Homeಅಂಕಣಗಳುಥೂತ್ತೇರಿ | ಯಾಹೂರೇಣುಕಾಚಾರಿಗೆ ಹೊನ್ನಾಳಿ ಹೊಡೆತ ಗೊತ್ತಿಲ್ಲವಂತಲ್ಲಾ.....ಯಾಹೂ

ರೇಣುಕಾಚಾರಿಗೆ ಹೊನ್ನಾಳಿ ಹೊಡೆತ ಗೊತ್ತಿಲ್ಲವಂತಲ್ಲಾ…..ಯಾಹೂ

- Advertisement -
- Advertisement -

ನೋಡಿದ ಕೂಡಲೇ ಆರೆಸ್ಸೆಸ್‍ನ ಸಕ್ರಿಯ ಕಾರ್ಯಕರ್ತನಂತೆ ಕಾಣುವ ಆದಿತ್ಯರಾವ್ ಮೀಡಿಯಾ ಜನಿವಾರಿಗಳ ನಿಜಬಣ್ಣ ಬಯಲು ಮಾಡಿದ ಯುಗಪುರುಷನಂತೆ ಗೋಚರಿಸುತ್ತಿದ್ದಾನಲ್ಲಾ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬು ಮಡಗಿ ಆತ ಮಾಯವಾದ ನಂತರ ಬೆಳಗ್ಗೆ ಚಡ್ಡಿ ಪತ್ರಿಕೆಗಳನ್ನ ತೆಗೆದು ನೋಡಿದರೆ, ದೇಶವೇ ಬೆಚ್ಚಿಬೀಳುವಂತಹ ಸುದ್ದಿ ಮಾಡಿದ್ದರಲ್ಲಾ. ಅದರಲ್ಲೂ ನಿದ್ರೆಯಲ್ಲೂ ಬುದೂರನೆದ್ದು ನೀರು ಕುಡಿದು ಬೆವರು ಒರೆಸಿಕೊಳ್ಳುತ್ತ ಬುಲೆಟ್‍ನಿಂದ ಬಚಾವಾದವನಂತೆ ತೊದಲುವ ವಿಜಯಸಂಕೇಶ್ವರ ಎಂಬ ಹಳೆ ಲಾರಿ ಇಂಜಿನ್ ತನ್ನ ವಿಶದವಾಣಿ ಎಂಬ ಪತ್ರಿಕೆಯಲ್ಲಿ ಗಣರಾಜ್ಯೋತ್ಸವದ ಟೈಮಿಗೆ ದುಷ್ಕೃತ್ಯವೆಸಗಿ ದೇಶವನ್ನೇ ಗಂಡಾಂತರಕ್ಕೆ ದೂಡುವ ಕೃತ್ಯವಿದು ಎಂದು ತನ್ನ ಮನಸ್ಸಿನಾಳದಲ್ಲಿದ್ದ ಮುಸ್ಲಿಂ ದ್ವೇಷವನ್ನ ಕಾರಿಕೊಂಡಿದ್ದನಲ್ಲಾ. ಆದರೇನು ಮರುದಿನವೇ ಸಿಕ್ಕ ಆದಿತ್ಯರಾವ್ ಬಗ್ಗೆ ಕನಿಕರ ಉಕ್ಕಿ ಹರಿದ ಪರಿಣಾಮ ಈತ ಮಾನಸಿಕ ಅಸ್ವಸ್ಥನಾದ. ಈ ಮನೋರೋಗಿ ಅಂತಿಂಥವನಲ್ಲ ಡಿಗ್ರಿ ಪಡೆದವನು. ಬಾಂಬು ತಯಾರಿಸುವ ತಂತ್ರಜ್ಞಾನ ಹೊಂದಿದ್ದವನು. ಆನ್‍ಲೈನ್ ಮುಖಾಂತರ ಬಾಂಬು ಸಾಮಗ್ರಿ ಖರೀದಿಸಿದವನು. ಆದರೂ ಬುದ್ಧಿಮಾಂದ್ಯನೆಂದು ಬಿಂಬಿತನಾಗಿರುವ ಈತನೇನಾದರೂ ಸಿಕ್ಕಿ ಬೀಳದಿದ್ದರೆ, ವಿಜಯ ಸಂಕೇಶ್ವರ ಸಾಬರ ಭಯೋತ್ಪಾದನೆ ಬಗ್ಗೆ ವಿಶೇಷ ಪುರವಣಿಯನ್ನೇ ತರುತ್ತಿದ್ದನಂತಲ್ಲಾ. ತನ್ನ ತಮ್ಮನ ಪರ ವಕಾಲತ್ತು ವಹಿಸಿದವನಂತೆ ಇನ್ನೂ ಒದರುತ್ತಲೇ ಇದ್ದಾನೆ. ಈ ನಡುವೆ ಸಂಕೇಶ್ವರನಿಗೆ ಪದ್ಮಶ್ರೀ ಬೇರೆ ಬಂದಿದೆ. ಪತ್ರಿಕೆಯನ್ನೂ ಚಡ್ಡಿಗಳ ಕರಪತ್ರ ಮಾಡಿರೋದು ಮತ್ತು ಅತಿಹೆಚ್ಚು ಲಾರಿಗಳನ್ನು ಮಡಗಿರೋದೆ ಪ್ರಶಸ್ತಿಗೆ ಆತನನ್ನು ಆಯ್ಕೆ ಮಾಡಿರೋದಕ್ಕೆ ಮಾನದಂಡವಂತಲ್ಲ. ಅಂದಹಾಗೆ, ಪ್ರಶಸ್ತಿ ಪಟ್ಟಿಯಲ್ಲಿ ಕೊನೇ ಘಳಿಗೆಯಲ್ಲಿ ಸಂಕೇಶ್ವರ ಹೆಸರು ಮಿಸ್ ಆಗುವ ಸಂಭವ ಇತ್ತಂತೆ, ಹಾಗಾಗಿ ಎರಡು ದಿನ ಮೋದಿ ಸರ್ಕಾರದ ವಿರುದ್ಧ ಮುಖಪುಟ ಸುದ್ದಿ ಪ್ರಕಟಿಸಿ, ಬ್ಲ್ಯಾಕ್‍ಮೇಲ್ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾನೆ ಅಂತ ಜನ ಮಾತಾಡುತ್ತಿದ್ದಾರಲ್ಲಾ, ಥೂತ್ತೇರಿ….

ಹಾದಿಬೀದಿಯಲ್ಲಿ ಸಿಗುವ ಸಾಬರೆಲ್ಲಾ ವಿಧ್ವಂಸಕರೆಂದು ಸದಾ ಚಿಂತಿಸುತ್ತ ನನ್ನ ಲಾರಿಗಳ ಕತೆಯೇನೆಂದು ಯೋಚಿಸುವ ಸಂಕೇಶ್ವರನಿಗೆ ತಿಳಿಯದ ಇನ್ನೊಂದೆರಡು ವಿಷಯಗಳೇನೆಂದರೆ ಬಾಬಾ ಬುಡನ್‍ಗಿರಿ ವಿಷಯವನ್ನ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಬ್ಬಿಸುವ ಹವಣಿಕೆಯಿಂದ ಚಿಕ್ಕಮಗಳೂರು ದೇವಸ್ಥಾನದ ಮೇಲಕ್ಕೆ ಮೆಟ್ಟು ತಂದು ಕಟ್ಟಿದ್ದವರು ಪರಮಭಕ್ತರಾದ ಭಜರಂಗಿಗಳು! ಹಾಗೇ ಮಾನ್ವಿಯಲ್ಲಿ ಮಧ್ಯರಾತ್ರಿ ವೇಳೆ ಬಸ್ಟ್ಯಾಂಡಿಗೆ ಬಂದು ಪಾಕಿಸ್ತಾನದ ಧ್ವಜ ಹಾರಿಸಿಹೋದವರು ಸನಾತನ ಸಂಘದವರು. ಈತ ಮುಂದೆ ಗೌರಿ ಕೊಲೆಯಲ್ಲಿ ಆರೋಪಿಯಾದ. ಹಾಗೆಯೇ ಹೊನ್ನಾಳಿ ತಾಲ್ಲೂಕಿನಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿಹೋದವನು ಶಾಸಕ ರೇಣುಕಾಚಾರಿ ಎಂಬುದು ಈಚೆಗೆ ಬಹಿರಂಗಗೊಂಡಿದೆಯಲ್ಲಾ. ಹೇಗೆಂದರೆ ನನಗೆ ಮುಸ್ಲಿಮರು ಓಟು ಮಾಡಿಲ್ಲ, ಜೊತೆಗೆ ಸದಾ ಮಸೀದಿಯಲ್ಲಿ ಬಾಂಬು ತಯಾರಿಸುತ್ತ ಚೂರಿ ಮಸೆಯುತ್ತ ಪಾಕಿಸ್ತಾನದ ಪರವಿರುವ ಹೊನ್ನಾಳಿ ಸಾಬರಿಗೆ ನಾನು ಯಾವ ಸರಕಾರಿ ಸವಲತ್ತನ್ನು ಕೊಡುವುದಿಲ್ಲವೆಂದು ಹೇಳಿರುವ ವಿಲಾಸಿಜೀವನದ ರೇಣುಕಾಚಾರಿಯ ಮನಸ್ಸಿನಾಳದಲ್ಲಿ ಸಾಬರ ಗಲ್ಲಿಯ ಚರಂಡಿ ನೀರೇ ಹರಿಯುತ್ತಿರುವುದರಿಂದ ಅವನಿನ್ನೇನು ಹೇಳಲು ಸಾಧ್ಯ ಎಂಬುದು ಹೊನ್ನಾಳಿ ಕುರುಬರ ಅಭಿಪ್ರಾಯವಾಗಿದೆಯಂತಲ್ಲಾ, ಥೂತ್ತೇರಿ.

ಭೂಗತಲೋಕದ ದೊರೆಯಾಗಿ ಮೆರೆದಿದ್ದ ಮುತ್ತಪ್ಪ ರೈ ಐದಾರು ಗುಂಡುಗಳಿಂದ ಬಚಾವಾಗಿ ಉಳಿದಿದ್ದರಂತೆ. ಆದರೇನು ಕ್ಯಾನ್ಸರ್ ಗುಂಡಿನಿಂದ ತಪ್ಪಿಸಿಕೊಳ್ಳಲಾಗಿಲ್ಲ. ಕಡೆಗೂ ಬಂದ ಸಾವನ್ನು ಸಂಭ್ರಮಿಸುತ್ತಿರುವ ಆತನನ್ನು ಮಾಧ್ಯಮದ ಮಂದಮತಿಗಳು ಇನ್ನಿಲ್ಲದ ಉಪಮೆಗಳೊಂದಿಗೆ ಹೊಗಳಿ ಹೊಗಳಿ ಸುಸ್ತಾಗುತ್ತಿವೆ. ಮುತ್ತಪ್ಪ ರೈ ದಕ್ಷಿಣ ಕನ್ನಡದ ಬುದ್ಧಿವಂತಿಕೆಯನ್ನ ಭೂಗತಲೋಕಕ್ಕೆ ಪರಿಚಯಿಸಿ ಮಚ್ಚು, ಲಾಂಗು, ಚಾಕುವಿನ ಬದಲು ಜೀವಹತ್ಯೆಗೆ ಪಿಸ್ತೂಲು ಬಳಸಿದ ವ್ಯಕ್ತಿ. ಆತನನ್ನ ಪೊಲೀಸರು ಕೂಡ ಪಿಸ್ತೂಲಿನಿಂದಲೇ ಮುಗಿಸಲು ಯತ್ನಿಸಿದಾಗ, ಲಂಕೇಶರ ಬಳಿಯಿದ್ದ ಕೂಗುಮಾರಿಯೊಬ್ಬಳು ಪೊಲೀಸರನ್ನೇ ವಿಲನ್‍ಗಳನ್ನಾಗಿ ಮಾಡಿ ಮುತ್ತಪ್ಪರೈಯನ್ನ ಹೀರೋ ಮಾಡಿ ಬರೆಸಿದ್ದಳು. ಅಲ್ಲದೆ ಆಗಿನ ಪೊಲೀಸ್ ಅಧಿಕಾರಿ ಕೆಂಪಯ್ಯನನ್ನೇ ಟಾರ್ಗೆಟ್ ಮಾಡಿದ ಕೂಗುಮಾರಿ ಕಡೆಗೂ ಮುತ್ತಪ್ಪರೈ ಬಚಾವಾಗುವಂತೆ ಮಾಡಿದ್ದಳು. ಆದರೆ ಲಂಕೇಶರು ಆಕೆಯ ನಡವಳಿಕೆ ಬಗ್ಗೆ ಗುಮಾನಿಪಟ್ಟು ಕೆಲಸದಿಂದ ತೆಗೆದಿದ್ದರು. ಪೊಲೀಸರಿಂದ ಬಚಾವಾಗಲು ದೇಶವನ್ನೇ ಬಿಟ್ಟಿದ್ದ ಮುತ್ತಪ್ಪ ರೈ ಕನ್ನಡಿಗರ ಸಂಘಟನೆ ನೆವದಲ್ಲಿ ಸೈನ್ಯ ಕಟ್ಟಿ ಮೆರವಣಿಗೆ ಮಾಡಿಸುತ್ತಿದ್ದರು. ಈಗ ಅನಾಥರಾಗುವವರೆಂದರೆ ಆತನಿಂದ ಹಣ ಪಡೆದು ಕಾರ್ಯಕ್ರಮ ಮಾಡುತ್ತಿದ್ದ ಅಬ್ಬೇಪಾರಿಗಳಂತಲ್ಲಾ, ಥೂತ್ತೇರಿ.

ಮೈಸೂರಿನಲ್ಲಿ ಯುವತಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಫಲಕ ಪ್ರದರ್ಶಿಸಿದ್ದಕ್ಕೆ ನಮ್ಮ ಪೊಲೀಸರು ದೇಶದ್ರೋಹದ ಕೇಸುಮಾಡಿ ಕೋರ್ಟಿಗೆ ಎಳೆದಿರುವುದರಿಂದ, ದೇಶಭಕ್ತ ವಕೀಲರೆಲ್ಲಾ ಸೇರಿ ಆಕೆಯ ಪರ ಯಾರೂ ವಕಾಲತ್ತು ವಹಿಸಬಾರದೆಂಬ ತೀರ್ಮಾನ ತೆಗೆದುಕೊಂಡಿದ್ದಾರಲ್ಲಾ. ಈ ಬಗ್ಗೆ ವಕೀಲರ ನಡೆಯನ್ನ ಸಿದ್ದರಾಮಯ್ಯ ಟೀಕಿಸಿದಾಗ ನೀವೆ ಬಂದು ವಾದಿಸಿ ಎಂದು ರಾಘವೇಂದ್ರ ಎಂಬ ವಕೀಲ ಸವಾಲು ಹಾಕಿದ್ದಾನಲ್ಲಾ. ಈ ವಕೀಲರು ತಾವೇ ಕೋರ್ಟೆಂದು ಭಾವಿಸಿರುವಂತಿದೆ. ವಕೀಲರ ಸಂಘದ ತೀರ್ಮಾನದಂತೆ ಕೋರ್ಟು ನಡೆಯುವುದಿಲ್ಲ. ಆರೋಪಿ ಮೇಲಿನ ಆರೋಪ ತೀರ್ಮಾನವಾಗುವುದು ನ್ಯಾಯಾಲಯದಲ್ಲೇ ಹೊರತು ವಕೀಲರ ಗುಂಪಿನಲ್ಲಲ್ಲ ಎಂಬುದನ್ನು ವಕೀಲರು ಮನಗಾಣಬೇಕು. ಇದೆಲ್ಲಾ ಸರ್ವಾಧಿಕಾರಿಗಳ ಆಡಳಿತದ ಸಂದರ್ಭದಲ್ಲಿ ಹುಟ್ಟುವ ಘೋಷಣೆಗಳು. ವಕೀಲರು ಸಂವಿಧಾನಾತ್ಮಕವಾಗಿ ದತ್ತವಾಗಿರುವ ಹಕ್ಕುಗಳ ಬಗ್ಗೆ ಗಾಢವಾಗಿ ಯೋಚಿಸಿದರೆ ಹೀಗಾಗುವುದಿಲ್ಲವಂತಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Un Constitutional opinions in Mysore Bar decession is wrong. Speeking truth is not a crime. Where as the loyers protect the Constitution. All world is observing the desession of Mysore Bar Associations attitude.This kind of actions are not good for society.

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...