Homeರಾಜಕೀಯದಾವಣಗೆರೆ: ಕೈಗೆ ಬೆಣ್ಣೆದೋಸೆ ಕಮಲಕ್ಕೆ ಖಾರ ಮಿರ್ಚಿ

ದಾವಣಗೆರೆ: ಕೈಗೆ ಬೆಣ್ಣೆದೋಸೆ ಕಮಲಕ್ಕೆ ಖಾರ ಮಿರ್ಚಿ

- Advertisement -
- Advertisement -
  • ಟಿ.ಎನ್.ಷಣ್ಮುಖ |

ಕಳೆದ ಸಲ ಬಹುಪಾಲು `ಕೈ’ವಶವಾಗಿದ್ದ ದಾವಣಗೆರೆ ಜಿಲ್ಲೆಯಲ್ಲಿ ಈ ಸಲ ಬಿಜೆಪಿ ಪೈಪೋಟಿ ನೀಡುತ್ತಿದೆಯಾದರೂ ಹಳೆಯ ಫಲಿತಾಂಶ ಸಂಪೂರ್ಣ ಬುಡಮೇಲಾಗುವ ಸಾಧ್ಯತೆ ಇಲ್ಲ. ಒಟ್ಟು ಎಂಟು ಕ್ಷೇತ್ರಗಳ ಪೈಕಿ 2013ರಲ್ಲಿ ಕಾಂಗ್ರೆಸ್ ಏಳರಲ್ಲಿ ಗೆದ್ದಿದ್ದರೆ ಹರಿಹರ ಮಾತ್ರ ಜೆಡಿಎಸ್ ಪಾಲಾಗಿತ್ತು. ಒಂದು ಕಾಲಕ್ಕೆ ಅಖಂಡ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಶೂನ್ಯ ಸಾಧನೆ ಮೂಲಕ ನೆಲ ಕಚ್ಚಿತ್ತು.

ಈ ಸಲ ಸ್ಪರ್ಧಿಸುವುದಿಲ್ಲ ಎಂದಿದ್ದ ವಯೋವೃದ್ಧ ಶಾಮನೂರು ಶಿವಶಂಕರಪ್ಪನವರು ಮತ್ತೆ ದಾವಣಗೆರೆ ದಕ್ಷಿಣದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಯಶವಂತರಾವ್ ಯಾವ ನಿಟ್ಟಿನಿಂದ ನೋಡಿದರೂ ಶಾಮನೂರು ಧಣಿಗೆ ಸರಿಸಾಟಿಯಾದ ಅಭ್ಯರ್ಥಿಯೇ ಅಲ್ಲ. ಕಾಂಗ್ರೆಸ್‍ಗೆ ಹರಿದುಹೋಗುವ ಮುಸ್ಲಿಂ ಮತಗಳನ್ನು ತನ್ನತ್ತ ತಿರುಗಿಸಿಕೊಳ್ಳಲು ಜೆಡಿಎಸ್ ಇಲ್ಲಿ ಅಮಾನುಲ್ಲಾ ಖಾನ್‍ನನ್ನು ಅಭ್ಯರ್ಥಿಯಾಗಿಸಿದೆ. ಆದರೆ ಈತ ಮೂರನೇ ಸ್ಥಾನಕ್ಕೆ ತಿಣುಕಾಡಬೇಕಾದ ಪರಿಸ್ಥಿತಿಯಿದೆ. ಬಿಜೆಪಿಯ ಯಶವಂತ ಕಳೆದ ಬಾರಿಗಿಂತ ತನ್ನ ಮತಗಳನ್ನು ಒಂದಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆಯಾದರು ಶಿವಶಂಕರಪ್ಪರನ್ನು ಸೋಲಿಸುವಷ್ಟು ಆತನ ಅಖಾಡ ಪಕ್ವವಾಗಿಲ್ಲ.

ದಾವಣಗೆರೆ ಉತ್ತರದಲ್ಲಿ ಹಾಲಿ ಮತ್ತು ಮಾಜಿ ತರಕಾರಿ ಮಂತ್ರಿಗಳದ್ದೇ ಕಾದಾಟ. ಆದಾಗ್ಯೂ ಕಾಂಗ್ರೆಸ್‍ನ ಎಸ್.ಎಸ್.ಮಲ್ಲಿಕಾರ್ಜುನ ಜಯದ ನಗೆ ಬೀರಲು ಹಲವು ಕಾರಣಗಳಿವೆ. ಬಿಜೆಪಿ ರವೀಂದ್ರನಾಥನನ್ನು ಯಡ್ಯೂರಪ್ಪ ಜೊತೆ ಆತ ಕಟ್ಟಿಕೊಂಡಿರುವ ದುಷ್ಮನಿ ಅಡ್ಡಡ್ಡ ಮಲಗಿಸಿದರೆ, ಕಳೆದ ಐದು ವರ್ಷದ ಅಭಿವೃದ್ಧಿ ಕಾರ್ಯಗಳು ಮಲ್ಲಿಕಾರ್ಜುನ್‍ರ ಕೈಹಿಡಿಯಲಿವೆ.

ಎಂ.ಪಿ.ರವೀಂದ್ರ

ಹರಪನಹಳ್ಳಿಯಲ್ಲಿ ಮೇಲ್ನೋಟಕ್ಕೆ ಹಾಲಿ ಕೈ ಶಾಸಕ ಎಂ.ಪಿ.ರವೀಂದ್ರನಿಗೆ ಇಕ್ಕಟ್ಟಿನಂತೆ ಕಂಡುಬಂದರೂ ಬಿಜೆಪಿಯ ಆಂತರಿಕ ಗುದಮುರಗಿ ರವಿಗೆ ನೆರವಾಗುವ ಸಾಧ್ಯತೆ ಇದೆ. ಜೆಡಿಎಸ್‍ನಿಂದ ಸ್ಪರ್ಧಿಸಿರುವ ಕೊಟ್ರೇಶ್ ಕೂಡಾ ಲಿಂಗಾಯತನಾಗಿರುವುದರಿಂದ ರವೀಂದ್ರನ ಜಾತಿ ಮತಗಳು ಹಂಚಿಹೋಗುತ್ತವೆ ಎಂಬ ವಾದವಿದೆ. ಆದರೆ ಅಸಲಿಯತ್ತೇನೆಂದರೆ ಮೊದಲಿನಿಂದಲೂ ಇಲ್ಲಿನ ಬಹುಪಾಲು ಲಿಂಗಾಯತ ಮತಗಳು ಹೋಗುತ್ತಿದ್ದುದು ಬಿಜೆಪಿಯ ಕರುಣಾಕರ ರೆಡ್ಡಿಗೆ, ಯಡ್ಯೂರಪ್ಪನ ಕಾರಣಕ್ಕೆ. ಜೆಡಿಎಸ್‍ನ ಕೊಟ್ರೇಶಿ ಪಕ್ಕಾ ಯಡಿಯೂರಪ್ಪನ ಶಿಷ್ಯ. ಕಳೆದ ಸಲ ಕೆಜೆಪಿಯಿಂದ ಸ್ಪರ್ಧಿಸಿದ್ದ. ಆತನಿಗೇ ಬಿಜೆಪಿ ಟಿಕೇಟ್ ಕೊಡಿಸಬೇಕೆನ್ನುವುದು ಯಡ್ಯೂರಪ್ಪ ಇಂಗಿತವಾಗಿತ್ತು. ಆದರೆ ರೆಡ್ಡಿಯೇ ಟಿಕೇಟ್ ಗಿಟ್ಟಿಸಿಕೊಂಡಿರುವುದರಿಂದ ಕೊಟ್ರೇಶಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದಾನೆ. ಅಂದರೆ ಆತ ಕೀಳಲಿರುವುದು ಬಿಜೆಪಿಯ ಮತಗಳನ್ನೇ ಹೊರತು ಕಾಂಗ್ರೆಸ್ ಓಟುಗಳನ್ನಲ್ಲ. ಅಲ್ಲಿಗೆ ರವಿಯ ಗೆಲ್ಲುವ ಸಂಭವ ಹೆಚ್ಚಾಗಿದೆ. ಆದರೆ ರವಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾನೆ ಎನ್ನುವ ವಾದವೂ ಇದ್ದು ಅದು ಫಲಿತಾಂಶದ ಮೇಲೆ ಪ್ರಭಾವ ಬೀರಿದರೆ ಅಚ್ಚರಿಯಿಲ್ಲ.

ಹರಿಹರದಲ್ಲಿ ಹಾಲಿ ಜೆಡಿಎಸ್ ಶಾಸಕ ಶಿವಶಂಕರನ ದರ್ಪ ಮತ್ತು ಮತದಾರರನ್ನು ಕಡೆಗಣಿಸಿದ ಅಪರಾಧವೇ ಆತನ ಸೋಲಿಗೆ ಮುನ್ನುಡಿಯಾಗುವ ಸಾಧ್ಯತೆಗಳಿವೆ. ಕೈ ಪಾರ್ಟಿಯಿಂದ ಹಳೇ ಹುಲಿ ರಾಮಪ್ಪಜ್ಜ ಕಣಕ್ಕಿಳಿದಿರೋದರಿಂದ ಬಿಜೆಪಿಯ ಹರೀಶನ ಬಿಪಿಯೂ ಯದ್ವತದ್ವಾ ಏರತೊಡಗಿದೆ. ರಾಮಪ್ಪನಿಗೆ ಸ್ವಜಾತಿ ಕುರುಬರು ಮಾತ್ರವಲ್ಲದೇ ಮುಸ್ಲಿಮರು, ನಾಯಕರು, ದಲಿತರ ಮತಗಳೂ ಹರಿದುಬರುವ ಸಾಧ್ಯತೆಯಿದ್ದು ಅಜ್ಜ ಗೆಲುವಿನ ನಗೆ ಬೀರಬಲ್ಲರು.

ವಡ್ನಾಳ್ ರಾಜಣ್ಣ

ಚನ್ನಗಿರಿಯಲ್ಲಿ ತ್ರಿಕೋನ ಸ್ಪರ್ಧೆಯಿದೆ. ಕಾಂಗ್ರೆಸ್‍ನ ಹಾಲಿ ಶಾಸಕ ವಡ್ನಾಳು ರಾಜಣ್ಣ, ಬಿಜೆಪಿಯ ಮಾಡಾಳು ವಿರುಪಾಕ್ಷಪ್ಪ, ಜೆಡಿಯು ಮಹಿಮಾ ಪಟೇಲ್ ಆ ತ್ರಿವಳಿ ವೀರರು. ಇವರ ನಡುವೆ ಜೆಡಿಎಸ್‍ನ ಹೊದಿಗೆರೆ ರಮೇಶ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ. ನಾಯಕ ಜಾತಿಯ ಹೊದಿಗೆರೆ ರಮೇಶನನ್ನು ಹೊರತುಪಡಿಸಿದರೆ ಉಳಿದ ಮೂವರೂ ಲಿಂಗಾಯತರು. ವಡ್ನಾಳು ರಾಜಣ್ಣನಿಗೆ ಜಾತಿ ಮತಗಳು ಕೈಕೊಡುವ ಸಾಧ್ಯತೆಯಿದ್ದು ಅವು ಮಾಡಾಳು ಮಾಡಾಳು ವಿರುಪಾಕ್ಷಪ್ಪನತ್ತ ಮುಖ ಮಾಡಿವೆ. ಆದರೆ ಈ ಮತಗಳ ಮೇಲೆ ಮಹಿಮಾ ಕೂಡಾ ದಾಳಿ ಮಾಡಬಹುದಾದ್ದರಿಂದ ಇನ್ನುಳಿದ ಸಮುದಾಯದ ಮತಗಳು ಯಾರತ್ತ ನುಗ್ಗಲಿವೆ ಎಂಬುದು ಸೋಲುಗೆಲುವನ್ನು ನಿರ್ಧರಿಸಲಿದೆ. ಸದ್ಯಕ್ಕಂತೂ ಬಿಜೆಪಿಯ ಮಾಡಾಳು ಮುಂಚೂಣಿಯಲ್ಲಿದ್ದಾರೆ.

ಜಗಳೂರಿನಲ್ಲಿ ಉದ್ಭವಿಸಿದ ಕಾಂಗ್ರೆಸ್ ಟಿಕೇಟ್ ಬಂಡಾಯದ ಯಡವಟ್ಟು ಬಿಜೆಪಿಯ ಎಸ್.ವಿ.ರಾಮಚಂದ್ರನಿಗೆ ಅನುಕೂಲ ಆಗಬಹುದು. ಮೊದಲು ಪುಷ್ಟಾಗೆ ಟಿಕೇಟ್ ಕೊಟ್ಟ ಕಾಂಗ್ರೆಸ್ ನಂತರ ನಿರ್ಧಾರದಿಂದ ಹಿಂದೆ ಸರಿದು ಹಾಲಿ ಶಾಸಕ ರಾಜೇಶನಿಗೆ ಬಿ ಫಾರಂ ದಯಪಾಲಿಸಿದೆ. ಈ ಕಣ್ಣಾಮುಚ್ಚಾಲೆಯಿಂದ ಸಿಟ್ಟಿಗೆದ್ದ ಪುಷ್ಟ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರೋದು ಕಾಂಗ್ರೆಸ್‍ಗೆ ದುಬಾರಿಯಾಗಲಿದೆ.

ಬಸವರಾಜ ನಾಯ್ಕ್

ಮಾಯಕೊಂಡದಲ್ಲಿ ಕಾಂಗ್ರೆಸ್‍ನ ಮೇಲುಗೈ ಕಾಣಿಸುತ್ತೆ. ಮಂತ್ರಿ ಆಂಜನೇಯರ ಅಳಿಯ ಬಸವರಾಜನನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ. ಯಡ್ಯೂರಪ್ಪ ತನ್ನ ಭಂಟ ಲಿಂಗಪ್ಪನಿಗೆ ಟಿಕೇಟ್ ಕೊಡಿಸಿರುವುದರಿಂದ ಬೇಸತ್ತಿರುವ ಮಾಜಿ ಶಾಸಕ ಬಸವರಾಜ ನಾಯ್ಕ ಜೆಡಿಯು ಸೇರಿ ಕಣದಲ್ಲಿದ್ದಾನೆ. ಸಾಲದ್ದಕ್ಕೆ ಆನಂದಪ್ಪ ಎಂಬ ಮತ್ತೊಬ್ಬ ಅಭ್ಯರ್ಥಿಯೂ ಬಿಜೆಪಿ ಬಂಡಾಯಗಾರನಾಗಿ ಮತ ಬೇಟೆಯಲ್ಲಿ ತೊಡಗಿದ್ದಾನೆ. ಬಿಜೆಪಿಗೆ ಈ ಇಬ್ಬರ ಬಂಡಾಯ ದುಬಾರಿಯಾಗಲಿದೆ. ಮುಖ್ಯವಾಗಿ ಲಂಬಾಣಿ ಮತಗಳು ಬಿಜೆಪಿಯಿಂದ ದೂರ ಸರಿದಿವೆ. ಶಾಮನೂರು ಪಾಳೆಗಾರಿಕೆ ಕಾರಣಕ್ಕೆ ಒಂದಷ್ಟು ಲಿಂಗಾಯತ ಮತಗಳು ಕಾಂಗ್ರೆಸ್‍ಗೆ ಒಲಿಯಲಿವೆ. ಜೊತೆಗೆ ಕುರುಬ, ನಾಯಕ, ಮಾದಿಗ ಮೊದಲಾದ ಅಹಿಂದ ಮತಗಳೂ ಕೈಹಿಡಿಯಲಿವೆ. ಲಂಬಾಣಿ ಮತಗಳು ಬಸವರಾಜ ನಾಯ್ಕ ಮತ್ತು ಜೆಡಿಎಸ್‍ನ ಶೀಲಾ ನಾಯ್ಕ ನಡುವೆ ಹರಿದು ಹಂಚಿಹೋಗಲಿವೆ. ಬಿಜೆಪಿಯ ಲಿಂಗಪ್ಪನಿಗೆ ಸ್ವಜಾತಿಯ ಮಾದಿಗ ಮತಗಳು ಬೀಳೋದೂ ಡೌಟು. ಏನಿದ್ದರೂ ಯಡ್ಯೂರಪ್ಪನ ವಶೀಲಿಬಾಜಿಯ ಒಂದಷ್ಟು ಲಿಂಗಾಯತ ಮತಗಳಷ್ಟೇ ಗಟ್ಟಿ.

ರೇಣುಕಾಚಾರ್ಯ

ಹೊನ್ನಾಳಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೆಕ್-ಟು-ನೆಕ್ ಹಣಾಹಣಿಯಿದೆ. ಕಾಂಗ್ರೆಸ್ ಟಿಕೇಟ್ ಕೈತಪ್ಪಿದ ಕಾರಣಕ್ಕೆ ಕುರುಬರ ಎಚ್.ಬಿ.ಮಂಜಪ್ಪ ಆರಂಭದಲ್ಲಿ ಬಂಡಾಯವೆದ್ದರೂ ಈಗ ಹಾಲಿ ಶಾಸಕ ಶಾಂತನಗೌಡನ ಪರ ಲವಲವಿಕೆಯಿಂದ ಪ್ರಚಾರ ಮಾಡುತ್ತಿದ್ದಾನೆ. ಇನ್ನು ಬಿಜೆಪಿಯಿಂದ ಕಣದಲ್ಲಿರುವ ನರ್ಸ್ ರೇಣುಕಾಚಾರ್ಯ ಯುವಜನರು ಮತ್ತು ನೊಣಬ, ಬಣಜಿಗ ಲಿಂಗಾಯತರ ಮತಗಳನ್ನು ನಂಬಿ ಹೋರಾಟ ನಡೆಸಿದ್ದಾನೆ. ಕಾಂಗ್ರೆಸ್‍ಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಸಾದರ ಲಿಂಗಾಯತರ ಜೊತೆಗೆ ಅಹಿಂದ ವರ್ಗದ ಮತಗಳೂ ಬೀಳುವುದರಿಂದ ಇಲ್ಲಿ ಈ ಸಲವೂ ರೇಣುಕಾರ್ಯನಿಗೆ ಕಷ್ಟವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...