Homeಮುಖಪುಟರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

ರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

- Advertisement -
- Advertisement -

– ಗಿರೀಶ್ ತಾಳಿಕಟ್ಟೆ /

ಈ ಸಲದ ಎಲೆಕ್ಷನ್‍ನ ಹೈವೋಲ್ಟೇಜ್ ಕ್ಷೇತ್ರ ಅಂತ್ಯಾವುದಾದರು ಇದ್ದರೆ ಅದು ಬದಾಮಿ ಅನ್ನೋದ್ರಲ್ಲಿ ಯಾವ ಡೌಟೂ ಇಲ್ಲ. ಸಿಎಂ ಸಿದ್ರಾಮಯ್ಯ ಅಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಗಾಳಿ ಸುದ್ದಿ ತೇಲಾಡಿದಾಗಲೇ ಬದಾಮಿ ಹೈಲೈಟಿಗೆ ಬಂದಿತ್ತು. ಆದರೆ ಯಾವಾಗ ಬಿಜೆಪಿ, ಶ್ರೀರಾಮುಲು ಎಂಬ ರೆಡ್ಡಿ ಬೆಟಾಲಿಯನ್ ಬಂಟನನ್ನು ತಂದು ಸಿದ್ರಾಮಯ್ಯನ ಎದುರು ನಿಲ್ಲಿಸಿತೋ ಆಗಿನಿಂದ ಅದು ಸಿಕ್ಕಾಪಟ್ಟೆ ಸೆನ್ಸೇಷನಲ್ ಕ್ಷೇತ್ರವಾಗಿದೆ. ಚಾಮುಂಡೇಶ್ವರಿಯಲ್ಲಿ ಗೆಲುವು ಕಷ್ಟ ಅಂತಾ, ಕುರುಬರ ಸಾಲಿಡ್ ಮತಗಳಿರುವ ಬದಾಮಿಗೂ ಸಿದ್ರಾಮಯ್ಯ ತನ್ನ ಸ್ಪರ್ಧೆ ವಿಸ್ತರಿಸಿದರೆ ಬಿಜೆಪಿ ಅಲ್ಲಿಯೂ ಶ್ರೀರಾಮುಲು ಎಂಬ ರೊಕ್ಕಸ್ಥ ಆಸಾಮಿಯನ್ನು ಕಣಕ್ಕಿಳಿಸಿ ಬೆವರಿಳಿಸುವಂತೆ ಮಾಡುತ್ತಿದೆ ಎಂಬ ವೆರಿ ಸೂಪರ್‍ಫಿಶಿಯಲ್ ಅಭಿಪ್ರಾಯ ಜನರ ನಡುವೆ ಹರಿದಾಡುತ್ತಿದೆ, ಅಥವಾ ಹರಿದಾಡಿಸಲಾಗುತ್ತಿದೆ.
ಕಾಂಗ್ರೆಸ್ ಪಾಲಿಗೆ ದಿಲ್ಲಿ ಕೂಸು ರಾಹುಲ್‍ಗಿಂತಲೂ ಸ್ಟಾರ್ ಕ್ಯಾಂಪೇನರ್ ಅಂತಂದರೆ ಅದು ಸಿಎಂ ಸಿದ್ರಾಮಯ್ಯ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಜನರನ್ನು ಕೈ ಪಾರ್ಟಿಯತ್ತ ಸೆಳೆದಿವೆ. ಇನ್ನು ಸಿದ್ರಾಮಯ್ಯನಂತ ಮಾಸ್ ಲೀಡರ್ರು ಪ್ರಚಾರ ಮಾಡಿಬಿಟ್ರೆ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯೋದ್ರಲ್ಲಿ ಸಂಶಯವಿಲ್ಲ. ಬಹುತೇಕ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಹಾಗಾಗಿ ಸಿಎಂ ಸಿದ್ರಾಮಯ್ಯರನ್ನು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿಸಬೇಕು ಅನ್ನೊ ಪ್ಲ್ಯಾನು ಹಾಕಿಕೊಂಡೇ ಬಿಜೆಪಿ ಬದಾಮಿಯಲ್ಲಿ ಶ್ರೀರಾಮುಲುರನ್ನು ಫೀಲ್ಡಿಗಿಳಿಸಿದೆ. ಇದು ರಾಮುಲು ಸ್ಪರ್ಧೆಯ ನೇರಾನೇರ ವಾಸ್ತವ. ಆದ್ರೆ ಪಾಲಿಟಿಕ್ಸ್ ಅನ್ನೋದು ಇಷ್ಟು ಸರಳವಾದ ಸಂಗತಿ ಅಲ್ಲ. ಒಂದೊಂದು ತಿರುವಿನೊಳಗೂ ಹತ್ತಾರು ಒಳಹುಗಳು ಮಲಗಿರುತ್ತವೆ. ರಾಮುಲು ಸ್ಪರ್ಧೆಯ ಹಿಂದೆಯೂ ಇಂತದ್ದೇ ಒಂದು ಹಿಡನ್ ಕಾರ್ಯತಂತ್ರವಿದೆ. ಅದು ಸ್ವತಃ ಬಿಜೆಪಿಯೇ ಅಳೆದು-ತೂಗಿ ಮಡಗಿದ ಮಹೂರ್ತ! ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸೋ ಅಮಿತ್ ಶಾ ಸ್ಕೆಚ್ಚು!!

ಸೋಲಿನ ಪಾಕ

ಎತ್ತಿಂದೆತ್ತ ಲೆಕ್ಕ ಹಾಕಿದರೂ, ಏನೆಲ್ಲಾ ಪರ್ಮುಟೇಷನ್-ಕಾಂಬಿನೇಷನ್ ಗುಣಿಸಿ ಗುಡ್ಡೆ ಹಾಕಿದರೂ ಬದಾಮಿಯಲ್ಲಿ ಸಿದ್ರಾಮಯ್ಯನ ಎದುರು ಬಿಜೆಪಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ. ಜಾತಿ ಕೆಮಿಸ್ಟ್ರಿಯನ್ನೇ ಅಪ್ಲೈ ಮಾಡಿ ನೋಡೋಣ. ಅಜಮಾಸು ಎರಡು ಕಾಲು ಲಕ್ಷದಷ್ಟು ಮತದಾರರಿರುವ ಬದಾಮಿಯಲ್ಲಿ ಕುರುಬರದ್ದೇ ಮೇಲುಗೈ. ಏನಿಲ್ಲವೆಂದರು 46 ಸಾವಿರ ಓಟುಗಳಿವೆ. 36 ಸಾವಿರ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಪಂಚಮಸಾಲಿ ಮತ್ತು ಬಣಜಿಗ ಎಂಬ ಎರಡು ಪಂಗಡಗಳಾಗಿ ಇಬ್ಬಾಗವಾಗಿವೆ. ಇನ್ನು ಗಾಣಿಗರ 26 ಸಾವಿರ, ನೇಕಾರರ 17 ಸಾವಿರ, ದಲಿತರ 25 ಸಾವಿರ, ನಾಯಕರ 13 ಸಾವಿರ, ಅಲ್ಪಸಂಖ್ಯಾತರ 12 ಸಾವಿರ ಮತಗಳಿವೆ. ಕುರುಬರ, ದಲಿತರ, ಅಲ್ಪಸಂಖ್ಯಾತರ ಮತಗಳು ಒಗ್ಗೂಡಿದರೆ ಸಾಕು ಸಿದ್ರಾಮಯ್ಯ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದಾಗ್ಯೂ ಇನ್ನುಳಿದ ಜಾತಿಗಳ ಮೇಲೂ ಆರ್.ಬಿ.ತಿಮ್ಮಾಪೂರ, ಬಿ.ಬಿ.ಚಿಮ್ಮನಕಟ್ಟಿ, ಸತೀಶ್ ಜಾರಕಿಹೊಳಿಯಂತಹ ಲೋಕಲ್ ಲೀಡರುಗಳ ಪವರ್‍ಫುಲ್ ಪ್ರಭಾವವಿದೆ. ಇನ್ನು ಲಿಂಗಾಯತ ಮತಗಳನ್ನು ಸೆಳೆಯಲು ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಲಿಂಗಾಯತ ಲೀಡರುಗಳ ದಂಡೇ ಕಾರ್ಯಪ್ರವೃತ್ತವಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ ಬಿಜೆಪಿಯ ರಾಮುಲುಗೆ ತನ್ನದೇ ಜಾತಿಯ ನಾಯಕರ ಮತಗಳು ಬೀಳೋದೂ ಡೌಟು. ಯಾಕೆಂದ್ರೆ ಅವು ಅದೇ ಸಮುದಾಯದ ಸತೀಶ್ ಜಾರಕಿಹೊಳಿಯ ಸ್ಥಳೀಯ ಪ್ರಭಾವಳಿಯಲ್ಲಿವೆ.
ಇಲ್ಲಿ ಬಿಜೆಪಿಗೆ ನಿಜಕ್ಕೂ ಸಿದ್ರಾಮಯ್ಯನ ನಿದ್ದೆಗೆಡಿಸುವುದೇ ಏಕಮೇವ ಇರಾದೆಯಾಗಿದ್ದಿದ್ದರೆ ಯಾರಾದರು ಪವರ್‍ಫುಲ್ ಲಿಂಗಾಯತ ಲೀಡರನ್ನು ಚುನಾವಣೆಗೆ ಇಳಿಸಬೇಕಿತ್ತು. ಕೇವಲ ಇದೊಂದು ಕ್ಷೇತ್ರದ ಲಿಂಗಾಯತರ ಮತಗಾತ್ರವನ್ನು ಕಬ್ಜಾ ಮಾಡಿಕೊಳ್ಳುವುದಲ್ಲದೇ ಇಡೀ ಉತ್ತರ ಕರ್ನಾಟಕದಲ್ಲಿ ಈಗಲೂ ಲಿಂಗಾಯತರ ಜೊತೆ ನಾವೇ ಹೆಜ್ಜೆ ಹಾಕುತ್ತಿದ್ದೇವೆ ಎಂಬ ಸಂದೇಶ ಹೊರಬೀಳುವಂತೆ ಮಾಡುವಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಹಾಗೆ ಮಾಡದೆ ಜಾತಿ ಲೆಕ್ಕಾಚಾರದಲ್ಲೂ ಹಿಂದೆ ಬಿದ್ದಿರುವ, ಕ್ಷೇತ್ರ ಒಡನಾಟದಲ್ಲೂ ತಾಳೆಯಾಗದ ರೆಡ್ಡಿ ಪಾಳೆಯದ ಶ್ರೀರಾಮುಲುವನ್ನು ಬಿಜೆಪಿ ಕಣಕ್ಕಿಳಿಸಿರೋದು ಯಾಕೆ?

ಬಿಸಿ ತುಪ್ಪಕ್ಕೆ ದ್ವಂದ್ವ ಸೂತ್ರ
ಗಣಿ ಮಾಫಿಯಾದ ಕಾರಣಕ್ಕೆ ಜೈಲುಪಾಲಾಗಿ, ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಬಂದರೂ ಬಳ್ಳಾರಿ ಜಿಲ್ಲೆಯೊಳಗೆ ಕಾಲಿಡದಂತೆ ನಿರ್ಬಂಧ ಹೇರಿಸಿಕೊಂಡಿರುವ ಜನಾರ್ಧನ ರೆಡ್ಡಿ ಮತ್ತವರ ಟೀಮು ಬಿಜೆಪಿ ಪಾಲಿಗೆ ಬಿಸಿ ತುಪ್ಪದಂತಾಗಿದ್ದಾರೆ. ಅತ್ತ ನುಂಗುವಂತೆಯೂ ಇಲ್ಲ, ಇತ್ತ ಉಗುಳುವಂತೆಯೂ ಇಲ್ಲ. ರೆಡ್ಡಿಗಳ ಕಾಸು, ವರ್ಚಸ್ಸು ಬೇಕು ಆದರೆ ಪಕ್ಷದೊಳಗೆ ಅವರು ಪ್ರಭಾವಿಗಳಾಗೋದು ಬೇಡ. ಇದು ಬಿಜೆಪಿಯ ಆಂತರಿಕ ಇಂಗಿತ. ಚುನಾವಣೆ ಗೆಲ್ಲೋದಕ್ಕೆ, ಅಗತ್ಯ ಬಿದ್ದರೆ ಆಪರೇಷನ್ ಕಮಲಕ್ಕೆ ರೆಡ್ಡಿಗಳೇ ಫೈನಾನ್ಸ್ ಮಾಡಬೇಕಾಗಿರೋದ್ರಿಂದ ಅವರನ್ನು ಅಷ್ಟು ಸುಲಭಕ್ಕೆ ಸೈಡ್‍ಲೈನ್ ಮಾಡಲಾಗದು. ಹಾಗಂತ ಈ ಹಿಂದೆ ಅವರೇ ಪಕ್ಷವನ್ನು ಹೈಜಾಕ್ ಮಾಡುವಷ್ಟರ ಮಟ್ಟಕ್ಕೆ ಬೆಳೆಯಲೂ ಬಿಡುವಂತಿಲ್ಲ. ಇಂಥಾ ಇಕ್ಕಟ್ಟನ್ನು ನಿಭಾಯಿಸಿಕೊಳ್ಳಲೇ ಅಮಿತ್ ಷಾ, ಸಂಘ ಪರಿವಾರದ ಜೊತೆಗೆ ಸಮಾಲೋಚನೆ ನಡೆಸಿ ಶ್ರೀರಾಮುಲುವನ್ನು ಸಿದ್ರಾಮಯ್ಯ ವಿರುದ್ಧ ಕಣಕ್ಕಿಳಿಸಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ಮಾಡೋದ್ರಿಂದ ಷಾ ಮತ್ತು ಸಂಘ, ಒಂದೇ ಕಲ್ಲಿಗೆ ಎರಡು ಹಕ್ಕಿಯ ಕಾಲು ಮುರಿಯಲು ಹೊರಟಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ಬದಾಮಿಯಲ್ಲಿ ತಮ್ಮ ಪಕ್ಷದ ಕ್ಯಾಂಡಿಡೇಟು ಸಿದ್ರಾಮಯ್ಯನ ವಿರುದ್ಧ ಗೆಲ್ಲೊಲ್ಲ ಅನ್ನೋದು ಅಮಿತ್ ಷಾಗೂ ಗೊತ್ತಿತ್ತು. ಆದರೆ ಆ ಸೋಲಿನಿಂದಲೂ ಒಂದು ಲಾಭ ಮಾಡಿಕೊಳ್ಳುವ ತಂತ್ರ ಹೆಣೆದೇ ರಾಮುಲುವನ್ನು ಕಣಕ್ಕಿಳಿಸುವಂತೆ ಜನಾರ್ಧನ ರೆಡ್ಡಿಯ ಮುಂದೆ ಅಮಿತ್ ಶಾ ಆಫರ್ ಇಟ್ಟಿದ್ದಾರೆ. ಅದು ಪಕ್ಷದೊಳಗೆ ರೆಡ್ಡಿಗಳನ್ನು ಅಡ್ಡಡ್ಡ ಮಲಗಿಸುವ ನಾಜೂಕಯ್ಯನ ತಂತ್ರ. ಹೇಗೂ ರೆಡ್ಡಿ ಬ್ರಿಗೇಡು ಪೊಲಿಟಿಕಲ್ ಪುನರ್ಜನ್ಮಕ್ಕಾಗಿ ಹಾತೊರೆಯುತ್ತಾ ಇರೋದ್ರಿಂದ ಪಕ್ಷ ಇಟ್ಟ ಈ ಆಫರ್ರನ್ನು ಜನಾರ್ಧನ್ ರೆಡ್ಡಿ ತಿರಸ್ಕರಿಸಲು ಬರುವುದಿಲ್ಲ. ಒಂದೊಮ್ಮೆ ಆತ ಅಲ್ಲಿ ಸೋಲುವ ಸುಳಿವಿಡಿದು ತನ್ನ ಭಂಟನ ಸ್ಪರ್ಧೆಗೆ ಅಡ್ಡಡ್ಡ ತಲೆಯಾಡಿಸಿದರೆ ಪಕ್ಷದೊಳಗೆ ರೆಡ್ಡಿ ತಾನಾಗೇ ಆತ್ಮಹತ್ಯೆ ಮಾಡಿಕೊಂಡಂತಾಗುತ್ತಿತ್ತು. ಧೈರ್ಯ ಮಾಡಿ ಸ್ಪರ್ಧೆಗೆ ಸೈ ಅಂದರೂ, ಶ್ರೀರಾಮುಲುಗೆ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಆ ಸೋಲು ಸಹಾ ರೆಡ್ಡಿ ಬೆಟಾಲಿಯನನ್ನು ಪಕ್ಷದೊಳಗೆ ಕೆಡವಿ ಬಿಡುತ್ತೆ! ಅಲ್ಲಿಗೆ ಯಾವ ದುಶ್ಮನಿ, ಮನಸ್ತಾಪವನ್ನೂ ಕಟ್ಟಿಕೊಳ್ಳದೆ ರೆಡ್ಡಿಗಳನ್ನು ಮಟ್ಟ ಹಾಕಿದಂತೆ ಆಯ್ತಲ್ಲವೇ!! ಅಪ್ಪಿತಪ್ಪಿ, ಶ್ರೀರಾಮುಲು ಗೆದ್ದೇ ಬಿಟ್ಟರು ಅಂತಿಟ್ಟುಕೊಳ್ಳಿ ಆಗಲೂ ಲಾಭ ಬಿಜೆಪಿಗೇ ತಾನೇ.

ಒಂದು ಕಡೆ ಸಿದ್ರಾಮಯ್ಯರನ್ನು ವಿಚಲಿತ ಮಾಡಿದಂತಾಗುತ್ತೆ. ಮತ್ತೊಂದೆಡೆ ರೆಡ್ಡಿಗಳನ್ನು ಎರಡು ತುದಿಯ ಖಡ್ಗದಿಂದ ಇರಿದಂತಾಗುತ್ತೆ! ಇದು ಅಮಿತ್ ಷಾ ಲೆಕ್ಕಾಚಾರ. ಒಟ್ಟಿನಲ್ಲಿ ರೆಡ್ಡಿಗಳನ್ನು ಕಟ್ಟಿಹಾಕಲು ರಾಮುಲು ಎಂಬ ಹರಕೆಯ ಕುರಿಯನ್ನು ಷಾ ಬಳಸಿಕೊಳ್ಳುತ್ತಿರೋದು ಸ್ಪಷ್ಟ. ಕಾಕತಾಳೀಯ ಅಂದ್ರೆ, ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿಯ ಮಿನುಗು`ತಾರೆ’ ಸುಷ್ಮಾ ಸ್ವರಾಜ್ ಪರ ರಿಸ್ಕನ್ನು ಕೈಗೆತ್ತಿಕೊಂಡು ಬಿಜೆಪಿಯೊಳಗೆ ಬಲಾಢ್ಯರಾಗಿ ಬೆಳೆದಿದ್ದ ರೆಡ್ಡಿಗಳನ್ನು ಮಟ್ಟ ಹಾಕಲು ಇದೀಗ ಅಂತದ್ದೇ ಚಾಲೆಂಜಿಂಗ್ ಚುನಾವಣೆ ಬಳಕೆಯಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...