Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಪಂಗನಾಮ ಹಾಕೋರಿಗೆ ಬ್ಯಾಂಕು ಸಾಲ

ಪಂಗನಾಮ ಹಾಕೋರಿಗೆ ಬ್ಯಾಂಕು ಸಾಲ

- Advertisement -
- Advertisement -

ತಪ್ಪುದಾರಿಯಲ್ಲಿ ಸರ್ಕಾರಿ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಉದ್ದೇಶ ಪೂರ್ವಕವಾಗಿ ತೀರಿಸದೆ ಛದ್ಮವೇಷಧಾರಿ ಕೈಗಾರಿಕೋದ್ಯಮಿಗಳು ಇಂದು ಬ್ಯಾಂಕಿಗ್ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ. ಈ ವ್ಯವಹಾರದಲ್ಲಿ ಹೇರಳ ಭ್ರಷ್ಟಾಚಾರ ನಡೆಯುತ್ತಿದೆ.
2018ರ ಮಾರ್ಚ್ 25ರ ಲೆಕ್ಕದಂತೆ ಭಾರತೀಯ ಬ್ಯಾಂಕುಗಳಲ್ಲಿ ಸಾರ್ವಜನಿಕರು ತೊಡಗಿಸಿದ್ದ ಮೊತ್ತ 110 ಲಕ್ಷ ಕೋಟಿ. ಈ ಹಣದಲ್ಲಿ 80ಲಕ್ಷÀ ಕೋಟಿ ರೂಪಾಯಿಗಳು 21 ಸರ್ಕಾರಿ ಬ್ಯಾಂಕುಗಳಲ್ಲೇ ಇತ್ತು. ಬ್ಯಾಂಕುಗಳು ಸಾರ್ವಜನಿಕರ ಈ ಹಣವನ್ನು ಹೇಗೆ ನಿರ್ವಹಿಸಿದವು ಎಂಬುದನ್ನು ನೋಡೋಣ. 2017-18ರ ಸಾಲಿನಲ್ಲಿ ಈ 21 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 19 ಬ್ಯಾಂಕುಗಳು ನಷ್ಟದಲ್ಲಿರುವುದಾಗಿ ಸರ್ಕಾರ ಘೋಷಣೆ ಮಾಡಿತು. ನಷ್ಟದ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ 87,351 ಕೋಟಿಗಳು. ಪರಿಣಾಮವಾಗಿ ಈ ವರ್ಷ ಕೇಂದ್ರ ಸರ್ಕಾರ ಪ್ರಧಾನಿಯವರ ಯೋಜನೆಗಳಾದ ನೀರಾವರಿ, ಗ್ರಾಮೀಣ ರಸ್ತೆ, ಕುಡಿಯುವ ನೀರಿನ ಯೋಜನೆ, ಸ್ವಚ್ಛಭಾರತ ಆಂದೋಲನ, ಶಿಕ್ಷಣಗಳಿಗೆ ತೆಗೆದಿಟ್ಟಿರುವ ಹಣವನ್ನು ಈ 19 ರಾಷ್ಟ್ರೀಕೃತ ಬ್ಯಾಂಕುಗಳು ಸಾಲವಾಗಿ ಪಂಗನಾಮ ಹಾಕುವವರಿಗೆ ನೀಡಿವೆ. ಈ 19 ಬ್ಯಾಂಕುಗಳಲ್ಲಿ 9 ಬ್ಯಾಂಕುಗಳು ನೀಡಿರುವ ಒಟ್ಟು ಸಾಲದಲ್ಲಿ ಶೇ.15ರಷ್ಟು ಸಾಲ ಸುಸ್ತಿಯಲ್ಲಿದೆ; ಈ ಸಾಲಗಳು ವಸೂಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿವೆ. ಇನ್ನೂ 6 ಬ್ಯಾಂಕುಗಳು ಇನ್ನಷ್ಟು ಹಣ ವಸೂಲಾಗದ ಸಾಲಗಳ ಪಟ್ಟಿಯನ್ನು ಘೋಷಿಸುವುದರಲ್ಲಿವೆ.
ಒಟ್ಟಿನಲ್ಲಿ 21 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 17 ಬ್ಯಾಂಕುಗಳಲ್ಲಿ ವಸೂಲಾಗದ ಸಾಲ ಏರಿಕೆಯಾಗಿದೆ. ಈ ವಸೂಲಾಗದ ಸಾಲಗಳ ಪಿಡುಗು 2007ರಲ್ಲೇ ಶುರುವಾಗಿತ್ತು. ವಿಶ್ವ ಆರ್ಥಿಕ ಮುಗ್ಗಟ್ಟು, ಕಲ್ಲಿದ್ದಲು ಹಗರಣ, 2ಜಿ ಹಗರಣ ಕೂಡ ಅದೇ ಸಮಯದಲ್ಲೇ ನಡೆದರೂ ಕೂಡ ಬ್ಯಾಂಕುಗಳು ಅಲ್ಲಿಯವರೆಗೆ ತಮ್ಮ ಬಂಡವಾಳವನ್ನು ಖoಟಟouಣ ಮಾಡುತ್ತಿದ್ದವು. 2007ರಿಂದ ನುಂಗಣ್ಣಗಳ ಪಾಲಾಗುತ್ತಾ ಬಂದ ರಾಷ್ಟ್ರೀಕೃತ ಬ್ಯಾಂಕುಗಳ ಬಂಡವಾಳ 2018ರಲ್ಲಿ 9 ಲಕ್ಷ ಕೋಟಿಗಳಿಗೇರಿದೆ.
2017-18ರಲ್ಲಿ ಕಂಪೆನಿಗಳಿಂದ, ವ್ಯಕ್ತಿಗಳಿಂದ ಸಂಗ್ರಹವಾದ ಆದಾಯ ತೆರಿಗೆಗಿಂತಲೂ ಈ ನುಂಗಣ್ಣರ ಪಾಲಾದ ಮೊತ್ತ ಅಧಿಕವಾಗಿತ್ತು. ಬ್ಯಾಂಕಿನಲ್ಲಿ ತೊಡಗಿಸುವ ಠೇವಣಿ ಹಣಕ್ಕೆ ವಿಮೆ ಸೌಲಭ್ಯ ಇತ್ತು. ಅದರ ಪರಿಮಿತಿ ಒಂದುಲಕ್ಷ ಠೇವಣಿಗೆ ಮಾತ್ರ. ಒಂದುಲಕ್ಷ ಮೀರಿದ ಠೇವಣಿಗೆ ಭದ್ರತೆ ಇದೆಯೇ? ಬ್ಯಾಂಕುಗಳು ಈ ಹೊಣೆ ಹೊರುತ್ತವೆಯೇ?
ಆದರೆ ಲಕ್ಷಕ್ಕಿಂತ ಕಡಿಮೆ ಠೇವಣಿಯ ಮೊತ್ತ 30-50 ಲಕ್ಷಕೋಟಿ. ಅಂದರೆ ಉಳಿದ 70% ಇಡುಗಂಟನ್ನಿಟ್ಟವರಿಗೆ ಯಾವ ಭದ್ರತೆಯೂ ಇಲ್ಲ. ಇವರಿಟ್ಟಿರುವ ಠೇವಣಿ 72 ಲಕ್ಷಕೋಟಿ. ಜನರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡಿ, ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವುದು ಮಕ್ಕಳ ಶಿಕ್ಷಣ, ಮದುವೆ, ಮನೆಕೊಳ್ಳುವುದು, ನಿವೃತ್ತ ಜೀವನ ಮುಂತಾದ ಕಾರಣಕ್ಕಾಗಿ. ಇವರ ಹಣದ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂದೆ ಬರಬೇಕು.ಈ 70% ಜನರ ಹಣದ ಭದ್ರತೆಗಾಗಿ ಸರ್ಕಾರ ಜ್ಞಾನಸಂಗಮ, ಇಂದ್ರಧನುಷ್, ಬ್ಯಾಂಕ್‍ಬೋರ್ಡ್ ಬ್ಯೂರೋ ಮುಂತಾದ ಯೋಜನೆಗಳನ್ನು ಅಸ್ತಿತ್ವಕ್ಕೆ ತಂದಿತ್ತು. ಅವುಗಳೆಲ್ಲವೂ ಈಗ ವಿಫಲಗೊಂಡಿವೆ. ಪಾಪರ್ ಚೀಟಿ ಕಾನೂನನ್ನು ಜಾರಿಗೊಳಿಸಲು ಸರ್ಕಾರ ಯೋಚನೆ ಮಾಡುತ್ತಿದೆ. ಇದು ಒಂದು ಸ್ವಾಗತಾರ್ಹ ವಿಚಾರ. ಒಂದು ವರ್ಷ ಕಳೆದ ಮೇಲೆ ಸರ್ಕಾರ ಸಾಲಕೊಟ್ಟು ಹಣ ಕಳೆದುಕೊಂಡಿರುವ 12 ಬ್ಯಾಂಕುಗಳ ಪೈಕಿ 2 ಮಾತ್ರ litigation ನಿಂದ ಪಾರಾಗಿವೆ. ಈಗಾಗಲೇ 2511 ಪಾಪರ್ ಚೀಟಿ ಕೇಸುಗಳು ದಾಖಲಾಗಿದ್ದು ಅವು ಇನ್ನಷ್ಟು ಹೆಚ್ಚಾಗಲಿವೆ. ಈ ವೇಗದಲ್ಲೇ ಕೇಸುಗಳು ದಾಖಲಾಗುವುದಾದರೆ ಬ್ಯಾಂಕುಗಳು ಸಾಲವಸೂಲಿಗೆ ಸುದೀರ್ಘ ಕಾಲ ಕಾಯಬೇಕಾಗಬಹುದು.
ಈಗ ಕೆಲವು ದಿನಗಳ ಹಿಂದೆ ಹಂಗಾಮಿ ಹಣಕಾಸು ಮಂತ್ರಿ ಪೀಯೂಷ್ ಗೋಯಲ್ ಸಾಲವಸೂಲಿಯನ್ನೂ ಸುಗಮಗೊಳಿಸಲು ಬ್ಯಾಂಕುಗಳ meಡಿgeಡಿ ಮಾಡಲಾಗುವುದೆಂದೂ ಕರಡು ಸಾಲದ ಬ್ಯಾಂಕೊಂದನ್ನು ಆರಂಭಿಸಬೇಕೆಂದೂ ವಿಚಾರ ಮಾಡಿ, ಸಮಿತಿಯೊಂದನ್ನು ರಚಿಸಿದ್ದಾರೆ. ಆದರೆ ಸಮಿತಿಗಳನ್ನು ಮಾಡುವ, ವರದಿ ತರಿಸಿಕೊಳ್ಳುವ ಸಮಯ ಈಗ ಮೀರಿಹೋಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹಣ ತುಂಬಿ ಅವುಗಳ ನಿರ್ವಹಣೆಗೆ ಹೊಸ ರೂಪ ಕೊಡಬೇಕು. ಬ್ಯಾಂಕುಗಳು ಸರ್ಕಾರದ ನೇರ ಹಿಡಿತಕ್ಕೆ ಬರಬಾರದು. ಬ್ಯಾಂಕುಗಳ ಮೇಲ್ವಿಚಾರಣೆಗೆ ಒಂದು ಸ್ವತಂತ್ರ ಆಡಳಿತ ಸಂಸ್ಥೆ ಅಸ್ತಿತ್ವಕ್ಕೆ ಬರಬೇಕು.

 

  • – ಹೆಚ್.ಎಸ್.ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...