Homeಕರ್ನಾಟಕಮೀಡಿಯಾಗಳು 'ಆಪರೇಷನ್ ಕಮಲ' ಎಂದು ಹೇಳುವ ಬದಲು ದೋಸ್ತಿ ಖತಮ್ ಎಂದೇಕೇ ಹೇಳುತ್ತಿವೆ?

ಮೀಡಿಯಾಗಳು ‘ಆಪರೇಷನ್ ಕಮಲ’ ಎಂದು ಹೇಳುವ ಬದಲು ದೋಸ್ತಿ ಖತಮ್ ಎಂದೇಕೇ ಹೇಳುತ್ತಿವೆ?

- Advertisement -
- Advertisement -

ಆಸೆಗೆ, ಅಹಂಗೆ ಮಾರಿಕೊಂಡವರ ನೆಪಗಳು!

ಕರ್ನಾಟಕದ ಸದ್ಯದ ಬೆಳವಣಿಗೆಗಳಿಗೆ ಯಾರು ಕಾರಣ ಎಂಬ ಚರ್ಚೆ ನಡೆಯುತ್ತಿದೆ. ಶಾಸಕರು ಅಸಮಾಧಾನಗೊಂಡು ಮುಂಬೈ ತಲುಪಿದ್ದಾರೆ. ಅವರ ಕೆಲ ಮಾತುಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ವಿಶ್ಲೇಷಕರು ಈ ಎಲ್ಲಾ ಘಟನೆಗಳ ಹಿಂದೆ ಯಾರು ಇರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ.

ಘಟನೆಗಳಿಗೆ, ಟಿವಿ ಚರ್ಚೆ, ಪತ್ರಿಕಾ ವರದಿಗಳಲ್ಲಿ ಪ್ರಮುಖವಾಗಿ ಕಾಣುವವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಮನ್ವಯ ಸಮಿತಿ ಮುಖ್ಯಸ್ಥರಾಗಿ ಅವರು ವಿಫಲರಾಗಿದ್ದಾರೆ. ತಮ್ಮದೇ ಬೆಂಬಲಿಗರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಮೇಲಾಗಿ ಅವರದೇ ಬೆಂಬಲಿಗರು ಮುಂಬೈ ಹೋಗಿರುವ ಕಾರಣ ಇಡೀ ಪ್ರಕರಣ ಹಿಂದೆ ಅವರ ಪಾತ್ರವೂ ದೊಡ್ಡದಿರಬಹುದು ಎಂಬ ಮಾತುಗಳಿವೆ.
ಹಾಗೆ ಮಾತನಾಡುವಾಗ ಕೆಲ ಶಾಸಕರನ್ನು ನೇರವಾಗಿ ಸಿದ್ದು ಶಿಷ್ಯರೆಂದು, ಅವರು ಹೇಳಿದರೆ ಖಂಡಿತಾ ಹಿಂತಿರುಗುತ್ತಾರೆ. ಅವರು ಮನಸ್ಸು ಮಾಡುತ್ತಿಲ್ಲ‌. ಮೇಲಾಗಿ ಸಿದ್ದರಾಮಯ್ಯನಿಗೂ ಸರಕಾರ ಉಳಿದು ಆಗಬೇಕಾದ್ದು ಏನೂ ಇಲ್ಲ – ಎಂಬೆಲ್ಲಾ ಮಾತುಗಳಿವೆ‌.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಿಕ್ಕಟ್ಟನ್ನು ಬಿಡಿಸಲು ಎಷ್ಟೇ ಪ್ರಯತ್ನಪಟ್ಟವರಂತೆ ಕಂಡರೂ ಅವರ ಬಗ್ಗೆ ಅನುಮಾನಗಳು ಇದ್ದೇ ಇವೆ. ಜೆಡಿಎಸ್ ಪಕ್ಷದ ಬೆಂಬಲಿಗರು ಅವರನ್ನೇ ವಿಲನ್ ಎಂಬಂತೆ ನೋಡುತ್ತಿದ್ದಾರೆ. ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಒಬ್ಬ ಪತ್ರಕರ್ತರಂತೂ ಇಡೀ ಸಿನಿಮಾಕ್ಕೆ ಸಿದ್ದರಾಮಯ್ಯನವರದೇ ಚಿತ್ರಕತೆ, ನಿರ್ದೇಶನ ಎಂದು ಪದೇ ಪದೇ ಹೇಳುತ್ತಿದ್ದಾರೆ.

ಅದೇ ಹೊತ್ತಲ್ಲಿ ಶಾಸಕರ ಅತೃಪ್ತಿಗೆ ಕಾರಣವಾಗಿ ಹೊಮ್ಮಿರುವ ಇನ್ನೊಬ್ಬ ಇನ್ನೊಬ್ಬರು ಲೋಕೋಪಯೋಗಿ ಸಚಿವರಾದ ಹೆಚ್. ಡಿ. ರೇವಣ್ಣ. ಬೆಂಗಳೂರಿನ ಶಾಸಕರು ಮುಂಬೈ ವಿಮಾನ ಹತ್ತುವ ಮುನ್ನ, ಎಲ್ಲಾ ಇಲಾಖೆಗಳಿಗೆ ಮೂಗು ತೂರಿಸುವ ರೇವಣ್ಣನೇ  ಅಸಮಾಧಾನಕ್ಕೆ ಕಾರಣ ಎಂದು ಆರೋಪಿಸಿ ಹೊರಟಿದ್ದಾರೆ. ಹೀಗೆ ಆರೋಪ ಮಾಡುವವರಿಗೆ ಅವರದೇ ಆದ ಕಾರಣಗಳಿರಬಹುದು.

ಆದರೆ ಈ ಎಲ್ಲಾ ಕಾರಣಗಳ ಆಚೆ ದೊಡ್ಡ ದೊಡ್ಡ ವ್ಯಕ್ತಿಗಳಿದ್ದಾರೆ, ಆಮಿಷಗಳಿವೆ, ದುರಾಸೆ ಇದೆ ಎಂಬುದನ್ನು ನಮ್ಮ ಮಾಧ್ಯಮ ವ್ಯವಸ್ಥಿತವಾಗಿ ಮರೆ ಮಾಚಿದೆ. ಆ ಕಾರಣಕ್ಕೇನೆ ಈ ಬಾರಿ ‘ಆಪರೇಷನ್ ಕಮಲ’ ಎಂಬ ಪದ ಹೆಚ್ಚಾಗಿ ಕಿವಿಗೆ ಬೀಳಲೇ ಇಲ್ಲ‌. ಬದಲಾಗಿ ಕೇಳಿಸಿದ್ದು – ದೋಸ್ತಿ ಖತಮ್.

ಒಬ್ಬ ಶಾಸಕ ರಾಜೀನಾಮೆ ಕೊಟ್ಟ ತಕ್ಷಣ ಆತನನ್ನು ಮುಂಬೈಗೆ ಕರೆದುಕೊಂಡು ಹೋಗಲು ಒಂದು ವಿಮಾನ ರೆಡಿ ಇರುತ್ತದೆ. ಮುಂಬೈಗೆ ಹೋದ ನಂತರ ಅವರ ಭದ್ರತೆಗೆ ಮುಂಬೈ ಪೊಲೀಸರು ಬಂದು ನಿಲ್ಲುತ್ತಾರೆ. ಅವರು ಸುಪ್ರೀಂ ಕೋರ್ಟಿ ಅರ್ಜಿ ಸಲ್ಲಿಸಿದರೆ ಅವರ ಪರ ವಾದ ಮಂಡಿಸಲು ಬರುವ ವಕೀಲರಾದರೂ ಯಾರು?

ಈ ಎಲ್ಲಾ ಪ್ರಶ್ನೆಗಳನ್ನು ಗಾಳಿಗೆ ತೂರಿ, ಸಿದ್ದರಾಮಯ್ಯ ಮತ್ತು ರೇವಣ್ಣ ಎಂಬ ನೆಪ‌ ಹುಡುಕುತ್ತಿದ್ದಾರೆ. ಎಲ್ಲದಕ್ಕೂ ಸಿದ್ದರಾಮಯ್ಯ, ರೇವಣ್ಣನಂತಹವರೇ ಕಾರಣ ಆಗೋದಾದ್ರೆ, ಸದ್ಯ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವುದೇನು? ಪಕ್ಕದ ಗೋವಾ ದಂತಹ ಸಣ್ಣ ರಾಜ್ಯದಲ್ಲಿ 15 ಕಾಂಗ್ರೆಸ್ ಶಾಸಕರ ಪೈಕಿ ಹತ್ತು ಜನ ಬಿಜೆಪಿ ಸೇರಿದ್ದಾರೆ. ಅಲ್ಲಿ ಯಾವ ಸಿದ್ದರಾಮಯ್ಯ ಯಾವ ರೇವಣ್ಣ ಇದ್ರು?

ಅಷ್ಟೇ ಏಕೆ, ಈಗ ಪಶ್ಚಿಮ ಬಂಗಾಳದ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಪಾರ್ಟಿಗಳನ್ನು ತೊರೆದು ಬಿಜೆಪಿ ಸೇರಲು ಸಿದ್ಧ ಇರುವ ನೂರಕ್ಕೂ ಹೆಚ್ಚು ಶಾಸಕರ ಪಟ್ಟಿ ನನ್ನ ಜೇಬಿನಲ್ಲಿ ಇದೆ ಎಂದು ಹೇಳುತ್ತಾರಲ್ಲ ಅಲ್ಲಿ ಯಾವ ರೇವಣ್ಣ ಯಾವ ಸಿದ್ದರಾಮಯ್ಯ ಇದ್ದಾರೆ? 2014 ರ ನಂತರ ಹಲವು ರಾಜ್ಯಗಳಲ್ಲಿ ಚುನಾವಣೆಗಳು‌ ನಡೆದಿವೆ. ಅಲ್ಲೆಲ್ಲಾ ನಡೆದಿದ್ದೇನು?

ಟಿವಿ ಚರ್ಚೆಗಳಲ್ಲಿ ಕುಳಿತು ಮಾತನಾಡುವವರು ಬೇಕೆಂದೇ ತಮ್ಮ ದೃಷ್ಟಿಕೋನವನ್ನು ಕರ್ನಾಟಕಕ್ಕೆ ಸೀಮಿತಗೊಳಿಸಿ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅವರಿಗೆ ಅದು ಸರಿ ಕಾಣಬಹುದು. ಅವರೆಲ್ಲಾ ಈ ಬೆಳವಣಿಗೆಗಳ ಹಿಂದೆ ಇರುವ ಅಮಿತ್ ಶಾ, ನರೇಂದ್ರ ಮೋದಿ ಕಾಣುವುದಿಲ್ಲ.

ಹೋಗಲಿ, ವಿಮಾನ ಹತ್ತಿಸುವ ಯಡಿಯೂರಪ್ಪ ಸಹಾಯಕ ಸಂತೋಷ್, ಜೊತೆಗೆ ಪ್ರಯಾಣಿಸುವ ಅಶೋಕ್ ಕೂಡಾ ಕಾಣುವುದಿಲ್ಲವೆ? ಅಷ್ಟರ ಮಟ್ಟಿಗೆ ಕಣ್ಣಿಗೆ ಪೊರೆ ಬೆಳೆಸಿಕೊಂಡರೆ ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...