Homeಅಂಕಣಗಳುಅಳಿದ ಮೇಲೂ ಇಲ್ಲಿ ಉಳಿಯುವುದಿದೆ...

ಅಳಿದ ಮೇಲೂ ಇಲ್ಲಿ ಉಳಿಯುವುದಿದೆ…

- Advertisement -
- Advertisement -

| ಅಕ್ಷತಾ ಹುಂಚದಕಟ್ಟೆ |

`ಆಗೊಮ್ಮೆ ಈಗೊಮ್ಮೆ’ ಗಿರೀಶ ಕಾರ್ನಾಡರ ಲೇಖನಗಳ ಸಂಗ್ರಹದಲ್ಲಿ `ಅಳಿದ ಮೇಲೆ’ ಎಂಬೊಂದು ಲೇಖನ ಇದೆ. ಆ ಬರೆಹ ಹೀಗೆ ಸುರುವಾಗುತ್ತದೆ. `ನನ್ನ ಕಡೆಗೆ ಕಣ್ಣು ಹಾಯಿಸಿದಾಗಲೆಲ್ಲ ರಿಜವಿಯ ಕಣ್ಣಲ್ಲಿ ಒಂದು ತುಂಟ ನಗು ಕುಣಿಯುತ್ತಿತ್ತು’. ರಿಜವಿ ಮುಂಬೈ ಮಹಾನಗರದ ಒಬ್ಬ ಟೆಲಿಫಿಲ್ಮ್ ನಿರ್ದೇಶಕ. ರಿಜವಿಯ ಅಣ್ಣ ಭಾಷಾಂತರಕಾರ ಅವರು ಉರ್ದುವಿಗೆ ಅನುವಾದಿಸಿದ ಕಾರಂತರ `ಅಳಿದ ಮೇಲೆ’ ಕಾದಂಬರಿಯನ್ನು ಓದಿ ರಿಜವಿ ಹುಚ್ಚಾಗಿ ಬಿಟ್ಟಿದ್ದಾರೆ.. ಅವರಿಗೆ ಅದನ್ನು ಟೆಲಿಫಿಲ್ಮ್ ಮಾಡಬೇಕೆಂಬ ಹುಕ್ಕಿ ಬಂದುಬಿಟ್ಟಿದೆ. ಕಾದಂಬರಿಯಲ್ಲಿ ಬರುವ ಕಾರಂತರ ಪಾತ್ರಕ್ಕೆ ಗಿರೀಶ್ ಕಾರ್ನಾಡರನ್ನು, ಯಶವಂತರಾಯನ ಪಾತ್ರಕ್ಕೆ ಅನಂತ್ ನಾಗ್ ಅವರನ್ನು ಮನಸಿನಲ್ಲಿಯೇ ನಿಕ್ಕಿ ಮಾಡಿಕೊಂಡು ಬಂದು ಕಾರ್ನಾಡರನ್ನು ಕಾಣುತ್ತಾರೆ. ಮೊದಲಿಗೆ ತನ್ನ ಡಿಟೆಕ್ಟಿವ್ ಧಾರವಾಹಿಯೊಂದರಲ್ಲಿ ಪಾತ್ರ ವಹಿಸಲು ಕಾರ್ನಾಡರನ್ನು ಒಪ್ಪಿಸಿ ನಂತರ `ಅಳಿದಮೇಲೆ’ ವಿಷಯ ಪ್ರಸ್ತಾಪಿಸುತ್ತಾರೆ. ಬಹಳ ಇಂಟ್ರೆಸ್ಟಿಂಗ್ ಸಂಗತಿ ಎಂದರೆ ಉರ್ದುವಿನಲ್ಲಿ ಕಾದಂಬರಿ ಓದಿದ್ದರಿಂದ ರಿಜವಿಗೆ ಅದರ ಕನ್ನಡ ಹೆಸರು ಗೊತ್ತಿಲ್ಲ. ಕಾರ್ನಾಡರಿಗೆ ಅದರ ಉರ್ದು ಹೆಸರು ಗೊತ್ತಾಗುತ್ತಿಲ್ಲ. ರಿಜವಿ ಕಥೆಯ ಸಾರಾಂಶ ಹೇಳಿದಾಗ ಕಾರ್ನಾಡರು ಅದನ್ನು `ಅಳಿದ ಮೇಲೆ’ ಕಾದಂಬರಿ ಎಂದು ಗುರುತು ಹಿಡಿಯುತ್ತಾರೆ. ಆ ಕೂಡಲೇ ಕಾರ್ನಾಡರ ಸಹಾಯದಿಂದ ಅನಂತನಾಗ್ ಅವರ ಒಪ್ಪಿಗೆಯು ದೊರಕುತ್ತದೆ.

ಇನ್ನು ಉಳಿದದ್ದು ಕಾರಂತರ ಒಪ್ಪಿಗೆ; ಕನ್ನಡ ಸಂಸ್ಕøತಿಯ ಗಂಧ ಗಾಳಿಯಿಲ್ಲದ, ಉತ್ತರ ಪ್ರದೇಶದ ಯಾವುದೋ ಮೂಲೆ ಹಳ್ಳಿಯಿಂದ ಮುಂಬೈಗೆ ಬಂದು ತೃತೀಯ ದರ್ಜೆ ಗಲ್ಲಾಪೆಟ್ಟಿಗೆ ಚಿತ್ರಗಳನ್ನು ನಿರ್ದೇಶಿಸಿ ಹೊಟ್ಟೆ ಹೊರಕೊಳ್ಳುತ್ತಿದ್ದ ರಿಜವಿಗೆ ಕಟ್ಟುನಿಟ್ಟಿನ ಕಾರಂತರು ಖಂಡಿತಾ ಅನುಮತಿ ನೀಡುವುದಿಲ್ಲ ಎಂದು ಕಾರ್ನಾಡರು ಎಣಿಸಿದ್ದರೆ ಅಚ್ಚರಿ ಎನಿಸುವಂತೆ ಕಾರಂತರು ರಿಜವಿಯ ಒಂದು ಪತ್ರಕ್ಕೆ `ಬನ್ನಿ ಮಾತಾಡೋಣ’ ಎಂದು ಹಸಿರು ಸಿಗ್ನಲ್ ತೋರಿಸಿದ್ದಾರೆ. ರಿಜವಿಯ ಖುಷಿಗೆ ಪಾರವೇ ಇಲ್ಲವಾಗಿದೆ.

. ಅಷ್ಟರಲ್ಲಾಗಲೇ ರಿಜವಿ ಇದಕ್ಕಾಗಿಯೇ ವಿಶೇಷ ತಾಲೀಮು ಎಂಬಂತೆ ಒಂದೂ ಬಿಡದೆ ಕನ್ನಡದ ಎಲ್ಲ ಕಲಾತ್ಮಕ ಚಿತ್ರಪಟಗಳನ್ನು ನೋಡಿ ಟಿಪ್ಪಣಿ ಮಾಡಿದ್ದರು. `ಅಳಿದ ಮೇಲೆ’ಯ ಚಿತ್ರೀಕರಣಕ್ಕೆ ಪ್ರಯೋಜನಕಾರಿ ಆಗುವಂತ ಅಂಶಗಳೇನಾದರೂ ಸಿಗುತ್ತವೆಯೇ ಎಂಬುದೆ ರಿಜವಿಯ ಅಂತಿಮ ಹುಡುಕಾಟದಂತಿತ್ತು. `ಬ್ರಾಹ್ಮಣರಲ್ಲಿ ವಿಧವೆಯರಿಗೆ ಮಂಡನ ಮಾಡುತ್ತಿದ್ದರು ಆದ್ದರಿಂದ ಈ ಚಿತ್ರದಲ್ಲಿ ಬರುವ ಇಬ್ಬರೂ ವಿಧವೆಯರ ತಲೆ ಬೋಳಿಸಬೇಕು’ ಎಂದು ಕಾರ್ನಾಡರು ಹೇಳಿದರೆ ಘಟಶ್ರಾದ್ಧ ಸಿನಿಮಾ ನೋಡಿದ ರಿಜವಿ `ಈ ಸಿನಿಮಾದಲ್ಲಿ ವಿಧವೆ ಹುಡುಗಿಗೆ ತಲೆ ಬೋಳಿಸಿಲ್ಲವಲ್ಲ’ ಎಂದು ಮರುಪ್ರಶ್ನೆ ಹಾಕುತ್ತಾರೆ. ಪ್ರತಿಬಾರಿಯು ಈ ಸಿನಿಮಾದ ಬಗ್ಗೆ ಮಾತಾಡುವಾಗ ರಿಜವಿ ಗದ್ಗದಿತರಾಗುತ್ತಾರೆ `ಕಾರಂತರು ಹಳ್ಳಿಗೆ ಬರೋದು, ಮಿತ್ರ ಯಶವಂತರಾಯನ ಸಾಕುತಾಯಿಯನ್ನು ಕಾಣೋದು! ಆ ಹಣ್ಣು ಹಣ್ಣು ಮುದುಕಿಯ ಆಸೆ ಪೂರೈಸಲಿಕ್ಕೆ ಗುಡಿಯ ಜೀರ್ಣೋದ್ದಾರ ಮಾಡುವುದು. ಒಂದೇ ಊರಿನಲ್ಲಿದ್ದರೂ ವೈರಿಗಳ ಹಾಗಿದ್ದ ಆ ಇಬ್ಬರು ಹಣ್ಣು ಮುದುಕಿಯರು ಒಂದಾಗೋದು’. ಎಂಥ ಅದ್ಭುತ ಸನ್ನಿವೇಶವಿದು ಎನ್ನುವುದನ್ನು ಅರ್ಧ ಡಜನ್ ಬಾರಿ ಕೇಳಿ ಕಾರ್ನಾಡರು `ಅದು ಕಾದಂಬರಿಯ ಪೂರ್ವಾರ್ಧ ಕಣ್ರಿ. ಯಶವಂತರಾಯರ ಹೆಂಡತಿ, ಮಕ್ಕಳನ್ನು ಕಾರಂತರು ಭೇಟಿಯಾಗುವ ದೃಶ್ಯಗಳು ಇವೆ’ ಎಂದರೆ ರಿಜವಿಯದು ಅದಕ್ಕೆ ಪೂರ್ತಿ ಮೌನ. ರಿಜವಿಯ ಪಾಲಿಗೆ ದೇವಸ್ಥಾನದ ಜೀರ್ಣೋದ್ದಾರವೇ ಕಾದಂಬರಿಯ ಕೇಂದ್ರ. ಮನುಷ್ಯನ ಸ್ಪಿರಿಚ್ಯುವಲ್ ಜಾಗೃತಿಗೆ ಅದು ಸಿಂಬಲ್ ಎನ್ನುವ ರಿಜವಿಗೆ ಟೆಲಿಫಿಲ್ಮದಲ್ಲಿ ಕೂಡಾ ಅದನ್ನೇ ಕೇಂದ್ರವಾಗಿಸುವ ಕನಸು.
ಕಾರಂತರ ಅನುಮತಿ ಪಡೆಯಲು ರಿಜವಿ ಸಾಲಿಗ್ರಾಮಕ್ಕೆ ಹೊರಡುತ್ತಾರೆ. ಕಾರ್ನಾಡರು ಯಾವುದೋ ಚಿತ್ರದ ಚಿತ್ರೀಕರಣಕ್ಕಾಗಿ ಸಿಂಗಪೂರಕ್ಕೆ. ಸಾಲಿಗ್ರಾಮಕ್ಕೆ ಹೋದ ರಿಜವಿ ಮೊದಲಿಗೆ ಬೆಂಗಳೂರಿಗೆ ಹೋಗಿ ಅನಂತನಾಗ್ ಬಳಿ ಮಾತಾಡಿಕೊಂಡು, ನಂತರ ಕಾರಂತರನ್ನು ಭೇಟಿ ಮಾಡಲು ಹೋಗುವಾಗ ಬಸ್ಸಿನಲ್ಲಿ ಮೂಲ್ಕಿ ಬಳಿ ಟ್ರಂಕ್ ಒಂದು ತಲೆ ಮೇಲೆ ಬಿದ್ದು ಸತ್ತೆ ಹೋಗುತ್ತಾರೆ. ಸಿಂಗಪೂರದಿಂದ ಮರಳಿದ ಕಾರ್ನಾಡರಿಗೆ ವಿಷಯ ತಿಳಿಯುತ್ತದೆ. ಅವರು ರಿಜವಿಯ ಮನೆ ಹುಡುಕಿಕೊಂಡು ಹೊರಡುತ್ತಾರೆ.

ಇಷ್ಟರ ನಡುವೆ ದೇಶದೆಲ್ಲೆಡೆ ಈ ಸಂದರ್ಭದಲ್ಲಿ ಅಯೋಧ್ಯೆಯ ಗದ್ದಲ ಜೋರಾಗಿ ಹಬ್ಬಿದೆ. ಗಲ್ಲಿಯೊಂದರಲ್ಲಿ ಇರುವ ಹಳೆಯ ಬಾಡಿಗೆ ಮನೆಯೊಂದರಲ್ಲಿ ಕಾರ್ನಾಡರು ರಿಜವಿಯ ಹೆಂಡತಿ ಮತ್ತು ಮಗನನ್ನು ಭೇಟಿಯಾಗುತ್ತಾರೆ. ಮೂವತ್ತು ವರುಷದಿಂದ ಇಂಡಸ್ಟ್ರಿಯಲ್ಲಿದ್ದ ರಿಜವಿ ಒಂದು ಮನೆಯನ್ನು ಮಾಡಿಕೊಳ್ಳಲಿಲ್ಲ. ಬೆಳೆದ ಮಗಳ ಮದುವೆ ಮಾಡಿಲ್ಲ, ಮನೆಯವರ ಹೊಟ್ಟೆ ಪಾಡು ಕಷ್ಟವಿದೆ ಎಂಬ ಸತ್ಯ ಕಾರ್ನಾಡರ ಕಣ್ಣಿಗೆ ರಾಚುತ್ತದೆ. ಮಗ ಯಾಕೂಬ್ `ಅಳಿದ ಮೇಲೆ ಫಿಲ್ಮ್‍ಗಾಗಿ ಫೈನಾನ್ಸ್ ಕೊಡಲು ಈ ಮೊದಲೇ ಒಪ್ಪಿದ್ದ ಕೆ.ಪಿ ಫಿಲ್ಮ್ ನವರು ತಯಾರಿದ್ದಾರೆ. ರಿಜವಿ ಈಗಾಗಲೇ ಒಂದು ಲಕ್ಷ ಅಡ್ವಾನ್ಸ್ ತೆಗೆದುಕೊಂಡು ಹಂಚಿಯು ಆಗಿದೆ. ಉಳಿದ ಹಣ ಕೊಡಲು ಅವರು ತಯಾರಿದ್ದಾರೆ’ ಎನ್ನುತ್ತಾನೆ. ರಿಜವಿಯ ಹೆಂಡತಿಯು ಮಗಳ ಮದುವೆಗಾಗಿ ನೀವು ಈ ಉಪಕಾರ ಮಾಡಿರಿ ಎಂದು ಬೇಡುತ್ತಾಳೆ. ಕಾರ್ನಾಡರು ಕಾರಂತರ ಬಳಿ ಮಾತಾಡುತ್ತಾರೆ. ಕಾರಂತರು `ತಾವು ರಿಜವಿಗೆ ಒಪ್ಪಿಗೆ ಕೊಟ್ಟು ಆಗಿದೆ. ಅವರ ಕುಟುಂಬದವರ್ಯಾರಾದರೂ ಮಾಡಬಹುದು‘ ಎನ್ನುತ್ತಾರೆ. ಯಾಕೂಬನನ್ನು ಕರೆದುಕೊಂಡು ಕೆ.ಪಿ ಪ್ರೊಡಕ್ಷನ್ ಅವರ ಬಳಿ ಹೋಗಿ ಹನ್ನೊಂದು ಲಕ್ಷ ಸಾದ್ಯವೇ ಇಲ್ಲ ಹದಿನೆಂಟು ಲಕ್ಷವಾದರೆ ಈ ಫಿಲ್ಮ್ ಮುಗಿಸಿಕೊಡುತ್ತೇವೆ ಎಂದು ಕಾರ್ನಾಡರು ಶರತ್ತು ಹಾಕುತ್ತಾರೆ. ಯಾಕೂಬನಿಗೆ ಅಪ್ಪ ಅಡ್ವಾನ್ಸ ತೆಗೆದುಕೊಂಡ ಮೇಲೆ ಅದನ್ನು ಮುಗಿಸಿಕೊಡುವುದು ತನ್ನ ಜವಾಬ್ದಾರಿ ಎಂಬ ಭಾವ. ಆದರೆ ಕಾರ್ನಾಡರಿಗೆ ಅಷ್ಟರಲ್ಲಿ ಫಿಲ್ಮ್ ಮಾಡಲು ಸಾಧ್ಯವೇ ಇಲ್ಲ. ರಿಜವಿಯಂಥ ಹುಂಬ, ಹುಚ್ಚ ಮಾತ್ರ ಇಂಥ ಕನಸಿಗೆ ರೆಕ್ಕೆಕೊಟ್ಟು ಮತ್ತಷ್ಟು ಸಾಲಗಾರನಾಗುತ್ತಾನೆ ಎಂಬ ಅರಿವಿದೆ. ಈ ಹುಡುಗನನ್ನು ಸಾಲಕ್ಕೆ ನೂಕಬಾರದು ಎಂಬ ಎಚ್ಚರವಿದೆ. ಪ್ರೊಡಕ್ಷನ್ ನವರು ಒಪ್ಪುವುದಿಲ್ಲ. ಬರಿಗೈಯಲ್ಲಿ ಮರಳುತ್ತಾರೆ.

ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲಾಗುತ್ತದೆ. ಕಾರ್ನಾಡರ ಜೊತೆ ರಿಜವಿಯ ಸಿನಿಮಾದಲ್ಲಿ ನಟಿಸುತ್ತಿದ್ದ ರಿಜವಿಯ ಹೆಂಡತಿ ಮಾಡುತ್ತಿದ್ದ ಮಾಂಸದಡುಗೆಯನ್ನು ಇಷ್ಟಪಟ್ಟು ತಿನ್ನುತ್ತಿದ್ದ, ಆ ಕಾರಣಕ್ಕಾಗಿಯೇ ರಿಜವಿಯ ಚಿತ್ರಪಟದಲ್ಲಿ ತಾನು ಭಾಗವಹಿಸುವುದು ಎನ್ನುತ್ತಿದ್ದ ಭೂಷಣ ಫೋನ್ ಮಾಡಿ `ಒಳ್ಳೆದಾಯಿತು, ಅವರಿಗೆ ಹಾಗೆ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ಕಲಿಯೋದಿಲ್ಲ ಅವರು’ ಎಂದ. ತಮ್ಮ ನೆಂಟರಿಷ್ಟರು, ಮಿತ್ರರು, ಮನೆ ಮಂದಿ ಎಲ್ಲರೂ ಭೂಷಣನ ಮಾತಿಗೆ ಹೌದೆಂದು ತಲೆದೂಗುವಂತೆ, ತನ್ನ ಹಿಂಸೆಗೆ ನಿಗುರಿ ತನ್ನ ಪರಿಸರ ವೀರ್ಯಸ್ಕಲನ ಮಾಡಿಕೊಂಡ ಹಾಗೆ ಕಾರ್ನಾಡರಿಗೆ ಕಾಣುತ್ತಿತ್ತು.
ಈ ಹೊತ್ತಲ್ಲೆ ಮತ್ತೆ ಯಾಕೂಬ ಕಾರ್ನಾಡರಿಗೆ ಫೋನ್ ಮಾಡಿದ. ಅವ್ವ ಮಾಡಿದ ಸ್ಪೆಷಲ್ ಸಿಹಿಯೊಂದಿಗೆ ಹುಡುಗ ಖುಷಿಯಿಂದ ಬಂದಿದ್ದ. ಏಕೆಂದರೆ ಪ್ರೊಡಕ್ಷನ್ ಹೌಸ್‍ನವರು ಅಳಿದ ಮೇಲೆ ಫಿಲ್ಮ್ ಮಾಡಲು ಇವರು ಹೇಳಿದ ಮೊತ್ತಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ ಕಾರ್ನಾಡರು ಖುಷಿಯಾಗಲಿಲ್ಲ. `ಸಾರಿ ನಾನು ಟೆಲಿಫಿಲ್ಮ್ ಮಾಡಲಿಕ್ಕೊಲ್ಲೆ. ಅಳಿದ ಮೇಲೆ ಈಗಂತೂ ಸಾಧ್ಯವಿಲ್ಲ’ ಎನ್ನುತ್ತಾರೆ. ಯಾಕೂಬನಿಗೆ ಏಕೆ ಎಂದು ಅರ್ಥವೇ ಆಗುವುದಿಲ್ಲ. ಮುಗ್ಧ ಹುಡುಗ ತಂಗಿಯ ಮದುವೆ, ಮನೆಯ ಕಷ್ಟಗಳು ಎಲ್ಲವೂ ಈ ಟೆಲಿಫಿಲ್ಮ್‍ನ ನಿರ್ಮಾಣದಿಂದ ಪರಿಹಾರವಾಗುತ್ತವೆ ಎಂದುಕೊಂಡು ಬಂದವನಿಗೆ ಕಾರ್ನಾಡರ ನಿರಾಕರಣೆಯಿಂದಾಗಿ ದಣಿದು ಕೂತ.

`ನೋಡು ನಿನ್ನ ತಂದೆ ಈ ಕತೆಗೆ ಮಾರು ಹೋದದ್ದು ಒಂದೇ ಕಾರಣಕ್ಕಾಗಿ ಚಿತ್ರಪಟದ ಕೊನೆಗೆ ಪುನರ್ಜನ್ಮ ತಾಳಿ ಬರುವ ಮಂದಿರಕ್ಕಾಗಿ ಅದು ಅವನಿಗೆ ಮಾನವೀಯತೆಯ ಪ್ರತೀಕವಾಗಿತ್ತು. ಆದರೀಗ ಮಂದಿರದ ಪುನರುತ್ಥಾನ ಎಂಬ ನುಡಿಗಟ್ಟಿನ ಅರ್ಥವೇ ಬದಲಾಗಿದೆ ಬಾಬರೀ ಮಸೀದಿ ಕೆಡವಿದ ದುರುಳರು ಈಗ ಆ ಸ್ಥಾನದಲ್ಲಿ ಮಂದಿರ ಕಟ್ಟಬೇಕೆನ್ನುತ್ತಿದ್ದಾರೆ…. ಅಯೋಧ್ಯೆಯಲ್ಲಿ ನಡೆದ ಬರ್ಬರತೆಯಿಂದಾಗಿ ಮಂದಿರ ನಿರ್ಮಾಣದ ಕಲ್ಪನೆನೆ ಭ್ರಷ್ಟವಾಗಿಬಿಟ್ಟಿದೆ…. ನನ್ನಿಂದಂತೂ ಈ ಸಂದರ್ಭದಲ್ಲಿ ಈ ಚಿತ್ರಪಟ ಸಾದ್ಯವಿಲ್ಲ…‘ ಕಾರ್ನಾಡರು ಯಾಕೂಬನಿಗೆ ಹೇಳಲಾರದೆ ಹೇಳುತ್ತಾರೆ.

ಆದರೆ ಯಾಕೂಬನಿಗೆ ಇವರ ಸಂಧಿಗ್ಧ ಅರ್ಥವಾಗುವುದಿಲ್ಲ. ಮಸೀದಿ ಬಿದ್ದಿದೆ ನಿಜ ಆದರೆ ಈ ಸಿನಿಮಾದಲ್ಲಿ ಮಂದಿರ ನಿರ್ಮಾಣ ಮಾಡುವುದೆ ಕೇಂದ್ರವಾಗಿದ್ದರೆ ಅದು ಇರಲಿ. ಅದಕ್ಕೂ ಇದಕ್ಕೂ ಸಂಬಂಧವೇನಿದೆ… ಎನ್ನುವ ಭಾವ. ಮಸೀದಿ, ಮಂದಿರ ಮೀರಿ ಯಾಕೂಬನಿಗೆ ತನ್ನ ತತ್ತರಿಸುತ್ತಿರುವ ತನ್ನ ಕುಟುಂಬವನ್ನು ಎತ್ತಿ ನಿಲ್ಲಿಸಬೇಕಾಗಿದೆ. `ಈ ಸಿನಿಮಾದಿಂದ ಅಕ್ಕನ ಮದುವೆ ಆಗುತ್ತದೆ. ನೀವೆ ಗತಿ ಅಂಕಲ್ ಎಂದು ಅಂಗಲಾಚುವನು’.

ಕಾರ್ನಾಡರಿಗೆ ಇವನ ಅಸಹಾಯಕತೆ ನೋಡಿ ನೆರವಾಗುವ ಮನಸು ಆದರೆ ನಾಳೆ ಈ ಚಿತ್ರ ಟೆಲಿಪರದೆಯ ಮೇಲೆ ಪ್ರೇಕ್ಷಕರಿಗೆ ರಿಜವಿಯ ಮಗಳ ಮದುವೆಯ ಸಂದರ್ಭವನ್ನು ಯಾರು ವಿವರಿಸುತ್ತಾರೆ… ಎಲ್ಲರಿಗೂ ತಾನು ಕನ್ನಡದ ಅಮೋಘ ಕಾದಂಬರಿಯನ್ನು ಒಂದು ಲಜ್ಜಾಸ್ಪದ ಘಟನೆಯ ಹೆಗ್ಗಳಿಕೆಗೆ ಬಳಸುತ್ತೇನೆ ಎನ್ನುವುದಷ್ಟೇ ಕಾಣಿಸುತ್ತದೆ ಎನಿಸುತ್ತದೆ. `ಬಾಬರೀ ಮಸೀದಿ ಮಾತ್ರ ಅಳಿದುಹೋಗಿಲ್ಲ ಯಾಕೂಬ್ ಅದರ ಜೊತೆ ನಿನ್ನ ತಂದೆಯ ಕನಸೂ ಅಳಿದು ಹೋಗಿದೆ’ ಎಂದು ಹೇಳಲೂ ಹೋಗಿ ಹೇಳಲಾಗದೆ ಮೌನವಾಗುಳಿದ ಕಾರ್ನಾಡರನ್ನು ನೋಡಿ ಅವರಿಗೆ ಮನಸಿಲ್ಲ ಎಂಬುದನ್ನು ಅರಿತವನಂತೆ ಯಾಕೂಬ್ ಚಿತ್ರಕಥೆಯನ್ನು ಅಲ್ಲೆ ಬಿಟ್ಟು ಕಾರ್ನಾಡರು ಅದನ್ನು ತೆಗೆದುಕೊಂಡು ಹೋಗು ಎಂದರೂ ಕೇಳದೆ `ಬೇಡ ಅಂಕಲ್ ಅದರಿಂದ ಏನು ಪ್ರಯೋಜನ ‘ ಎನ್ನುತ್ತಾ ಬರಿಗೈಯಲಿ ಮರಳುವನು.
ದುರಿತ ಕಾಲದಲ್ಲಿ ಬುದ್ಧಿಜೀವಿ ಲೇಖಕರು ಕೂಡಾ ಎಷ್ಟು ಅಸಹಾಯಕರು ಎಂಬುದಕ್ಕೆ ರೂಪಕವಾಗಿಯೂ ಈ ಲೇಖನ ಮತ್ತೆ ಮತ್ತೆ ನಮಗೆ ಪ್ರಸ್ತುತವಾಗುತ್ತದೆ. ಇಂಥ ನಮ್ಮೊಳಗನ್ನು ನಮಗೆ ಕಾಣಿಸುವ ಬರೆಹ ಕನ್ನಡಿಯನ್ನಿತ್ತ ಮಹೋನ್ನತ ಲೇಖಕ ಕಾರ್ನಾಡರಿಗೆ ನಮಸ್ಕಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...