Homeರಾಷ್ಟ್ರೀಯಸರ್ಕಾರಿ ಸಮಾರಂಭದಲ್ಲಿ ನಿರ್ಧಿಷ್ಟ ಧರ್ಮದ ಪೂಜೆಗೆ ತಡೆ; ಪುರೋಹಿತನನ್ನು ಹೊರಗೆ ಕಳುಹಿಸಿದ DMK ಸಂಸದ

ಸರ್ಕಾರಿ ಸಮಾರಂಭದಲ್ಲಿ ನಿರ್ಧಿಷ್ಟ ಧರ್ಮದ ಪೂಜೆಗೆ ತಡೆ; ಪುರೋಹಿತನನ್ನು ಹೊರಗೆ ಕಳುಹಿಸಿದ DMK ಸಂಸದ

ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರವಾಗಿದ್ದು, ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ ಎಂದು ಸಂಸದ ಡಾ. ಸೆಂತಿಲ್ ಕುಮಾರ್‌ ಹೇಳಿದ್ದಾರೆ

- Advertisement -
- Advertisement -

ತಮಿಳುನಾಡಿನ ಧರ್ಮಪುರಿಯ ಡಿಎಂಕೆ ಸಂಸದ ಡಾ. ಸೆಂತಿಲ್‌ಕುಮಾರ್ ಅವರು ಸರ್ಕಾರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯುತ್ತಿದ್ದ ಭೂಮಿ ಪೂಜೆಯನ್ನು ತಡೆದು ಅಧಿಕಾರಿಗಳನ್ನು ತರಾಟೆಗೆ ಪಡೆದು, ಅರ್ಚಕನನ್ನು ವಾಪಾಸು ಕಳುಹಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಧಾರ್ಮಿಕತೆಯನ್ನು ದೂರ ಇಟ್ಟಿದ್ದಕ್ಕಾಗಿ ನೆಟ್ಟಿಗರು ಅವರನ್ನು ಶ್ಲಾಘಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಅವರು, ಭೂಮಿ ಪೂಜೆಯೂ ಹಿಂದೂ ಸಂಪ್ರದಾಯದಂತೆ ಮಾತ್ರ ನಡೆಯುತ್ತಿದ್ದುದನ್ನು ಪ್ರಶ್ನಿಸಿದ್ದಾರೆ. ಸ್ಥಳದಲ್ಲಿ ಇದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಇವುಗಳನ್ನೆಲ್ಲಾ ನಡೆಸಬಾರದು ಎಂದು ನಿಮಗೆ ಸೂಚನೆ ಇದೆಯೆ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಹಿಂದೂ ಧರ್ಮದ ಪ್ರಕಾರ ಭೂಮಿ ಪೂಜೆ ನಡೆಸುವುದಾದರೆ, ಉಳಿದ ಧರ್ಮಗಳ ಧರ್ಮಗುರುಗಳು ಎಲ್ಲಿ? ಕ್ರಿಶ್ಚಿಯನ್, ಮುಸ್ಲಿಂ, ದ್ರಾವಿಡರು ಎಲ್ಲಿ? ಧರ್ಮವನ್ನೇ ಆಚರಿಸದವರು ಎಲ್ಲಿ?” ಎಂದು ಅಧಿಕಾರಿಯೊಂದಿಗೆ ಸೆಂತಿಲ್ ಕುಮಾರ್‌ ಪ್ರಶ್ನಿಸಿದ್ದಾರೆ.

“ಮಸೀದಿಯ ಇಮಾಂ, ಚರ್ಚಿನ ಫಾದರ್‌ ಸೇರಿದಂತೆ ಎಲ್ಲರನ್ನೂ ಕರೆಯಿರಿ” ಎಂದು ಸ್ಥಳದಲ್ಲಿ ಇದ್ದ ಅರ್ಚಕನನ್ನು ತೆರಳುವಂತೆ ಸಂಸದರು ಕೇಳಿಕೊಂಡಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿ ಇವೆಲ್ಲಾ ಮಾಡಬಾರದು ಎಂದು ನಿಮಗೆ ಗೊತ್ತಿಲ್ಲವೆ ಎಂದು ಸ್ಥಳದಲ್ಲಿದ್ದ ಅಧಿಕಾರಿಯನ್ನು ಪ್ರಶ್ನಿಸಿದ ಸಂಸದರು, ‘‘ನಿಮಗೆ ಸೂಚನೆ ಇದೆಯೆ-ಇಲ್ಲವೆ? ಈ ರೀತಿಯ ಕಾರ್ಯಕ್ರಮಕ್ಕೆ ನನ್ನನ್ನು ದಯವಿಟ್ಟು ಕರೆಯದಿರಿ. ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರ. ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ” ಎಂದು ಹೇಳಿದ್ದಾರೆ.

“ಈ ರೀತಿ ಮಾಡಬೇಡಿ ಎಂದು ಹೇಳುವುದಿಲ್ಲ. ಎಲ್ಲಾ ಧರ್ಮದವರನ್ನೂ ಕರೆಯಿರಿ, ಧರ್ಮ ನಂಬದವರನ್ನೂ ಕರೆಯಿರಿ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಿಯರನ್ನೂ ಕರೆಯಿರಿ” ಎಂದು ಹೇಳಿದ್ದಾರೆ.

ತಮಿಳುನಾಡಿನ ಧರ್ಮಪುರಿ ಕ್ಷೇತ್ರವನ್ನು 2019ರಿಂದ ಸಂಸತ್ತಿನಲ್ಲಿ ಪ್ರತಿನಿಧಿಸಿಸುತ್ತಿರುವ ಡಾ. ಎಸ್. ಸೆಂಥಿಲ್‌ಕುಮಾರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 70,753 ಮತಗಳ ಅಂತರದಿಂದ ಗೆದ್ದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

10 COMMENTS

  1. ಈ ಅಯೋಗ್ಯನಿಗೆ ಹಿಂದೂ ನೆಲೆಗಟ್ಟಿನ ಆದಾರದ ಮೇಲೆನೆ ಈ ಸಮಾಜ ನಿಂತಿರೋದು ಅನ್ನೋದು ತಿಳಿದಿರಬೇಕು,ಹಿಂದೂ ನೆಲೆಗಟ್ಟಿನಲ್ಲಿ ಇರಲು ಆಗದ ಆಯೋಗ್ಯರು ತೊಲಗಲಿ ಇಲ್ಲಿಂದ

  2. ಅಂದಾಜು ಪಟ್ಟಿಯಲ್ಲಿ ಈಬಗೆಯ ಪೂಜೆಮಾಡಲು ವೆಚ್ಚಕ್ಕೆ ಹಣಮೀಸಲಿಡುವುದಿಲ್ಲ. ಆದರೂ ಸಾವಿರಾರು ರುಪಾಯಿ ವೆಚ್ಚಮಾಡಿ ಪೂಜೆಮಾಡಲಾಗುತ್ತದೆ

  3. Height of stupidity displayed by DMK leader just for show off and minority votes appeasement

    Just for 5 minutes pooja so much hungammas but years together government projects gets delayed but these leaders are not seen in those times

  4. after inviting the priest at least you respect him. have a religious tolerance. sending back to priest and cancelling the pooja is not a good idea. he should allowed Pooja and next time he would have cancelled priorly. being a public representative he should be tolerant to religious activities

  5. ಹಿಂದೂ ಎನ್ನುವುದೇ ಇಲ್ಲಾ…. ಇದೆಲ್ಲಾ ಕಟ್ಟುಕಥೆ… ನಿಮ್ಮ ಕಟ್ಟು ಕಥೆಗಳನ್ನು ನಿಮ್ಮ ಮನೆಯವರಿಗೆ ಹೇಳಿ ಬೇರೆಯವರಿಗೆ ಅಲ್ಲಾ… ತಮ್ಮ ಹೊಟ್ಟೆ ಪಾಡಿಗಾಗಿ ಈ ರೀತಿಯಾಗಿ ಹಿಂದೂ ಹಿಂದೂ ಅಂತ ನಮ್ಮ ತಲೆಯಲ್ಲಿ ಹಾಕಿದ್ದಾರೆ….. ನಾವು ದ್ರಾವಿಡರು, ಮೂಲ ನಿವಾಸಿಗಳು….
    ಸೂಪರ್ ಸರ್…. ಹಿಂದೂ ಎಂಬ ನೆಪದಲ್ಲಿ ನಮ್ಮ ದೇಶದ ಸಂವಿಧಾನದ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ, ಅಸಮಾನತೆ ಉಂಟು ಮಾಡುತ್ತಿದ್ದಾರೆ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ, ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ….. ಕಾನೂನಿನ ಅರಿವು ಮುಡಿಸಿದ್ದಕ್ಕಾಗಿ ತಮಗೆ ಅಭಿನಂದನೆಗಳು ಸರ್

  6. ಅವರು ಡಾಕ್ಟರ್ ಓಡಿದ್ದಕ್ಕೂ ಸಾರ್ಥಕ..! ತುಂಬಾ ವೈಜ್ಞಾನಿಕವಾದ ಒಂದು ಸಾಮಾಜಿಕ ಸರ್ವ ಸಮಾನತೆಯ ನಿರ್ಧಾರ.. ಎಲ್ಲಾಕಡೆಯೂ ಇಂತಹಾ ಗೊಡ್ಡು ಮೂಢನಂಬಿಕೆಯ ಆಚರಣೆಗನ್ನು ತಿರಸ್ಕರಿಸಿ ವೈಜ್ಞಾನಿಕ ಮನೋಧರ್ಮ ತಿಳಿಸಿ ಬೆಳೆಸುವ ಆಚರಣೆಗಳು ಬರಬೇಕು. ಆಗಲೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಸರ್ವಧರ್ಮ ಸಮನ್ವಯ ಭಾವದ ಈ “ಪ್ರಬುದ್ಧ ಭಾರತದ” ದ ಕನಸು ನನಸಾಗಿ ಅಭಿವೃದ್ಧಿ, ಉನ್ನತಿ ಆಗಲು ಸಾಧ್ಯ. ಜೈಭೀಮ್…✊✊✊

    He is really worthy of being a doctor and worth appreciating wholeheartedly..! A very scientific Decision of bringing social equality.. There should be practices everywhere to reject such superstitious beliefs, practices and teach scientific thoughts among people. Then only Dr. Babasaheb Ambedkar’s dream of “Enlightened India” of interfaith harmony can become a reality and development and upliftment of the Country can be realized… Jai Bheem ✊✊✊

  7. ಕಾರ್ಯಕ್ರಮ ದ ಉದ್ದೇಶವೇ ಭೂಮಿ ಪೂಜೆ ಮಾಡುವುದು.. ಹೀಗಿರುವಾಗ ಪೂಜೆ ಗೆ ಬಂದ ಪುರೋಹಿತ ನನ್ನು ವಾಪಸ್ ಕಳಿಸುವಂತೆ ಮಾಡಿದ dmkಸಂಸದನೊಬ್ಬ ತನ್ನ ಅವಿವೇಕತನದ ಪ್ರದರ್ಶನ ಮಾಡಿ ಅನಾಗರಿಕತೆ ಮೆರೆದಿದ್ದಾನೆ.

  8. ಪ್ರಪಂಚದಲ್ಲಿ ಹಿಂದೂ ಸಮಾಜ ಒಂದೇ ಚೆನ್ನಾಗಿ ಬದುಕುತ್ತಿಲ್ಲ. ಬೇರೆ ಸಮಾಜಗಳು ಹಿಂದೂ ಸಮಾಜಕ್ಕಿಂತ ಚೆನ್ನಾಗೇ ಬದುಕುತ್ತಿವೆ. ಹಿಂದೂ ಧರ್ಮದಿಂದಲೇ ನಮ್ಮ ಸಮಾಜ ಸಾವಿರಾರು ವರ್ಷಗಳಿಂದ ತೆವೆಳುತ್ತಾ ಬಂದಿದೆ. ಇನ್ನೂ ಎಷ್ಟು ಶತಮಾನಗಳ ಕಾಲ ಹೀಗೇ ತೆವಳುತ್ತಾ ಬರುತ್ತದೋ?

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...