Homeಕರ್ನಾಟಕಸರ್ಕಾರವನ್ನು ಪ್ರಶ್ನಿಸಬೇಕೆ ಹೊರತು ವಿರೋಧ ಪಕ್ಷಗಳನ್ನಲ್ಲ: ಮಂಗಳೂರಿನಲ್ಲಿ ಕನ್ಹಯ್ಯ ಕುಮಾರ್ ಭಾಷಣ

ಸರ್ಕಾರವನ್ನು ಪ್ರಶ್ನಿಸಬೇಕೆ ಹೊರತು ವಿರೋಧ ಪಕ್ಷಗಳನ್ನಲ್ಲ: ಮಂಗಳೂರಿನಲ್ಲಿ ಕನ್ಹಯ್ಯ ಕುಮಾರ್ ಭಾಷಣ

- Advertisement -
- Advertisement -

ಬಿ.ವಿ. ಕಕ್ಕಿಲ್ಲಾಯ ಜನ್ಮಶತಾಬ್ದಿ ಕಾರ್ಯಕ್ರಮವು ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಿತು. ಎ.ಐ.ಎಸ್.ಎಫ್ ನ ವಿದ್ಯಾರ್ಥಿ ನಾಯಕ ಡಾ. ಕನ್ನಯ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ‘ಕವಲು ದಾರಿಯಲ್ಲಿ ಭಾರತದ ಯುವಜನರು’ ವಿಷಯದ ಕುರಿತು ಮಾತನಾಡಿದರು. ಅವರ ಭಾಷಣದ ವಿವರ ಇಲ್ಲಿದೆ.

ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹಕ್ಕೆ ತುತ್ತಾಗ ಜನರಿಗೆ ಶ್ರದ್ದಾಂಜಲಿಯನ್ನು ಸಲ್ಲಿಸುತ್ತೇನೆ. ಬಿ.ವಿ. ಕಕ್ಕಿಲ್ಲಾಯರವರಿಗೆ ಗೌರವಗಳನ್ನು ಸಲ್ಲಿಸುತ್ತೇನೆ. ಕವಲು ದಾರಿಯಲ್ಲಿ ಭಾರತದ ಯುವಜನರು ಎಂಬ ವಿಷಯದ ಬಗ್ಗೆ ನಾನೀಗ ಮಾತಾಡಲಿದ್ದೇನೆ. ಅದಕ್ಕಿಂತ ಮುಂಚೆ ನಿಮ್ಮ ಅನುಮತಿಯೊಂದಿಗೆ ಹಿಂದಿಯಲ್ಲಿ ಮಾತಾಡುತ್ತೇನೆ. ಏಕೆಂದರೆ ನನಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಮಾತನಾಡಲು ಬರುವುದಿಲ್ಲ.

ನಾನು ಖಂಡಿತಾ ಹಿಂದಿಯನ್ನು ನಿಮ್ಮ ಮೇಲೆ ಹೇರುವುದಿಲ್ಲ. ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಅಷ್ಟೇ. ಅದಕ್ಕಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನಮ್ಮ ಪೀಳೀಗೆಯ ಯುವಜನರ ಸಮಸ್ಯೆ ಇತಿಹಾಸವನ್ನು ಸರಿಯಾಗಿ ಓದಿಲ್ಲದಿರುವುದು. ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ಮಂಗಳೂರಿನಲ್ಲಿ ಮಸ್ಲೊಂಕಿ ಎಂಬುವ ಎ.ಐ.ಎಸ್.ಎಫ್ ನ ವಿದ್ಯಾರ್ಥಿ ನಾಯಕ ಮತ್ತು ಆತನ ಸಂಗಾತಿಗಳನ್ನು ಒಂದು ಪ್ರತಿಭಟನೆಯ ನಂತರ ಬ್ರಿಟಿಷ್ ಪೊಲೀಸರು ಬಂಧಿಸಿ ದೇಶದ್ರೋಹಿ ಎಂಬ ಕೇಸನ್ನು ದಾಖಲಿಸಿದ್ದರು. ನನಗೂ ಅವನಿಗೂ ಒಳ್ಳೇಯ ಸಂಬಂಧವಿದೆ ಅನ್ನಿಸಿತು. ಈಗಲೂ ನಮ್ಮ ದೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ಅವರನ್ನು ಬಂಧಿಸಿ ದೇಶದ್ರೋಹಿ ಎಂಬ ಕೇಸನ್ನು ದಾಖಲಿಸಿದ್ದಾರೆ. 70 ವರ್ಷದಲ್ಲಿ ಹಾಗೆಯೇ ಇದೆ. ಈಗ ಬ್ರಿಟಿಷ್ ಪೊಲೀಸರ ಬದಲಾಗಿ ನಮ್ಮದೇ ಸೈನಿಕರಿದ್ದಾರೆ ಅಷ್ಟೇ.

ಎ.ಐ.ಎಸ್.ಎಫ್ ಭಾರತದ ಮೊದಲ ವಿದ್ಯಾರ್ಥಿ ಸಂಘಟನೆಯಾಗಿದೆ. 1936ರಲ್ಲಿಯೇ ಪ್ರಾರಂಭವಾಗಿದೆ. ಇದು ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆ. ಬ್ರಿಟಿಷರೊಡನೆ ಹೋರಾಟ ಮಾಡಿದೆ. 1952 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿಯೂ ಭಾಗವಹಿಸಿದದ ಇತಿಹಾಸ ಇದೆ. ದೇಶ ನಿರ್ಮಾನದಲ್ಲಿ ತೊಡಗಿಸಿಕೊಂಡಿದೆ. ಸಿನೆಮಾ, ವಿಜ್ಞಾನ, ಕಲೆ, ಸಾಹಿತ್ಯ, ತಂತ್ರಜ್ಞಾನ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲಿ ಎ.ಐ.ಎಸ್.ಎಫ್ ನ ಹೆಸರು ಇದೆ.

ಆಗ ಅದು ಭಾರತದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿರಬೇಕು. ಎಲ್ಲರಿಗೂ ಗೌರದ ಉದ್ಯೋಗ ಸಿಗಬೇಕು. ನಮ್ಮ ದೇಶದ ವೈವಿಧ್ಯತೆಯನ್ನು ಸ್ಪೀಕರಿಸಬೇಕು. ಭಾರತದ ಪರಿಕಲ್ಪನೆಯಲ್ಲ ಜಾತಿ, ಲಿಂಗ, ಭಾಷೆ, ಧರ್ಮದ ಆಧಾರದಲ್ಲಿ ತಾರತಮ್ಯ ಇರಬಾರದು ಎಂಬ ಕನಸು ಕಂಡಿತು. ನಾನು ಹಲವು ಪ್ರಗತಿಪರರನ್ನು ಭೇಟಿಯಾಗುತ್ತಿದ್ದೇನೆ. ಅವರು ಬೇಸರದಿಂದ ಮಾತಾಡುತ್ತಿದ್ದಾರೆ, ಎಲ್ಲಾ ಹಾಳಾಗುತ್ತಿದೆ, ಏನು ಬದಲಾವಣೆ ಆಗುತ್ತಿಲ್ಲವೆನ್ನುವುದು ಅವರ ಆರೋಪ. 70 ವರ್ಷದಲ್ಲಿ ಏನು ಆಗಿಲ್ಲ ಎಂದು. ನಾನು ಹೇಳುತ್ತೇನೆ ಈ 70 ವರ್ಷದಲ್ಲಿ ಬಹಳಷ್ಟು ಆಗಿದೆ. ಪ್ರಜಾಪ್ರಭುತ್ವ ಸ್ಪಲ್ಪ ಪ್ರಬುದ್ಧಗೊಂಡಿದೆ. ಹಲವು ಸಂವಿಧಾನದ ತಿದ್ದುಪಡಿಗಳಾಗಿವೆ. ಆದರೆ ಎಷ್ಟು ಬದಲಾವಣೆಗಳಾಗಬೇಕಿತ್ತೋ ಅಷ್ಟು ಬದಲಾಗಿಲ್ಲ. ಜೊತೆಗೆ ಕೆಲವು ವಿಷಯಗಳಲ್ಲಿ ಮುಂದೆ ಸಾಗುವ ಬದಲು ನಾವು ಹಿಂದೆ ಚಲಿಸುತ್ತಿದ್ದೇವೆ. ಇಂದು ನಾನು ಇಲ್ಲಿ ಯುವಜನರು ಮತ್ತು ಪ್ರಸ್ತುತ ಪರಿಸ್ಥಿತಿಯ ಕುರಿತು ಮಾತನಾಡುವಾಗ ನನಗನಿಸುತ್ತದೆ ದೇಶದಲ್ಲಿ ಪ್ರಗತಿಯಾಗುತ್ತಿಲ್ಲ. ನಾವು ಮುದೆ ಸಾಗುವ ಬದಲು ಹಿಂದೆ ಚಲಿಸುತ್ತಿದ್ದೇವೆ.

ಬಾಲ್ಯನಲ್ಲಿ ನಮಗೆ ಹೇಳುತ್ತಿದ್ದು ರಾಜಕಾರಣಿ ಬಹಳ ಕೆಟ್ಟದ್ದು ಅಂತ. ಯಾರಾದರೂ ರಾಜಕಾರಣಿಗಳು ಒಳ್ಳೆಯದು ಮಾಡಲು ಹೊರಟರೆ ಅವರನ್ನು ಮುಗಿಸಿಬಿಡುತ್ತಾರೆ ಎಂದು. ಅದಕ್ಕಾಗಿಯೇ ಇಂದು ಹಲವು ಮಧ್ಯಮವರ್ಗದ ಪೋಷಕರು ತಮ್ಮ ಮಕ್ಕಳು ರಾಜಕಾರಣಿಗಳಾಗಬೇಕೆಂದು ಬಯಸುವುದಿಲ್ಲ. ಬದಲಿಗೆ ವೈದ್ಯರೋ, ಇಂಜಿನಿಯರ್, ಆಟಗಾರರೋ ಆಗಬೇಕು ಎನ್ನುತ್ತಾರೆ. ಏನಾದರೂ ಆಗಲಿ ರಾಜಕಾರಣಿಯಾಗುವುದು ಬೇಡ ಎಂಬುದು ಸಾಮಾನ್ಯವಾಗಿದೆ. ಈ ಸಾಮಾಜಿಕ ಪರಿಸ್ಥಿಯಲ್ಲಿ ನಮ್ಮ ಹಕ್ಕುಗಳೇನು? ಎಂಬುದು ಯಾರಿಗೆ ಗೊತ್ತಿದೆ. ನಿನ್ನ ಹಕ್ಕುಗಳಿಗಾಗಿ ಹೋರಾಡು ಎಂದು ಯಾವ ಪೋಷಕರು ಹೇಳುವುದಿಲ್ಲ. ಹಾಗಾಗಿ ಯುವಜನರಿಗೆ ರಾಜನೀತಿ ಅರ್ಥವಾಗುತ್ತಿಲ್ಲ ಮಾತ್ರವಲ್ಲ ಅವರು ಯಾರನ್ನ ಪ್ರಶ್ನಿಸುತ್ತಿಲ್ಲ.

ಬದಲಿಗೆ ನಿನ್ನ ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಂಡು ಚೆನ್ನಾಗಿ ಓದು, ಕೆರೀರ್ ರೂಪಿಸಿಕೊ ಎಂದು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಯಾವುದು ಡಿಮಾಂಡ್ ಇದೆಯೋ ಅದನ್ನು ಓದು ಎನ್ನುತ್ತಾರೆ. ಈ ರೀತಿ ಕೆರೀರ್ ಒತ್ತಡ ಹಾಕಿ ನಮ್ಮನ್ನು ಮೇಶಿನ್ ರೀತಿ ಮಾಡುತ್ತಿದ್ದಾರೆ. ಹಾಗಾಗಿ ಯುವಜನರಿಗೆ ರಾಜಕೀಯ ಪ್ರಬುದ್ಧತೆ ಬಂದಿಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಬೇಸರಪಟ್ಟುಕೊಳ್ಳಬೇಕಿಲ್ಲ. ಇದರಿಂದಲೇ ನಮಗೆ ಜಾತ್ಯಾತೀತತೆಯ ಅರ್ಥ ಮತ್ತು ಮಹತ್ವ ಗೊತ್ತಾಗಿದೆ. ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವ ಮಹತ್ವ ಮನವರಿಕೆಯಾಗಿದೆ. ದೇಶದ ಹಲವು ಸಮಸ್ಯೆಗಳು ಮುನ್ನಲೆಗೆ ಬಂದಿವೆ. ರಾಜಕೀಯ ಪ್ರಶ್ನೆಗಳು ಕೇಳಿಬರುತ್ತಿವೆ. ಇದರಿಂದಾಗಿ ಮುಂದೊಂದು ದಿನ ನೈಜ ರಾಜಕೀಯ ಅರಿವು ಎಲ್ಲರಿಗೂ ದಕ್ಕಲು ಸಾಧ್ಯ.

ಅರ್ಥಶಾಸ್ತ್ರದ ಮೇಲೆ ಧರ್ಮಶಾಸ್ತ್ರ ಬಂದು ಕುಳಿತಿದೆ. ಹಾಗಾಗಿ ಇಂದು ದೊಡ್ಡ ಮಟ್ಟದ ಆರ್ಥಿಕ ಕುಸಿತ ಎದುರಾಗಿದ್ದರೂ ಪ್ರಧಾನಿ ಏನೂ ಮಾಡಲಾಗುತ್ತಿಲ್ಲ. ಆದ್ದರಿಂದ ಅವರು ಮತ್ತಷ್ಟು ಧರ್ಮದ ಮೊರೆ ಹೋಗುತ್ತಿದ್ದಾರೆ.

ಇಂದು ದೇಶಭಕ್ತಿಯ ಹೆಸರಿನಲ್ಲಿ ಅಂಧಭಕ್ತಿಯನ್ನು ತುರುಕಲಾಗುತ್ತಿದೆ. ದೇಶವನ್ನು ಹಾಳುಮಾಡುತ್ತಿರುವ ಬಲಾಢ್ಯರನ್ನು ಪ್ರಶ್ನಿಸಿದರೆ ಅದು ದೇಶಪ್ರೇಮ. ಅದು ಬಿಟ್ಟು ಅಮಾಯಕರನ್ನು, ದುರ್ಬಲರನ್ನು ಪ್ರಶ್ನಿಸುವುದಲ್ಲ. ಸರ್ಕಾರವನ್ನು ಪ್ರಶ್ನಿಸಬೇಕೆ ಹೊರತು ವಿರೋಧ ಪಕ್ಷಗಳನ್ನಲ್ಲ.

ಪ್ರಶ್ನಿಸುವ ಮನೋಭಾವ ನಮ್ಮ ಮನೆಗಳಿಂದಲೇ ಆರಂಭವಾಗಬೇಕು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಜಾಪ್ರಭುತ್ವ ವಾತವರಣವನ್ನು ಸೃಷ್ಟಿಸಬೇಕಿದೆ. ಎಲ್ಲರನ್ನು ಪ್ರಶ್ನಿಸುವ ಮನೋಭಾವವಿದ್ದಾಗ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೌರವ ಎಂದರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...