Homeಮುಖಪುಟರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

ರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

- Advertisement -
- Advertisement -

– ಗಿರೀಶ್ ತಾಳಿಕಟ್ಟೆ /

ಈ ಸಲದ ಎಲೆಕ್ಷನ್‍ನ ಹೈವೋಲ್ಟೇಜ್ ಕ್ಷೇತ್ರ ಅಂತ್ಯಾವುದಾದರು ಇದ್ದರೆ ಅದು ಬದಾಮಿ ಅನ್ನೋದ್ರಲ್ಲಿ ಯಾವ ಡೌಟೂ ಇಲ್ಲ. ಸಿಎಂ ಸಿದ್ರಾಮಯ್ಯ ಅಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಗಾಳಿ ಸುದ್ದಿ ತೇಲಾಡಿದಾಗಲೇ ಬದಾಮಿ ಹೈಲೈಟಿಗೆ ಬಂದಿತ್ತು. ಆದರೆ ಯಾವಾಗ ಬಿಜೆಪಿ, ಶ್ರೀರಾಮುಲು ಎಂಬ ರೆಡ್ಡಿ ಬೆಟಾಲಿಯನ್ ಬಂಟನನ್ನು ತಂದು ಸಿದ್ರಾಮಯ್ಯನ ಎದುರು ನಿಲ್ಲಿಸಿತೋ ಆಗಿನಿಂದ ಅದು ಸಿಕ್ಕಾಪಟ್ಟೆ ಸೆನ್ಸೇಷನಲ್ ಕ್ಷೇತ್ರವಾಗಿದೆ. ಚಾಮುಂಡೇಶ್ವರಿಯಲ್ಲಿ ಗೆಲುವು ಕಷ್ಟ ಅಂತಾ, ಕುರುಬರ ಸಾಲಿಡ್ ಮತಗಳಿರುವ ಬದಾಮಿಗೂ ಸಿದ್ರಾಮಯ್ಯ ತನ್ನ ಸ್ಪರ್ಧೆ ವಿಸ್ತರಿಸಿದರೆ ಬಿಜೆಪಿ ಅಲ್ಲಿಯೂ ಶ್ರೀರಾಮುಲು ಎಂಬ ರೊಕ್ಕಸ್ಥ ಆಸಾಮಿಯನ್ನು ಕಣಕ್ಕಿಳಿಸಿ ಬೆವರಿಳಿಸುವಂತೆ ಮಾಡುತ್ತಿದೆ ಎಂಬ ವೆರಿ ಸೂಪರ್‍ಫಿಶಿಯಲ್ ಅಭಿಪ್ರಾಯ ಜನರ ನಡುವೆ ಹರಿದಾಡುತ್ತಿದೆ, ಅಥವಾ ಹರಿದಾಡಿಸಲಾಗುತ್ತಿದೆ.
ಕಾಂಗ್ರೆಸ್ ಪಾಲಿಗೆ ದಿಲ್ಲಿ ಕೂಸು ರಾಹುಲ್‍ಗಿಂತಲೂ ಸ್ಟಾರ್ ಕ್ಯಾಂಪೇನರ್ ಅಂತಂದರೆ ಅದು ಸಿಎಂ ಸಿದ್ರಾಮಯ್ಯ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಜನರನ್ನು ಕೈ ಪಾರ್ಟಿಯತ್ತ ಸೆಳೆದಿವೆ. ಇನ್ನು ಸಿದ್ರಾಮಯ್ಯನಂತ ಮಾಸ್ ಲೀಡರ್ರು ಪ್ರಚಾರ ಮಾಡಿಬಿಟ್ರೆ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯೋದ್ರಲ್ಲಿ ಸಂಶಯವಿಲ್ಲ. ಬಹುತೇಕ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಹಾಗಾಗಿ ಸಿಎಂ ಸಿದ್ರಾಮಯ್ಯರನ್ನು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿಸಬೇಕು ಅನ್ನೊ ಪ್ಲ್ಯಾನು ಹಾಕಿಕೊಂಡೇ ಬಿಜೆಪಿ ಬದಾಮಿಯಲ್ಲಿ ಶ್ರೀರಾಮುಲುರನ್ನು ಫೀಲ್ಡಿಗಿಳಿಸಿದೆ. ಇದು ರಾಮುಲು ಸ್ಪರ್ಧೆಯ ನೇರಾನೇರ ವಾಸ್ತವ. ಆದ್ರೆ ಪಾಲಿಟಿಕ್ಸ್ ಅನ್ನೋದು ಇಷ್ಟು ಸರಳವಾದ ಸಂಗತಿ ಅಲ್ಲ. ಒಂದೊಂದು ತಿರುವಿನೊಳಗೂ ಹತ್ತಾರು ಒಳಹುಗಳು ಮಲಗಿರುತ್ತವೆ. ರಾಮುಲು ಸ್ಪರ್ಧೆಯ ಹಿಂದೆಯೂ ಇಂತದ್ದೇ ಒಂದು ಹಿಡನ್ ಕಾರ್ಯತಂತ್ರವಿದೆ. ಅದು ಸ್ವತಃ ಬಿಜೆಪಿಯೇ ಅಳೆದು-ತೂಗಿ ಮಡಗಿದ ಮಹೂರ್ತ! ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸೋ ಅಮಿತ್ ಶಾ ಸ್ಕೆಚ್ಚು!!

ಸೋಲಿನ ಪಾಕ

ಎತ್ತಿಂದೆತ್ತ ಲೆಕ್ಕ ಹಾಕಿದರೂ, ಏನೆಲ್ಲಾ ಪರ್ಮುಟೇಷನ್-ಕಾಂಬಿನೇಷನ್ ಗುಣಿಸಿ ಗುಡ್ಡೆ ಹಾಕಿದರೂ ಬದಾಮಿಯಲ್ಲಿ ಸಿದ್ರಾಮಯ್ಯನ ಎದುರು ಬಿಜೆಪಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ. ಜಾತಿ ಕೆಮಿಸ್ಟ್ರಿಯನ್ನೇ ಅಪ್ಲೈ ಮಾಡಿ ನೋಡೋಣ. ಅಜಮಾಸು ಎರಡು ಕಾಲು ಲಕ್ಷದಷ್ಟು ಮತದಾರರಿರುವ ಬದಾಮಿಯಲ್ಲಿ ಕುರುಬರದ್ದೇ ಮೇಲುಗೈ. ಏನಿಲ್ಲವೆಂದರು 46 ಸಾವಿರ ಓಟುಗಳಿವೆ. 36 ಸಾವಿರ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಪಂಚಮಸಾಲಿ ಮತ್ತು ಬಣಜಿಗ ಎಂಬ ಎರಡು ಪಂಗಡಗಳಾಗಿ ಇಬ್ಬಾಗವಾಗಿವೆ. ಇನ್ನು ಗಾಣಿಗರ 26 ಸಾವಿರ, ನೇಕಾರರ 17 ಸಾವಿರ, ದಲಿತರ 25 ಸಾವಿರ, ನಾಯಕರ 13 ಸಾವಿರ, ಅಲ್ಪಸಂಖ್ಯಾತರ 12 ಸಾವಿರ ಮತಗಳಿವೆ. ಕುರುಬರ, ದಲಿತರ, ಅಲ್ಪಸಂಖ್ಯಾತರ ಮತಗಳು ಒಗ್ಗೂಡಿದರೆ ಸಾಕು ಸಿದ್ರಾಮಯ್ಯ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದಾಗ್ಯೂ ಇನ್ನುಳಿದ ಜಾತಿಗಳ ಮೇಲೂ ಆರ್.ಬಿ.ತಿಮ್ಮಾಪೂರ, ಬಿ.ಬಿ.ಚಿಮ್ಮನಕಟ್ಟಿ, ಸತೀಶ್ ಜಾರಕಿಹೊಳಿಯಂತಹ ಲೋಕಲ್ ಲೀಡರುಗಳ ಪವರ್‍ಫುಲ್ ಪ್ರಭಾವವಿದೆ. ಇನ್ನು ಲಿಂಗಾಯತ ಮತಗಳನ್ನು ಸೆಳೆಯಲು ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಲಿಂಗಾಯತ ಲೀಡರುಗಳ ದಂಡೇ ಕಾರ್ಯಪ್ರವೃತ್ತವಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ ಬಿಜೆಪಿಯ ರಾಮುಲುಗೆ ತನ್ನದೇ ಜಾತಿಯ ನಾಯಕರ ಮತಗಳು ಬೀಳೋದೂ ಡೌಟು. ಯಾಕೆಂದ್ರೆ ಅವು ಅದೇ ಸಮುದಾಯದ ಸತೀಶ್ ಜಾರಕಿಹೊಳಿಯ ಸ್ಥಳೀಯ ಪ್ರಭಾವಳಿಯಲ್ಲಿವೆ.
ಇಲ್ಲಿ ಬಿಜೆಪಿಗೆ ನಿಜಕ್ಕೂ ಸಿದ್ರಾಮಯ್ಯನ ನಿದ್ದೆಗೆಡಿಸುವುದೇ ಏಕಮೇವ ಇರಾದೆಯಾಗಿದ್ದಿದ್ದರೆ ಯಾರಾದರು ಪವರ್‍ಫುಲ್ ಲಿಂಗಾಯತ ಲೀಡರನ್ನು ಚುನಾವಣೆಗೆ ಇಳಿಸಬೇಕಿತ್ತು. ಕೇವಲ ಇದೊಂದು ಕ್ಷೇತ್ರದ ಲಿಂಗಾಯತರ ಮತಗಾತ್ರವನ್ನು ಕಬ್ಜಾ ಮಾಡಿಕೊಳ್ಳುವುದಲ್ಲದೇ ಇಡೀ ಉತ್ತರ ಕರ್ನಾಟಕದಲ್ಲಿ ಈಗಲೂ ಲಿಂಗಾಯತರ ಜೊತೆ ನಾವೇ ಹೆಜ್ಜೆ ಹಾಕುತ್ತಿದ್ದೇವೆ ಎಂಬ ಸಂದೇಶ ಹೊರಬೀಳುವಂತೆ ಮಾಡುವಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಹಾಗೆ ಮಾಡದೆ ಜಾತಿ ಲೆಕ್ಕಾಚಾರದಲ್ಲೂ ಹಿಂದೆ ಬಿದ್ದಿರುವ, ಕ್ಷೇತ್ರ ಒಡನಾಟದಲ್ಲೂ ತಾಳೆಯಾಗದ ರೆಡ್ಡಿ ಪಾಳೆಯದ ಶ್ರೀರಾಮುಲುವನ್ನು ಬಿಜೆಪಿ ಕಣಕ್ಕಿಳಿಸಿರೋದು ಯಾಕೆ?

ಬಿಸಿ ತುಪ್ಪಕ್ಕೆ ದ್ವಂದ್ವ ಸೂತ್ರ
ಗಣಿ ಮಾಫಿಯಾದ ಕಾರಣಕ್ಕೆ ಜೈಲುಪಾಲಾಗಿ, ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಬಂದರೂ ಬಳ್ಳಾರಿ ಜಿಲ್ಲೆಯೊಳಗೆ ಕಾಲಿಡದಂತೆ ನಿರ್ಬಂಧ ಹೇರಿಸಿಕೊಂಡಿರುವ ಜನಾರ್ಧನ ರೆಡ್ಡಿ ಮತ್ತವರ ಟೀಮು ಬಿಜೆಪಿ ಪಾಲಿಗೆ ಬಿಸಿ ತುಪ್ಪದಂತಾಗಿದ್ದಾರೆ. ಅತ್ತ ನುಂಗುವಂತೆಯೂ ಇಲ್ಲ, ಇತ್ತ ಉಗುಳುವಂತೆಯೂ ಇಲ್ಲ. ರೆಡ್ಡಿಗಳ ಕಾಸು, ವರ್ಚಸ್ಸು ಬೇಕು ಆದರೆ ಪಕ್ಷದೊಳಗೆ ಅವರು ಪ್ರಭಾವಿಗಳಾಗೋದು ಬೇಡ. ಇದು ಬಿಜೆಪಿಯ ಆಂತರಿಕ ಇಂಗಿತ. ಚುನಾವಣೆ ಗೆಲ್ಲೋದಕ್ಕೆ, ಅಗತ್ಯ ಬಿದ್ದರೆ ಆಪರೇಷನ್ ಕಮಲಕ್ಕೆ ರೆಡ್ಡಿಗಳೇ ಫೈನಾನ್ಸ್ ಮಾಡಬೇಕಾಗಿರೋದ್ರಿಂದ ಅವರನ್ನು ಅಷ್ಟು ಸುಲಭಕ್ಕೆ ಸೈಡ್‍ಲೈನ್ ಮಾಡಲಾಗದು. ಹಾಗಂತ ಈ ಹಿಂದೆ ಅವರೇ ಪಕ್ಷವನ್ನು ಹೈಜಾಕ್ ಮಾಡುವಷ್ಟರ ಮಟ್ಟಕ್ಕೆ ಬೆಳೆಯಲೂ ಬಿಡುವಂತಿಲ್ಲ. ಇಂಥಾ ಇಕ್ಕಟ್ಟನ್ನು ನಿಭಾಯಿಸಿಕೊಳ್ಳಲೇ ಅಮಿತ್ ಷಾ, ಸಂಘ ಪರಿವಾರದ ಜೊತೆಗೆ ಸಮಾಲೋಚನೆ ನಡೆಸಿ ಶ್ರೀರಾಮುಲುವನ್ನು ಸಿದ್ರಾಮಯ್ಯ ವಿರುದ್ಧ ಕಣಕ್ಕಿಳಿಸಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ಮಾಡೋದ್ರಿಂದ ಷಾ ಮತ್ತು ಸಂಘ, ಒಂದೇ ಕಲ್ಲಿಗೆ ಎರಡು ಹಕ್ಕಿಯ ಕಾಲು ಮುರಿಯಲು ಹೊರಟಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ಬದಾಮಿಯಲ್ಲಿ ತಮ್ಮ ಪಕ್ಷದ ಕ್ಯಾಂಡಿಡೇಟು ಸಿದ್ರಾಮಯ್ಯನ ವಿರುದ್ಧ ಗೆಲ್ಲೊಲ್ಲ ಅನ್ನೋದು ಅಮಿತ್ ಷಾಗೂ ಗೊತ್ತಿತ್ತು. ಆದರೆ ಆ ಸೋಲಿನಿಂದಲೂ ಒಂದು ಲಾಭ ಮಾಡಿಕೊಳ್ಳುವ ತಂತ್ರ ಹೆಣೆದೇ ರಾಮುಲುವನ್ನು ಕಣಕ್ಕಿಳಿಸುವಂತೆ ಜನಾರ್ಧನ ರೆಡ್ಡಿಯ ಮುಂದೆ ಅಮಿತ್ ಶಾ ಆಫರ್ ಇಟ್ಟಿದ್ದಾರೆ. ಅದು ಪಕ್ಷದೊಳಗೆ ರೆಡ್ಡಿಗಳನ್ನು ಅಡ್ಡಡ್ಡ ಮಲಗಿಸುವ ನಾಜೂಕಯ್ಯನ ತಂತ್ರ. ಹೇಗೂ ರೆಡ್ಡಿ ಬ್ರಿಗೇಡು ಪೊಲಿಟಿಕಲ್ ಪುನರ್ಜನ್ಮಕ್ಕಾಗಿ ಹಾತೊರೆಯುತ್ತಾ ಇರೋದ್ರಿಂದ ಪಕ್ಷ ಇಟ್ಟ ಈ ಆಫರ್ರನ್ನು ಜನಾರ್ಧನ್ ರೆಡ್ಡಿ ತಿರಸ್ಕರಿಸಲು ಬರುವುದಿಲ್ಲ. ಒಂದೊಮ್ಮೆ ಆತ ಅಲ್ಲಿ ಸೋಲುವ ಸುಳಿವಿಡಿದು ತನ್ನ ಭಂಟನ ಸ್ಪರ್ಧೆಗೆ ಅಡ್ಡಡ್ಡ ತಲೆಯಾಡಿಸಿದರೆ ಪಕ್ಷದೊಳಗೆ ರೆಡ್ಡಿ ತಾನಾಗೇ ಆತ್ಮಹತ್ಯೆ ಮಾಡಿಕೊಂಡಂತಾಗುತ್ತಿತ್ತು. ಧೈರ್ಯ ಮಾಡಿ ಸ್ಪರ್ಧೆಗೆ ಸೈ ಅಂದರೂ, ಶ್ರೀರಾಮುಲುಗೆ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಆ ಸೋಲು ಸಹಾ ರೆಡ್ಡಿ ಬೆಟಾಲಿಯನನ್ನು ಪಕ್ಷದೊಳಗೆ ಕೆಡವಿ ಬಿಡುತ್ತೆ! ಅಲ್ಲಿಗೆ ಯಾವ ದುಶ್ಮನಿ, ಮನಸ್ತಾಪವನ್ನೂ ಕಟ್ಟಿಕೊಳ್ಳದೆ ರೆಡ್ಡಿಗಳನ್ನು ಮಟ್ಟ ಹಾಕಿದಂತೆ ಆಯ್ತಲ್ಲವೇ!! ಅಪ್ಪಿತಪ್ಪಿ, ಶ್ರೀರಾಮುಲು ಗೆದ್ದೇ ಬಿಟ್ಟರು ಅಂತಿಟ್ಟುಕೊಳ್ಳಿ ಆಗಲೂ ಲಾಭ ಬಿಜೆಪಿಗೇ ತಾನೇ.

ಒಂದು ಕಡೆ ಸಿದ್ರಾಮಯ್ಯರನ್ನು ವಿಚಲಿತ ಮಾಡಿದಂತಾಗುತ್ತೆ. ಮತ್ತೊಂದೆಡೆ ರೆಡ್ಡಿಗಳನ್ನು ಎರಡು ತುದಿಯ ಖಡ್ಗದಿಂದ ಇರಿದಂತಾಗುತ್ತೆ! ಇದು ಅಮಿತ್ ಷಾ ಲೆಕ್ಕಾಚಾರ. ಒಟ್ಟಿನಲ್ಲಿ ರೆಡ್ಡಿಗಳನ್ನು ಕಟ್ಟಿಹಾಕಲು ರಾಮುಲು ಎಂಬ ಹರಕೆಯ ಕುರಿಯನ್ನು ಷಾ ಬಳಸಿಕೊಳ್ಳುತ್ತಿರೋದು ಸ್ಪಷ್ಟ. ಕಾಕತಾಳೀಯ ಅಂದ್ರೆ, ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿಯ ಮಿನುಗು`ತಾರೆ’ ಸುಷ್ಮಾ ಸ್ವರಾಜ್ ಪರ ರಿಸ್ಕನ್ನು ಕೈಗೆತ್ತಿಕೊಂಡು ಬಿಜೆಪಿಯೊಳಗೆ ಬಲಾಢ್ಯರಾಗಿ ಬೆಳೆದಿದ್ದ ರೆಡ್ಡಿಗಳನ್ನು ಮಟ್ಟ ಹಾಕಲು ಇದೀಗ ಅಂತದ್ದೇ ಚಾಲೆಂಜಿಂಗ್ ಚುನಾವಣೆ ಬಳಕೆಯಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...