HomeUncategorizedಹೊಸ ಜನಪರ ರಾಜಕಾರಣಕ್ಕೆ ನಾಂದಿ ಹಾಡಲಿದೆ 'ಮುಖ್ಯಮಂತ್ರಿ ಆಯ್ಕೆ' ಪ್ರಹಸನ

ಹೊಸ ಜನಪರ ರಾಜಕಾರಣಕ್ಕೆ ನಾಂದಿ ಹಾಡಲಿದೆ ‘ಮುಖ್ಯಮಂತ್ರಿ ಆಯ್ಕೆ’ ಪ್ರಹಸನ

- Advertisement -
- Advertisement -

1982ರ ಸಮಯ. ಆಂಧ್ರಪ್ರದೇಶದಲ್ಲಿ 5 ವರ್ಷದಲ್ಲಿ 5 ಬಾರಿ ಮುಖ್ಯಮಂತ್ರಿಗಳು ಬದಲಾಗಿದ್ದರು. ಕಾಂಗ್ರೆಸ್ಸಿನ ಹೈಕಮಾಂಡ್ ಸಂಸ್ಕೃತಿಯ ಉತ್ತುಂಗ. ಆಗ ಒಂದು ಸಲ ಕಾಂಗ್ರೆಸ್ ಪಕ್ಷದ ನಾಯಕ ಹೈದ್ರಾಬಾದಿನ ಏರ್‌ಪೋರ್ಟಿಗೆ ಬಂದಿಳಿದಿದ್ದರು. ಅವರನ್ನು ಸ್ವಾಗತಿಸಲು ಆಗಿನ ಮುಖ್ಯಮಂತ್ರಿ ಟಿ. ಆಂಜಯ್ಯ ಸುರಕ್ಷಾ ಗೆರೆಯನ್ನು ದಾಟಿ ಬಂದಿರುತ್ತಾರೆ. ಅದರಿಂದ ಸಿಟ್ಟಿಗೆದ್ದ ರಾಜೀವ್, ಅಲ್ಲಿಯೇ ಸಾರ್ವಜನಿಕರೆದುರು ಅವರಿಗೆ ಬಯ್ಯುತ್ತಾರೆ. ಮುಖ್ಯಮಂತ್ರಿಯನ್ನು ಬಫೂನ್ ಎಂದು ಕರೆಯುತ್ತಾರೆ. ಕೆಲವೇ ದಿನಗಳ ನಂತರ ಮುಖ್ಯಮಂತ್ರಿಯನ್ನು ಬದಲಿಸಲಾಗುತ್ತೆ. ಆಗ ಶುರುವಾಗಿದ್ದು ತೆಲುಗುವಾರಿ ಆತ್ಮಗೌರವಂ ಎಂಬ ನಡೆ. ದಶಕಗಳ ಕಾಂಗ್ರೆಸ್ ಆಳ್ವಿಕೆ ಕೊನೆಗೊಳ್ಳುತ್ತದೆ.

2021ರ ಕರ್ನಾಟಕದಲ್ಲಿ, ಕಾಂಗ್ರೆಸ್‌ನ ಹೈಕಮಾಂಡ್ ಸಂಸ್ಕೃತಿಯನ್ನು ಟೀಕಿಸುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿಯ ಮುಖ್ಯಮಂತ್ರಿ ಬದಲಾವಣೆಯ ಪ್ರಹಸನ ನಡೆಯುತ್ತಿದೆ. ಯಡಿಯೂರಪ್ಪನವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿ ಪಟ್ಟ ವಹಿಸಿಕೊಂಡಾಗಲೇ ಅವರಿಗೆ ವಯಸ್ಸು 75 ಮೀರಿತ್ತು, ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂಬ ಪಟ್ಟವನ್ನೂ ಆಗಲೇ ಪಡೆದಿದ್ದರು. ಹಾಗಾಗಿ ಈ ಕಾರಣಗಳನ್ನಂತೂ ಒಪ್ಪಲು ಸಾಧ್ಯವಿಲ್ಲ, ಹಾಗಾದರೆ ಏನು ಕಾರಣ? ಅದು ’ಹೈಕಮಾಂಡ್ಗೆ ಮಾತ್ರ ಗೊತ್ತು. ಮುಂದಿನ ಮುಖ್ಯಮಂತ್ರಿ ಯಾರು ಎಂಬುದೂ ಕೇವಲ ’ಹೈಕಮಾಂಡ್ಗೆ ಗೊತ್ತು. ಈಗ ಶಾಸಕರ ಸಭೆ ಎಂಬ ಪ್ರಹಸನ ನಡೆಯುತ್ತಲಿದೆ. ಈ ನಮ್ಮ ಚುನಾಯಿತ ಶಾಸಕರು ತಮಗೆ ಒಪ್ಪಿಸಿದ ವರದಿಯನ್ನು ಓದಿ, ಮುಂದಿನ ಮುಖ್ಯಮಂತ್ರಿ ಯಾರು ಎಂದು ಘೋಷಿಸಲಿದ್ದಾರೆ. ಈ ಶಾಸಕರ ಯಾವ ಮಾತೂ ನಡೆಯುವುದಿಲ್ಲ ಎಂಬುದು ಬಹಿರಂಗ ಸತ್ಯ. ಇತ್ತೀಚಿನ ಸುದ್ದಿಯ ಪ್ರಕಾರ ಶಿಗ್ಗಾಂವದ ಶಾಸಕರಾದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ. ಆದರೆ ಈ ಹೊಸ ಮುಖ್ಯಮಂತ್ರಿಯಿಂದ ಏನನ್ನಾದರೂ ಸಾಧಿಸಬಹುದೇ, ಸಾಧನೆಯ ಅಪೇಕ್ಷೆಗಳನ್ನು ಅವರ ವಿರೋಧಿಗಳನ್ನು ಬಿಡಿ, ಅವರ ಸಮರ್ಥಕರೂ ಅದರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ.

ಇನ್ನೂ ಮುಖ್ಯಮಂತ್ರಿಯಾಗಲು ಮಾನದಂಡಗಳೇನು ಎಂಬ ಚರ್ಚೆ ಬಂದಾಗ ಕೇಳಿಬರುತ್ತಿರುವ ಮಾತುಗಳು; ಸಂಭವನೀಯ ಮುಖ್ಯಮಂತ್ರಿಗಳ ಸಾಧನೆಯನ್ನು ಪರಿಗಣಿಸಲಾಗುತ್ತಿದೆಯೇ? ಅವರು ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ, ನೀರಾವರಿ, ಉದ್ಯೋಗ ಸೃಷ್ಟಿಯ ವಿಚಾರಗಳಲ್ಲಿ ಅದ್ಭುತವಾದ ಕೆಲಸ ಮಾಡಿದ್ದಾರೆಯೇ? ತಮ್ಮ ತಮ್ಮ ಇಲಾಖೆಗಳಲ್ಲಿ ಉತ್ತಮ ಆಡಳಿತ ನೀಡಿದ ಚರ್ಚೆಯಾಗುತ್ತಿದೆಯೇ? ಇಲ್ಲ, ಚರ್ಚೆ ಆಗುತ್ತಿರುವುದು ಜಾತಿ ಲೆಕ್ಕಾಚಾರ!

ಈಗ ಜನರು ಕೇಳಬೇಕಿರುವ/ಕೇಳಿಕೊಳ್ಳಬೇಕಿರುವ ಪ್ರಶ್ನೆ: ಇದು ರಾಜಕಾರಣವಾ? ಇದನ್ಯಾಕೆ ನಾವು ಸಹಿಸಿಕೊಳ್ಳಬೇಕು? ಅಧಿಕಾರದಲ್ಲಿರುವವರು ಉದ್ಯೋಗ ಸೃಷ್ಟಿಯ ಬಗ್ಗೆ ಚರ್ಚೆ ಹುಟ್ಟುಹಾಕಿದ್ದಾರೆಯೇ? ನಿರುದ್ಯೋಗ ಹೆಚ್ಚುತ್ತಿರುವ ಸಮಯದಲ್ಲಿ ಅದನ್ನು ಒಂದು ಸಮಸ್ಯೆ, ಆದ್ಯತೆಯ ವಿಷಯ ಎಂದು ಸರ್ಕಾರದವರು ಪರಿಗಣಿಸಿದ್ದಾರೆಯೇ? ಕಳೆದ ಒಂದೂವರೆ ವರ್ಷದಿಂದ ಕೊರೊನಾದಿಂದ, ಲಾಕ್‌ಡೌನ್‌ನಿಂದ ರಾಜ್ಯ ತತ್ತರಿಸಿದ್ದರೂ ಆರೋಗ್ಯ ಸೇವೆಯಲ್ಲಿ ಯಾವ ಬದಲಾವಣೆ ಆಗಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೇಗೆ ಸುಧಾರಿಸಬೇಕು ಎಂಬದು ಚರ್ಚೆಯಾಗುತ್ತಿದೆಯೇ? ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಗಳು ಸುದ್ದಿಯೂ ಆಗದ ಪರಿಸ್ಥಿತಿಗೆ ಯಾಕೆ ಬಂದೆವು ನಾವು? ಮರ್ಯಾದೆಗೇಡು ಹತ್ಯೆಗಳು, ಜಾತಿ ದೌರ್ಜನ್ಯಗಳು ಹೆಚ್ಚುತ್ತಲೇ ಇರುವಾಗ, ಇವುಗಳನ್ನು ನಿಲ್ಲಿಸಲು ಏನಾದರೂ ಕಾರ್ಯಕ್ರಮ ಬೇಕಲ್ಲವೇ?
ಇವ್ಯಾವದನ್ನೂ ಮಾಡದೇ ಇರುವ ರಾಜಕಾರಣವನ್ನು ಕನ್ನಡಿಗರು ನೋಡುತ್ತಿದ್ದಾರೆ. ಲಕ್ಷಾಂತರ ಜನರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟು ಗಳಿಸಿದ ಪ್ರಜಾಪ್ರಭುತ್ವದ ಅಳಿವಿಗೆ ಶ್ರಮಿಸುತ್ತಿರುವ ಸಂದರ್ಭದಲ್ಲಿ ಭ್ರಮನಿರಸನ ಮಡುಗಟ್ಟಿದೆ ಎಂದು ಕಾಣುತ್ತಿದೆ. ಎಲ್ಲರೂ ಭ್ರಷ್ಟರು, ಯಾರಿಂದ ಏನೂ ಆಗುವುದಿಲ್ಲ ಎಂಬ ಸಿನಿಕತೆಯ ಪ್ರಚಲಿತವಾಗಿದೆ ಎಂದು ಕಾಣುತ್ತಿದೆ. ಆದರೆ ಇದು ನಿಜವೇ?

This is battle of perception! ಈ ಪ್ರಶ್ನೆಗೆ ಅವರವರ ಗ್ರಹಿಕೆ, ಚಿಂತನೆ, ಅವರ ಸುತ್ತಲೂ ಇರುವವರ ಚಿಂತನೆಯ ಮೇಲೆ ಉತ್ತರ ಸಿಗುವುದು.

ನನಗಂತೂ ಉತ್ತರ ಸ್ಪಷ್ಟವಾಗಿ ಕಾಣಿಸುತ್ತಿದೆ; ಇಂದಿನ ಸಿನಿಕತೆ ತಾತ್ವಿಕ ಸಿಟ್ಟಾಗಿ ಹೊರಹೊಮ್ಮಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಮಾಧ್ಯಮಗಳು ನಿರಂತರವಾಗಿ ಬಿತ್ತರಿಸುತ್ತಿರುವ ಸುಳ್ಳುಗಳು ಸುಳ್ಳುಗಳೆಂದು ತಿಳಿಯದೇ ಇರುವುದಿಲ್ಲ. ಈಗಾಗಲೇ ಈ ಸುಳ್ಳು ಹೇಳುತ್ತಿರುವ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಅಲ್ಲವಾದರೂ ಬಹುಮಟ್ಟಿಗೆ ಕಳೆದುಕೊಂಡಿವೆ. ಈ ದೇಶದ ಜನತೆಯೊಂದಿಗೆ ಕನ್ನಡಿಗರೂ ಬದಲಾಗಬಹುದು ಎಂಬುದನ್ನು ಈ ಮುನ್ನ ಅನೇಕ ಬಾರಿ ತೋರಿಸಿದ್ದಾರೆ. ಹೊಸದೊಂದು ರಾಜಕಾರಣ ಹುಟ್ಟುವ ಸಾಧ್ಯತೆಗಳು ಖಂಡಿತವಾಗಿಯೂ ಇವೆ.

ಆದರೆ, ಇದು ಎಷ್ಟೇ ಅನಿವಾರ್ಯವಾಗಿದ್ದರೂ ತನ್ನಿಂತಾನೆ ಆಗುವ ಪ್ರಕ್ರಿಯೆಯಲ್ಲ. ರಾಜ್ಯದ ಜನರೆಲ್ಲರೂ ಈ ಹೊಸ ರಾಜಕಾರಣದ ಸಾಧ್ಯಾಸಾಧ್ಯತೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿದೆ. ಅದಕ್ಕಿಂತ ಮುಖ್ಯವಾಗಿ ಈ ಸಿನಿಕತೆಯ ಕಾರ್ಮೋಡಗಳನ್ನು ಬದಿಗೆ ತಳ್ಳುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕಿದೆ. ರಾಜಕೀಯ ಎಂಬ ಕ್ಷೇತ್ರವು ಕೇವಲ ನೋಡಿ ಟೀಕಿಸಲು, ಭ್ರಮನಿರಸನಗೊಳ್ಳಲು ಇರುವ ಕ್ಷೇತ್ರವಲ್ಲ ಎಂಬುದನ್ನು ಪದೇಪದೇ ನಮಗೆ ನಾವು ಹೇಳಿಕೊಳ್ಳಬೇಕಿದೆ. ರಾಜ್ಯ ಎದುರಿಸಿದ ಎಲ್ಲಾ ಪ್ರಕೃತಿ ವಿಕೋಪಗಳಲ್ಲಿ, ಕೊರೊನಾ ಮತ್ತು ಲಾಕ್‌ಡೌನ್ ತಂದಿಟ್ಟ ಸಂಕಷ್ಟಗಳಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿರುವವರಿಗೆ ಶಕ್ತಿಮೀರಿ ಸಹಾಯ ಮಾಡಿದ್ದನ್ನು ನಾವು ನೋಡಿದ್ದೇವೆ. ಇತರರಿಗೆ ಸಹಾಯ ಮಾಡುವ ಒಳ್ಳೆಯತನ ನಮ್ಮೆಲ್ಲರಲ್ಲಿದೆ, ಆ ಒಳ್ಳೆಯತನವನ್ನು ರಾಜಕಾರಣಕ್ಕೂ ಬಳಸಬಹುದು ಎಂಬ ನಂಬಿಕೆಯನ್ನು ಗಟ್ಟಿಗೊಳಿಸಬೇಕಿದೆ.

ತತ್ವಶಾಸ್ತ್ರದ ಒಂದು ವಾದದ ಪ್ರಕಾರ, 15ನೇ ಶತಮಾನದಲ್ಲಿ ಯುರೋಪಿನಲ್ಲಿ ನೀವು ಹುಟ್ಟಿದ್ದರೆ ನೀವು ನಾಸ್ತಿಕರಾಗುವ ಸಾಧ್ಯತೆಯೇ ಇದ್ದಿಲ್ಲವಂತೆ. ಅಂದರೆ ನಮ್ಮ ವಿಚಾರಧಾರೆಯೆಲ್ಲವೂ ನಮ್ಮ ಸುತ್ತಲಜನರ ವಿಚಾರಧಾರೆಯ ಅನುಗುಣವಾಗಿಯೇ ರೂಪುಗೊಳ್ಳುತ್ತದೆ. ಇದನ್ನು ಇಂದು ನಮ್ಮನ್ನು ಆಳುತ್ತಿರುವ ಅರೆಫ್ಯಾಸಿಸ್ಟ್ ಆಡಳಿತಗಳು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿವೆ. ದೃಶ್ಯ ಮಾಧ್ಯಮವನ್ನು ಕಬಳಿಸಿ, ನಿರಂತರವಾಗಿ ಸುಳ್ಳುಗಳನ್ನು ಹೇಳುತ್ತ, ನಾವು ಯೋಚಿಸಬಾರದ ವಿಷಯಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತ, ಇದೇ ಸತ್ಯ ಎಂಬಂತೆ ಮರಳು ಮಾಡುತ್ತಿದ್ದಾರೆ. ಈ ಕೆಲಸದಲ್ಲಿ ಅವರು ಅದ್ಭುತ ಯಶಸ್ಸನ್ನು ಗಳಿಸಿದ್ದಾರೆ. ಈಗ, ಅದನ್ನು ಮೆಟ್ಟಿ ನಿಲ್ಲಲು, ಹೊಸ ರಾಜಕಾರಣವನ್ನು ಕಟ್ಟಬೇಕಾದರೆ, ಹೊಸ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಅದು ಅಸಾಧ್ಯವಲ್ಲ. ಅದಕ್ಕೆ ನಮ್ಮ ಚಿಂತಕರು ಮೊದಲ ಪ್ರಮುಖ ಹೆಜ್ಜೆಯನ್ನಿಡಬೇಕಿದೆ. ಇವರು ಬರೆಯುವ ಪ್ರತಿಯೊಂದು ಪದ, ಆಡುವ ಪ್ರತಿಯೊಂದು ಮಾತಿನ ಹಿಂದೆ ಈ ಜನವಿರೋಧಿ, ಪ್ರಜಾಪ್ರಭುತ್ವವಿರೋಧಿ ಆಡಳಿತವನ್ನು ಕೊನೆಗಾಣಿಸುವ ಮತ್ತು ಹೊಸ ರಾಜಕಾರಣವನ್ನು ಹುಟ್ಟುಹಾಕುವ ಜವಾಬ್ದಾರಿ ಇರಬೇಕಿದೆ. ಆ ಜವಾಬ್ದಾರಿಯೇ ಕರ್ನಾಟಕದ ಮುಂದಿನ ರಾಜಕೀಯ ನಡೆಯನ್ನು ರೂಪಿಸುವಂತಾಗುವುದು.

ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...