Homeಮುಖಪುಟ‘ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಟೆಕ್ಕಿಗಳಿಗೆ ಲಾಭ: ಸಚಿವ ಮಾಧುಸ್ವಾಮಿ

‘ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಟೆಕ್ಕಿಗಳಿಗೆ ಲಾಭ: ಸಚಿವ ಮಾಧುಸ್ವಾಮಿ

ನಗರದಿಂದ ಬಂದು ಭೂಮಿ ಕೊಳ್ಳುವವರು ಕೃಷಿಗಾಗಿ ಭೂಮಿ ಕೊಳ್ಳುವುದಿಲ್ಲ. ಬದಲಿಗೆ ಅಲ್ಲಿ ಬೇರೆ ಬೇರೆ ಉದ್ಯಮಗಳನ್ನು ತೆರೆಯುತ್ತಾರೆ. ಜೊತೆಗೆ ಕಪ್ಪಹಣ ಹೊಂದಿರುವವರು ಅದನ್ನು ಭೂಮಿ ಅಥವಾ ಬಂಗಾರದ ರೂಪದಲ್ಲಿಡಲು ಬಯಸುತ್ತಾರೆ. ಅಂಥವರಿಗೆ ಈ ಕಾನೂನು ವರದಾನವಾಗಿದೆ.

- Advertisement -
- Advertisement -

ಹಳ್ಳಿ ಬಿಟ್ಟು, ನಗರದಲ್ಲಿ ಸಾಫ್ಟ್ ವೇರ್ ಅಥವಾ ಟೆಕ್ಕಿಯಾಗಿ ಕೆಲಸ ಮಾಡಿದವರಿಗೆ, ಎಷ್ಟೋ ವರ್ಷಗಳಾದ ಮೇಲೆ ತನ್ನ ಹಳ್ಳಿಗೆ ಮರಳಿ ಭೂಮಿ ಕೊಂಡು ಅಲ್ಲಿಯೇ ಕೃಷಿ ಮಾಡಲು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಅನುಕೂಲವಾಗಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.

ಬೆಂಗಳೂರು ವಿವಿಯ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗದ ವತಿಯಿಂದ “ಕರ್ನಾಟಕ ಭೂಸುಧಾರಣೆ (ತಿದ್ದುಪಡಿ) ಆಧ್ಯಾದೇಶ-2020 ಕ್ಕೆ ಸಂಬಂಧಿಸಿದಂತೆ ಅದರ ಸಾಧಕ ಮತ್ತು ಬಾಧಕಗಳ” ಕುರಿತ ವೆಬಿನಾರ್‌ನಲ್ಲಿ ತಮ್ಮ ಸರ್ಕಾರದ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಉಳುವವನೇ ಭೂಮಿಯ ಒಡೆಯ ಎನ್ನುವ ಕಾಯ್ದೆ ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ. ಈಗ ಆಗಿರುವುದೂ ಕೂಡ ಅದೇ. ಈ ತಿದ್ದುಪಡಿಯ ಅನ್ವಯ ಭೂಮಿ ಹೊಂದುವ ಹಕ್ಕನ್ನು 40 ಯೂನಿಟ್‌ವರೆಗೆ ಹೆಚ್ಚಿಸಲಾಗಿದೆ. ಯಾರು ಬೇಕಾದರೂ ಭೂಮಿ ಕೊಳ್ಳಬಹುದು. ರೈತ ಯಾರಿಗೆ ಬೇಕಾದರೂ ಭೂಮಿಯನ್ನು ಮಾರಬಹುದು. ಭೂಬೆಲೆಯ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಇದರಿಂದ ರೈತನಿಗೆ ಲಾಭವೇ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?


ನಗರದಿಂದ ವಾಪಾಸಾದವರು ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭೂಮಿ ಖರೀದಿಸಿ ಅಲ್ಲಿಯೇ ನೆಲೆನಿಂತರು. ಯಾಕೆಂದರೆ ಅಲ್ಲಿ ಇದಕ್ಕೆ ಅವಕಾಶವಿದೆ. ಹಾಗಾಗಿಯೇ ಈ ತಿದ್ದುಪಡಿಯು ಹೆಚ್ಚು ಮಹತ್ವಪೂರ್ಣವಾದದ್ದು. ಅಷ್ಟಕ್ಕೂ ಈಗ ಇದನ್ನು ಟೀಕಿಸುತ್ತಿರುವ ಕಾಂಗ್ರೆಸ್‌ ಸರ್ಕಾರ 2015ರಲ್ಲಿ ಮಾಡಿದ ತಿದ್ದುಪಡಿಯ ಮುಂದುವರೆದ ಭಾಗವೇ ಈ ಕಾಯ್ದೆಯಾಗಿದೆ ಎಂದಿದ್ದಾರೆ.

ಭೂಮಿಯನ್ನು ಮಾರುವ ಮತ್ತು ಕೊಳ್ಳುವವರ ರಕ್ಷಣೆಗಾಗಿ ಈ ಕಾಯ್ದೆ ತರಲಾಗಿದೆ. ಭೂಮಿ ಮಾರಾಟ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಭೂಮಿಯನ್ನು ಮಾರಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್‌ ಮುಖಂಡ ಎಚ್.ಕೆ ಪಾಟೀಲ್ “ಮಾಧುಸ್ವಾಮಿಯವರು ಕೇವಲ ನಮ್ಮ ಟೀಕೆಗಳಿಗೆ ಉತ್ತರಿಸಿದರೇ ವಿನಃ ರೈತರ ಕಷ್ಟ ಕಾರ್ಪಣ್ಯಗಳ ಕುರಿತು ಚರ್ಚಿಸಿಲ್ಲ. 1974 ರಲ್ಲಿ ಬಂದ ಉಳುವವನೇ ಭೂಮಿಯ ಒಡೆಯ ಎಂಬ ಮಹತ್ವದ ಮತ್ತು ಸಾಮಾಜಿಕ ನ್ಯಾಯದ ಕಾನೂನನ್ನು ಬಿಜೆಪಿ ಸರ್ಕಾರ ಮಣ್ಣುಪಾಲು ಮಾಡುತ್ತಿದೆ” ಎಂದು ಆರೋಪಿಸಿದರು.

ಈಗಾಗಲೇ ಬರಗಾಲ, ಬೆಲೆನಿಗದಿ, ಮಧ್ಯವರ್ತಿಗಳ ಹಾವಳಿ, ಬಿತ್ತನೆ ಬೀಜ, ರಸಗೊಬ್ಬರಗಳ ರಾಜಕೀಯ, ಆರ್ಥಿಕ ಕುಸಿತ, ಕೊರೊನಾ ಮುಂತಾದ ಸಮಸ್ಯೆಗಳಲ್ಲಿ ಬಳಲುತ್ತಿರುವ ರೈತರಿಗೆ ಈ ತಿದ್ದುಪಡಿಯು ಗಾಯದ ಮೇಲೆ ಎಳೆದ ಬರೆಯಾಗಿದೆ ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿ: ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು – ಡಾ.ಎ.ಆರ್ ವಾಸವಿ


ಉಳುವವನೇ ಭೂಮಿಯ ಒಡೆಯ ಎನ್ನುವ ಊರುಗೋಲನ್ನೇ ಕಿತ್ತು ಕಾರ್ಪೋರೇಟ್ ಕುಳಗಳ ಕೈಗೆ ಕೊಡಲಾಗುತ್ತಿದೆ. ನಗರದ ಶ್ರೀಮಂತರು, ಟೆಕ್ಕಿಗಳು ಬಂದು ಒಕ್ಕಲುತನ ಮಾಡುವುದಕ್ಕೆ ಅವಕಾಶ ಎಂಬ ಸಮರ್ಥನೆ ಮಾಡಿಕೊಳ್ಳಬೇಡಿ. ಬದಲಾಗಿ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಏನಾದರೂ ಪರಹಾರ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ನಗರದಿಂದ ಬಂದು ಭೂಮಿ ಕೊಳ್ಳುವವರು ಕೃಷಿಗಾಗಿ ಭೂಮಿ ಕೊಳ್ಳುವುದಿಲ್ಲ. ಬದಲಿಗೆ ಅಲ್ಲಿ ಬೇರೆ ಬೇರೆ ಉದ್ಯಮಗಳನ್ನು ತೆರೆಯುತ್ತಾರೆ. ಜೊತೆಗೆ ಕಪ್ಪಹಣ ಹೊಂದಿರುವವರು ಅದನ್ನು ಭೂಮಿ ಅಥವಾ ಬಂಗಾರದ ರೂಪದಲ್ಲಿಡಲು ಬಯಸುತ್ತಾರೆ. ಅಂಥವರಿಗೆ ಈ ಕಾನೂನು ವರದಾನವಾಗಿದೆ ಎಂದು ಆರೋಪಿಸಿದರು.

ಹಿರಿಯ ವಕೀಲರಾದ ಪ್ರೊ. ರವಿವರ್ಮಕುಮಾರ್ ಮಾತನಾಡಿ, ಈ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತರುವಂತಹ ಅಗತ್ಯವಿತ್ತೇ? ಸದನ ಸೇರಲು ಸಾಧ್ಯವಾಗದಿದ್ದಾಗ, ಕೊರೊನಾ ತುರ್ತು ಸಂದರ್ಭದಲ್ಲಿ ಈ ಸುಗ್ರೀವಾಜ್ಞೆಯನ್ನು ತರಲಾಗಿದೆ. ಆದರೆ ಈಗ ಇರುವ ತುರ್ತು ಕೊರೊನಾ ರೋಗವೇ ಹೊರತು ಈ ಭೂಸುಧಾರಣಾ ಕಾಯ್ದೆಯಲ್ಲ ಎಂದರು.

ಸಚಿವ ಮಾಧುಸ್ವಾಮಿ ಹೇಳಿದಂತೆ ಈಗಾಗಲೇ ಸುಮಾರು 80 ಸಾವಿರ ಮೊಕದ್ದಮೆಗಳು ಈ ಭೂ ವಿವಾದಕ್ಕೆ ಸಂಬಂಧಿಸಿದಂತೆ ಇವೆ. ಅದರಲ್ಲಿ ಸುಮಾರು 50 ಸಾವಿರ ಪ್ರಕರಣಗಳು ಭೂಮಿ ತೆಗೆದುಕೊಂಡವರ ಪರವಾಗಿ ಆಗಿದೆ. 15 ಸಾವಿರ ಪ್ರಕರಣಗಳು ಸರ್ಕಾರದ ಪರ ಆಗಿವೆ. ಉಳಿದ 15 ಸಾವಿರ ಪ್ರಕರಣಗಳು ಹಾಗೆಯೇ ಉಳಿದಿವೆ ಎಂದರು.


ಇದನ್ನೂ ಓದಿ: ಸುತ್ತಿಗೆಯಿಂದ ಕ್ರೂರವಾಗಿ ಥಳಿಸಿದ ಗೋರಕ್ಷಕರು: ಕೈಕಟ್ಟಿ ನೋಡುತ್ತಿದ್ದ ಪೊಲೀಸರು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...