Homeಅಂತರಾಷ್ಟ್ರೀಯಅಫ್ಘಾನ್‌ನ ಹೊಸ ನಾಯಕರಾಗಲಿರುವ ತಾಲಿಬಾನ್‌‌ ಮುಖಂಡರಿವರು

ಅಫ್ಘಾನ್‌ನ ಹೊಸ ನಾಯಕರಾಗಲಿರುವ ತಾಲಿಬಾನ್‌‌ ಮುಖಂಡರಿವರು

ಅಘ್ಘನ್ ಅನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಆಡಳಿತಕ್ಕೆ ಮುಂದಾಗಿದೆ. ಅದರ ಮುಖಂಡರ ಪರಿಚಯ ಇಲ್ಲಿದೆ

- Advertisement -
- Advertisement -

ಭಯೋತ್ಪಾದಕರನ್ನು ಮಟ್ಟ ಹಾಕುತ್ತೇನೆ ಎಂದು ಅಫ್ಘಾನ್‌ಗೆ ತನ್ನ ಪಡೆಯನ್ನು ಇಳಿಸಿದ್ದ ಅಮೆರಿಕಾ, ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ತಾಲಿಬಾನ್‌ ಕೈಯಲ್ಲಿ ಅಧಿಕಾರ ಕೊಟ್ಟು ಹೊರಟು ಹೋಗಿದೆ. 20 ವರ್ಷಗಳ ಹಿಂದೆ ಯಾರ ಕೈಯ್ಯಲ್ಲಿ ಅಫ್ಘಾನ್‌ ಇತ್ತೋ ಅದೇ ತಾಲಿಬಾನ್‌ ಕೈಯ್ಯಲ್ಲಿ ಇವತ್ತು ಅಫ್ಘಾನ್‌ ಇದೆ. ಧರ್ಮದ ಆಧಾರದಲ್ಲಿ ಅಧಿಕಾರ ಹಿಡಿದರೆ ಏನಾಗುತ್ತದೆ ಎಂದು ತಾಲಿಬಾನ್‌ ಇಪ್ಪತ್ತು ವರ್ಷಗಳ ಹಿಂದೆ ಜಗತ್ತಿಗೆ ತೋರಿಸಿದೆ.

ಪ್ರಸ್ತುತ ತಾಲಿಬಾನ್‌ ತಾವು ಶತ್ರಗಳಿಗೆ ಕ್ಷಮೆ ನೀಡಿದ್ದೇವೆ, ವಿವಿಧ ಜನಾಂಗಗಳನ್ನು ಒಳಗೊಂಡ ಸರ್ಕಾರವನ್ನು ರಚಿಸುತ್ತೇವೆ, ಅಫ್ಘಾನ್ ನೆಲದಿಂದ ಭಯೋತ್ಪಾದಕ ಗುಂಪುಗಳನ್ನು ದೂರವಿಡುತ್ತೇವೆ ಮತ್ತು ಮಹಿಳೆಯರಿಗೆ ಶರಿಯಾ ಕಾನೂನಿನ ಮಿತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತೇವೆ ಎಂದು ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಅಫ್ಘಾನ್ ಸ್ವಾತಂತ್ರ್ಯ ದಿನ ಮೆರವಣಿಗೆ ಹೊರಟವರ ಮೇಲೆ ತಾಲಿಬಾನ್ ಗುಂಡಿನ ದಾಳಿ ಮಾಡಿದೆ ಎಂಬ ವರದಿಗಳು ಬರುತ್ತಿವೆ. ಇನ್ನು ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ತಾಲಿಬಾನ್‌ ಅನ್ನು ಅಫ್ಘಾನಿಸ್ತಾನದ ಕಾನೂನುಬದ್ಧ ಹೊಸ ಆಡಳಿತಗಾರರು ಎಂದು ಗುಂಪನ್ನು ಗುರುತಿಸಲು ಹಲವು ಷರತ್ತುಗಳನ್ನು ವಿಧಿಸಿದೆ.

ಇದನ್ನೂ ಓದಿ: ಅಫ್ಘಾನ್ ತಾಲಿಬಾನ್ ಗೆಲುವು: ಒಂದು ಎಡಪಂಥೀಯ ನೋಟ

ತಾಲಿಬಾನ್‌ನ ಹಿರಿಯ ನಾಯಕತ್ವವು, 1980 ರಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಲು ಅಮೆರಿಕಾದಿಂದ ತರಬೇತಿ ಪಡೆದ ಮುಜಾಹಿದ್ದೀನ್ ಬಂಡೂಕೋರರನ್ನು ಒಳಗೊಂಡಿದೆ. ತಾಲಿಬಾನ್‌ನಲ್ಲಿ ಬಹುಪಾಲು ಪಶ್ತೂನ್‌‌ ಜನಾಂದವರೆ ಹೆಚ್ಚಿದ್ದು, ಅಘ್ಘಾನ್‌ನ ದಕ್ಷಿಣ ಭಾಗದಲ್ಲಿ ಹೆಚ್ಚು ಪ್ರಬಲವಾಗಿದೆ.

ತಾಲಿಬಾನ್‌‌ನ ಏಳು ಪ್ರಭಾವಿ ನಾಯಕರ ಪಟ್ಟಿ ಹೀಗಿದೆ

ಹೈಬತುಲ್ಲಾ ಅಖುಂಜದಾ, ಸುಪ್ರೀಂ ಕಮಾಂಡರ್

1961 ರಲ್ಲಿ ಜನಿಸಿದ ಅಖುಂಜದಾ ತಾಲಿಬಾನ್‌ನ ಅತ್ಯುನ್ನತ ನಾಯಕ. 2016 ರಲ್ಲಿ ತಾಲಿಬಾನ್‌‌ನ ಮೂರನೇ ಸುಪ್ರೀಂ ಕಮಾಂಡರ್ ಆದರು. ಅವರ ಪೂರ್ವಾಧಿಕಾರಿಯನ್ನು ಅಮೆರಿಕಾ ಅದೇ ಸಮಯದಲ್ಲಿ ಡ್ರೋನ್‌ ಸ್ಟ್ರೈಕ್‌ ಮೂಲಕ ಕೊಂದು ಹಾಕಿತ್ತು. ಅಖುಂಜದಾ ಮಿಲಿಟರಿ ಕಮಾಂಡರ್‌ಗಿಂತ ಧಾರ್ಮಿಕ ನಾಯಕನಾಗಿ ಹೆಚ್ಚು ಹೆಸರುವಾಸಿಯಾಗಿದ್ದು, ಇವರು ಹೆಚ್ಚಾಗಿ ಪ್ರಚಾರಕ್ಕೆ ಬಂದಿಲ್ಲ.

ಹೈಬತುಲ್ಲಾ ಅಖುಂಜದಾ

ಅಲ್ಲದೆ ತಾಲಿಬಾನ್‌ನ ಅಗ್ರ ನಾಯಕನಾದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಕೆಲವೇ ಕೆಲವು ಫೋಟೋಗಳು ಲಭ್ಯವಿವೆ. ಅಖುಂಜದಾ ತನ್ನ ಕೊನೆಯ ಸಾರ್ವಜನಿಕ ಹೇಳಿಕೆಯನ್ನು ಮೇ ತಿಂಗಳ ಈದ್ ಅಲ್-ಫಿತರ್ ಹಬ್ಬದ ದಿನ ನೀಡಿದ್ದರು.

ಇದನ್ನೂ ಓದಿ: ಅಫ್ಘಾನ್: ಯಾರೊಂದಿಗೂ ದ್ವೇಷವಿಲ್ಲ, ಎಲ್ಲರಿಗೂ ಕ್ಷಮೆ ನೀಡಿದ್ದೇವೆ – ತಾಲಿಬಾನ್‌

ಅಬ್ದುಲ್ ಘನಿ ಬರದಾರ್, ಉಪ ನಾಯಕ

ಅಬ್ದುಲ್ ಘನಿ ಬರದಾರ್‌ ತಾಲಿಬಾನ್‌ನ ಉಪ ನಾಯಕರಾಗಿದ್ದಾರೆ. ಜೊತೆಗೆ ತಾಲಿಬಾನ್‌ನ ಮುಖ್ಯ ಸಾರ್ವಜನಿಕ ಮುಖ ಕೂಡಾ ಆಗಿದ್ದು, ಅಫ್ಘಾನ್‌ನ ಮುಂದಿನ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. ಒಸಾಮಾ ಬಿನ್ ಲಾಡೆನ್ ಜೊತೆ ನಿಕಟ ಸಂಬಂಧ ಹೊಂದಿದ್ದವರಲ್ಲಿ ಇವರು ಕೂಡಾ ಒಬ್ಬರು. ತಾಲಿಬಾನ್‌ನ ಮೊದಲ ಸುಪ್ರೀಂ ಕಮಾಂಡರ್‌ ಆಗಿದ್ದ ಮುಲ್ಲಾ ಮೊಹಮ್ಮದ್ ಒಮರ್ ಜೊತೆಗೆ ತಾಲಿಬಾನ್ ಅನ್ನು ಸ್ಥಾಪಿಸಿದವರು.

2010 ರಲ್ಲಿ ಪಾಕಿಸ್ತಾನದ ಬಂದರು ನಗರವಾದ ಕರಾಚಿಯಲ್ಲಿ ಅಮೆರಿಕದ ಗುಪ್ತಚರ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಬರದಾರನ್ನು ಸೆರೆಹಿಡಿಯಲಾಯಿತು. ಅಫ್ಘಾನಿಸ್ತಾನದ ಅಮೆರಿಕಾ ವಿಶೇಷ ಪ್ರತಿನಿಧಿ ಟ್ರಂಪ್ ಆಡಳಿತದೊಂದಿಗೆ ಶಾಂತಿ ಮಾತುಕತೆಗೆ ಮುಂಚಿತವಾಗಿ 2018 ರಲ್ಲಿ ಆತನ ಬಿಡುಗಡೆಗೆ ಸಹಾಯ ಮಾಡಿದರು ಎಂದು ವರದಿಯಾಗಿದೆ.

ಅಬ್ದುಲ್ ಘನಿ ಬರದಾರ್

ಅವರು ಮಂಗಳವಾರ ತಾಲಿಬಾನ್‌‌ನ ಜನ್ಮಸ್ಥಳವಾದ ಕಂದಹಾರ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಅಲ್ಲಿವರೆಗೂ ತಾಲಿಬಾನ್‌ಗಳ ರಾಜಕೀಯ ಕಚೇರಿಯಿರುವ ಕತಾರ್‌ನ ದೋಹಾದಲ್ಲಿ ಅವರು ವಾಸುತ್ತಿದ್ದರು. ತಾಲಿಬಾನ್‌ನ ರಾಜತಾಂತ್ರಿಕ ನಾಯಕನಾಗಿರುವ ಅವರು, 2020ರ ಫೆಬ್ರವರಿಯಲ್ಲಿ ಟ್ರಂಪ್ ಆಡಳಿತದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವೆ ಅಫ್ಘಾನಿಸ್ತಾನದಿಂದ ಅಮೆರಿಕಾ ಮತ್ತು ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ಅಬ್ದುಲ್ ಘನಿ ಬರದಾರ್ ಈ ತಿಂಗಳ ಆರಂಭದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಯನ್ನು ಟಿಯಾಂಜಿನ್‌ನಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಕಾಬೂಲ್‌: ಗುರುದ್ವಾರಕ್ಕೆ ಭೇಟಿ ನೀಡಿ ಸಿಖ್ಖರು, ಹಿಂದೂಗಳೊಂದಿಗೆ ಮಾತನಾಡಿದ ತಾಲಿಬಾನಿಗಳು

ಸಿರಾಜುದ್ದೀನ್ ಹಕ್ಕಾನಿ, ಅಮೆರಿಕಾ ಗುರುತಿಸಿದ ಭಯೋತ್ಪಾದಕ ಗುಂಪಿನ ನಾಯಕ

ಸಿರಾಜುದ್ದೀನ್ ಹಕ್ಕಾನಿ ‘ಹಕ್ಕಾನಿ ನೆಟ್‌ವರ್ಕ್‌’ನ ನಾಯಕ. ಅಮೆರಿಕಾ ಇದನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. 2016 ರಲ್ಲಿ ಈ ಗುಂಪುಗಳು ತಾಲಿಬಾನ್‌ ಜೊತೆ ವಿಲೀನಗೊಂಡಿತು. ಇದರ ನಂತರ ಹಕ್ಕಾನಿ ತಾಲಿಬಾನ್‌ನ ಎರಡನೆ ಉಪ ನಾಯಕನಾದರು. ಇವರು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಓಡಾಡಿಕೊಂಡು ಎರಡು ದೇಶಗಳಾದ್ಯಂತ ಮಿಲಿಟರಿ ಮತ್ತು ಸೈನ್ಯವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಸಿರಾಜುದ್ದೀನ್ ಹಕ್ಕಾನಿ

ತಾಲಿಬಾನ್ ಜೊತೆ ನಡೆಯುತ್ತಿರುವ ಮಾತುಕತೆಯ ಭಾಗವಾಗಿ ಹಕ್ಕಾನಿ ನೆಟ್ವರ್ಕ್ ಅನ್ನು ಅಮೆರಿಕಾ ಹೇಗೆ ಪರಿಗಣಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅವರ ಸಹೋದರ, ಪ್ರಮುಖ ತಾಲಿಬಾನ್ ನಾಯಕನೂ ಆಗಿದ್ದು, 2014 ರಲ್ಲಿ ಬಹರೈನ್‌ನಲ್ಲಿ ಅಮೆರಿಕಾ ಪಡೆಗಳಿಂದ ಸೆರೆಹಿಡಿಯಲ್ಪಟ್ಟರು. ನಾಲ್ಕು ವರ್ಷಗಳ ನಂತರ ಬಿಡುಗಡೆಯಾದರು.

ಮೊಹಮ್ಮದ್ ಯಾಕೂಬ್, ತಾಲಿಬಾನ್‌ ಸಂಸ್ಥಾಪಕನ ಮಗ

ಮೊಹಮ್ಮದ್ ಯಾಕೂಬ್

ಯಾಕೂಬ್ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್‌ ಪುತ್ರ. ತನ್ನ ತಂದೆಯ ಕಾರಣಕ್ಕೆ ಒಮ್ಮೆ ತಾಲಿಬಾನ್‌ನ ಉನ್ನತ ಹುದ್ದೆಗೆ ಸ್ಪರ್ಧಿಯಾಗಿದ್ದರು. ಯಾಕೂಬ್‌ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ನೆರೆಯ ಪಾಕಿಸ್ತಾನದಲ್ಲಿನ ಸೆಮಿನರಿಯಲ್ಲಿ ಶಿಕ್ಷಣ ಪಡೆದಿದ್ದ ಯಾಕೂಬ್‌, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಸುದ್ದಿಗಳು ಸೂಚಿಸುತ್ತವೆ. ಸಿರಾಜುದ್ದೀನ್ ಹಕ್ಕಾನಿಯೊಂದಿಗೆ ತಾಲಿಬಾನ್‌ನ ಸೇನಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದೂ ನಂಬಲಾಗಿದೆ.

ಇದನ್ನೂ ಓದಿ: ಅಫ್ಘಾನ್‌‌ ಪತನ: ‘ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಏನು ಮಾಡಿದ್ದೀರಿ?’ – ಮೋದಿಗೆ ಕಾಂಗ್ರೆಸ್ ಪ್ರಶ್ನೆ

ಅಬ್ದುಲ್ ಹಕೀಂ ಹಕ್ಕಾನಿ, ಪ್ರಮುಖ ಸಂಧಾನಕಾರ

ಅಬ್ದುಲ್ ಹಕೀಂ ಹಕ್ಕಾನಿ

ಸುಪ್ರೀಂ ಕಮಾಂಡರ್ ಅಖುಂಜದಾ ಆಪ್ತನೆಂದು ನಂಬಲಾಗಿರುವ ಹಕೀಂ ಹಕ್ಕಾನಿ, ತಾಲಿಬಾನ್‌ನ ಸಂಧಾನ ತಂಡದ ಮುಖ್ಯಸ್ಥರಾಗಿದ್ದಾರೆ. ಅಫ್ಘಾನ್‌ನ ಹಿಂದಿನ ಅಮೆರಿಕಾ ಬೆಂಬಲಿತ ಸರ್ಕಾರದೊಂದಿಗೆ ಶಾಂತಿ ಮಾತುಕತೆಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಧಾರ್ಮಿಕ ವಿದ್ವಾಂಸರ ಹಿರಿಯ ಮಂಡಳಿಯ ಮುಖ್ಯಸ್ಥರಾಗಿದ್ದಾರೆ.

ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್, ಪ್ರಮುಖ ರಾಜತಾಂತ್ರಿಕ

ಗುಂಪಿನ ಇತರ ನಾಯಕರಂತಲ್ಲದೆ, ಸ್ಟಾನಿಕ್‌ಜಾಯ್ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಕಳೆದ ಬಾರಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ ಹಿಡಿದಿದ್ದಾಗ ಉಪ ವಿದೇಶಾಂಗ ಮಂತ್ರಿಯಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದ್ದರು. 1996 ರಲ್ಲಿ, ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಳ್ಳುವಂತೆ ಕ್ಲಿಂಟನ್ ಆಡಳಿತವನ್ನು ಮನವೊಲಿಸಲು ನಡೆಸಿದ ವಿಫಲವಾದ ಕಾರ್ಯಾಚರಣೆಯಲ್ಲಿ ಸ್ಟಾನಿಕ್‌ಜಾಯ್‌ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು.

ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್

ರಾಯಿಟರ್ಸ್ ವರದಿಯ ಪ್ರಕಾರ, ಸ್ಟಾನಿಕ್‌ಜಾಯ್‌ ತನ್ನ ನಿಯೋಗಗಳನ್ನು ಚೀನಾದ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲು ಕರೆದೊಯ್ದಿದ್ದಾರೆ. ಅಫ್ಘಾನ್‌ನ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಅಬ್ದುಲ್ ಹಕೀಮ್ ಹಕ್ಕಾನಿ ಅವರ ಉಪ ಸಮಾಲೋಚಕರಾಗಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಜನರು ಪಾಕಿಸ್ತಾನಕ್ಕಿಂತಲೂ ಭಾರತದಿಂದ ಹೆಚ್ಚು ನಿರೀಕ್ಷಿಸುತ್ತಿದ್ದಾರೆ- ಕಾಬೂಲ್‌ನಿಂದ ಬಂದ ಪತ್ರಕರ್ತೆ

ಜಬಿಹುಲ್ಲಾ ಮುಜಾಹಿದ್, ಮುಖ್ಯ ವಕ್ತಾರ

ಜಬಿಹುಲ್ಲಾ ಮುಜಾಹಿದ್ ಈ ವಾರದ ಆರಂಭದಲ್ಲಿ ಕಾಬೂಲ್‌ನಲ್ಲಿ ನಡೆದ ತಾಲಿಬಾನ್‌ನ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಂತರಾಷ್ಟ್ರೀಯ ಸಮುದಾಯಕ್ಕೆ ತಾಲಿಬಾನ್‌ನ ಸಂದೇಶವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

ಜಬಿಹುಲ್ಲಾ ಮುಜಾಹಿದ್

20 ವರ್ಷಗಳ ಯುದ್ಧದ ಸಮಯದಲ್ಲಿ, ಅವರು ಪತ್ರಕರ್ತರೊಂದಿಗೆ ದೂರವಾಣಿ ಮೂಲಕ ಅಥವಾ ಪಠ್ಯ ಸಂದೇಶಗಳ ಮೂಲಕ ಮಾತ್ರ ಸಂವಹನ ನಡೆಸಿದ್ದರು. ಆಗಸ್ಟ್ 17 ರಂದು ಪತ್ರಿಕಾಗೋಷ್ಠಿಯ ಸಂವಹನದಲ್ಲಿ ಅವರು ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು.

ಇದನ್ನೂ ಓದಿ: ತಾಲಿಬಾನಿಗಳು ದಾನಿಶ್ ಸಿದ್ದೀಕಿ ಗುರುತು ಪತ್ತೆಯಾದ ನಂತರ, ಕೊಂದಿದ್ದಾರೆ: ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...