Homeಅಂಕಣಗಳುಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

ಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

- Advertisement -
- Advertisement -

ಇತ್ತೀಚೆಗೆ ಮಾತನಾಡಿದ ಪತ್ರಕರ್ತರೊಬ್ಬರು ಇಂದಿನ ದಿನಮಾನದ ವಾಸ್ತವದ ಪ್ರತೀಕವೆಂಬಂತೆ ತೋರಿದರು. ಜಾತಿಯ ಕಾರಣಕ್ಕೆ ಅವರು ಸಿದ್ದರಾಮಯ್ಯನವರ ವಿರುದ್ಧ ಕುದಿಯುತ್ತಿದ್ದರು. ಅದು ಯಾವ ಪ್ರಮಾಣಕ್ಕಿತ್ತೆಂದರೆ, ಅವರ ಜೊತೆ ಕೈ ಜೋಡಿಸಿದ್ದಕ್ಕಾಗಿ ಸ್ವಜಾತಿಯ ಗೌಡರ ಕುಟುಂಬದ ವಿರುದ್ಧವೂ ತೀವ್ರ ಅಸಹನೆ ಬೆಳೆಸಿಕೊಂಡಿದ್ದಾರೆ. ತಾನು ಪ್ರಜಾಪ್ರಭುತ್ವದ ಪರವಾಗಿ ಮಾತಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳುವ ಅಗತ್ಯವೂ ಅವರಿಗಿರುವುದರಿಂದ, ತನಗೆ ಸಂಖ್ಯಾಬಲ ಇಲ್ಲದಿರುವ ಈ ಸರ್ಕಾರವು ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಬಾರದು ಎಂದು ಗುಡುಗುತ್ತಿದ್ದರು. ಆದರೆ, ವಿಧಾನಸಭೆ ವಿಸರ್ಜನೆ ಆಗಲಿ ಎಂದು ಅವರು ಅಪ್ಪಿತಪ್ಪಿಯೂ ಹೇಳಲಿಲ್ಲ. ಯಡಿಯೂರಪ್ಪನವರು ಅಥವಾ ಬಿಜೆಪಿಯಿಂದ ಯಾರಾದರೂ ಮುಖ್ಯಮಂತ್ರಿಯಾಗುವುದೇ ನೈತಿಕವಾಗಿ ಸರಿ ಎಂಬುದು ಅವರ ಪ್ರತಿಪಾದನೆ.

ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಬಲವನ್ನು ಕಳೆದುಕೊಂಡಿದೆಯೆಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಆ ಸರ್ಕಾರವನ್ನು ರೂಪಿಸಿರುವ ಎರಡು ಪಕ್ಷಗಳಿಗೆ ಸೇರಿದ 15 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇನ್ನೂ ಅಂಗೀಕಾರವಾಗದಿರುವುದು ತಾಂತ್ರಿಕ ಪ್ರಶ್ನೆ ಮಾತ್ರ. ಆಮಿಷ ಅಥವಾ ಒತ್ತಡಕ್ಕೆ ಒಳಗಾಗಿರಬಹುದಾದರೂ, ಅವರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವವರೂ ಸಹಾ ಆಮಿಷವನ್ನೇ ಒಡ್ಡುತ್ತಿದ್ದಾರೆ. ಆದ್ದರಿಂದ ಸರ್ಕಾರವು ಒಂದು ವೇಳೆ ಉಳಿದುಕೊಂಡರೆ ಅದು ಬಹಳ ನೈತಿಕ ಶಕ್ತಿ ಹೊಂದಿರುವ ಸರ್ಕಾರ ಎಂದು ಯಾರೂ ಹೇಳಲಾಗದು.

ಆದರೆ, ಇದನ್ನು ವಿರೋಧಿಸುತ್ತಿರುವವರು ಸಹಾ ನೈತಿಕ ನಿಲುವನ್ನು ಹೊಂದಿಲ್ಲ. ರಾಮಲಿಂಗಾರೆಡ್ಡಿಯಂತಹ ಹಿರಿಯ ಶಾಸಕರು ರಾಜೀನಾಮೆ ಕೊಟ್ಟರು; ಆದರೆ ಮುಂಬೈಗೆ ಹೋಗಿ ಅವಿತುಕೊಳ್ಳಲಿಲ್ಲ. ಬಹುಶಃ ರೆಡ್ಡಿಯವರಷ್ಟೇ ಹಿರಿಯರಾದ, ಅವರಿಗಿಂತ ಹೆಚ್ಚು ಸಂವಿಧಾನ, ಪ್ರಜಾತಂತ್ರ ಇತ್ಯಾದಿಗಳ ಕುರಿತು ಮಾತನಾಡುವ, ಎರಡು ಪುಸ್ತಕಗಳನ್ನೂ ಬರೆದಿರುವ ಎಚ್.ವಿಶ್ವನಾಥ್ ಮಾತ್ರ ಮುಂಬೈ ಹೋಟೆಲ್‍ಗೆ ಹೋಗಿ ಅವಿತುಕೊಂಡರು. ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಬಂದು ಹೋಟೆಲ್ ಮೇಲೆ ದಾಳಿ ಮಾಡಬಹುದು, ಹಾಗಾಗಿ ರಕ್ಷಣೆ ಬೇಕು ಎಂದು ಪೊಲೀಸರಿಗೆ ಬರೆದ ದೂರಿಗೆ ಅವರ ಸಹಿಯೂ ಇತ್ತು. ಅಂದರೆ, ಆಡಳಿತ ನಡೆಸುತ್ತಿರುವ ಪಕ್ಷಗಳ ಬಲಾಢ್ಯರು ಬಂದು ಒತ್ತಾಯಿಸಿದರೆ ವಾಪಸ್ ಹೋಗಿಬಿಡಬಹುದು (ರಾಮಲಿಂಗಾರೆಡ್ಡಿಯವರ ರೀತಿ) ಎಂಬ ಹೆದರಿಕೆಯಿಂದ ಅವರನ್ನು ಬಚ್ಚಿಟ್ಟುಕೊಳ್ಳುತ್ತಿರುವ ಪಕ್ಷ ಬಿಜೆಪಿ.

ಇದರ ನಂತರದ ಪ್ರಶ್ನೆಯೆಂದರೆ ಸುಪ್ರೀಂಕೋರ್ಟಿನ ತೀರ್ಪಿನದು. ಮೇಲ್ನೋಟಕ್ಕೆ ‘ಶಾಸಕರನ್ನು ಸದನದಲ್ಲಿ ಭಾಗವಹಿಸಲೇಬೇಕೆಂಬ ಒತ್ತಾಯ ಮಾಡಬಾರದು’ ಎಂಬ ತೀರ್ಪಿನಲ್ಲಿ ಅಂತಹ ತಪ್ಪೇನಿಲ್ಲ. ಅದರಲ್ಲೂ ಅವರು ಈಗಾಗಲೇ ರಾಜೀನಾಮೆ ಕೊಟ್ಟಿರುವ ಶಾಸಕರು. ಆದರೆ ಇಲ್ಲಿ ಎರಡು ಪ್ರಶ್ನೆ ಉದ್ಭವಿಸುತ್ತದೆ. ಒಂದು, ಈಗಾಗಲೇ ಚರ್ಚಿತವಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕಾಂಗ ಪಕ್ಷದ ನಾಯಕರ ವಿಪ್ ಚಲಾಯಿಸುವ ಅಧಿಕಾರವನ್ನು ಮೊಟಕುಗೊಳಿಸುವುದು. ಎರಡು, ರಾಜ್ಯದ ಭವಿಷ್ಯಕ್ಕೆ ಸಂಬಂಧಿಸಿದ ಬಹುಮುಖ್ಯ ಸಂಗತಿ ಚರ್ಚೆಯಾಗಬೇಕಾದರೆ ಅಲ್ಲಿ ಹೋಗಿ ಚರ್ಚೆಯಲ್ಲಿ ಭಾಗವಹಿಸಿ (ಪರ ಅಥವಾ ವಿರೋಧವಾಗಿ) ಮತ ಹಾಕುವ ಜವಾಬ್ದಾರಿಯೂ ಈ ಶಾಸಕರಿಗೆ ಬೇಡವೇ? ಈ ಶಾಸಕರು ಅದರಿಂದ ತಪ್ಪಿಸಿಕೊಳ್ಳಲೆಂದೇ ಸುಪ್ರೀಂಕೋರ್ಟಿಗೆ ಬಂದಿದ್ದಾರೆಂದು ಕೋರ್ಟಿಗೆ ಗೊತ್ತಾಗಲಿಲ್ಲವೇ?

ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದು. ಒಂದು ವೇಳೆ ಅಗತ್ಯ ಬಹುಮತ ಇಲ್ಲದಿದ್ದಲ್ಲಿ ಹೇಗಾದರೂ ಮಾಡಿ ಸಂಖ್ಯಾಬಲವನ್ನು ಹೊಂದಿಸಿಕೊಳ್ಳುವುದು – ಇದು ಇಂದಿನ ‘ಪ್ರಜಾಪ್ರಭುತ್ವದ ರೀತಿ’ಯಾಗಿದೆ. ಚುನಾವಣೆಯಲ್ಲಿ ಜನರ ಬದುಕಿನ ವಿಚಾರಗಳನ್ನು ಮುಂದಿಡುವುದು ಅಥವಾ ವಿರೋಧ ಪಕ್ಷಗಳ ನೀತಿಗಳಲ್ಲಿನ ಜನವಿರೋಧಿತನವನ್ನು ಬಯಲುಗೊಳಿಸುವುದು ಇವೆಲ್ಲದರ ಅಗತ್ಯವೇ ಇಲ್ಲ. ಚುನಾವಣೆಗೆ ಮಾರ್ಕೆಟಿಂಗ್ ತಂತ್ರವನ್ನು ಹೊಸೆದು, ಪ್ಯಾಕೇಜ್ ರೂಪಿಸಿ ಜನರ ಮನಸ್ಸಿನಲ್ಲಿ ಗೊಂದಲವನ್ನೋ ಅಥವಾ ಭರವಸೆಯನ್ನೋ ಮೂಡಿಸಲು ಅದರಲ್ಲಿ ಪಳಗಿರುವ ಸಂಸ್ಥೆಗಳನ್ನು ನಿಯೋಜಿಸಿಕೊಳ್ಳುವ ಪ್ರಯತ್ನ ಶುರುವಾಗಿ ಬಹಳ ಕಾಲವಾಗಿದೆ. ಇವೆಲ್ಲವೂ ಪ್ರಜಾತಂತ್ರವನ್ನು ಸೋಲಿಸುತ್ತವೆ.

ಯಡಿಯೂರಪ್ಪನವರು ಸದನದಲ್ಲಿ ಸ್ಪೀಕರ್‍ರನ್ನು ಉದ್ದೇಶಿಸಿ, ‘ಆಡಳಿತ ಪಕ್ಷದವರಿಗೆ ವಿಶ್ವಾಸಮತದ ಮೇಲೆ ಚರ್ಚೆ ಮಾಡಲು ಎಷ್ಟು ಬೇಕಾದರೂ ಅವಕಾಶ ಕೊಡಿ. ನಾವ್ಯಾರೂ ಮಾತಾಡುವುದಿಲ್ಲ. ಒಂದೈದು ನಿಮಿಷ ಮಾತಾಡಬಹುದಷ್ಟೇ. ಬೇಗನೇ ಮತಕ್ಕೆ ಹಾಕಿ’ ಎಂದು ಹೇಳಿದುದರ ಅರ್ಥವೇನು? ಪ್ರಜಾತಂತ್ರವೆಂದರೆ ಸಂಖ್ಯೆಯಷ್ಟೇ, ಬೇರೇನೂ ಅಲ್ಲ ಎಂದು ಅವರು ಸ್ಪಷ್ಟಪಡಿಸುತ್ತಿದ್ದರು. ಆದರೆ, ಇದೇ ಸಂಖ್ಯೆ ಈ ಹಿಂದೆ ಅವರಿಗೆ ಮುಖ್ಯವಾಗಿರಲಿಲ್ಲ. ಅಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿದಾಗ ಅವರಿಗೆ ಬಹುಮತಕ್ಕೆ ಬೇಕಾದ 113 ಸಂಖ್ಯೆಯ ಶಾಸಕರ ಬೆಂಬಲ ಇತ್ತು. 104 ಶಾಸಕರನ್ನು ಹೊಂದಿದ್ದ ಬಿಜೆಪಿ ಮತ್ತದರ ನಾಯಕ ಯಡಿಯೂರಪ್ಪನವರಿಗೆ ಇರಲಿಲ್ಲ. ಆದರೂ ಇವೆರಡೂ ಪಕ್ಷಗಳು ಸೇರಿ ನಡೆಸಿದ ಸರ್ಕಾರವು ಸಂವಿಧಾನಬದ್ಧ ಎಂದು ಅವರಿಗೆ ಅನಿಸಿಯೇ ಇರಲಿಲ್ಲ. ಬದಲಿಗೆ ಅದು ಪರಸ್ಪರ ಸೆಣೆಸಾಡಿದ್ದ ಎರಡು ಪಕ್ಷಗಳು ಚುನಾವಣೋತ್ತರ ಕಾಲದಲ್ಲಿ ಮಾಡಿಕೊಂಡ ಅನೈತಿಕ ಮೈತ್ರಿ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಈಗ ಸಂಖ್ಯೆಯ ಜೊತೆಗೆ ನೈತಿಕ ಪ್ರಶ್ನೆಗಳನ್ನೆತ್ತಿ ಚರ್ಚಿಸುವುದೂ ಅವರಿಗೆ ಬೇಡವಾಗಿದೆ. ಕೇವಲ ಮತಕ್ಕೆ ಹಾಕುವುದು ಮಾತ್ರವೇ ಮುಖ್ಯ.

ಈ ಸಂದರ್ಭದಲ್ಲಿ ಇನ್ನೂ ಒಂದು ಅಂಶವನ್ನೂ ಗಮನಿಸಬೇಕು. ತಾನು ಸಭ್ಯ ಎಂದು ತೋರಿಸಿಕೊಳ್ಳಬಯಸುವ ರಾಜಾಜಿನಗರ ಶಾಸಕ ಸುರೇಶ್‍ಕುಮಾರ್‍ರ ಆಷಾಢಭೂತಿತನ ಸದನದಲ್ಲಿ ಬೆಳಕಿಗೆ ಬಂದಿತು. ಅವರು ಕುಮಾರಸ್ವಾಮಿಯವರು ಬಹುಮತದ ಕುರಿತು ಸಂದೇಹವಿರುವಾಗ ವಿಶ್ವಾಸಮತ ಯಾಚಿಸುವ ಪ್ರಸ್ತಾಪವನ್ನು ಮಾಡಿದ್ದುದರ ಕುರಿತು ಮಾತನಾಡಿದರು. ಅದನ್ನು ಪ್ರಸ್ತಾಪಿಸಿದ್ದ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಮುಖ್ಯವಾದ ಫೈಲ್‍ಗಳ ವಿಲೇವಾರಿ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಸರಿಯಾದದ್ದು. ಕುಮಾರಸ್ವಾಮಿ ಮತ್ತವರ ಸೋದರ ರೇವಣ್ಣನವರ ಫೈಲ್ ವಿಲೇವಾರಿಯ ಹಿಂದೆ ಹಣದ ಲೂಟಿಯ ಉದ್ದೇಶ ಮಾತ್ರ ಇದೆಯೆಂದು ನಂಬಲು ಕಾರಣಗಳಿವೆ. ಆದರೆ, ಈ ವಿಧಾನಸಭೆಯು ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬಹುಮತವೇ ಇಲ್ಲದೇ, ರಾಜ್ಯಪಾಲರ ಪಕ್ಷಪಾತದ ಕಾರಣದಿಂದಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಮಾಡಿದ್ದು ನೆನಪೇ ಇಲ್ಲದಂತೆ ಸುರೇಶ್‍ಕುಮಾರ್ ವರ್ತಿಸುತ್ತಿದ್ದಾರೆ. ವಿಶ್ವಾಸಮತ ಯಾಚನೆಗೂ ಮುಂಚೆ ಯಡಿಯೂರಪ್ಪನವರು ಅಧಿಕಾರಿಗಳ ವರ್ಗಾವಣೆಯನ್ನೂ ಮಾಡಿದ್ದರು!

ಅಂದರೆ, ಪ್ರಜಾಪ್ರಭುತ್ವ, ಸಂವಿಧಾನ, ನೀತಿ ಸಂಹಿತೆ ಇತ್ಯಾದಿಗಳೆಲ್ಲವೂ ಅನುಕೂಲಸಿಂಧು ರಾಜಕಾರಣದ ಅಸ್ತ್ರಗಳಾಗಿ ಮಾತ್ರ ಬಳಕೆಯಾಗುತ್ತಿವೆ. ಇಂದು ಹೇಗಾದರೂ ಮಾಡಿ ಅಧಿಕಾರ ಹಿಡಿದಿರುವ ಬಿಜೆಪಿಯು ತನಗೆ ಜನರ (ಪಬ್ಲಿಕ್) ಬೆಂಬಲವಿದೆ ಎಂದು ಸಾರುತ್ತಿದೆ. ಈ ಜನರ ಬೆಂಬಲವನ್ನು ಗಣರಾಜ್ಯದ ಮೂಲ ಆಶಯಗಳಿಗೆ ವಿರುದ್ಧವಾಗಿ ಅದು ಬಳಸುತ್ತಿದೆ. ಈ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಪಬ್ಲಿಕ್ ವರ್ಸಸ್ ರಿಪಬ್ಲಿಕ್ ಆಗಲಿದೆ ಎಂದು ಖ್ಯಾತ ರಾಜಕೀಯ ಚಿಂತಕ ಯೋಗೇಂದ್ರ ಯಾದವ್ ಹೇಳಿದ್ದು.

ಈ ಪಬ್ಲಿಕ್ ಏನು ಯೋಚಿಸಬೇಕೆಂದು ನಿರ್ದೇಶಿಸುವ, ಏನು ಯೋಚಿಸುತ್ತಾರೆಂದು ಬಿಂಬಿಸುವ ಕೆಲಸ ಮಾಡುವ ಮಾಧ್ಯಮವೂ ರಿಪಬ್ಲಿಕ್‍ನ ಆಶಯಗಳಿಗೆ ಪೂರಕವಾಗಿಲ್ಲ. ಹಾಗಾಗಿ ಅಂತಿಮವಾಗಿ ಇದು ಯಾವ ಜನರು ಓಟು ಹಾಕಿ ಗೆಲ್ಲಿಸಿದ್ದಾರೋ ಆ ಜನರ ವಿರುದ್ಧವೇ ತಿರುಗುತ್ತದೆ. ಇದನ್ನು ಪರಿಹರಿಸುವ ನೈತಿಕ ಶಕ್ತಿಯಾಗಲೀ, ಸಾಧ್ಯತೆಯಾಗಲೀ ಈ ದೇಶದ ವಿರೋಧಪಕ್ಷಗಳಿಗಿಲ್ಲವಾಗಿದೆ. ಇದೇ ಈ ಹೊತ್ತಿನ ದುರಂತ. ಆದ್ದರಿಂದ ಪಬ್ಲಿಕ್ ಮತ್ತು ರಿಪಬ್ಲಿಕ್ ಎರಡೂ ಸೋಲುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...