Homeಮುಖಪುಟಚಕ್ರತೀರ್ಥ ಸಮಿತಿ ಸಂಭಾವನೆ ವಿಚಾರದಲ್ಲಿ ಹೀಗೇಕೆ ಸುಳ್ಳು ಹೇಳಿತು ಬಿಜೆಪಿ ಪರಿವಾರ?

ಚಕ್ರತೀರ್ಥ ಸಮಿತಿ ಸಂಭಾವನೆ ವಿಚಾರದಲ್ಲಿ ಹೀಗೇಕೆ ಸುಳ್ಳು ಹೇಳಿತು ಬಿಜೆಪಿ ಪರಿವಾರ?

‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಆಗಿರುವ ವರದಿಗೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

- Advertisement -
- Advertisement -

“ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಹೋಲಿಸಿದರೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ” ಎಂದು ಬಿಂಬಿಸುವ ವರದಿಯಾಗಿದ್ದು, ‘ಬಿಜೆಪಿ ಪರಿವಾರ ಹೀಗೇಕೆ ಸುಳ್ಳು ಹೇಳುತ್ತಿದೆ’ ಎಂಬ ಪ್ರಶ್ನೆ ಮೂಡಿದೆ.

‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ‘ಚಕ್ರತೀರ್ಥ ಸಮಿತಿ ಸಂಭಾವನೆ 5 ಸಾವಿರ’ ಎಂಬ ಹೆಡ್‌ಲೈನ್‌ನಲ್ಲಿ ವರದಿ ಪ್ರಕಟವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಚಕ್ರತೀರ್ಥ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ ಎಂದು ಹೇಳುವ ವರದಿಯು ಏಕಪಕ್ಷೀಯವಾಗಿದೆ ಎಂಬ ಟೀಕೆಗಳು ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ವಿಜಯ ಕರ್ನಾಟಕ’ ವರದಿಯಲ್ಲಿನ ಮುಖ್ಯಾಂಶಗಳು

  • ಚಕ್ರತೀರ್ಥ ಸಮಿತಿ ಪಡೆದ ಸಂಭಾವನೆ ಕೇವಲ 33 ಸಾವಿರ ರೂಪಾಯಿ. ಸರ್ಕಾರ 28,600 ರೂ. ಬಾಕಿ ಉಳಿಸಿಕೊಂಡಿದೆ. ಸಮಿತಿಗೆ ಸಿಕ್ಕಿರುವುದು ಕೇವಲ 5200 ರೂ. ಸಮಿತಿ ಮಾಡಿದ ಒಟ್ಟು ವೆಚ್ಚ 50 ಲಕ್ಷ ರೂ.
  • ಈ ಹಿಂದಿನ ಸಮಿತಿಗಳು ಪಡೆದ ಸಂಭಾವನೆಗಿಂತ ಐದಾರು ಪಟ್ಟು ಕಮ್ಮಿ ಸಂಭಾವನೆಯನ್ನು ಚಕ್ರತೀರ್ಥ ಸಮಿತಿ ಪಡೆದಿದೆ. ಉಳಿದ ಸಮಿತಿಗಳ ಸಂಭಾವನೆ 3.75 ಲಕ್ಷ ರೂ.ಗಳಿಂದ 5.45 ಲಕ್ಷ ರೂ.ಗಳಾಗಿದೆ.

ಮೇಲು ನೋಟಕ್ಕೆ ಚಕ್ರತೀರ್ಥ ಸಮಿತಿಯು ಕಡಿಮೆ ವೆಚ್ಚ ಮಾಡಿದೆ ಎಂದು ಅನಿಸಿದರೂ ಇದು ಅರ್ಧ ಸತ್ಯದಿಂದ ಕೂಡಿದೆ. ಈ ಕುರಿತು ಸ್ವತಃ ಪ್ರೊ.ಬರಗೂರು ರಾಮಚಂದ್ರಪ್ಪ ಅವರೇ ಸ್ಪಷ್ಟನೆ ನೀಡಿದ್ದು, “ಪಠ್ಯಪುಸ್ತಕಗಳ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಮಾಡಿರುವ ವರದಿಯಲ್ಲಿ ಏಕಪಕ್ಷೀಯವಾದ ವಿವರಗಳಿವೆ” ಎಂದು ಬರಗೂರರು ಸ್ಪಷ್ಟಪಡಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಸ್ಪಷ್ಟನೆಗಳೇನು?

ಸ್ಪಷ್ಟನೆ 1: ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಗಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದೆ ಎಂದು ವರದಿ ಹೇಳುತ್ತದೆ. ವಾಸ್ತವವಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದ್ದು ಪಠ್ಯಪುಸ್ತಕಗಳ ರಚನೆ ಹಾಗೂ ಪರಿಷ್ಕರಣೆಗಾಗಿ ಅಲ್ಲ. ಸಂಕೀರ್ಣ ವಿಷಯಗಳ ಪರಿಶೀಲನೆ ಮಾಡಿ ಒಂದು ತಿಂಗಳಲ್ಲಿ ವರದಿಯನ್ನು ಕೊಡಬೇಕೆಂದು ಸಮಿತಿ ರಚನೆಯಾಯಿತು.

ಸ್ಪಷ್ಟನೆ 2: ಚಕ್ರತೀರ್ಥ ಸಮಿತಿಗೆ ಕೇವಲ ಐದು ಸಾವಿರ ರೂಪಾಯಿಗಳ ಸಂಭಾವನೆಯನ್ನು ಕೊಡಲಾಗಿದೆ ಎಂದು ದೊಡ್ಡ ಶೀರ್ಷಿಕೆಯನ್ನು ವರದಿಗೆ ನೀಡಲಾಗಿದೆ. ಆದರೆ ಅದೇ ವರದಿಯಲ್ಲಿ ಸಂಭಾವನೆ 33,800 ರೂಪಾಯಿ ಎಂದಿದೆ. 28,000 ಬಾಕಿ ಉಳಿದಿದೆ ಎಂದು ಬರೆಯಲಾಗಿದೆ. ಬಾಕಿ ಉಳಿಸಿಕೊಂಡು ಆನಂತರ ಹಣ ಜಮಾ ಮಾಡುವ ಪದ್ಧತಿಯು ನಮ್ಮ ಸರ್ಕಾರದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಸಮಿತಿಯಲ್ಲೂ ಅನೇಕರಿಗೆ ಬಾಕಿ ಉಳಿಸಿಕೊಂಡು ಆನಂತರದಲ್ಲಿ ಹಣ ನೀಡಲಾಯಿತು. ಹೀಗಾಗಿ ಚಕ್ರತೀರ್ಥ ಸಮಿತಿಗೆ ನೀಡಿರುವ ಸಂಭಾವನೆ 5,000 ರೂಪಾಯಿಯಲ್ಲ, 33,800 ರೂಪಾಯಿ ಎಂಬುದು ಸತ್ಯ ಸಂಗತಿ.

ಸ್ಪಷ್ಟನೆ- 3: ಮುಡಂಬಡಿತ್ತಾಯ ಸಮಿತಿಯು 3 ಕೋಟಿ 63 ಲಕ್ಷ ಖರ್ಚು ಮಾಡಿದೆ ಎಂದೂ, ನಮ್ಮ ಸಮಿತಿ 2 ಕೋಟಿ 59 ಲಕ್ಷ ಖರ್ಚು ಮಾಡಿದೆ ಎಂದೂ, ಚಕ್ರತೀರ್ಥ ಸಮಿತಿ 49 ಲಕ್ಷ 99 ಸಾವಿರ ರೂ. ಖರ್ಚು ಮಾಡಿದೆ ಎಂದೂ ವರದಿ ಹೇಳುತ್ತದೆ. ಇದು ನಿಜವೇ ಇರಬಹುದು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಮೇಲ್ನೋಟಕ್ಕೆ ನಮ್ಮ ಸಮಿತಿ ತುಂಬಾ ಖರ್ಚು ಮಾಡಿದೆ ಎಂದೂ ಚಕ್ರತೀರ್ಥ ಸಮಿತಿಯು ಕಡಿಮೆ ಖರ್ಚು ಮಾಡಿದೆ ಎಂದೂ ತೋರಿಸಲಾಗುತ್ತಿದೆ. ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ- ನಮ್ಮ ಸಮಿತಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ವಾಸ್ತವವಾಗಿ ಮೊದಲು 27 ಸಮಿತಿಗಳ ರಚನೆ ಮಾಡಲಾಯಿತು. ಆ ನಂತರ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಯಿತು. ಆ ಸಮಿತಿಗಳು ಎರಡೂವರೆ ವರ್ಷ ಕೆಲಸ ಮಾಡಿದವು. ನಾನು ಎರಡು ವರ್ಷ ಕೆಲಸ ಮಾಡಿದೆ. ಒಟ್ಟು ಸಮಿತಿಯಲ್ಲಿ 172 ಜನರಿದ್ದರು. ಅಧಿಕಾರಿಗಳನ್ನೂ ಒಳಗೊಂಡು ಚಕ್ರತೀರ್ಥ ಸಮಿತಿಯಲ್ಲಿದ್ದದ್ದು (ಸರ್ಕಾರದ ಆದೇಶದ ಪ್ರಕಾರ) ಕೇವಲ 16 ಜನ. ಇವರು ಕೆಲಸ ಮಾಡಿದ್ದು ಹೆಚ್ಚೆಂದರೆ ಎರಡು ಅಥವಾ ಮೂರು ತಿಂಗಳು ಮಾತ್ರ. ಇಲ್ಲಿ ವ್ಯತ್ಯಾಸ ಬಹಳ ಸ್ಪಷ್ಟವಾಗಿದೆ. ನಾನು ಸರ್ವಾಧ್ಯಕ್ಷನಾಗಿದ್ದಾಗ 27 ಸಮಿತಿಗಳು, 172 ಜನರು ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಹೊರಗಿನ 30ಕ್ಕೂ ಹೆಚ್ಚು ತಜ್ಞರ ಜೊತೆಯಲ್ಲಿ, ಅಧ್ಯಾಪಕರ ಜೊತೆಯಲ್ಲಿ ಸಭೆ ಮಾಡಿದ್ದೇವೆ. ಒಟ್ಟಾರೆ ಹೇಳುವುದಾದರೆ ನೂರಾರು ಕಾರ್ಯಾಗಾರಗಳು ನಡೆದಿವೆ. ಇವರಿಗೆ ಪ್ರಯಾಣ  ಭತ್ಯೆ, ಸಭಾ ಭತ್ಯೆ ಇತ್ಯಾದಿಗಳನ್ನು ಭರಿಸಿದ್ದು ಪಠ್ಯಪುಸ್ತಕ ಸಂಘ. ಅದೆಲ್ಲವೂ ಈ ರಚನಾ ಪ್ರಕ್ರಿಯೆಯಲ್ಲಿ ಸೇರಿವೆ. ಇಷ್ಟು ಕಾಲ, ಇಷ್ಟು ಮಂದಿ ಮಾಡಿದ ರಚನೆಯ ಕುರಿತು ಆ ವರದಿಯಲ್ಲಿ ಉಲ್ಲೇಖ ಇಲ್ಲದೆ ಇರುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಕಾಲವಧಿಯ ವ್ಯತ್ಯಾಸ, ಕೆಲಸದ ರೀತಿಯ ವ್ಯತ್ಯಾಸ, ಸದಸ್ಯರ ಸಂಖ್ಯೆಯ ವ್ಯತ್ಯಾಸ ಈ ವಿವರಗಳೆಲ್ಲ ವರದಿಯಲ್ಲಿ ಇದ್ದಿದ್ದರೆ ಓದುಗರಿಗೆ ಸ್ಪಷ್ಟವಾಗುತ್ತಿತ್ತು.

ಇದನ್ನೂ ಓದಿರಿ: ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಸ್ಪಷ್ಟನೆ – 4: ಪಠ್ಯಪುಸ್ತಕ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಡಿಟಿಪಿ ಮಾಡಿರುವ ಖರ್ಚುಗಳೂ ಸೇರಿರುತ್ತವೆ. ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಮೇಲೆ ನಿಯಮಗಳ ಪ್ರಕಾರ ಸರ್ಕಾರ ಕೊಡುವ ಭತ್ಯೆಗಳ ಜೊತೆಗೆ ಡಿಟಿಪಿ ಇತ್ಯಾದಿಗಳೆಲ್ಲವೂ ಸೇರಿರುತ್ತವೆ. ಸಮಿತಿಯ ಸದಸ್ಯರಿಗಾಗಲೀ, ಅಧ್ಯಕ್ಷರಿಗಾಗಿ ಹಣ ಕೊಟ್ಟು ಹಂಚಲಾಗುವುದಿಲ್ಲ. ಪಠ್ಯ ಪುಸ್ತಕ ಸಂಘ ಅಥವಾ ಇಲಾಖೆ ಆ ಹಣವನ್ನು ಹಂಚುತ್ತದೆ. ಇಡೀ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುವುದು ನಿಯಮಾನುಸಾರ ಪಠ್ಯಪುಸ್ತಕ ಸಂಘವೇ ಹೊರತು ನಮ್ಮ ಸಮಿತಿಗಳೂ ಅಲ್ಲ, ಸದಸ್ಯರೂ ಅಲ್ಲ, ಅಧ್ಯಕ್ಷರೂ ಅಲ್ಲ. ಈ ವ್ಯತ್ಯಾಸವನ್ನು ಸಾರ್ವಜನಿಕರು ಗಮನಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ನೇಮಕಗೊಂಡ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಕೆಲಸ ಕಾರ್ಯಗಳ ವ್ಯಾಪ್ತಿಗೂ, ಸಂಕೀರ್ಣ ವಿಷಯಗಳ ಪರಿಶೀಲನೆಗಾಗಿ ನೇಮಕವಾದ ರೋಹಿತ್ ಚಕ್ರತೀರ್ಥ ಸಮಿತಿಯ ಕೆಲಸ ಕಾರ್ಯಗಳ ವ್ಯಾಪ್ತಿಗೂ ವ್ಯತ್ಯಾಸ ಇದೆ; ಅದಕ್ಕಾಗಿ, ತೆಗೆದುಕೊಂಡ ಸಮಯ ಮತ್ತು ಮಾಡಿದ ಖರ್ಚು ಸಹಜವಾಗಿ ಬೇರೆ ಬೇರೆಯಾಗಿ ಇರುವುದು ಸಾಮಾನ್ಯ. ಒಬ್ಬ ವರದಿಗಾರನಿಗೆ ಈ ವ್ಯತ್ಯಾಸದ ಸಾಮಾನ್ಯ ಜ್ಞಾನ ಇರಬೇಕು. ಇಲ್ಲ ಎಂದಾದರೆ, ಈ ವರದಿ ದುರುದ್ದೇಶಪೂರಿತ ಎಂಬುದು ಸ್ಪಷ್ಟ! ಇಂತಹ ಕುಚೋದ್ಯ ಮಾಡಲು ಪತ್ರಿಕೆಯನ್ನು ಪ್ರತಿನಿಧಿಸುವವರಿಗೆ ನಾಚಿಕೆಯೂ ಆಗುವುದಿಲ್ಲವೆ?!?

  2. ಜೀ ಹುಜೂರ್‌ ಎನ್ನುವ ಗುಲಾಮ ವರದಿಗಾರ ಮಾತ್ರ ಈ ರೀತಿ ಸುಳ್ಳು ವರದಿ ನೀಡಲು ಸಾಧ್ಯ. ದೇವರಾಜ್‌ ಕನಕಪುರ ತಲೆಯು ಸಾಮಾನ್ಯರಂತೆ ಇಲ್ಲದಿರುವುದು ಆಶ್ಚರ್ಯ. ಇವನು ಹೊಟ್ಟೆಗೆ ಎಲ್ಲರ ತರಹ ಹೊಟ್ಟೆಗೆ ಅನ್ನ ತಿನ್ನುತ್ತಾನೋ? ಇಲ್ಲ ಇನ್ನೇನಾದರೂ ತಿನ್ನುತ್ತಾನೋ? ಗೊತ್ತಿಲ್ಲ. ಇಂತಹ ಭ್ರಷ್ಟ ವರದಿಗಾರು ಸುಳ್ಳು ಮಾಹಿತಿಯನ್ನು ದುರದ್ದೇಶಪೂರಿತವಾಗಿ ನೀಡಲು ಕಾರಣವೇನಿಬಹುದು ಎಂದು ಬಹಿರಂಗ ಪಡಿಸಲಿ. ಇಲ್ಲದಿದ್ದರೆ ಸಾರ್ವಜಿಕವಾಗಿ ಕನ್ನಡ ಜನತೆಯ ಕ್ಷಮೆ ಕೇಳಲಿ.

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...