Homeಚಳವಳಿಸಾಮಾಜಿಕ ಹೋರಾಟಗಾರ ಬಾಬಾ ಅಮ್ಟೆ ಮೊಮ್ಮಗಳು ಶೀತಲ್ ಅಮ್ಟೆ ಅಸಹಜ ಸಾವು

ಸಾಮಾಜಿಕ ಹೋರಾಟಗಾರ ಬಾಬಾ ಅಮ್ಟೆ ಮೊಮ್ಮಗಳು ಶೀತಲ್ ಅಮ್ಟೆ ಅಸಹಜ ಸಾವು

ಕಳೆದ ಒಂದು ವಾರದ ಹಿಂದೆ ಶೀತಲ್, ಎನ್‌ಜಿಒದಲ್ಲಿನ ಅಕ್ರಮಗಳ ಬಗ್ಗೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು.

- Advertisement -
- Advertisement -

ಸಾಮಾಜಿಕ ಹೋರಾಟಗಾರ ಬಾಬಾ ಅಮ್ಟೆ ಅವರ ಮೊಮ್ಮಗಳು, ಸಮಾಜ ಸೇವಕಿ ಡಾ.ಶೀತಲ್ ಅಮ್ಟೆ-ಕರಾಜ್ಗಿ ನಿಧನರಾಗಿದ್ದಾರೆ. ಭಾರತದ ಸಾರ್ವಜನಿಕ ಆರೋಗ್ಯ ತಜ್ಞೆ ಶೀತಲ್ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ತಮ್ಮ ಆನಂದವಾನ್‌ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅಂಗವೈಕಲ್ಯ ತಜ್ಞೆ ಶೀತಲ್, ಮಹಾರೋಗಿ ಸೇವಾ ಸಮಿತಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸದಸ್ಯರಾಗಿದ್ದರು. ಈ ಸಂಸ್ಥೆ ಇದು ಕುಷ್ಠರೋಗದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ.

ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಶೀತಲ್, ವಿಷ ತೆಗೆದುಕೊಂಡಿದ್ದಾರೆ ಎಂದು ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ ಎಂದು ಲೋಕಮತ್‌ ವರದಿ ಮಾಡಿದೆ. ಮೃತದೇಹವನ್ನು ಮರನೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದ್ದು, ಚಂದ್ರಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕಳೆದ ಒಂದು ವಾರದ ಹಿಂದೆ ಶೀತಲ್, ಎನ್‌ಜಿಒದಲ್ಲಿನ ಅಕ್ರಮಗಳ ಬಗ್ಗೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು. ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ವೀಡಿಯೊವನ್ನು ಪೋಸ್ಟ್ ಮಾಡಿದರು. ಆದರೆ ಎರಡು ಗಂಟೆಗಳಲ್ಲಿ ಆ ಪೋಸ್ಟ್ ಅನ್ನು ತೆಗೆದುಹಾಕಿದರು.

ಇದನ್ನೂ ಓದಿ: ರಾಜ್ಯ ಸರ್ಕಾರ ದಿವಾಳಿಯಾಗಿದೆ, ವೃದ್ಧಾಪ್ಯ ವೇತನ ನೀಡಲು ಕೂಡಾ ಹಣವಿಲ್ಲ: ಸಿದ್ದರಾಮಯ್ಯ

 

ಮೃತ ಡಾ.ಶೀತಲ್ ಕಳೆದ ಕೆಲವು ದಿನಗಳಿಂದ ಒತ್ತಡದಲ್ಲಿದ್ದರು ಎಂದು ವರದಿಯಾಗಿದೆ. ಇಂದು ಮುಂಜಾನೆ ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ‘ಯುದ್ಧ ಮತ್ತು ಶಾಂತಿ’ ಬಗ್ಗೆ ಉಲ್ಲೇಖಿಸಿದ್ದಾರೆ.

ಶೀತಲ್ ಅವರು ಪ್ರಖ್ಯಾತ ಸಮಾಜ ಸೇವಕ ಮತ್ತು ಹೋರಾಟಗಾರ ಮುರ್ಲಿಧರ್ ದೇವಿದಾಸ್ ಅಮ್ಟೆ ಅವರ ಮೊಮ್ಮಗಳು. ಅವರನ್ನು ಪ್ರೀತಿಯಿಂದ ಬಾಬಾ ಅಮ್ಟೆ ಎಂದು ಕರೆಯುತ್ತಾರೆ.

Dr Sheetal Amte-Karajki, granddaughter of Baba Amte, found dead in Maharashtra's Chandrapur - India News , Firstpost
PC: Firstpost

1949 ರಲ್ಲಿ, ಕುಷ್ಠರೋಗ ರೋಗಿಗಳಿಗಾಗಿ ಬಾಬಾ ರಚಿಸಿದ ಗ್ರಾಮವೇ ಆನಂದವಾನ್. ಆನಂದವಾನ್ ಅನ್ನು ಕುಷ್ಠರೋಗಿಗಳ ಪುನರ್ವಸತಿ ಕೇಂದ್ರವಾಗಿ ಸ್ಥಾಪಿಸಿದರು.

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ದೆಹಲಿಯಲ್ಲಿ ರೈತರ ಗುಡುಗು: ಇಂದಿನ ಹೋರಾಟದ ಚಿತ್ರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...