ಬಿಜೆಪಿ ನಾಯಕರು ಬೀಫ್ ಬಿರಿಯಾನಿಯನ್ನು ತಿನ್ನಬೇಕು ಎಂದು ಒವೈಸಿ ನೀಡಿದ ಹೇಳಿಕೆಗೆ ಅಕ್ಷೇಪ ವ್ಯಕ್ತಪಡಿಸಿದ ಗೋಶಮಹಲ್ನ ಬಿಜೆಪಿ ಶಾಸಕ ರಾಜಾ ಸಿಂಗ್, “ಒವೈಸಿಯವರು ಹಂದಿಮಾಂಸದ ಬಿರಿಯಾನಿ ತಿನ್ನಲು ಪ್ರಯತ್ನಿಸಲಿ” ಎಂದು ತಿರುಗೇಟು ನೀಡಿದ್ದಾರೆ.
“ನಾನು ಇಂದು ಅವರಿಗೆ ಬಿರಿಯಾನಿಯ ಆಫರ್ ನೀಡುತ್ತಿದ್ದೇನೆ. ನಮ್ಮ ಸ್ಥಳೀಯ ವಾಲ್ಮೀಕಿ ಸಮುದಾಯವು ಹಂದಿಮಾಂಸದಿಂದ ಉತ್ತಮ ಬಿರಿಯಾನಿ ಮಾಡುತ್ತದೆ. ನಿಮಗೆ ಬಿರಿಯಾನಿ ತಿನ್ನಲು ಇಷ್ಟವಾಗಿದ್ದರೆ, ನಾನು ರುಚಿಯಾದ ಬಿರಿಯಾನಿಯನ್ನು ನೀಡುತ್ತೇನೆ” ಎಂದು ರಾಜಾ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಅಸಾದುದ್ದೀನ್ ಓವೈಸಿಯವರ AIMIM ಪಕ್ಷ ಐದು ಸ್ಥಾನ ಗೆದ್ದಿದ್ದು ಹೇಗೆ?
“ಒವೈಸಿಯ ಬೀಫ್ ಬಿರಿಯಾನಿಯ ಹೇಳಿಕೆ ಅವರ ಹತಾಶೆಯ ಸೂಚಕವಾಗಿದೆ. ಮುಂಬರುವ ಹೈದರಾಬಾದ್ನ ಮುನ್ಸಿಪಾಲಿಟಿ ಚುನಾವಣೆಯಲ್ಲಿ AIMIM ಸಾಕಷ್ಟು ಮತಗಳನ್ನು ಪಡೆಯುವುದಿಲ್ಲ” ಎಂದು ರಾಜಾ ಸಿಂಗ್ ಹೇಳಿದರು.
ಸೋಮವಾರ ಅಜಂಪುರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಒವೈಸಿ, “ಬಿಜೆಪಿ ಜನರು ಹತಾಶೆಯಿಂದ ಬಳಲುತ್ತಿದ್ದಾರೆ. ಅವರಿಗೆ ಏನೂ ಅರ್ಥವಾಗುತ್ತಿಲ್ಲ. ಅವರು ಖಂಡಿತವಾಗಿಯೂ ಅಲ್ಹಾಮ್ದುಲ್ಲಿಲ್ಲಾ ಹೋಟೆಲ್ನಿಂದ ಸ್ವಲ್ಪ ಬಿರಿಯಾನಿಯನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದ್ದರು. ಈ ಹೋಟೆಲ್ ಗೋಮಾಂಸ ಭಕ್ಷ್ಯಗಳನ್ನು ತಯಾರಿಸಲು ನಗರದಲ್ಲಿ ಹೆಸರುವಾಸಿಯಾಗಿದೆ.
ಇದನ್ನೂ ಓದಿ: ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ನಿದ್ದೆ ಮಾಡುತ್ತಿದ್ದಾರೆಯೆ?: ಓವೈಸಿ