Homeಎಲೆಮರೆಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ

- Advertisement -
- Advertisement -

ಖರೇ ಹೇಳಬೇಕಂದರ ಇನಫ್ಲೇಷನ್ ಅಂದರೆ ಬರೇ ಉಬ್ಬರ ಅಥವಾ ಗಾಳಿ ಹಾಕಿಯೋ, ಮತ್ಯಾವುದೋ ರೀತಿಯಿಂದ ಉಬ್ಬಿಸೋದು. ಅದರ ಅರ್ಥ ವ್ಯವಸ್ಥಾದ ಬಗ್ಗೆ ಮಾತಾಡೋ ಮುಂದ ಅದು ಹಣದುಬ್ಬರ ಅಂತ ಅರ್ಥ.

ಅಂದರ ಏನು? ಸರಳ ಹೇಳಬೇಕಂದರ ಅದು ನಮ್ಮ ರೊಕ್ಕಕ್ಕ ಬೆಲೆ ಕಮ್ಮಿ ಆಗೇದ, ನಮ್ಮ ರೂಪಾಯಿಗೆ ಮೊದಲಿನಷ್ಟು ಸಾಮಾನು ಬರ್ತಾ ಇಲ್ಲ. ಈಗ ಕಮ್ಮಿ ಆಗೇದ ಅಂತ ಅರ್ಥ. ನಮ್ಮ ಮನ್ಯಾಗ ಅಜ್ಜಿಗಳು ಹೇಳತಿರತಾರಲ್ಲ, ನಮ್ಮ ಕಾಲ ಸೋವಿ ಕಾಲ, ಆವಾಗ ಒಂದು ಚೀಲ ಜೋಳ ಕೊಟ್ಟರ ಒಂದು ತೊಲಿ ಬಂಗಾರ ಬರ್ತಿತ್ತು ಅಂತ, ಅವರು ತಮಗ ಅರಿವಿರಲಾರದಂಗ ಹಣದ ಉಬ್ಬರದ ಬಗ್ಗೆ ಮಾತಾಡತಿರತಾರ. ಅಂದರ ಅವತ್ತಿಗೆ ರೂಪಾಯಿಗೆ ಕಿಮ್ಮತ್ತು ಇತ್ತು. ಈಗ ಇಲ್ಲ ಅಂತ.

ಖರೇ ಹೇಳಬೇಕಂದರ ಆ ಕಾಲ ಸೋವಿ ಕಾಲ ಅಲ್ಲ. ಅದು ಗಟ್ಟಿ ಕಾಲ. ಈಗಿನ ಕಾಲನೇ ಸೋವಿ.

ಈ ವಾರದ ರಿಸರ್ವ್ ಬ್ಯಾಂಕಿನ ವರದಿ ಪ್ರಕಾರ ಭಾರತದ ಉಬ್ಬರದ ಪ್ರಮಾಣ 7.35 ಆಗೇದಂತ. ಹಂಗಂದರ ಏನು?

ಅಂದರ- ಹಿಂದಿನ ಯಾವುದೋ ಒಂದು ವರ್ಷವನ್ನು ಮೂಲ ಅಳತೆಯ ವರ್ಷ ಅಂತ ಹಿಡಕೊಂಡರ ಆ ಲೆಕ್ಕದ ಮ್ಯಾಲೆ ಈ ವರ್ಷ ಕೆಲವು ನಿರ್ದಿಷ್ಟ ಸಾಮಾನುಗಳ ಬೆಲೆ ಎಷ್ಟು ಹೆಚ್ಚಾಗೇದ ಅಂತ.

ಪಂತ ಪ್ರಧಾನ ನರೇಂದ್ರ ಮೋದಿ ಅವರ ಸರಕಾರ ಬರೋ ಮುಂಚೆ ಇದು 1999 ಆಗಿತ್ತು. ಈಗ ಅದು ಬದಲಾಗಿ ಬದಲಾಗಿ ಈಗ 2017- 18 ಆಗೇದ. ಅಂದರ ಒಂದು ವರ್ಷದಾಗ ವಸ್ತುಗಳ ಬೆಲೆ 7.35 ಶೇಕಡಾ ಆಗೇದ ಅಂತ ಅರ್ಥ.

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ.

ಹಂಗಾರ 10 ವರ್ಷದ ಉಬ್ಬರದ ಪ್ರಮಾಣ ಎಷ್ಟು ಅಂತ ನೀವು ಕೇಳಿದರ ಶಾಕ್ ಆಗ್ತೀರಿ. ಅದು ಸುಮಾರು 105 ಶೇ. ಅಂದರ ಹತ್ತು ವರ್ಷದ ಹಿಂದ ನೂರು ರೂಪಾಯಿಗೆ ಇದ್ದ ಬೆಲೆ ಈಗ 205 ರೂಪಾಯಿಗೆ.

ಹಂಗಂತ ನಿರ್ಮಲಾ ಸೀತಾರಾಮನ್ ಅವರ ಕಾಲಕ್ಕೆ ಮಾತ್ರ ಆಪತ್ಕಾಲ ಅಂತ ಅಲ್ಲ. ಹಿಂದಿನವರೂ ಹಿಂಗ ಇದ್ದರು. ನಮ್ಮ ದೇಶದಾಗ ಶೇಕಡಾ 10 ಕ್ಕಿಂತ ಹೆಚ್ಚು ಉಬ್ಬರ ಇದ್ದ ವರ್ಷಗಳು- 1983, 1990, 1996, 1998, 2009 ಹಾಗೂ 2012. ಮತ್ತು ಅತ್ಯಂತ ಹೆಚ್ಚು ಉಬ್ಬರ ಇದ್ದ ವರ್ಷಗಳು 1974 – (25 ಶೇ). 1973 -(21. ಶೇ).

ಈ ವರ್ಷ ಅಮೆರಿಕೆ ಉಬ್ಬರ ಶೇ. 2.1 ಇದ್ದರ ಚೈನಾದ್ದು 2 ಅದ. ಜಪಾನಿನದು 0.9 ಅದ. ಅತ್ಯಂತ ಹೆಚ್ಚು ಇರೋದು ವಿಶ್ವ ಸುಂದರಿಗಳ ನಾಡಾದ ವೆನೆಜೂವೆಲಾದಾಗ ಶೇ. 255 ಅದ. ನಂತರ ಸ್ಥಾನ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾದ ದೇಶಗಳದು. ನಾವು ಸದ್ಯ ಈ ಬಡ ದೇಶಗಳ ಜೊತೆ ಸ್ಪರ್ಧೆ ಮಾಡಲಿಕ್ಕೆ ಹತ್ತೇವಿ.

ಇದರ ದುಷ್ಪರಿಣಾಮ ಏನಪಾ ಅಂದರ ರೂಪಾಯಿಯ ಬೆಲೆ ಕಮ್ಮಿ ಆದಂತೆಲ್ಲಾ ಜನಸಾಮಾನ್ಯರ ಖರೀದಿಸುವ ಶಕ್ತಿ ಕಮ್ಮಿ ಆಗತದ. ಇದು ದೇಶದ ಆರ್ಥಿಕ ವ್ಯವಸ್ಥೆಯ ಮ್ಯಾಲೆ ಕೆಟ್ಟ ಪರಿಣಾಮ ಬೀರತದ.

ಅದು ಹೆಂಗಂತ ಹೇಳತೇನಿ. ಇಡೀ ಜಗತ್ತಿನ್ಯಾಗ ಮೂರು ರೀತಿ ಜನ ಇರತಾರ. ಉತ್ಪಾದಕರು, ಮಾರಾಟಗಾರರು ಹಾಗೂ ಬಳಕೆದಾರರು. ಇನ್ನು ಉತ್ಪಾದಕರು ಅಂದರ ರೈತರ ಹಂಗ ಆಹಾರ ಉತ್ಪಾದಕರು ಇರಬಹುದು, ಯಂತ್ರ ತಯಾರಿಸೋ ಉದ್ದಿಮೆದಾರರು ಇರಬಹುದು. ಇವೆರಡೂ ಇರದ ಸೇವೆ ನೀಡುವವರು ಇರಬಹುದು. ನಮ್ಮ ಮನಿಗೆ ಬರೋ ನೀರು ಸರಕು ಅಂತ ಆದರ, ಆ ನೀರು ಬಿಡೋ ನೀರುಗಂಟಿ ಸೇವೆ ಪೂರೈಕೆದಾರ. ಇವರ ಪ್ರಯತ್ನಕ್ಕ ನಾವು ಹಣದೊಳಗ ಬೆಲೆ ಕಟ್ಟತೇವಿ. ಅದು ಅವರ ವರಮಾನ. ಅದನ್ನು ಅವರು ತಮಗ ಬೇಕಾದ್ದನ್ನ ತೊಗೊಳ್ಳಲಿಕ್ಕೆ ಬಳಸಿಕೊಳ್ಳತಾರ.

ಇನ್ನು ವ್ಯಾಪಾರಸ್ಥರು ಏನನ್ನೂ ಉತ್ಪಾದಿಸದಿದ್ದರೂ ಎಲ್ಲಾನೂ ಮಾರಾಟ ಮಾಡತಾರ. ಅವರಿಗೆ ತಮ್ಮ ಬಂಡವಾಳ ಬಿಟ್ಟು ಮಿಕ್ಕೊ ಹಣನ ಲಾಭ. ಅದನ್ನು ಬಳಸಿ ಅವರು ಸರಕನ್ನೋ, ಸೇವೆಯನ್ನೋ ಖರೀದಿ ಮಾಡತಾರ. ಕೆಲವರ ಸೇವೆ ಸೋವಿಯಾಗಿ, ಇನ್ನು ಕೆಲವರದು ತುಟ್ಟಿಯಾಗಿ ಇರತದ. ಇದ ಸಮಸ್ಯೆ.

ಹಂಗಂತ ಇದು ಉಳ್ಳವರಿಗೆ ಒಳ್ಳೆಯದು. ಯಾಕಂದರ ಅವರ ಹತ್ತರ ಆಸ್ತಿ ಇರತದ. ಉಳ್ಳವರಿಗೆ ಇರಂಗಿಲ್ಲ. ಅವರ ಹತ್ತಿರ ಇರೋ ರೂಪಾಯಿಯ ಬೆಲೆ ಸವಿಸಿಗೋತ ಹೋಗತದ. ಆಸ್ತಿ ಸವಿಯಂಗಿಲ್ಲ. ಅದು ಯಾವಾಗಲೂ ಸವಿ -ಸವಿಯಾಗೇ ಇರತದ.

ಉಬ್ಬರದ ಕಾರಣಗಳು ಹಲವು ಅದರಾಗ ಬೇಡಿಕೆ ಎಳೆಯುವಿಕೆ, ಬೆಲೆ ತಳ್ಳುವಿಕೆ ಹಾಗೂ ಸಾಂಸ್ಥಿಕ ಅಂತ ಮೂರು ಪ್ರಮುಖ. ಆ ಅರೇಬಿಯಾದ ಮಹಾರಾಜರೆಲ್ಲ ವರ್ಷಕ್ಕೊಮ್ಮೆ ಸಭೆ ಸೇರಿ ತಮ್ಮ ಪೆಟ್ರೊಲ್ – ಡೀಸಲ್ ಉತ್ಪನ್ನ ಕಮ್ಮಿ ಮಾಡಿ ಅದರ ಬೆಲೆ ಜಾಸ್ತಿ ಮಾಡತಾರಲ್ಲ, ಅದು ಬೇಡಿಕೆ ಎಳೆಯುವಿಕೆ ಉದಾಹರಣೆ. ಇನ್ನೊಂದು ಉದಾಹರಣೆ ಅಂದರ ಇಂಟರ ನೆಟ್ಟಿನ್ಯಾಗ ಹೊಸಾ ಮೊಬೈಲ್ ಫೋನ್ ಮಾರಾಟಕ್ಕ ಬಂದಾಗ ಹತ್ತು ಸೆಕೆಂಡಿನ್ಯಾಗ ಖಾಲಿ ಆಗಿ ಮುಂದಿನ ಬಾರಿ ಅದರ ಬೆಲೆ ಹೆಚ್ಚಾಗತದಲ್ಲಾ ಅದು.

ಬೆಲೆ ತಳ್ಳುವಿಕೆ ಅಂದರ ಯಾವುದೇ ವಸ್ತು ಅಥವಾ ಸೇವೆಯ ಬೇಡಿಕೆ ಕಮ್ಮಿ ಇದ್ದರೂ ಬೆಲೆ ಯಾವುದೇ ಕಾರಣಕ್ಕೆ ಹೆಚ್ಚಾಗುವುದು. ಕುಶಲಿ ವೈದ್ಯರೊಬ್ಬರು ಹೃದಯ ಚಿಕಿತ್ಸೆಗೆ ಜಾಸ್ತಿ ಹಣ ತೊಗೊಳ್ಳೋದು, ಯಾರೂ ಕೊಳ್ಳದೇ ಇದ್ದರೂ ಪ್ಲಾಟಿನಂ ಉಂಗುರದ ಬೆಲೆ ಹೆಚ್ಚಾಗೋದು, ಇದಕ್ಕೆ ಉದಾಹರಣೆ.

ಇನ್ನು ಸಾಂಸ್ಥಿಕ ಅಂದರ, ಒಂದು ದೇಶ ಅಭಿವೃದ್ಧಿ ಹೊಂದಿದಂತೆ ಅಲ್ಲಿನ ಕುಶಲ ಕೂಲಿ ಹಾಗೂ ಕೌಶಲ್ಯ ರಹಿತ ಕೂಲಿ ಹೆಚ್ಚಾಗುವುದು. ಇದನ್ನು ಅರ್ಥ ಶಾಸ್ತ್ರಜ್ಞರು ಆರೋಗ್ಯವಂತ ಉಬ್ಬರ ಅಂತ ಕರೀತಾರ. ಉದಾಹರಣೆಗೆ ಭಾರತದಾಗ ಮನೆ ಕೆಲಸ ಮಾಡೋರಿಗೆ ತಿಂಗಳಿಗೆ ಐನೂರೋ , ಸಾವಿರನೋ ಕೊಟ್ಟರೆ ಅದೇ ಕೆಲಸಕ್ಕೆ ಅಮೆರಿಕಾದಾಗ ತಾಸಿಗೆ ಏಳು ನೂರು ರೂಪಾಯಿ ಕೊಡೋದು. ಉಳಿದ ಎರಡೂ ಥರದ ಉಬ್ಬರಗಳು ಆರೋಗ್ಯಕರ ಅಲ್ಲ.

ಜಗತ್ತಿನಾದ್ಯಂತ ತಜ್ಞರು ಶಿಫಾರಸು ಮಾಡುವ ಉಬ್ಬರದ ಪ್ರಮಾಣ ಶೇ. 2- 4. ಇದರಿಂದ ಜನ ಉಳಿಕೆ ಮಾಡೋಕಿಂತಾ ಖರೀದಿ ಮಾಡಲಿಕ್ಕೆ ಆಸಕ್ತಿ ತೋರಸತಾರ. ಆದರ ಭಾರತದ ಅಭಿವೃದ್ಧಿ ದರ ಶೇ. 5 ಇದ್ದು, ಉಬ್ಬರ 7.35 ಇದ್ದರ ಅದರ ಅರ್ಥ ದೇಶ ಹಿಮ್ಮುಖವಾಗಿ ನಡದದ ಅಂತ. ಇದು ಒಳ್ಳೆಯದಲ್ಲ ಅಂತ ಕೆಲವರು ಹೇಳತಾರ.

ಒಂದು ದೇಶದ ಕೇಂದ್ರ ಬ್ಯಾಂಕು ಸರಕಾರ ಇ‌ಷ್ಟೇ ನೋಟು ಪ್ರಿಂಟು ಮಾಡಬೇಕು. ಇದಕ್ಕಿಂತ ಹೆಚ್ಚು ಮಾಡಿದರ ಅದು ಉಬ್ಬರಕ್ಕ ಕಾರಣವಾಗಿ ರೂಪಾಯಿಯ ಬೆಲೆ ಕಮ್ಮಿ ಆಗತದ ಅಂತ ಸಲಹೆ ಕೊಡತದ. ಬಡವರ ಖರೀದಿ ಶಕ್ತಿ ಹೆಚ್ಚುವಂತಹಾ ಇನ್ನೂ ಕೆಲವು ಕ್ರಮಗಳನ್ನೂ ಕೈಕೊಳ್ಳಬೇಕು.

ಆದರ ಈಗ ನಮ್ಮ ದೇಶದಾಗ ಸರಕಾರಕ್ಕ ಸಲಹೆ ಕೊಡೋವಷ್ಟು ಧೈರ್ಯವಂತರು ಯಾರಿಲ್ಲ. ಅವರು ಕೊಡೋ ಸ್ವಲ್ಪ ಸಲಹೆಯನ್ನೂ ಕೇಳೋ ಕಿವಿಗಳೂ ಇದ್ದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...