Homeಅಂಕಣಗಳುಎಲೆಮರೆಯಿಂದಅಂಚಿಗೆ ತಳ್ಳಲ್ಪಟ್ಟ ತುಳುನಾಡಿನ ನಿಜ ವಾರಸುದಾರರು

ಅಂಚಿಗೆ ತಳ್ಳಲ್ಪಟ್ಟ ತುಳುನಾಡಿನ ನಿಜ ವಾರಸುದಾರರು

ಈಗಷ್ಟೇ ಅತ್ಯಂತ ತೆಳುವಾದ ಪ್ರಮಾಣದಲ್ಲಿ ಕೊರಗ ಸಮುದಾಯವು ಶಿಕ್ಷಣದತ್ತ ಒಲವು ತೋರುತ್ತಿದೆ. ನಗರ ಪ್ರದೇಶದಲ್ಲಿರುವ ಕೊರಗರು ಪೌರ ಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ.

- Advertisement -
- Advertisement -

ಮೊನ್ನೆ ಬುಟ್ಟಿ ಮಾರುವವನಿಂದ ಬುಟ್ಟಿ ಖರೀದಿಸಿದ್ದ ಅಮ್ಮ ನಾನು ತವರಿಗೆ ಹೋಗಿದ್ದಾಗ ಅದನ್ನು ನನಗೆ ತಂದು ತೋರಿಸಿದಳು. ಕೊರಗರು ಹೆಣೆದು ಕೊಡುತ್ತಿದ್ದ ಬುಟ್ಟಿಗೇನೂ ಇದು ಬರಲ್ಲ ನೋಡು, ಅವರ ಬುಟ್ಟಿಯಂತೆ ಗಟ್ಟಿ ಆಯಸ್ಸೂ ಇದಕ್ಕಿಲ್ಲ ಎಂದು ಅದರ ಹಿಂಭಾಗವನ್ನೊಮ್ಮೆ, ಮುಂಭಾಗವನ್ನೊಮ್ಮೆ ನೆಲಕ್ಕೆ ಮೆಲ್ಲನೆ ಬಡಿಯುತ್ತಾ ಹೇಳಿದಳು. ಇಷ್ಟು ಕೊಟ್ಟೆ ಹಾಗೆ ಹೀಗೆ ಎಂದೆಲ್ಲಾ ಅಮ್ಮನ ಮಾತು ಎಲ್ಲೋ ತಲುಪಿತ್ತು. ಆದರೆ ನನ್ನ ತಲೆಯೊಳಗೆ ಹತ್ತಿ ಕೂತದ್ದು ಅವಳಂದ ‘ಕೊರಗರ ಬುಟ್ಟಿ’ ಮಾತ್ರ. ನಾನು ತುಂಬಾ ಚಿಕ್ಕವಳಿದ್ದಾಗ ನೋಡಿದ, ನೆನಪಿನಂಚಿನಲ್ಲಿ ನಿಂತಿರುವ ಮಸುಕು ಮಸುಕಾದ ಕೊರಗರನ್ನು ಬಲವಂತದಿಂದ ಮುನ್ನೆಲೆಗೆ ತಂದು ನಿಲ್ಲಿಸಿತು. ನಮ್ಮೂರನ್ನು ಸುತ್ತುವರಿದಿರುವ ಕಲೆಂಜಿಮಲೆ ಕಾಡಿನ ಅಂಚಿನಲ್ಲಿ ವಾಸಿಸುತ್ತಿದ್ದ ಕೊರಗ ಕುಟುಂಬವೊಂದಿತ್ತು. ಯಾರೊಂದಿಗೂ ಹೆಚ್ಚಿನ ಒಡನಾಟವಿಟ್ಟುಕೊಳ್ಳದೆ ತಾವಾಯಿತು ತಮ್ಮ ಪಾಡಾಯಿತು ಎಂದು ಬುಟ್ಟಿ ಹೆಣೆಯುವ ಕಾಯಕದಲ್ಲಿ ಅವರು ತೊಡಗಿಸಿಕೊಂಡಿದ್ದರು. ಹೊತ್ತು ಮೂಡುತ್ತಲೇ ಅದೇ ಕಾಡೊಳಗಿಂದ ಬುಟ್ಟಿ ಹೆಣೆಯಲು ಬೇಕಾದ ಕಾಡ ಬಳ್ಳಿಯನ್ನು ಕಡಿದು ತಂದು, ಆ ಕಾಡಿಗೇ ತಾಗಿಕೊಂಡಿರುವ ಹಾಗೂ ಜನಸಂಚಾರವಿರುವ ವಿಶಾಲ ಮೈದಾನದಂತಿರುವ ಜಾಗದಲ್ಲಿ ಕುಂಟು ನೇರಳೆಯ ಮರದಡಿಯಲ್ಲಿ ಹರಡಿ ಅಲ್ಲೇ ಕುಳಿತು ಬುಟ್ಟಿ ಹೆಣೆಯುತ್ತಿದ್ದರು.

ಅರಣ್ಯವನ್ನೇ ಆಶ್ರಯಿಸಿರುತ್ತಿದ್ದ ಅವರು ಜೀವನೋಪಾಯಕ್ಕಾಗಿ ಕಾಡ ಬಳ್ಳಿಯೊಂದನ್ನು ಕಡಿಯುವುದು ಬಿಟ್ಟರೆ ಯಾವ ಮರಕ್ಕೂ ಹಾನಿಯುಂಟು ಮಾಡುತ್ತಿರಲಿಲ್ಲ. ಒಂದರ್ಥದಲ್ಲಿ ಇವರೇ ನಿಜವಾದ ಅರಣ್ಯ ರಕ್ಷಕರು. ಹಕ್ಕಿಗಳು ಗೂಡು ಸೇರಲು ಹಾತೊರೆಯುವ ಹೊತ್ತಿಗಾಗಲೇ ತಮ್ಮ ಸಿದ್ಧ ಬುಟ್ಟಿಗಳನ್ನು ಹೊತ್ತು ಗುಡಿಸಲ ಕಡೆ ಹೆಜ್ಜೆ ಹಾಕುತ್ತಿದ್ದರು. ಕೆಲವೊಮ್ಮೆ ಬುಟ್ಟಿಗಳು ದಾರಿಹೋಕರಿಂದ ಖರೀದಿಸಲ್ಪಡುತ್ತಿದ್ದವು. ಇಲ್ಲವಾದರೆ ಮನೆಮನೆಗೆ ತೆರಳಿ ಮಾರಾಟ ಮಾಡುತ್ತಿದ್ದರು. ಕೊಯ್ಲಿಗೆ ಬಂದಾಗ ತೋಟದಿಂದ ಅಡಿಕೆ, ತೆಂಗಿನಕಾಯಿ ಹೊತ್ತು ತರುವ ಬುಟ್ಟಿ, ಹಟ್ಟಿಯಿಂದ ಗೊಬ್ಬರವನ್ನು ತೋಟಕ್ಕೆ ಸಾಗಿಸಲು ಬಳಸುವ ಬುಟ್ಟಿ, ಕುಡ್ಪು (ಅನ್ನ ಬಸಿಯಲು ಬಳಸುವ ಸಾಧನ) ಇತ್ಯಾದಿಗಳೆಲ್ಲವೂ ನಮ್ಮ ಮನೆ ಸೇರುತ್ತಿದ್ದುದು ಕೊರಗರಿಂದಲೇ. ಬುಟ್ಟಿ ಹೊತ್ತು ತರುವ ಕೊರಗ ಹೆಂಗಸು ನನ್ನಮ್ಮನನ್ನು ಕರೆದು “ಬ್ಯಾರ್ದಿ… ಕುರುವೆ ಬೋಡಾ” ಎನ್ನುತ್ತಾ ತಂದಿರುವ ಬುಟ್ಟಿಗಳನ್ನೆಲ್ಲಾ ಅಂಗಳದಲ್ಲಿರಿಸುತ್ತಿದ್ದಳು.

ವಿಪರೀತ ಕುಡಿತ ಕೊರಗ ಸಮುದಾಯದ ದೌರ್ಬಲ್ಯವೆನ್ನಬಹುದು. ಇದರ ಲಾಭ ಪಡೆದುಕೊಳ್ಳುತ್ತಿದ್ದವರು ಹಲವರು. ಊರ ದಲ್ಲಾಳಿಗಳು ಮಾರಾಟವಾಗದೇ ಉಳಿದ ಬುಟ್ಟಿಗಳನ್ನು ಅತೀ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಿಟ್ಟಿಸುತ್ತಿದ್ದರು. ಇತ್ತ ಕೊರಗರು ತಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಂಡು ಮಾರಿ ಮತ್ತೇರಿಸಿಕೊಳ್ಳುತ್ತಿದ್ದರು. ಜೇನು ತೆಗೆಯುವುದರಲ್ಲಿ ಇವರದು ಎತ್ತಿದ ಕೈ.
ಶುದ್ಧ ಜೇನು ತುಪ್ಪ ಸೇರಿದಂತೆ ಇತರ ಕಾಡ ಉತ್ಪನ್ನಗಳನ್ನು ಇದೇ ರೀತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಒಟ್ಟಿನಲ್ಲಿ ಅವರ ಮುಗ್ಧತೆ, ವ್ಯಾವಹಾರಿಕ ಜ್ಞಾನದ ಕೊರತೆ, ಕುಡಿತ ಇವೆಲ್ಲವನ್ನೂ ದುರ್ಬಳಕೆ ಮಾಡಿದವರೇ ಹೆಚ್ಚು.

ಕೊರಗರು ಸ್ವಾಭಿಮಾನಿಗಳು. ಯಾವತ್ತೂ ಭಿಕ್ಷಾಟನೆಗೆ ಇಳಿದವರೇ ಅಲ್ಲ. ಆದರೆ ದಸರಾ ಸಂದರ್ಭದಲ್ಲಿ ಮೈ ತುಂಬಾ ಕಪ್ಪು ಮಸಿ ಬಳಿದು ಕೊರಗರ ವೇಷವೆಂದು ಹೇಳುತ್ತಾ ಭಿಕ್ಷಾಟನೆ ನಡೆಸಿ ಕೊರಗ ಸಮುದಾಯವನ್ನು ಅವಮಾನಿಸಿದವರಿಗೇನೂ ಕಡಿಮೆಯಿಲ್ಲ. (ಸರಕಾರವು ಕೊರಗ ವೇಷ ಹಾಕುವುದನ್ನು ನಿಷೇಧಿಸಿದೆ).
ಕೊರಗರದು ತಲೆತಲಾಂತರಗಳಿಂದ ಅರಣ್ಯವಾಸಿ ಸಮುದಾಯ. ಅವರಿಗೆ ಹುಭಾಷಿಕ ಎಂಬ ಹೆಸರಿನ ಒಬ್ಬ ರಾಜನೂ ಇದ್ದ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಗಳ ಅರ್ಥಾತ್ ತುಳುನಾಡಿನ ಪುರಾತನ ಮೂಲನಿವಾಸಿ ಬುಡಕಟ್ಟು ಜನಾಂಗವೇ ಕೊರಗ ಜನಾಂಗ. ಇವರದು ಕರ್ನಾಟಕದ ಅತ್ಯಂತ ಹಿಂದುಳಿದ ಬುಡಕಟ್ಟಾಗಿದೆ.

ನಿರಂತರ ಶೋಷಣೆ, ದೌರ್ಜನ್ಯಕ್ಕೊಳಗಾಗಿ ಅಂಚಿಗೆ ತಳ್ಳಲ್ಪಟ್ಟ ಈ ಸಮುದಾಯದೊಳಗೆ ಕೆಲವು ಉಪಜಾತಿಗಳಿವೆ.

ಸಮಾಜಶಾಸ್ತ್ರೀಯ ಹುಡುಕಾಟದ ಪ್ರಕಾರ ಆರು ಉಪಜಾತಿಗಳಿವೆ. ನಾನು ಕಂಡು-ಕೇಳಿ ಅರಿತಂತೆ ಅವರಲ್ಲಿ ಮುಖ್ಯವಾಗಿ ಮೂರು ಉಪಜಾತಿಗಳಿವೆ. ಕುಂಟು ಕೊರಗ (ಬಟ್ಟೆ) ಕೊರಗರಲ್ಲೇ ಮೇಲ್ಮಟ್ಟದವರಂತೆ. ಒಂಟಿ ಕೊರಗ ಎರಡನೇ ಸ್ತರದವರಾದರೆ, ಸೊಪ್ಪು ಕೊರಗರದು ಕೊನೆಯ ಸ್ತರವಂತೆ.

ಮಾನ ಮುಚ್ಚಲು ಸೊಪ್ಪುಗಳನ್ನು ಗುಪ್ತಾಂಗದ ಸುತ್ತ ಕಟ್ಟುತ್ತಿದ್ದವರು ಸೊಪ್ಪು ಕೊರಗರು. ಕಿವಿಗೆ ಒಂಟಿ (ರಿಂಗ್) ಧರಿಸುವವರು ಒಂಟಿ ಕೊರಗರು. ಸೊಪ್ಪು ಧರಿಸುತ್ತಿದ್ದವರಲ್ಲಿ ಮೊದಲ ಬಾರಿಗೆ ಬಟ್ಟೆ ಉಡತೊಡಗಿದವರು ಕುಂಟು (ಬಟ್ಟೆ) ಕೊರಗರು ಎಂಬುದು ವಾಡಿಕೆ.

ಸಾಮಾನ್ಯವಾಗಿ ಕಾಡು ಪ್ರಾಣಿಗಳು ಕಿವಿಗಡಚಿಕ್ಕುವ ಶಬ್ದಕ್ಕೆ ಓಡಿ ಹೋಗುತ್ತವೆ. ಕಾಡನ್ನೇ ಆವಾಸಸ್ಥಾನವಾಗಿಸಿಕೊಂಡ ಇವರು ಕಾಡುಪ್ರಾಣಿಗಳ ಉಪಟಳದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಡೋಲನ್ನು ಆವಿಷ್ಕರಿಸಿದರು. ಇದೇ ಡೋಲು ಕಲಾ ಜಗತ್ತನ್ನು ಪ್ರವೇಶಿಸಿತು. ಆದರೆ ಕೊರಗರ ಈ ಕೊಡುಗೆಯನ್ನು ಎಲ್ಲೂ ಸ್ಮರಿಸಿಕೊಳ್ಳಲಾಗುವುದಿಲ್ಲ.

ಅವರೊಳಗಿನ ಕೀಳರಿಮೆ, ಭಯ, ಸಂಕೋಚ ಇವೆಲ್ಲವೂ ನಾಗರಿಕ ಸಮಾಜದಿಂದ ತುಂಬಾನೇ ದೂರ ಉಳಿಯುವಂತೆ ಮಾಡಿತ್ತು. ಊರ ಇತರ ಸಮುದಾಯಗಳ ಮದುವೆ ಸಮಾರಂಭಗಳಿಗೆ ಬಂದರೆ ಮಾರು ದೂರ ನಿಂತು ತಾವೇ ತಂದಿದ್ದ ಪ್ಲಾಸ್ಟಿಕ್ ಚೀಲದೊಳಗೆ ಮದುವೆ ಊಟ ಹಾಕಿಸಿಕೊಂಡು ಬಿರಬಿರನೆ ಮರಳುತ್ತಿದ್ದರೇ ವಿನಾ ಕುಳಿತುಕೊಳ್ಳುವುದಾಗಲೀ, ಮಾತಿಗಿಳಿಯುವುದಾಗಲೀ ಮಾಡುತ್ತಲೇ ಇರಲಿಲ್ಲ. ಕೆಲವೊಮ್ಮೆ ನಮ್ಮ ಮನೆಯ ಅಂಗಳದಲ್ಲೇ ಕುಳಿತು ಅಮ್ಮನಿಗೆ ಬೇಕಾದ ರೀತಿಯಲ್ಲಿ ಬುಟ್ಟಿ ಹೆಣೆದು ಕೊಡುತ್ತಿದ್ದ ಕೊರಗ ಹೆಂಗಸು ಮನೆಯ ಹೊರ ಚಾವಡಿಗೋ, ಜಗಲಿಗೋ ಕರೆದರೂ ಬಾರದೆ ಮರದಡಿಯಲ್ಲೇ ಕುಳಿತು ಊಟ, ತಿಂಡಿ ಮುಗಿಸುತ್ತಿದ್ದಳು. ಕೀಳೆಂಬ ತಮ್ಮೊಳಗಿನ ಕೀಳರಿಮೆ ಅವರನ್ನು ಸಮಾಜದಿಂದ ಮತ್ತಷ್ಟು ದೂರವಿಟ್ಟಿತು. ಈ ಕಾರಣದಿಂದಲೇ ಇರಬೇಕು ‘ಕೊರಗ ಭಾಷೆ’ಯೆಂಬ ಅವರ ಮಾತೃ ಭಾಷೆ ಈಗ ಭಾಷಾ ದಾಖಲೆಗಳಲ್ಲಿ ಮಾತ್ರ ಉಳಿದಿದ್ದು ತನ್ನ ಅಸ್ತಿತ್ವವವನ್ನೇ ಕಳೆದುಕೊಳ್ಳುವ ಹಂತದಲ್ಲಿದೆ.

ಬಹಳ ಇತ್ತೀಚಿನವರೆಗೂ ಅವರು ಸಮಾಜದ ಮುಖ್ಯವಾಹಿನಿಗೆ ಬರದಿದ್ದುದರ ಪರಿಣಾಮ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಆರೋಗ್ಯ, ಹೀಗೆ ಎಲ್ಲದರಿಂದಲೂ ವಂಚಿತರಾಗುತ್ತಾ ಬಂದಿದ್ದಾರೆ. ಕೊರಗರ ಡಿ.ಎನ್.ಎ ಅಧ್ಯಯನದ ಪ್ರಕಾರ ಬಹುಸಂಖ್ಯೆಯ ಜನ ಐವತ್ತು ವರ್ಷಗಳಿಗಿಂತ ಹೆಚ್ಚು ಬದುಕುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಆರೋಗ್ಯದ ಕುರಿತಂತೆ ಅವರಿಗಿರುವ ತೀರಾ ನಿಷ್ಕಾಳಜಿ, ಜಾಗೃತಿಯ ಕೊರತೆ ಮತ್ತು ವೈದ್ಯಕೀಯ ಸೇವೆಗಳು ಅವರ ಬಳಿ ತಲುಪದಿರುವುದು. ಅರಣ್ಯವಾಸಿ ಕೊರಗರಲ್ಲಿ ಮಲೇರಿಯಾ, ಟೈಫಾಯ್ಡ್, ಕ್ಷಯರೋಗ ಬಾಧಿತರಾಗುವವರ ಪ್ರಮಾಣವು ಇತರರಿಗಿಂತ ಬಹಳ ಹೆಚ್ಚು. ಅತಿಯಾದ ಕುಡಿತದಿಂದ ಯಕೃತ್ತಿನ ಕಾಯಿಲೆಯೂ ಅವರಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲೇ ಇದೆ.

ಈಗಷ್ಟೇ ಅತ್ಯಂತ ತೆಳುವಾದ ಪ್ರಮಾಣದಲ್ಲಿ ಕೊರಗ ಸಮುದಾಯವು ಶಿಕ್ಷಣದತ್ತ ಒಲವು ತೋರುತ್ತಿದೆ. ನಗರ ಪ್ರದೇಶದಲ್ಲಿರುವ ಕೊರಗರು ಪೌರ ಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ. ಅವರ ಹೊಸ ತಲೆಮಾರಿನವರ ತಲೆಯಲ್ಲೂ ನಾವು ಇದೇ ಕೆಲಸ ಮಾಡಲಿರುವವರು ಎಂದು ಕೂತಿರುವುದರಿಂದ ಸ್ವಯಂ ಅವರೂ ಶಿಕ್ಷಣದತ್ತ ದೊಡ್ಡ ಮಟ್ಟಿನ ಒಲವು ತೋರುತ್ತಿಲ್ಲ.

ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇದ್ದರೂ ಅವರಲ್ಲಿನ ಜಾಗೃತಿಯ ಕೊರತೆಯಿಂದಾಗಿ ಅದು ದಕ್ಕದೆ ಇತರ ಮುಂದುವರಿದ ಪರಿಶಿಷ್ಟ ಪಂಗಡಗಳ ಪಾಲಾಗುವುದೇ ಹೆಚ್ಚು. ಒಳ ಮೀಸಲಾತಿಯನ್ನು ಸಮರ್ಪಕ ಮಟ್ಟದಲ್ಲಿ ಜಾರಿಗೆ ತಂದರೆ ಮಾತ್ರ ತಮಗಾಗಿಯೇ ಇರುವ ಅವಕಾಶವನ್ನು ಅವರು ಬಳಸಿಕೊಳ್ಳಲು ಸಾಧ್ಯ.
2011ರ ಜನಗಣತಿ ಪ್ರಕಾರ ಕೊರಗರ ಸಂಖ್ಯೆ ಕೇವಲ 16,500 ಮಾತ್ರ. ಅಲ್ಲಲ್ಲಿ ಚದುರಿಕೊಂಡಿರುವ ಈ ಸಮುದಾಯವು ಯಾವುದೇ ಚುನಾವಣೆಯಲ್ಲೂ ನಿರ್ಣಾಯಕವಲ್ಲದ ಕಾರಣ ಮತಗಳಿಗಾಗಿ ಯಾವ ರಾಜಕೀಯ ಪಕ್ಷಗಳೂ ಅವರ ಓಲೈಕೆ ಮಾಡುವುದಿಲ್ಲ. ಸಂಪೂರ್ಣವಾಗಿ ಅಂಚಿಗೆ ತಳ್ಳಲ್ಪಟ್ಟ ಈ ನೆಲದ ನಿಜವಾದ ವಾರಸುದಾರರು ನಿಜ ದೃಷ್ಟಿಯಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಒಳಮೀಸಲಾತಿ ನೀಡಲೇಬೇಕಿರುವುದು ಕಾಲದ ತುರ್ತಾಗಿದೆ.


ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....