ದಾಖಲಾಗಿದೆ. ತಮ್ಮ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದು ಸರಿಯಲ್ಲ ಎಂದು ಹಲವಾರು ಜನ ಕಿಡಿಕಾರಿದ್ದಾರೆ.