Homeಚಳವಳಿಓ ಸರ್ಕಾರವೇ, ಇತ್ತ ಗಮನ ಕೊಡು

ಓ ಸರ್ಕಾರವೇ, ಇತ್ತ ಗಮನ ಕೊಡು

- Advertisement -
ನೂರ್ ಶ್ರೀಧರ್  |
ಫಲಿತಾಂಶ ಹೊರಬಿದ್ದಿದೆ. ಮತಾಂಧ ಶಕ್ತಿಗಳು ಮೊದಲ ಸ್ಥಾನದಲ್ಲಿ ಬಂದು ನಿಂತಿವೆ. ‘ಜಾತ್ಯತೀತ’ ಎಂದು ಕರೆದುಕೊಳ್ಳುವ ಮಿಶ್ರ ಸರ್ಕಾರದ ರಚನೆಯ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಲೋಕಸಭಾ ಚುನಾವಣೆಗಳು ಕೂಗಳತೆಯ ದೂರದಲ್ಲಿವೆ.  ಕಳೆದ 4 ವರ್ಷಗಳಲ್ಲಿ ಬಿಜೆಪಿ ಪಕ್ಷ ಕೇಂದ್ರ ಸರ್ಕಾರದ ಮೂಲಕ ನೀಡಿರುವ ಆಳ್ವಿಕೆ ಮತ್ತು 2009 – 2013ರ ಅವಧಿಯ ಅದರ ಕರ್ನಾಟಕ ಆಳ್ವಿಕೆ ಭಾರತದ ಇತಿಹಾಸದಲ್ಲೇ ಅತ್ಯಂತ ಜನವಿರೋಧಿ ಆಳ್ವಿಕೆಗಳಾಗಿವೆ. ನಾಡಿನ ಸಂಪತ್ತನ್ನು ಬಾಚಲು ಗಣಿದಣಿಗಳಿಗೆ ನೆರವಾಗುವ, ಜನ ಸಾಮಾನ್ಯರ ದುಡಿಮೆಯ ಫಲವನ್ನು ದೋಚಲು ಕಾರ್ಪೋರೇಟ್ ಶಕ್ತಿಗಳಿಗೆ ರತ್ನಗಂಬಳಿ ಹಾಕಿಕೊಟ್ಟಿದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಆರ್ಥಿಕ ನೀತಿಗಳಲ್ಲಿ ಒಂದಷ್ಟು ಸಾಮ್ಯತೆಗಳಿದ್ದರೂ ಕಾಂಗ್ರೆಸ್ ಜನಸಾಮಾನ್ಯರ ವಿಚಾರದಲ್ಲಿ ಒಂದಷ್ಟು ಮೃದು ಧೋರಣೆಯನ್ನು ಅಳವಡಿಸಿದೆ ಹಾಗೂ ಒಂದಿಷ್ಟು ಸಮಾಜ ಕಲ್ಯಾಣದ ಯೋಜನೆಗಳನ್ನು ಜಾರಿಗೆ ತಂದಿದೆ. ವಾಸ್ತವ ಹೀಗಿದ್ದರೂ ಕಾಂಗ್ರೆಸ್ ಪಕ್ಷವನ್ನು ಭ್ರಷ್ಟ, ಜಾತಿವಾದಿ, ಸ್ವಜನ ಪಕ್ಷಪಾತಿ ಪಕ್ಷ ಎಂಬಂತೆ ಬಿಂಬಿಸಲು ಮಾಧ್ಯಮಗಳು ಪೈಪೋಟಿ ನಡೆಸಿವೆ. ಅದೇ ಸಂದರ್ಭದಲ್ಲಿ ಬಿಜೆಪಿ ಅಭಿವೃದ್ಧಿಪರ, ದೇಶಪರ, ಹಿಂದುಪರ ಪಕ್ಷದಂತೆಯೂ ಸುಳ್ಳನ್ನು ಸತ್ಯವೆಂಬಂತೆ ನಂಬಿಸುವ ಸಂಘ ಪರಿವಾರದ ಪ್ರಚಾರಕ್ಕೆ ಮಾಧ್ಯಮಗಳೂ ದೊಡ್ಡ ದನಿಯ ಪ್ರಚಾರ ಕೊಟ್ಟಿವೆ. ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವುದರಲ್ಲಿ ಕಾಂಗ್ರೆಸ್‍ನ ವೈಫಲ್ಯ ಕೂಡ ಎದ್ದು ಕಾಣುತ್ತಿದೆ.
ಹೊಸ ಸರ್ಕಾರ ರಚಿಸುವುದರಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆಗಳು ನಡೆದಿವೆ. ಬಿಜೆಪಿ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು, ಹುದ್ದೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅಂತೂ ಯಾವುದೋ ಒಂದು ಸರ್ಕಾರ ಬರಲಿದೆ. ಯಾವುದೇ ಸರ್ಕಾರ ಬಂದರೂ ರಾಜ್ಯದ ಜನತೆಯ ಹಿತಾಸಕ್ತಿಯ ದೃಷ್ಟಿಯಿಂದ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕಾದ ಪ್ರಮುಖ ಅಂಶಗಳು ಯಾವುವು ಎಂಬುದು ನಮ್ಮ ಮುಂದಿರುವ ಪ್ರಶ್ನೆ.
1. ಕೃಷಿ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನವಾಗಬೇಕು. ಕೃಷಿ ಬಿಕ್ಕಟ್ಟು ಪರಿಹಾರವಾಗಬೇಕಾದರೆ ಕೃಷಿ ವೆಚ್ಚ ಕಡಿಮೆಯಾಗಬೇಕು, ಕೃಷಿ ಆದಾಯ ನಿಶ್ಚಿತಗೊಳ್ಳಬೇಕು. ಕೃಷಿ ವೆಚ್ಚ ತಗ್ಗಿಸಬೇಕಾದರೆ ಸಹಕಾರಿ ಹಾಗೂ ಸಹಜ ಕೃಷಿಯನ್ನು ಉತ್ತೇಜಿಸಲು ವಿಶೇಷ ಪ್ಯಾಕೇಜನ್ನು ಜಾರಿಗೆ ತರಬೇಕು. ಅಲ್ಲದೆ ಬೀಜ, ಗೊಬ್ಬರ, ರಾಸಾಯನಿಕ ಇತ್ಯಾದಿ ಒಳಸುರಿಗಳ ಮೇಲಿನ, ಕೃಷಿ ಯಂತ್ರೋಪಕರಣಗಳ ಮೇಲಿನ ಹಾಗೂ ಕೃಷಿ ಮಾರುಕಟ್ಟೆ ಮೇಲಿನ ಕಾರ್ಪೋರೇಟ್ – ದಲ್ಲಾಳಿ ಹಿಡಿತ ತಪ್ಪಿ ಬೆಲೆಗಳು ನಿಯಂತ್ರಣಕ್ಕೆ ಬರಬೇಕು. ಜೊತೆಗೆ ಇದುವರೆತನಕ ಸರ್ಕಾರಗಳು ಅಳವಡಿಸಿದ ರೈತ ವಿರೋಧಿ – ಕಾರ್ಪೋರೇಟ್ ಪರ ನೀತಿಗಳಿಂದಾಗಿ ರೈತರಿಗೆ ಆಗಿರುವ ನಷ್ಟವನ್ನು ಸಂಪೂರ್ಣ ಸಾಲ ಮನ್ನಾದ ರೂಪದಲ್ಲಾದರೂ ತುಂಬಿಕೊಡಬೇಕು.
2. ಓದಿದರೂ ಉದ್ಯೋಗವಿಲ್ಲದ ಕಡೆ ಸಾಗುತ್ತಿರುವ ಅಂಧಕಾರಿ ಭವಿಷ್ಯದಲ್ಲಿ ದೀಪ ಬೆಳಗುವಂತೆ ಮಾಡಬೇಕು. ಉದ್ಯೋಗ ಸೃಷ್ಟಿ ಸರ್ಕಾರದ ಎರಡನೇ ಪರಮೋಚ್ಛ ಕರ್ತವ್ಯವಾಗಬೇಕು. “ಉದ್ಯೋಗಕ್ಕಾಗಿ ಯುವಜನರು” ಮುಂದಿಟ್ಟ ಯುವ ಪ್ರಣಾಳಿಕೆ ಸೂಚಿಸುವ ರೀತಿಯಲ್ಲಿ “ಉದ್ಯೋಗ ಆಯೋಗ”ವೊಂದನ್ನು ರಚಿಸಬೇಕು. ಅದರ ಶಿಫಾರಸುಗಳನ್ನು ವಿಧಾನ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲೇಬೇಕಾದ ಅಧಿಕಾರ ಇರಬೇಕು. ಹಾಲಿ ಚಾಲ್ತಿಯಲ್ಲಿರುವ ಉದ್ಯೋಗ ಕಡಿತದ ಮಾದರಿಯ ಬದಲು ಉದ್ಯೋಗ ಸೃಷ್ಟಿಯ ಮಾದರಿ ಅಭಿವೃದ್ಧಿಗೊಳ್ಳುವಂತೆ ಮಾಡಬೇಕು.
3. ಕೆಲಸ ಸಿಕ್ಕರೆ ಸಾಲದು, ನೆಮ್ಮದಿಯ ಬದುಕಿಗೆ ಉದ್ಯೋಗ ಭದ್ರತೆ ಖಾತ್ರಿಯಾಗಬೇಕು, ದುಡಿಮೆಗೆ ತಕ್ಕ ಪ್ರತಿಫಲ ಲಭ್ಯವಾಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಂಟ್ರಾಕ್ಟ್ ಪದ್ದತಿ ಶಾಶ್ವತೀಕರಣವನ್ನು ರದ್ದುಗೊಳಿಸಲು ರಾಜ್ಯ ಸರ್ಕಾರವೂ ಹೋರಾಡಬೇಕು. ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಂಟ್ರಾಕ್ಟ್ ಪದ್ದತಿಯನ್ನು ತೆಗೆದುಹಾಕಬೇಕು. ಉಚ್ಛ ನ್ಯಾಯಾಲಯವೇ ಅನೇಕ ಬಾರಿ ಎಚ್ಚರಿಸಿರುವ ಕನಿಷ್ಟ ವೇತನವನ್ನು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಜಾರಿಗೆ ತರಬೇಕು.
4. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಖಾಸಗೀ ಹಿಡಿತ ಹಾಗೂ ಸುಲಿಗೆಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಮತ್ತು ಉಚಿತ ಹಾಗೂ ಉಚ್ಛ ಸರ್ಕಾರಿ ಶಿಕ್ಷಣ ಮತ್ತು ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕು.
5. ಬಡವರ ಬಹುತೇಕ ದುಡಿಮೆಯನ್ನೆಲ್ಲಾ ಬಾಟಲಿ ದಣಿಗಳ ಪಾಲಾಗಿಸುತ್ತಿರುವ ಹಾಗೂ ಯುವಜನರನ್ನು ದುಷ್ಟಚಟದ ದಾಸರನ್ನಾಗಿಸುತ್ತಿರುವ ಮಧ್ಯಪಾನವನ್ನು ನಿಶೇಧಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಕ್ಕಬೇಕು. ಕನಿಷ್ಟ ಮೊದಲ ಹಂತವಾಗಿ ಮಧ್ಯವ್ಯಸನ ತಗ್ಗಿಸುವ ಟಾರ್ಗೆಟ್ ಹಾಕಿ ಫಲಿತಾಂಶ ತೋರಬೇಕು. ಇಡೀ ದೇಶದಲ್ಲಿ ಏಕ ಕಾಲದಲ್ಲಿ ಮಧ್ಯಪಾನ ನಿಷೇಧಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.
6. ಧಾರ್ಮಿಕ ಸಹಬಾಳ್ವೆಯನ್ನು ಉತ್ತೇಜಿಸಬೇಕು. ಧಾರ್ಮಿಕ ದ್ವೇಷ, ಸಾಂಸ್ಕøತಿಕ ಅಸಹನೆ, ಆಹಾರ ಪದ್ದತಿಗಳ ಹೇರಿಕೆಯಂತಹ ಕ್ರಮಗಳನ್ನು ಪ್ರಚೋದಿಸುವ ಸಂಘ ಸಂಸ್ಥೆಗಳನ್ನು ನಿಷೇಧಿಸಬೇಕು.
7. ಮೀಸಲಾತಿಯಂತಹ ಸಂಕೀರ್ಣ ಸಮಸ್ಯೆಗಳಿಗೆ ಸಮಗ್ರ ಉತ್ತರ ಕಂಡುಕೊಳ್ಳಲು ಕಾಲಮಿತಿಯೊಳಗೆ ಪರಿಹಾರ ಸೂಚಿಸುವ ಸಾಮಾಜಿಕ ಮನ್ನಣೆ ಹೊಂದಿರುವ ಸಮಿತಿಯನ್ನು ರಚಿಸಬೇಕು. ಅದರ ಶಿಫಾರಸುಗಳನ್ನು ದಿಟ್ಟವಾಗಿ ಜಾರಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಖಾತ್ರಿಗೊಳಸಿಬೇಕು ಮತ್ತು ಸಾಮಾಜಿಕ ಕಲಹಕ್ಕೆ ಕೊನೆ ಹಾಡಬೇಕು.
8. ಅಲ್ಪಸಂಖ್ಯಾತರ ಸ್ಥಿತಿಗತಿಯಲ್ಲಿ ಬದಲಾವಣೆ ತರಲು ಈಗಾಗಲೇ ಸಾಚಾರ್ ಕಮಿಟಿಯ ಸೂಕ್ಷ್ಮಮತಿ ಶಿಫಾರಸುಗಳು ಇರುವುದರಿಂದ ಅವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
9. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಅಭಿಯಾನ ಆರಂಭಿಸಬೇಕು. ಅವರ ಸ್ವಾವಲಂಬಿ ಶಕ್ತಿ ವೃದ್ಧಿಸುವಂತೆ ಮಾಡಲು ಹಾಗೂ ಅವರ ಸ್ಥಾನ ಮತ್ತು ಹಕ್ಕಿನ ಬಗ್ಗೆ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಹೆಚ್ಚಾಗುವಂತೆ ಮಾಡಲು ಸಾಮಾಜಿಕ ಅಭಿಯಾನ ಆರಂಭಿಸಬೇಕು. ಸಾಮಾಜಿಕ ಸಂಘ ಸಂಸ್ಥೆಗಳನ್ನು ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.
10. ನಿರ್ಲಕ್ಷಿತರಲ್ಲಿ ನಿರ್ಲಕ್ಷಿತರಾಗಿ ಬದುಕುತ್ತಿರುವ ತೃತೀಯ ಲಿಂಗೀಯರು, ವಿಕಲಚೇತನರು, ವೇಶ್ಯೆಯರು, ವೃದ್ಧರು ಹಾಗೂ ನಿರಾಶ್ರಿತರ ಬಗ್ಗೆ ಅಂತಃಕರಣವುಳ್ಳ ಪುನರ್ವಸತಿ ಕ್ರಮಗಳನ್ನು ಆಚರಣೆಗೆ ತರಬೇಕು.
ಇದೆಲ್ಲವನ್ನು ಮಾಡಲೇಬೇಕು. ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇಡುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಹೋರಾಟಗಳು  ನಡೆಯಬೇಕಿದೆ.   ಜನಪರ ಆಳ್ವಿಕೆ ನೀಡುವುದು ಜಾತ್ಯತೀತ ಪಕ್ಷಗಳ ಉಳಿವು ಮತ್ತು ಬೆಳವಣಿಗೆಗೆ ಹೇಗೆ ಪೂರ್ವ ಶರತ್ತೋ ಹಾಗೆಯೇ ನಿಜವಾದ ಜನಪರ ಶಕ್ತಿಗಳು ಪರ್ಯಾಯ ಪಕ್ಷಗಳನ್ನು ಕಟ್ಟಿದರೆ ಸಾಲದು, ಪರ್ಯಾಯ ಜನ ಚಳವಳಿಯನ್ನು ಕಟ್ಟಿಬೆಳೆಸಬೇಕು. ವಿಶಾಲ ತಳಹದಿಯ ಪ್ರಬಲ ಜನಾಂದೋಲನಗಳನ್ನು ರೂಪಿಸಬೇಕಾದ ಕರ್ತವ್ಯ ನಮ್ಮ ಮುಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...