Homeಸಿನಿಮಾಸಿನಿ ಸುದ್ದಿಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

ಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

- Advertisement -
- Advertisement -
  • ಗಿರೀಶ್ ತಾಳಿಕಟ್ಟೆ |

ಮಂಡ್ಯದ ಗಂಡು ಅಂಬಿ ಈಗ ಫುಲ್ ರಿಲೀಫ್ ಮೂಡ್‍ನಲ್ಲಿದ್ದಾರೆ. ತನಗೆ ಆಗಿಬರದ ಪೊಲಿಟಿಕ್ಸ್‍ನ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಅಂಬರೀಷ್, ಆ ಜೇಡರಬಲೆಯಿಂದ ಆಚೆ ಬಂದ ನಂತರ ಸಿಕ್ಕಾಪಟ್ಟೆ ಜಾಲಿ ಮೂಡಿನಲ್ಲಿರುವಂತಿದೆ. ತನ್ನನ್ನೇ ತಾನು ಗೇಲಿ ಮಾಡಿಕೊಳ್ಳುತ್ತಾ, ತಮಾಷೆಗೆ ಎದುರಿನವರ ಕಾಲೆಳೆಯುತ್ತಾ ಹಳೇ ಅಂಬರೀಷ್ ಆಗಿ ಸ್ಯಾಂಡಲ್‍ವುಡ್‍ನಲ್ಲಿ ಹಗುರಾಗುತ್ತಿರೋದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆ. ಈ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಪಕ್ಷ ಅಂಬಿಗೆ ಟಿಕೇಟ್ ಘೋಷಿಸಿದರೂ, ಹಳೆ ಮುನಿಸುಗಳನ್ನು ಮುಂದೆಮಾಡಿ ಗೌಡಿಕೆ ಗತ್ತಿನಲ್ಲಿ ಗುಟುರು ಹಾಕಿದ ಅಂಬಿ ಸದ್ಯದ ಮಟ್ಟಿಗೆ ರಾಜಕಾರಣದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡದ್ದು ಅವರ ವೈಯಕ್ತಿಕ ಬದುಕಿನ ದೃಷ್ಟಿಯಿಂದ ಬಹಳ ಆರೋಗ್ಯಕರ ನಿರ್ಧಾರ ಅಂತಲೇ ಹೇಳಬೇಕು. ಯಾಕೆಂದರೆ ಒಬ್ಬ ನಟನಾಗಿ ಅಂಬಿ ಅದೆಷ್ಟು ಅಭಿಮಾನಿಗಳನ್ನು, ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದರೋ, ಒಬ್ಬ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ ಅಷ್ಟೇ ಮೂದಲಿಕೆಗೆ ಗುರಿಯಾಗುತ್ತಾ ಬಂದಿದ್ದರು. ಶಾಸಕ, ಸಚಿವರಾಗಿ ಅಂಬಿ ಜನರ ಕೈಗೆ ಸಿಗುವುದೇ ಇಲ್ಲವೆನ್ನುವ ಆಪಾದನೆಗಳು ದಂಡಿಯಾಗಿ ಕೇಳಿಬರುತ್ತಿದ್ದವು. ಹಾಗೆ ನೋಡಿದರೆ, ಅಂಬಿಯ ವ್ಯಕ್ತಿತ್ವಕ್ಕೆ ಇವತ್ತಿನ ಈ ಹಾಳು ಪೊಲಿಟಿಕ್ಸ್ ಒಗ್ಗುವಂತದ್ದೇ ಆಗಿರಲಿಲ್ಲ. ಮುಂದೆ ಹೇಗೋ, ಏನೋ, ಸದ್ಯಕ್ಕೆ ಎಲೆಕ್ಷನ್ ರಾಜಕಾರಣದ ಜಂಜಡದಿಂದ ಹೊರಬಂದ ತರುವಾಯ ಸಿನಿಮಾಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗುತ್ತಾ ತನ್ನ ಹಳೆಯ ಕೀಟಲೆ ದಿನಗಳತ್ತ ಅಂಬಿ ಮರುಪಯಣಿಸುತ್ತಿರೋದು Really a Good Sign!

ಸದ್ಯ, ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೊ’ ಸಿನಿಮಾದ ಶೂಟಿಂಗ್‍ನಲ್ಲಿ ಅಂಬಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನ `ಪಾ ಪಾಂಡಿ’ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಅಂಬಿ ಪಾತ್ರದ ಯೌವ್ವನದ ದಿನಗಳ ರೂಪದಲ್ಲಿ ಸುದೀಪ್ ನಟಿಸುತ್ತಿದ್ದರೆ, ಅಂಬಿಗೆ ಜೋಡಿಯಾಗಿ 14 ವರ್ಷಗಳ ನಂತರ ನಟಿ ಸುಹಾಸಿನಿ ಹೆಜ್ಜೆ ಹಾಕಿದ್ದಾರೆ. ಇದರ ನಡುವೆ ಹೊಸಬರ ಚಿತ್ರಗಳ ಮುಹೂರ್ತ, ಸಿನಿಮಾ ಕಾರ್ಯಕ್ರಮಗಳು, ಪ್ರಶಸ್ತಿ ಸಮಾರಂಭಗಳಲ್ಲೂ ಅಂಬಿ ದಿಲ್‍ಖುಷ್ ಆಗಿ ಭಾಗವಹಿಸುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ, ನಟ ಯಶ್‍ಗೆ ಅಡ್ಡ ಹಾಕಿಕೊಂಡು `ಬಡ್ಡೇತದೆ, ನಿನ್ನ ಮುಖದ ಮೇಲೆ ಗಡ್ಡ ಸರಿ ಕಾಣಕ್ಕಿಲ್ಲ, ಗಡ್ಡ ಯಾವಾಗ್ಲಾ ತಗೀತೀಯಾ?’ ಅಂತ ಆತ್ಮೀಯವಾಗಿ ಗದರಿಕೊಂಡಿದ್ದ ಅಂಬಿ ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಬಿಗ್‍ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡಳ ಜೊತೆಗೆ ಅವಳದೇ ಧಾಟಿಯಲ್ಲಿ ಮಾತಾಡಿ, ಕಾಲೆಳೆದು ಕಿಚಾಯಿಸಿದ್ದರು. ಪಕ್ಕಾ ಪೊಲಿಟಿಷಿಯನ್ ಅವತಾರದಲ್ಲಿದ್ದಾಗ ಇಂಥಾ ಕಾರ್ಯಕ್ರಮಗಳಿಗಿರಲಿ, ಸರ್ಕಾರಿ ಸಮಾರಂಭಗಳಿಗೇ ಚಕ್ಕರ್ ಹೊಡೆಯುತ್ತಿದ್ದ ಅವರು ಈಗ ಕೊಂಚ ಬದಲಾಗಿದ್ದಾರೆ, ಬದಲಾಗುತ್ತಿದ್ದಾರೆ.

ಇದೀಗ ಅಂಬಿಯ ಮಗ ಅಭಿಷೇಕ್ ಗೌಡ ಕೂಡಾ `ಅಮರ್’ ಸಿನಿಮಾದ ಮೂಲಕ ಹೀರೋ ಆಗಲು ಸಜ್ಜಾಗಿದ್ದಾನೆ. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಅಭಿಷೇಕ್‍ಗೆ ನಾಯಕಿಯಾಗಿ ತಾನ್ಯ ನಟಿಸುತ್ತಿದ್ದಾರೆ. ಜೆಪಿ ನಗರದ ದೇವಸ್ಥಾನದಲ್ಲಿ ಮುಹೂರ್ತವೂ ಮುಗಿದಿದೆ. ಇನ್ನೇನು ಚಿತ್ರೀಕರಣ ಶುರುವಾಗಬೇಕು ಅಷ್ಟೇ. ಅಂದಹಾಗೆ, ಹೀರೊ ಆಗಲು ಹೊರಟಿರುವ ಮಗನಿಗೆ ಅಂಬಿ ಒಂದು ಕಿವಿಮಾತು ಹೇಳಿದ್ದಾರೆ. ಅದೇನು ಗೊತ್ತಾ, `ನನ್ನ ಥರಾ ಯಾವತ್ತೂ ಸೆಟ್‍ಗೆ ಲೇಟಾಗಿ ಹೋಗ್ಬೇಡ’ ಅಂತ! ಅಂಬಿ ಶೂಟಿಂಗ್ ಸ್ಪಾಟ್‍ಗೆ ಲೇಟಾಗಿ ಬರೋದ್ರಲ್ಲಿ ಸಿಕ್ಕಾಪಟ್ಟೆ ಫೇಮಸ್ಸು. ಅದು ಇವತ್ತು ನಿನ್ನೆಯ ಅಭ್ಯಾಸವಲ್ಲ, ಮೊದಲ ಸಿನಿಮಾದ ಮೊದಲ ದಿನದಿಂದಲೇ ಅಂತದ್ದೊಂದು ಅದ್ಭುತ ಸಂಪ್ರದಾಯವನ್ನ ಪಾಲಿಸಿಕೊಂಡು ಬರ್ತಿದಾರೆ. ನಾಗರಹಾವು ಸಿನಿಮಾದ ಶೂಟಿಂಗ್‍ನ ಮೊದಲ ದಿನ ಅಂಬಿ ಸೆಟ್‍ಗೆ ತಡವಾಗಿ ಬಂದಿದ್ದರಂತೆ. ಆಗ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಿಟ್ಟಿನಿಂದ ಯಾಕಯ್ಯ ಲೇಟು ಅಂತ ಕೇಳಿದಾಗ, ಅಂಬಿ ಗುರುವಿನ ಎದುರು ನುಲಿದಾಡುತ್ತಾ `ದಾರೀಲಿ ಟೈರ್ ಪಂಕ್ಚರ್ ಆಗ್ಬಿಟ್ಟಿತ್ತು, ಸಾರ್, ಅದ್ಕೆ ಒಸಿ ಲೇಟಾಯ್ತು’ ಅಂತ ಏನೋ ಕಥೆ ಕಟ್ಟಲು ಹೋದರಂತೆ. ಆಗ ಪುಟ್ಟಣ್ಣ ಪಕ್ಕದಲ್ಲಿದ್ದ ತನ್ನ ತಮಿಳು ಅಸಿಸ್ಟೆಂಟ್ ಕಡೆ ತಿರುಗಿ ಅದೇ ಸಿಟ್ಟಿನಲ್ಲಿ `ನಾ ಕಥೆ ಏಡಕ್ಕೆ ವಂದಿರ್ಕೆ, ಕೇಕ್ಕೆ ವಂದಿಲ್ಲೈ’ (ನಾ ಕಥೆ ಹೇಳ್ಲಿಕ್ಕೆ ಬಂದಿದೀನಿ, ಕಥೆ ಕೇಳಕ್ಕೆ ಅಲ್ಲ!) ಎಂದು ಶೂಟಿಂಗ್‍ನಲ್ಲಿ ಬ್ಯುಸಿಯಾದರಂತೆ. ಅವತ್ತಿಂದ ಇಲ್ಲಿಯವರೆಗೂ ಅಂಬಿ ಶೂಟಿಂಗ್ ಸ್ಪಾಟ್‍ಗೆ ಆನ್‍ಟೈಂ ಬಂದಿದ್ದೇ ಅಪರೂಪ. ಅಂಥಾ ತನ್ನ ಗುಣವನ್ನು ನೀನು ಕಲೀಬೇಡ ಎಂದು ಮಗನಿಗೆ ಟಿಪ್ಸ್ ಕೊಟ್ಟಿದ್ದಾರೆ ಮಂಡ್ಯದ ಗಂಡು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...