ನಿನ್ನೆ ಬಿಜೆಪಿ ರಾಜ್ಯಧ್ಯಕ್ಷ ಅಮಿತ್ ಶಾರವರೊಂದಿಗೆ ಮಂತ್ರಿಮಂಡಲ ವಿಸ್ತರಣೆ ಕುರಿತು ಅರ್ಧ ಗಂಟೆಗೂ ಹೆಚ್ಚು ಕಾಲ ಸವಿಸ್ತಾರವಾಗಿ ಮಾತಾಡಿದ್ದೇನೆ. ಬಹಳ ಒಳ್ಳೇಯ ರೆಸ್ಫಾನ್ಸ್ ಸಿಕ್ಕಿದೆ. ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದು, ದಾವೂಸ್ನಿಂದ ಬಂದ ಕೂಡಲೇ ಎರಡು ದಿನ ಬಿಟ್ಟು ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಯಾವುದೇ ಅಡ್ಡಿಆತಂಕಗಳಿಲ್ಲ, ಮಾಧ್ಯಮಗಳಲ್ಲಿ ಬರುತ್ತಿರುವುದಕ್ಕೆ ಅರ್ಥವಿಲ್ಲ, ದೆಹಲಿಯಲ್ಲಿ ಮತ್ತೆ ಅಮಿತ್ ಶಾರನ್ನು ಸ್ವಾಭಾವಿಕವಾಗಿ ಭೇಟಿ ಮಾಡುತ್ತೇನೆ ಎಂದೂ ಸಹ ಅವರು ಹೇಳಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪರವರು ಮಾತನಾಡಿ ಸಚಿವ ಆಕಾಂಕ್ಷಿಗಳಿಗೆ ಖಾತೆ ನೀಡುವುದು ನಮ್ಮ ಕರ್ತವ್ಯ ಅಷ್ಟೇ ಅಲ್ಲ, ಅವರ ಋಣ ನಮ್ಮ ಮೇಲಿದೆ. ಅವರ ಋಣ ತೀರಿಸಬೇಕಿದೆ. ಅವರು ಬಂದು ನಮ್ಮ ಪಕ್ಷ ಸೇರಿದಿದ್ದರೆ ಯಾವ ಕಾರಣಕ್ಕೂ ನಮಗೆ ಬಹುಮತ ಬರುತ್ತಿರಲಿಲ್ಲ. ಅವರಿಗೆ ಸಂತೃಪ್ತಿ ಆಗುವ ರೀತಿಯಲ್ಲಿ ನೋಡಿಕೊಳ್ಳಬೇಕಿರುವುದು ನಮ್ಮ ಕರ್ತವ್ಯವಾಗಿದೆ ಅದನ್ನು ಪಾಲಿಸುತ್ತೇವೆ.
ಅವರು ಇಂತದ್ದೇ ಮಂತ್ರಿ ಮಾಡಬೇಕು, ಉಪಮುಖ್ಯಮಂತ್ರಿ ಮಾಡಬೇಕು ಎಂದು ಪಟ್ಟು ಹಿಡಿಯುವುದು ಸರಿಯಿಲ್ಲ, ಅವರು ಸಂತೃಪ್ತಿಯಿಂದರಬೇಕು ಎಂಬುದಷ್ಟೆ ಮುಖ್ಯ ಎಂದು ಅವರು ತಿಳಿಸಿದರು.