Homeಕರ್ನಾಟಕದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌'ಗಳ ದುಸ್ಥಿತಿ

ದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌’ಗಳ ದುಸ್ಥಿತಿ

- Advertisement -
- Advertisement -

ಪ್ರೊಎಂ.ಡಿ.ನಂಜುಂಡಸ್ವಾಮಿ ಯವರಿರುವ ತನಕ (ಮತ್ತು ಬಹುಶಃ ಈಗಲೂ) ರೈತಸಂಘದ ದೊಡ್ಡ ಹೋರಾಟಗಳ ಪೋಸ್ಟರ್‌ನಲ್ಲಿ ಗಾಂಧಿಯವರ ಚಿತ್ರ ಕಡ್ಡಾಯವಾಗಿ ಇರುತ್ತಿತ್ತು. ಒಂದು ವೇಳೆ ಆ ಹೋರಾಟವು ಯಾವುದೋ ಸರ್ಕಾರಿ ನಿಯಮದ ವಿರುದ್ಧವಿದ್ದರೆ, ಪೋಸ್ಟರ್‌ನಲ್ಲಿನ ಗಾಂಧಿ ಆ ನಿಯಮದ ಪ್ರತಿಯನ್ನು ಹರಿದು ಹಾಕುತ್ತಿರುವ ಚಿತ್ರ ಬರೆಸಲಾಗುತ್ತಿತ್ತು. ಒಮ್ಮೊಮ್ಮೆ ಗಾಂಧಿ ಕೋಲು ತೆಗೆದುಕೊಂಡು ಅಟ್ಟಿಸಿಕೊಂಡೂ ಹೋಗುತ್ತಿದ್ದರು. ಅದೇನೇ ಇದ್ದರೂ, ರೈತಸಂಘ ಅನುಸರಿಸುವುದು ಗಾಂಧಿಯವರ ಅಹಿಂಸಾ ಮಾರ್ಗದ ಹೋರಾಟ ಎಂದೇ ಹೇಳುತ್ತಿತ್ತು.

ಅಧಿಕಾರಿಗಳನ್ನು ಕೂಡಿ ಹಾಕುವುದು, ಊರೊಳಗೆ ಬಿಡದಂತೆ ತಡೆಯುವುದು ಇತ್ಯಾದಿಗಳು ರೈತಸಂಘದ ಹೋರಾಟದ ಭಾಗವಾಗಿತ್ತು. ಅಷ್ಟೇಕೆ ಕೆಂಟುಕಿ ಚಿಕನ್ ಅಂಗಡಿಗೆ ನುಗ್ಗಿ ಅದನ್ನು ಧ್ವಂಸಗೊಳಿಸಿದ್ದು, ಮೊನ್ಸಾಂಟೊ ಬೀಜ ಬಿತ್ತಿದ್ದ ಹೊಲಕ್ಕೆ ನುಗ್ಗಿ ನಾಶ ಮಾಡಿದ್ದು ಇತ್ಯಾದಿ ಸಾಂಕೇತಿಕ ಕ್ರಮಗಳನ್ನೂ ರೈತಸಂಘ ಕೈಗೊಂಡಿತ್ತು. ಆದರೆ, ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಮನುಷ್ಯರಿಗೆ ದೈಹಿಕ ಹಿಂಸೆ ಕೊಡುವ ಕೆಲಸವನ್ನು ರೈತಸಂಘ ಮಾಡುತ್ತಿರಲಿಲ್ಲ. ಆದರೆ ಆಸ್ತಿನಾಶ ಅಥವಾ ಕಾನೂನುಭಂಗವನ್ನು ಹಿಂಸೆಯೆಂದು ಬಗೆದಿರಲಿಲ್ಲ. ಹಾಗೆ ನೋಡಿದರೆ ಕಾಯ್ದೆ ಭಂಗವನ್ನು ಸ್ವತಃ ಗಾಂಧಿಯವರು ಹೋರಾಟದ ಒಂದು ವಿಧಾನವಾಗಿಯೂ ಬಳಸಿದ್ದರು.

ಗಾಂಧಿಯವರ ಹಿಂಸೆ ಅಥವಾ ಅಹಿಂಸೆಯ ಮಾನದಂಡಗಳೇ ಸರಿಯೆಂದೋ, ಅವನ್ನೇ ಸಾರ್ವತ್ರಿಕವಾಗಿ ಮತ್ತು ಸಾರ್ವಕಾಲಿಕವಾಗಿ ಅವುಗಳನ್ನು ಮಾನದಂಡಗಳನ್ನಾಗಿಟ್ಟುಕೊಳ್ಳಬೇಕೆಂದೋ ಅಲ್ಲ. ಆದರೆ ಹಿಂಸೆ ಅಥವಾ ಅಹಿಂಸೆಯ ಚರ್ಚೆ ಬಂದಾಗ ಈ ದೇಶದಲ್ಲಿ ಗಾಂಧಿಯವರ ಮಾರ್ಗವನ್ನು ಒಂದು ಮಾನದಂಡವಾಗಿ ಬಳಸಿರುವುದರಿಂದ ಇವನ್ನು ಉಲ್ಲೇಖಿಸಲಾಗಿದೆ.

ಬಹಳ ಮುಖ್ಯವಾಗಿ ಗಾಂಧಿಯವರ ಹಿಂಸೆ-ಅಹಿಂಸೆ ಚರ್ಚೆಯಲ್ಲಿ ಹಿಂಸೆಯ ವ್ಯಾಖ್ಯಾನವನ್ನು ಸೀಮಿತಗೊಳಿಸುವುದನ್ನು ಕೆಲವರು ವಿರೋಧಿಸುತ್ತಾರೆ. ಶ್ರೀಮಂತಿಕೆ-ಅಧಿಕಾರದ ಅಡಿಯಲ್ಲಿ ನಲುಗುವ ದುಡಿಯುವ ಸಮುದಾಯ, ಜಾತಿ ಶೋಷಣೆಯಿಂದ ನಲುಗುವ ಶೋಷಿತ ಜಾತಿಗಳು, ಗಂಡಾಳ್ವಿಕೆಯಲ್ಲಿ ಹಿಂಡಲ್ಪಡುವ ಮಹಿಳೆ ಇವರೆಲ್ಲರೂ ಸ್ಟ್ರಕ್ಚರಲ್ ಹಿಂಸೆಯಿಂದಲೇ ನೋವುಣ್ಣುವುದಿಲ್ಲವೇ? ಕೆಲವೊಮ್ಮೆ ಇಂತಹವರಿಗೆ ತಕ್ಷಣದಲ್ಲೇ ತಿರುಗೇಟು ನೀಡಬೇಕಾಗಿ ಬರುವ ಅನಿವಾರ್ಯತೆ ಇರುವುದಿಲ್ಲವೇ? ಅಂತಹ ಹೊತ್ತಿನಲ್ಲಿ ನೀವು ಅವರಿಗೆ ಅಹಿಂಸೆಯನ್ನು ಬೋಧಿಸುವುದೇ ಹಿಂಸೆಯಾಗುತ್ತದೆ ಎಂಬುದು ಹಿಂಸೆ-ಅಹಿಂಸೆಯ ಕುರಿತು ಗಾಂಧಿ ವಿಚಾರಧಾರೆಗಿರುವ ಪ್ರಮುಖ ತಕರಾರು.

ವಾಸ್ತವದಲ್ಲಿ ಅಂತಹ ಯಾವ ಹಿಂಸೆಯನ್ನೂ ಮಾಡದೇ 60 ದಿನಗಳಿಂದ ಅತ್ಯಂತ ಶುದ್ಧ ಗಾಂಧಿ ಮಾರ್ಗದಲ್ಲಿ ದೆಹಲಿಯ ಹೊರಗೆ ಸತ್ಯಾಗ್ರಹವನ್ನು ನಡೆಸಿದ ಧೀಮಂತ ರೈತ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಇಂದು ಮಾಡಲಾಯಿತು. ಲಕ್ಷಾಂತರ ಜನರು ನಾವು ಊಹಿಸಿಕೊಳ್ಳಲಾಗದ ಚಳಿಯಲ್ಲಿ, ಮನೆಯಿಂದ ದೂರ ಉಳಿದು, ಸಂಪಾದನೆಯಿಂದ ದೂರ ಉಳಿದು ಎರಡು ತಿಂಗಳು ಬೀದಿಯಲ್ಲಿ ಕಳೆದಿದ್ದು ಸತ್ಯಾಗ್ರಹದ ಭಾಗವಾಗಿ. ’ಸ್ವತಂತ್ರ ಭಾರತದಲ್ಲಿ ಪ್ರಜೆಗಳು ಹೀಗೆ ಮಾಡಬೇಕಾಗಿ ಬಂದಿದ್ದು ಪ್ರಭುತ್ವದ ಕ್ರೌರ್ಯದಿಂದಲ್ಲದೇ ಮತ್ತೇನು? ಇದರ ಬಗ್ಗೆ ದನಿಯೆತ್ತಿದ ಮಾತ್ರಕ್ಕೆ ರಾಜ್‌ದೀಪ್ ಸರದೇಸಾಯಿ, ಬರ್ಖಾದತ್‌ಗಳಿಗೆ ’ಆಕ್ರೋಶ ಭರಿತ’ ರೈತರು ಬ್ಯಾರಿಕೇಡ್‌ಗಳನ್ನು ಕಿತ್ತು ದೆಹಲಿಯ ಕಡೆಗೆ ಹೊರಟಿದ್ದು ಅಂತಹ ದೊಡ್ಡ ಸಮಸ್ಯೆಯಾಗಿ ಏಕೆ ಕಂಡಿತು? ತಮ್ಮ ತಮ್ಮ ಸುಖಾಸೀನ ಬದುಕಿನಿಂದ ಇದರ ಕುರಿತು ಸಲೀಸು ಕಾಮೆಂಟ್ ಮಾಡುವ ಧಾರ್ಷ್ಟ್ಯ ಎಲ್ಲಿಂದ ಬಂದಿತು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

PC : India Today

ಅರ್ನಾಬ್ ಗೋಸ್ವಾಮಿಯಂತಹ ಮನುಷ್ಯರೇ ಅಲ್ಲದ ಪತ್ರಕರ್ತ ವೇಷಧಾರಿಗಳು ಒಂದು ವೇಳೆ ಈ ವಿಚಾರದಲ್ಲಿ ಕೂಗಾಡಬಹುದು ಎಂಬ ಭಯ ಇರುವುದೇ ಆದಲ್ಲಿ, ಅದಕ್ಕೆ ಪ್ರತಿಯಾಗಿ ಆಡಬಹುದಾದ ಮಾತುಗಳು ಮೇಲೆ ಹೆಸರಿಸಿದ ಪತ್ರಕರ್ತರಲ್ಲಿ ಇರುವುದಿಲ್ಲ. ಏಕೆಂದರೆ ರೈತ ಕಾರ್ಮಿಕರೇ ಮೊದಲಾದ ಶೋಷಿತರು ದೀನರಾಗಿ ಪ್ರಭುತ್ವದ ಗುಂಡಿಗೆ ಎದೆಯೊಡ್ಡಿ ಮನಕರಗಿಸಬೇಕೇ ಹೊರತು, ಹಕ್ಕನ್ನು ಕೇಳುವುದು ಇವರಿಗೂ ಸಹನೆಯ ಸಂಗತಿಯಲ್ಲ.

ಹಾಗೆಯೇ ಶಶಿತರೂರ್‌ನಂತಹ ಒಬ್ಬ ’ಲಿಬರಲ್ ವ್ಯಕ್ತಿಗೆ, ಕೆಂಪು ಕೋಟೆಯ ಮುಂದಿನ ಧ್ವಜಸ್ತಂಭವೊಂದರಲ್ಲಿ ಬೇರೊಂದು ಧ್ವಜ ಹಾರಿದಾಕ್ಷಣ (ಅದನ್ನು ಹಾರಿಸಲು ಕಾರಣರಾದವರು ರೈತ ಚಳವಳಿಯ ಶೇ.99ರಷ್ಟು ಜನರನ್ನು ಪ್ರತಿನಿಧಿಸುವುದಿಲ್ಲ; ಅವರು ಸಂಚುಕೋರರೂ ಆಗಿರಬಹುದೆಂಬ ಅನುಮಾನಗಳು ಎದ್ದಿವೆ) ಕೂಡಲೇ ಖಂಡಿಸಬೇಕೆನಿಸುತ್ತದೆ. ದೆಹಲಿಯ ಸುತ್ತಮುತ್ತ ಎಂದೂ ಹಾರದಷ್ಟು ಸಂಖ್ಯೆಯ ಭಾರತದ ತ್ರಿವರ್ಣಧ್ವಜಗಳನ್ನು ಈ ರೈತರು ಕಟ್ಟಿಕೊಂಡು ಪರೇಡ್ ಹೊರಟಿದ್ದರು. ಇದನ್ನು ಬಿಟ್ಟರೆ ಆ ರೀತಿ ರಾಷ್ಟ್ರಧ್ವಜಗಳು ಕಂಡಿದ್ದು ಸಿಎಎ/ಎನ್‌ಆರ್‌ಸಿ ವಿರುದ್ಧದ ಆಂದೋಲನದಲ್ಲಿ! ಹೀಗಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರಧ್ವಜದ ಕುರಿತು ರೈತರಿಗೆ ತಿಳಿಸಿಕೊಡಲು ಹೋಗುವ ಆತುರ ಅವರದ್ದು. ಇಷ್ಟಕ್ಕೂ ದೇಶದ ಮರ್ಯಾದೆಯು ಬಾವುಟದಲ್ಲಿ ಇಲ್ಲ ಎಂಬುದು ಅರ್ಥವಾಗದಷ್ಟು ಮತಿಹೀನರೇ ಇವರು?

ಚಳವಳಿಯೊಂದನ್ನು ಕಟ್ಟುವುದು, ಸರ್ಕಾರದ ವಿರುದ್ಧ ನಿಲ್ಲುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಬಿಜೆಪಿಯಂತಹ ಪಕ್ಷದ ನೇತೃತ್ವದ, ಮೋದಿ-ಶಾರಂತಹ ಸರ್ವಾಧಿಕಾರಿಗಳ ನಾಯಕತ್ವದ ಎದುರು ಹೋರಾಟ ಕಟ್ಟುವುದು ಇನ್ನೂ ಕಷ್ಟ. ಮಾಧ್ಯಮಗಳು ಜನರ ದನಿಯಾಗದೇ ಆಳುವವರ ಬೇಟೆ ನಾಯಿಗಳಾದಾಗಂತೂ ಅಸಾಧ್ಯ. ಒಂದು ವೇಳೆ ಏನೋ ಒಂದು ದಿನದ ಹೋರಾಟ ಹೇಗೋ ಕಷ್ಟಪಟ್ಟು ಮಾಡಿ ಹೋಗಿಯೂ ಬಿಡಬಹುದು. ಆದರೆ ಲಕ್ಷಾಂತರ ಜನರನ್ನು ತಿಂಗಳುಗಟ್ಟಲೆ ಒಂದು ಕಡೆ ಇಟ್ಟುಕೊಂಡು ಚಳವಳಿ ಕಟ್ಟುವುದರ ಹಿಂದಿನ ಪರಿಶ್ರಮ ಮತ್ತು ಪ್ರಬುದ್ಧತೆಯನ್ನು ಕೇವಲ ವಿಶ್ಲೇಷಣೆಯ ಮುಖಾಂತರ ಅರಿತುಕೊಳ್ಳುವುದು ಅಸಾಧ್ಯ. ಅದು ಪ್ರತಿನಿತ್ಯ ಹೊಂದಿಸಬೇಕಾದ ರೊಟ್ಟಿ ಮತ್ತು ಇತರ ವ್ಯವಸ್ಥೆಗಳ ವಿಚಾರವಷ್ಟೇ ಅಲ್ಲ; ನೂರೆಂಟು ಬಗೆಯ ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳನ್ನು ನಿಭಾಯಿಸಬೇಕಾದ ಸವಾಲು. ಅದರಲ್ಲೂ ಇಲ್ಲಿ ಒಂದೇ ಸಂಘಟನೆಯಿಲ್ಲ; ಇರುವ ಇಡೀ ಜನಸಮೂಹವು ರೆಜಿಮೆಂಟೇಷನ್‌ಗೆ ಒಳಪಟ್ಟ ಸೈನಿಕರಲ್ಲ. ಅದರ ನೈತಿಕ ಶಕ್ತಿ ಕುಗ್ಗದಂತೆ, ವಿವಿಧ ಬಣ ಹಾಗೂ ಬಣ್ಣಗಳ ನಾಯಕರನ್ನೂ ಸಂಭಾಳಿಸಿಕೊಂಡು ಹೋಗುವುದು ಏನೋ ಒಂದು ಮಟ್ಟಿಗೆ ಸಾಧ್ಯವಾದರೆ ಅದೊಂದು ಪವಾಡ.

ಅಂತಹ ಪವಾಡವನ್ನು ಸಂಯುಕ್ತ ಕಿಸಾನ್ ಮೋರ್ಚಾದವರು ಮಾಡಿದ್ದಾರೆ. ಅದರ ಪ್ರಮುಖ ನೇತಾರರೊಬ್ಬರು ಹೇಳಿದಂತೆ, ’ವಿಚಾರಗಳ ಕುರಿತು ದಿನವಿಡೀ ಕಿತ್ತಾಡುತ್ತೇವೆ, ಅಂತಿಮವಾಗಿ ಸರ್ವಸಮ್ಮತ ತೀರ್ಮಾನಕ್ಕೆ ಬರುತ್ತೇವೆ’. ಇಂತಹ ಪವಾಡವನ್ನು ಸಾಧ್ಯವಾಗಿಸಿದ್ದು ನಾಯಕರು ಮಾತ್ರವಲ್ಲಾ, ಲಕ್ಷ ಲಕ್ಷ ಸಂಖ್ಯೆಯ ಸಾಮಾನ್ಯ ಜನರೂ ಸಹಾ. ಇಂತಹದೊಂದು ಅಪೂರ್ವ, ಧೀಮಂತ ಚಳವಳಿಯ ಕುರಿತು ’ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು’ ಎಂಬ ತೀರ್ಪುಗಳನ್ನು ವಿವಿಧ ಬಣ್ಣ, ಶ್ರೇಣಿಯ ಜನರು ನೀಡುವುದು ರೇಜಿಗೆ ಹುಟ್ಟಿಸುತ್ತದೆ. ಮಲದಲ್ಲೇ ಮುಳುಗೇಳುವ ತುತ್ತೂರಿ ಮಾಧ್ಯಮಗಳು ಮತ್ತು ಗುಲಾಮೀ ಮನಸ್ಥಿತಿಯ ಭಕ್ತರಿಂದ ಅಂತಹ ನಿರೀಕ್ಷೆಯಿಲ್ಲವೇ ಇಲ್ಲ. ಆದರೆ ಚಳವಳಿಯ ಕುರಿತಂತೆ ಕಾಳಜಿ ಮತ್ತು ಸದಾಶಯವುಳ್ಳವರೂ ಈ ಪರಿ ಜಡ್ಜ್‌ಮೆಂಟಲ್ ಆಗಿರುವುದು ಒಳ್ಳೆಯ ಲಕ್ಷಣವಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ವೇಳೆ ಚಳವಳಿನಿರತ ರೈತರೇ ಅರಾಜಕವಾಗಿ ಬೀದಿಗಿಳಿದಿದ್ದರೂ, ಈ ಸಂದರ್ಭದ ಹಿನ್ನೆಲೆಯನ್ನರಿತುಕೊಂಡು ಅದಕ್ಕೆ ಕಾರಣವಾದ ಸರ್ಕಾರವನ್ನು ಗುರಿ ಮಾಡಬೇಕಾದ್ದು ಸರಿಯಾದದ್ದು. ಸಿಎಎ ವಿರೋಧಿ ಹೋರಾಟದಲ್ಲಿ ಹೇಗೋ ಹಾಗೆ, ಇಲ್ಲೂ ಸಹಾ ಅಪಾರವಾದ ತಾಳ್ಮೆ, ಸಹನೆ ಹಾಗೂ ಪ್ರಬುದ್ಧತೆಯನ್ನು ರೈತ ಚಳವಳಿಯು ಪ್ರದರ್ಶಿಸಿದೆ. ಮಿಲಿಟೆಂಟ್ ಚಳವಳಿಯ ಹಿನ್ನೆಲೆಯುಳ್ಳ ಪಂಜಾಬಿನ ಜನರು ಈ ವಿಚಾರದಲ್ಲಿ ತೋರಿರುವ ಸಂಯಮವೇ ಅನನ್ಯವಾದದ್ದು. ಅಂತೆಯೇ ಸರ್ಕಾರದ ಮನುಷ್ಯ ವಿರೋಧಿತನವೂ ಎದ್ದು ತೋರುವಂಥಾದ್ದೇ ಆಗಿತ್ತು.

ಒಂದೇ ಮಾತಲ್ಲಿ ಹೇಳುವುದಾದರೆ ಸರ್ಕಾರವು ಕೃಷಿ ಕಾಯ್ದೆಗಳನ್ನು ತರುವುದರ ಮುಖಾಂತರವೇ ಹಿಂಸೆ ಮತ್ತು ಅರಾಜಕತೆಯನ್ನು ಹುಟ್ಟಿಹಾಕಿತ್ತು. ರೈತರು ಅದನ್ನು ತಾಳ್ಮೆ ಮತ್ತು ವಿವೇಕದಿಂದ ಎದುರಿಸಿದರು. ಹೆಜ್ಜೆ ಹೆಜ್ಜೆಗೂ ಸರ್ಕಾರವು ಹಿಂಸೆಯನ್ನು ಹೆಚ್ಚಿಸುತ್ತಾ ಹೋಗಿತ್ತು. ರೈತರು ತಮ್ಮ ವಿಶಿಷ್ಟ ಪ್ರಬುದ್ಧತೆಯಿಂದ ಅದನ್ನು ಎದುರುಗೊಂಡರು. ಉಳಿದಂತೆ ಆಗಬಹುದಾದ ಸಣ್ಣ ಪುಟ್ಟ ಅವಘಡಗಳೆಲ್ಲಾ ಕೇವಲ ಕೊಲ್ಯಾಟರೆಲ್ ಡ್ಯಾಮೇಜ್. ಅದನ್ನೇ ಧ್ಯಾನಿಸದೇ, ಒಟ್ಟಾರೆ ಒಳಿತಿನ ಕಡೆಗೆ ನಡೆಯುವುದಾದರೆ, ನಮ್ಮ ಕೈಲಾದಷ್ಟು ಜೊತೆಗೂಡುವ ಕೆಲಸ ಮಾಡುವುದೇ ಇಂದು ಎಲ್ಲಾ ಪ್ರಜಾತಂತ್ರವಾದಿಗಳ ಕರ್ತವ್ಯವಾಗಿದೆ.


ಇದನ್ನೂ ಓದಿ: ಸಿಖ್ ಧ್ವಜ ಹಾರಿಸಿದ ಗುಂಪನ್ನು ಕೆಂಪುಕೋಟೆಯವರೆಗೆ ಹೋಗಲು ಪೊಲೀಸರು ಬಿಟ್ಟಿದ್ದೇಕೆ? – ರೈತ ಮುಖಂಡರ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಸೋರಿಕೆಯಾದ ಸಂಪೂರ್ಣ ಆಡಿಯೋ ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪಾತ್ರವನ್ನು ಸೂಚಿಸಿರುವ ಅರ್ಜಿಯಲ್ಲಿ ಲಭ್ಯವಿರುವ ಸಂಪೂರ್ಣ ಸೋರಿಕೆಯಾದ ಆಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ ಎಂದು...

ಎಸ್‌ಐಆರ್‌ ಭಯಕ್ಕೆ ಮತ್ತೊಂದು ಬಲಿ: ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ರಣಘಾಟ್‌ನ...

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ...

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...

‘ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’: ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನದ ಬಗ್ಗೆ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್‌ನ "ಮತ ಚೋರಿ" ಅಭಿಯಾನದಿಂದ ದೂರ ಉಳಿದಿದ್ದಾರೆ, ಈ ವಿಷಯವು ಒಟ್ಟಾರೆಯಾಗಿ ವಿರೋಧ ಪಕ್ಷದ ಇಂಡಿಯಾ ಬಣದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ...

ಇಂಡಿಗೋ ವಿಮಾನ ರದ್ದತಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನೂರಾರು ಇಂಡಿಗೋ ವಿಮಾನಗಳ ರದ್ದತಿಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿದಾರರು ತಮ್ಮ ದೂರುಗಳೊಂದಿಗೆ ದೆಹಲಿ ಹೈಕೋರ್ಟ್ ಅನ್ನು...

ಹಣ ಅಕ್ರಮ ವರ್ಗಾವಣೆ ಪ್ರಕರಣ : ಪತ್ರಕರ್ತ ಮಹೇಶ್ ಲಾಂಗಾಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ವಂಚನೆ ಆರೋಪದ ಮೇಲೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾ ಅವರಿಗೆ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.15) ಮಧ್ಯಂತರ ಜಾಮೀನು ನೀಡಿದೆ. ಜಿಎಸ್‌ಟಿ ವಂಚನೆ...

‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’: ಸಿಪಿಎಂ ನಾಯಕನ ಅಸೂಕ್ಷ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಸಯೀದ್ ಅಲಿ ಮಜೀದ್, ತೆನ್ನೆಲಾ ಪಂಚಾಯತ್ ವಾರ್ಡ್ ಅನ್ನು...

ಅಖ್ಲಾಕ್ ಹತ್ಯೆ ಪ್ರಕರಣ ಹಿಂತೆಗೆದುಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆ ಹಳಿತಪ್ಪಿಸುವ ಪ್ರಯತ್ನ: ಬೃಂದಾ ಕಾರಟ್

ರಾಜ್ಯಪಾಲರ ಅನುಮತಿಯೊಂದಿಗೆ ಮೊಹಮ್ಮದ್ ಅಖ್ಲಾಕ್ ಅವರ ಕೊಲೆ ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಖಂಡಿಸಿ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್...

ಮತ್ತೆ ಮುನ್ನೆಲೆಗೆ ಬಂದ ‘Avalkoppam’: ದಿಲೀಪ್ ಖುಲಾಸೆ ಬಳಿಕ ಕೇರಳದಾದ್ಯಂತ ಪ್ರತಿಭಟನೆ

ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ...