Homeಕರ್ನಾಟಕಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು... ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ...

ಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು… ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ…

- Advertisement -
- Advertisement -

| ಶಿವಾ |

ಕರ್ನಾಟಕ ಪ್ರಗತಿರಂಗದ ಸಭೆಗಳಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲೆಯ ವಿವಿಧ ಪಟ್ಟಣ, ಹಳ್ಳಿಗಳನ್ನು ಸುತ್ತಿ ಬಂದಿದ್ದ ಪಿ. ಲಂಕೇಶರು, ‘ಮರೆಯುವ ಮುನ್ನ’ದಲ್ಲಿ ಬಳ್ಳಾರಿಯ ಜಾಲಿಮುಳ್ಳುಗಳ ಕುರಿತೇ ಒಂದು ಆಹ್ಲಾದಕರ ಟಿಪ್ಪಣಿ ಬರೆದಿದ್ದರು. ಈ ಮುಳ್ಳು ಜಾಲಿ ಗಿಡವೇ ಇಲ್ಲಿನ ಬಡವರಿಗೆ ಉರುವಲು, ದೇಹಭಾಧೆ ತೀರಿಸಿಕೊಳ್ಳಲು ಮರೆ… ಎಂಬರ್ಥದಲ್ಲಿ ಬರೆದು, ಜನರು ಸ್ಥಳೀಯ ವಾತಾವರಣದಲ್ಲಿ ಬದುಕು ಕಟ್ಟಿಗೊಳ್ಳುವ ಹಿಂದಿನ ವಾಸ್ತವವನ್ನು ತೆರದಿದಿಟ್ಟಿದ್ದರು. ಉತ್ತರ ಕರ್ನಾಟಕದ ತುಂಬ ಹರಡಿರುವ ಈ ಮುಳ್ಳು ಜಾಲಿಯ ‘ಜೀವಪರತೆ’ಯನ್ನು ಇಲ್ಲಿ ನೀಡಲಾಗಿದೆ…

ಇದು ಜಾಲಿ ! ಎಲ್ಲೆಂದರಲ್ಲಿ ಜಾಲಿಯಾಗಿ ಬೆಳೆಯುವ ಜಾತಿಯ ಮುಳ್ಳು ಪೊದೆಯಿದು.
ಉತ್ತರ ಕರ್ನಾಟಕ ಬಹುತೇಕ ಭಾಗಗಳಲ್ಲಿ ಇದು ಬೇರು ಬಿಟ್ಟು, ತನ್ನದೆಯಾದ ದಟ್ಟ ಪೊದೆಯಾಕಾರದ ಕಾಡನ್ನು ಬೆಳೆಯುವ ಛಾತಿಯನ್ನು ಹೊಂದಿದೆ. ಬಯಲು ಪ್ರದೇಶದಲ್ಲಿ ಹಾಗೂ ನದಿದಡ, ಹಳ್ಳಕೊಳ್ಳ, ಕೋಟೆ, ಕಂದಕ ಸೇರಿದಂತೆ ಖಾಲಿ ಪ್ರದೇಶದಲ್ಲಿ ನೀರಿಲ್ಲದೆ, ಸಂರಕ್ಷಣೆಯಿಲ್ಲದೆ ಬೆಳೆಯುವ ಜಾಲಿ, ಬಹುಪಯೋಗಿ ಮುಳ್ಳಿನ ಕಂಟಿಯಾಗಿದೆ.

ಜಾಲಿ ಜಾತಕ:
ಸ್ವತಂತ್ರ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಬರುವಾಗ ತಮ್ಮ ಹಡಗುಗಳಿಗೆ ಇಂಧನ ಪೂರೈಸಲು ಮತ್ತು ಅಗ್ಗಿಷ್ಟಿಕೆಯನ್ನು ಉರಿಸಿಕೊಳ್ಳಲು ಈ ಜಾಲಿಯ ಮರವನ್ನು ಆಶ್ರಯಿಸುತ್ತಿದ್ದರು. ಮೂಲತಃ ಇದು ದಕ್ಷಿಣ ಆಫ್ರಿಕಾದ ಅಮೇಜಾನ್ ಕಾಡುಗಳಲ್ಲಿ ಕಂಡು ಬರುವ, ಕ್ಯಾಕ್ಟಸ್ ಮುಳ್ಳು ಜಾತಿಯ ಸಸ್ಯ ಸಂಕುಲವಿದು.

ರಾಜ್ಯದ ಬಳ್ಳಾರಿ ಭಾಗದಲ್ಲಿ ಈ ಜಾಲಿ ಮರವು ಮೊದಲ ಬಾರಿಗೆ ಬೇರು ಬಿಟ್ಟ ಉದಾಹರಣೆಯಿದೆ. ಈಗಲೂ ಈ ಮುಳ್ಳು ಪೊದೆಯನ್ನು ಬಳ್ಳಾರಿ ಜಾಲಿಯಂದು ಉತ್ತರ ಕರ್ನಾಟಕದ ರೈತರು ಗುರುತಿಸುತ್ತಾರೆ. ಬಳ್ಳಾರಿ ಜಾಲಿ, ಇದು ಮೂಲತಃ ಹಂದಿ ಸಾಕಾಣಿಕೆಗೆ ಬಳಕೆಯಾಗುವ ಪೊದೆಯಾಗಿದೆ. ಜಾಲಿಗಿಡದ ಹೊಂಬಣ್ಣದ ಹಣ್ಣಾದ ಕಾಯಿಗಳು ಬೆಲ್ಲದ ರುಚಿಯನ್ನು ಹೊಂದಿರುತ್ತವೆ. ಅದರೊಳಗಿರುವ ಬೀಜಗಳು ವಿಷಕಾರಿಯಾಗಿರುತ್ತವೆ. ಇದರ ಕಾಯಿಗಳನ್ನು ಹಂದಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇದರೊಂದಿಗೆ ಜಾಲಿಗಿಡ, ರೈತರ ಪಾಲಿಗೆ ಹೊಲದ ಬದುಗಳಲ್ಲಿ ಜೀವಂತ ಬೇಲಿಯಾಗಿದೆ. ಗ್ರಾಮೀಣ ಪ್ರದೇಶದ ಬಡವರು ಇದನ್ನು ಉರುವಲಾಗಿ ಬಳಸುತ್ತಾರೆ.

ಬಹುಪಯೋಗಿ ಜಾಲಿ ಜಾಲ:
ಜಾಲಿ ಅನೇಕ ಪ್ರಭೇದಗಳನ್ನು ಒಳಗೊಂಡಿದೆ. ದೊಡ್ಡ ಜಾಲಿ, ಸಣ್ಣ ಜಾಲಿ, ರಾಮಜಾಲಿ, ಕರಿಜಾಲಿ, ಹಿಕ್‍ಜಾಲಿ, ಜೀನಿಕಂಟಿ ಎಂದು ಕರೆಯಲ್ಪಡುತ್ತದೆ. ಬಿದರಿನಂತೆ ಇದು ಮೆದುವಾಗಿ ಬಾಗುವ ಗುಣವನ್ನು ಹೊಂದಿದೆ. ಹಸಿ ಕಟ್ಟಿಗೆಯನ್ನು ಬಿಲ್ಲಿನಂತೆ ಬಾಗಿಸಬಹುದು. ಬಲಿತ ಕಟ್ಟಿಗೆಯನ್ನು ಉರುವಲು ಇದ್ದಿಲನ್ನಾಗಿ ಪರಿವರ್ತಿಸುತ್ತಾರೆ.

ಉತ್ತರ ಕರ್ನಾಟಕ ಸೇರಿದಂತೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ, ತೆಲಗಿ, ಜಾಯವಾಡಗಿ ಹಾಗೂ ಇಂಡಿ ತಾಲೂಕಿನ ಭತಗುಣಕಿ, ನಂದ್ರಾಳ, ಹಲಸಂಗಿ, ಅಜನಾಳ, ಹೊರ್ತಿ, ಬುದಿಹಾಳ, ಬೇನೂರ ಆಸು ಪಾಸಿನ ಗ್ರಾಮಗಳಲ್ಲಿ ಜಾಲಿಕಟ್ಟಿಗೆಯಿಂದ ಇದ್ದಿಲು ತಯಾರಿಸಲಾಗುತ್ತದೆ.

ಕಾಶ್ಮೀರದಿಂದ ಕನ್ಯಾಕುಮಾರಿಗೆ:
ಬರದ ಭೂಮಿಯಲ್ಲಿ ಬರಬರನೇ ಮೇಲೆದ್ದು, ದಟ್ಟ ಪೊದೆಯಾಗಿ ಬೆಳೆಯುವ ಈ ಜಾಲಿ ಗಿಡಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಹರಡಿಕೊಂಡಿವೆ. ನೀರು ಹಾಗೂ ಸಂರಕ್ಷಣೆಯ ಅವಶ್ಯಕತೆ ಇಲ್ಲದೆ, ಬಯಲು ಪ್ರದೇಶದ ಸಿಕ್ಕ ಸಿಕ್ಕಲ್ಲಿ ಬೆಳೆದು ನಿಲ್ಲುವ ಜಾಲಿಗಿಡ, ತನ್ನದೆ ಆದ ವಿಶೇಷತೆಯನ್ನು ಹೊಂದಿ, ಭಾರತೀಯರ ಮನೆ, ಮನದಲ್ಲಿ ಅಚ್ಚಾಗಿ ಉಳಿದುಕೊಂಡಿದೆ.

ವರ್ಷದ ಹನ್ನೆರಡು ತಿಂಗಳು ಬೆಳೆದು ನಿಲ್ಲುವ ಈ ಜಾಲಿ ಗಿಡ, ಜಮ್ಮು- ಕಾಶ್ಮೀರದ ಬಾರಾಮುಲ್ಲಾ, ಅನಂತನಾಗ, ನೇಪಾಳ ಗಡಿಭಾಗದ ಗೋರಕಪುರ, ಗೌರಿಪಾಂಟಾ ಹಾಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲೂ ಕಂಡು ಬರುತ್ತದೆ.
ಅಲ್ಲದೆ ಶ್ರೀಲಂಕಾ, ಮಾಲ್‍ಡ್ವೀಸ್ ದ್ವೀಪಗಳು ಸೇರಿದಂತೆ ದಕ್ಷಿಣ ಆಫ್ರಿಕಾದ ಅಮೇಜಾನ್ ತಪ್ಪಲು ಪ್ರದೇಶಗಳಲ್ಲೂ ವ್ಯಾಪಿಸಿಕೊಂಡಿದೆ.

ವಿಷಕಾರಿ ನಂಜು ಮುಳ್ಳು:
ಈ ಜಾಲಿಗಿಡ ತನ್ನ ಮೈತುಂಬಾ ಮುಳ್ಳುಗಳನ್ನು ತುಂಬಿಕೊಂಡರೂ ಎಲೆಗಳು ಮಾತ್ರ ಚಿಕ್ಕದಾಗಿರುತ್ತವೆ. ಕಾಯಿಗಳಂತೂ ಗೇಣುದ್ದ ಸಪೂರವಾಗಿ ಬೆಳೆದಿರುತ್ತವೆ. ಜಾಲಿ ಮುಳ್ಳು ಮನುಷ್ಯನ ಕೈ, ಕಾಲಿಗೆ ಚುಚ್ಚಿದರೆ, ನಂಜಾಗಿ ತೀವ್ರ ನೋವುಂಟು ಮಾಡುತ್ತದೆ.
ಈ ಸಸ್ಯ ಗಿಡವಾಗಿ, ಮರವಾಗಿ ಬೆಳೆದರೂ ಕೂಡ, ತಂಪಾದ ನೆರಳು ನೀಡುವುದಿಲ್ಲ. ಈ ಗಿಡಗಳ ಸುತ್ತಮುತ್ತ ವಾತಾವರಣ ಬಿಸಿಯಾಗಿರುವುದು ಸಾಮಾನ್ಯ. ಆದರೂ ಈ ಜಾಲಿಗಿಡ ದೇಶದ ತುಂಬಾ ಕಂಡು ಬರುವುದು ವಿಶೇಷ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...