Homeಚಳವಳಿದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!

ದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!

- Advertisement -
- Advertisement -

ಕೇಂದ್ರ ಸರ್ಕಾರದ ಕರಾಳ ಕೃಷಿ ನೀತಿಗಳ ವಿರುದ್ದ ದೇಶದಾದ್ಯಂತ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟದಲ್ಲಿ ನೂರಾರು ಮಹಿಳಾ ರೈತರು ಕೂಡಾ ಭಾಗವಹಿಸಿದ್ದಾರೆ. ಹೋರಾಟವು ಐದನೇ ದಿನಕ್ಕೆ ಕಾಲಿಟ್ಟಿದ್ದು ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ನರೆದಿದ್ದು ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ತಮ್ಮ ಆಹಾರವನ್ನು ತಯಾರಿ ಮಾಡಿ ಅದನ್ನು ಇತರರಿಗೂ ಹಂಚುವ ಮೂಲಕ ಮಹಿಳೆಯರು ಈ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಪಟಿಯಾಲ ಮೂಲದ 70 ವರ್ಷದ ಮಹಿಳೆ ಗುರುದೇವ್ ಕೌರ್ ಕಳೆದ ಮೂರು ದಿನಗಳಿಂದ ದೆಹಲಿ ಸಿಂಗೂ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. “ನನ್ನ ಆರೋಗ್ಯದ ಕಾಳಜಿ ವಹಿಸಲು ಕುಟುಂಬ ಸದಸ್ಯರಿಂದ ಪ್ರತಿ ಎರಡು ಗಂಟೆಗಳಿಗೊಮ್ಮೆ ಕರೆ ಬರುತ್ತದೆ. ಪಂಜಾಬ್‌ನಲ್ಲಿ ಕಳೆದ ಎರಡು ತಿಂಗಳಿನಿಂದ ನಾವು ಪ್ರತಿದಿನ ನಮ್ಮ ಕ್ರಿಯಾ ಯೋಜನೆ ಕುರಿತು ಸಭೆಯಲ್ಲಿ ಭಾಗವಹಿಸಿದ್ದೇವೆ. ನಮ್ಮ ಕೊನೆಯ ಉಸಿರಾಟದವರೆಗೂ ನಾವು ಆಂದೋಲನವನ್ನು ಬೆಂಬಲಿಸಲು ಸಿದ್ಧರಿದ್ದೇವೆ” ಎಂದು ಅವರು ಹೇಳಿದ್ದಾರೆ.

 

“ನನಗೆ ತುಂಬಾ ವಯಸ್ಸಾದ ಕಾರಣ ನನ್ನ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ನಾನು ಒಬ್ಬಂಟಿಯಾಗಿಲ್ಲ. ಕಾರಣ ನನ್ನ ಬಗ್ಗೆ ಕಾಳಜಿ ವಹಿಸಲು ಇಲ್ಲಿ ನೂರಾರು ಮಹಿಳೆಯರು ಇದ್ದಾರೆ ಮತ್ತು ನಾವು ಪರಸ್ಪರ ಸಹಕಾರದಿಂದ ಇದ್ದೇವೆ. ನಮ್ಮ ದೈನಂದಿನ ಔಷಧಿಗಳು ಮತ್ತು ಇತರ ಅವಶ್ಯಕತೆಗಳನ್ನು ನಮ್ಮೊಂದಿಗೆ ತಂದಿದ್ದೇವೆ ” ಎಂದು ಅವರು ಹೇಳಿದ್ದಾರೆ.

ಮತ್ತೊಬ್ಬ ಪ್ರತಿಭಟನಾಕಾರರಾದ 50 ವರ್ಷದ ಚರಣಜೀತ್ ಕೌರ್ ಅವರು ಹೇಳುವಂತೆ, “ತಮ್ಮ ಟ್ರಾಕ್ಟರ್ ಮುಖ್ಯ ಪ್ರತಿಭಟನಾ ಸ್ಥಳದಿಂದ ಕನಿಷ್ಠ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಮಧ್ಯಾಹ್ನ ನಮ್ಮ ರೈತ ನಾಯಕರು ಭಾಷಣಗಳನ್ನು ಮಾಡುವ ಸ್ಥಳಕ್ಕೆ ಹೋಗಿ ನಾವು ಕುಳಿತುಕೊಳ್ಳುತ್ತೇವೆ. ಕೃಷಿ ಕಾನೂನುಗಳಿಗೆ ವಿರುದ್ಧವಾಗಿ ಘೋಷಣೆಗಳನ್ನು ಕೂಗುತ್ತೇವೆ. ಸಂಜೆಯ ಹೊತ್ತಿಗೆ, ನಾವು ನಮ್ಮ ಟ್ರಾಕ್ಟರ್ ಟ್ರಾಲಿಗಳಿಗೆ ಹಿಂತಿರುಗುತ್ತೇವೆ, ಅದು ಈಗ ನಮ್ಮ ಮನೆಯಾಗಿದೆ” ಎಂದು ಹೇಳಿದ್ದಾರೆ.

“ನಾವು ಪಡಿತರವನ್ನು ಹೇರಳವಾಗಿ ತಂದಿದ್ದೇವೆ. ನಮಗೆ 5-6 ತಿಂಗಳುಗಳ ಕಾಲ ಉಳಿಯಲು ಆಹಾರವಿದೆ. ನಾವು ದೆಹಲಿಗೆ ತೆರಳಲು ನಿರ್ಧರಿಸಿದಾಗಲೆ ಪ್ರತಿಯೊಬ್ಬರೂ ವಿಭಿನ್ನ ವಸ್ತುಗಳನ್ನು ನೀಡಿದ್ದಾರೆ. ನಮ್ಮ ಬೇಡಿಕೆಗಳು ಈಡೇರಿದಾಗ ಮಾತ್ರ ಮರಳುತ್ತೇವೆ” ಎಂದು ಪಟಿಯಾಲಕ್ಕೆ ಹತ್ತಿರವಿರುವ ಫತೇಘಡ್‌ನ ಇನ್ನೊಬ್ಬ ರೈತ ಮಹಿಳೆ 62 ವರ್ಷದ ಬಾಲ್ ದೇವ್ ಕೌರ್ ಹೇಳಿದ್ದಾರೆ.

ಲಕ್ಷಾಂತರ ರೈತರು ದೆಹಲಿಯ ಸಿಂಗು ಗಡಿಯನ್ನು ತಲುಪಿ ಶುಕ್ರವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ಆದರೆ  ರಾಜಧಾನಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ದೆಹಲಿ ಪೊಲೀಸರು ಬುರಾರಿಯಲ್ಲಿರುವ ಸಂತ ನಿರಂಕರಿ ಮೈದಾನವನ್ನು ರೈತರಿಗೆ ತಮ್ಮ ಆಂದೋಲನವನ್ನು ಮುಂದುವರೆಸಲು ಕೇಳಿಕೊಂಡಿದ್ದರಾದರೂ ರೈತರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿದಿನ ಹೊಸ ಸುಳ್ಳು, ಪ್ರತಿ ಗಂಟೆಗೆ ದ್ವೇಷ ಬಿತ್ತುವ ಮೋದಿ ಬಗ್ಗೆ ಚು.ಆಯೋಗ ಮೌನವಾಗಿದೆ:...

0
ರಾಜ್ಯಗಳ ನಡುವೆ ಘರ್ಷಣೆಯನ್ನು ಉಂಟುಮಾಡಲು ಪ್ರಧಾನಿ ನರೇಂದ್ರ ಮೋದಿ ಕೆಳಮಟ್ಟದ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಪ್ರಧಾನಿಯವರ ಬೇಜವಾಬ್ದಾರಿ...