Homeಚಳವಳಿಗಾಂಧೀಜಿ, ಆರ್‌ಸಿಇಪಿ ಒಪ್ಪಂದ, ಇಥಿಯೋಪಿಯಾದ ಅಧ್ಯಕ್ಷ ಮತ್ತು ದೇವನೂರು ಮಹಾದೇವರವರ ಮಾತುಗಳು...

ಗಾಂಧೀಜಿ, ಆರ್‌ಸಿಇಪಿ ಒಪ್ಪಂದ, ಇಥಿಯೋಪಿಯಾದ ಅಧ್ಯಕ್ಷ ಮತ್ತು ದೇವನೂರು ಮಹಾದೇವರವರ ಮಾತುಗಳು…

ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಉತ್ಪನ್ನಗಳು ಭಾರತಕ್ಕೆ ಬಂದು ದಾಳಿ ಮಾಡುತ್ತವೆ. ಈ ಹಾಲಿನ ಯುದ್ಧವಾದರೆ, ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ಮಟಾಷ್ ಆಗುತ್ತದೆ.

- Advertisement -
- Advertisement -

‘ಆರ್ ಸಿ ಇ ಪಿ’ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ) ಒಪ್ಪಂದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ನವೆಂಬರ್ 2019ರಲ್ಲಿ ಕೇಂದ್ರ ಸರಕಾರ ತಯಾರಾಗಿದ್ದು, ಅದಕ್ಕಾಗಿ ದೇಶಾದ್ಯಂತ 24.10.2019ರಂದು ರೈತರು ಮತ್ತು ಈ ಒಪ್ಪಂದಕ್ಕೆ ವಿರೋಧವಾಗಿರುವವರಿಂದ ಪ್ರತಿಭಟನೆಗಳು ನಡೆದವು. ಅದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ 25.10.2019ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು, ಅದರ ಸಂಪೂರ್ಣ ಪಾಠ ‘ನಮ್ಮಬನವಾಸಿ’ಯಲ್ಲಿಯೂ ಪ್ರಕಟವಾಗಿದೆ. ನಮ್ಮ ಓದಿಗಾಗಿ ಇಲ್ಲಿದೆ.

ಮೊದಲೊಂದು ಪ್ರಸಂಗ ನೆನಪಿಸುವೆ. “ವಿದೇಶಿ ವಸ್ತ್ರ ಸುಡಿ” ಎಂಬ ಗಾಂಧಿ ಕರೆಯಿಂದಾಗಿ ಇಂಗ್ಲೆಂಡಿನ ಲಂಕಾಶೈರ್‌ನ ಬಟ್ಟೆ ಗಿರಣಿಗಳು ಮುಚ್ಚುವಂತಾಗಿ ಅಲ್ಲಿನ ಕಾರ್ಮಿಕರು ಗಾಂಧೀಜಿಯನ್ನು 26-09-1931 ರಲ್ಲಿ ಸುತ್ತುವರಿದು ತಮ್ಮ ಕಷ್ಟ ಹೇಳಿಕೊಂಡಾಗ ಗಾಂಧಿ ಆಡಿದ ನುಡಿಗಳು ಹೀಗಿವೆ:

“ಇಲ್ಲಿನ ನಿರುದ್ಯೋಗ ಕಂಡು ನನಗೆ ನೋವಾಗಿದೆ, ಆದರೆ ಇಲ್ಲಿ ಹಸಿವು ಮತ್ತು ಅರೆಹೊಟ್ಟೆ ಬದುಕು ಇಲ್ಲ. ಇಂಡಿಯಾದಲ್ಲಿ ನಮಗೆ ಎರಡೂ ಇದೆ. ನೀವು ಇಂಡಿಯಾದ ಹಳ್ಳಿಗಳಿಗೆ ಹೋಗಿ ನೋಡಿದರೆ ಆ ಹಳ್ಳಿಗಳ ಕಣ್ಣಲ್ಲಿ ತೀವ್ರ ಹತಾಶೆ ಕಾಣುತ್ತೆ. ಅಲ್ಲಿ ಕಾಣುವುದು ಅರೆಹೊಟ್ಟೆಯ ಎಲುಬು ಗೂಡುಗಳು, ಜೀವಂತ ಶವಗಳು. ಇವುಗಳಿಗೆ ಕೆಲಸದ ರೂಪದಲ್ಲಿ ಅನ್ನ ಕೊಟ್ಟು ಜೀವ ತುಂಬಿದರೆ ಆ ಭಾರತ ಜಗತ್ತಿಗೆ ನೆರವಾಗುತ್ತದೆ. ಈವತ್ತು ಭಾರತ ಶಾಪಕ್ಕೊಳಗಾಗಿದೆ. ನನ್ನ ದೇಶದಲ್ಲಿ, “ಈ ಅರೆಹೊಟ್ಟೆಯ ಲಕ್ಷಾಂತರ ಜನರ ಜೀವ ಕೊನೆಗೊಂಡರೆ ಉಳಿದವರು ಬದುಕುತ್ತಾರೆ” ಅನ್ನುವ ಗುಂಪೂ ಇದೆ.  ನಾನೊಂದು ಮಾನವೀಯ ವಿಧಾನವನ್ನು ಕಂಡುಕೊಂಡೆ. ಅದೇನೆಂದರೆ, ಅವರಿಗೆ ಗೊತ್ತಿರುವ ಕೆಲಸವನ್ನು ಕೊಡೋದು. ಅವರು ಅದನ್ನು ತಮ್ಮ ಜೋಪಡಿಯಲ್ಲಿ ಮಾಡುವಂತಹುದು,  ದೊಡ್ಡ ಬಂಡವಾಳ ಅಗತ್ಯ ಇಲ್ಲದ್ದು. ಈ ಉತ್ಪನ್ನಗಳ ಮಾರಾಟ ಸುಲಭವಾಗಿರುವುದು– ಅಂಥದು. ಈ ಒಂದು ಧ್ಯೇಯ ಲಂಕಾಶೈರ್ ಗಮನಕ್ಕೂ ಯೋಗ್ಯವಾಗಿದೆ”.

ಈ ಮಾತುಗಳಲ್ಲಿ ಕೇವಲ 89 ಪದಗಳಿವೆ. ಈ ನುಡಿಗಳನ್ನು ನನ್ನ ಮನಸ್ಸಲ್ಲಿ ಮೂಡಿಸಿಕೊಂಡೆ. ಗೊಮ್ಮಟನನ್ನು ಕಂಡಂತಾಯ್ತು.

ಇಲ್ಲಿ ಬರುವ ಒಂದು ವಾಕ್ಯ ಗಮನಿಸಬೇಕು- “ಅರೆಹೊಟ್ಟೆಯ ಲಕ್ಷಾಂತರ ಜನರ ಜೀವ ಕೊನೆಗೊಂಡರೆ, ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ”. ನೋಡಿದರೆ, ಇಂದು ನಮ್ಮ ಕಣ್ಣೆದುರು ಆಗುತ್ತಿರುವುದು ಇದೇ ಏನೋ ಅನಿಸಿಬಿಡುತ್ತದೆ. ನಿರುದ್ಯೋಗಿಗಳ, ರೈತರ ಆತ್ಮಹತ್ಯೆ ಲಕ್ಷಾಂತರ ಆಗುತ್ತಿದೆ. ಆಳುವವರು ಹೊಣೆಗಾರರಾಗುತ್ತಿಲ್ಲ.

ಜೊತೆಗೆ, ಮನುಷ್ಯನ ದುರಾಸೆಯ ಪರಿಣಾಮದಿಂದ ಉಂಟಾದ ಜಾಗತಿಕ ತಾಪಮಾನದಿಂದಾಗಿ ಪ್ರಕೃತಿ ಕುಪಿತಗೊಂಡು ಒಂದು ಕಡೆ ನೆರೆ ಪ್ರವಾಹದಿಂದ ಜನರ ಬದುಕು ಮುಳುಗಡೆ ಆಗುತ್ತಿದೆ. ಅದರ ಪಕ್ಕದಲ್ಲೆ ಮಳೆ ಇಲ್ಲದೆ, ಬೆಳೆ, ಜನ ಒಣಗಿ ಹೋಗುತ್ತಿದ್ದಾರೆ, ಸಾಯುತ್ತಿದ್ದಾರೆ. ಜೊತೆಗೆ ಭಾರತದ ಅರ್ಥಿಕತೆ ಕುಸಿಯುತ್ತಿದೆ. ಉದ್ಯೊಗಗಳು ಕುಸಿಯುತ್ತಿದೆ. ಈ ಕುಸಿಯುತ್ತಿರುವ ಭಾರತದ ಮೇಲೆ ಮೋದಿಶಾದ್ವಯರು, ಪೂತನಿ (ಕ್ರೋನಿ) ಬಂಡವಾಳಶಾಹಿ ಜೊತೆಗೂಡಿಕೊಂಡು ಕುಣಿದು ಕುಪ್ಪಳಿಸಿ ತುಳಿದು, ಹಾಲಿ ಇರುವ ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರಾಟ ಮಾಡಿಕೊಂಡು ಸರ್ಕಾರ ತನ್ನ ಜೀವನ ಸಾಗಿಸುವುದು ಹೆಚ್ಚುತ್ತಿದೆ. ಇದರಿಂದಲೂ ಉದ್ಯೋಗ ಉದುರಿ ಹೊಗುತ್ತಿದೆ, ಆತ್ಮಹತ್ಯೆ ಹೆಚ್ಚುತ್ತಿದೆ.

ನೋಡಿ, ಈಗ ಕೇಂದ್ರ ಸರ್ಕಾರವು, 16 ದೇಶಗಳ ನಡುವೆ ಆರ್.ಸಿ.ಇ.ಪಿ ಎಂಬ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರಕ್ಕೆ ಹೆಬ್ಬೆಟ್ಟು ಒತ್ತಲು ರೆಡಿಯಾಗಿದೆ. ಗುಟ್ಟಾಗಿ ಕೊಲೆ ಸಂಚು ಜರುಗುತ್ತಿದೆ. ಪಾರ್ಲಿಮೆಂಟ್ ಮುಂದೆನು, ಇಡುತ್ತಿಲ್ಲ. ರಾಜ್ಯಗಳನ್ನು ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ಹೆಬ್ಬೆಟ್ಟು ಒತ್ತಿದರೆ ಏನಾಗುತ್ತೆ? ಒಂದೇ ಒಂದು ಉದಾಹರಣೆ ಸಾಕು – ಭಾರತದಲ್ಲಿ ಸಣ್ಣಸಣ್ಣ ರೈತರು ಹಾಗೂ ಮತ್ತೊಂದಿಷ್ಟು ಜನಸಾಮಾನ್ಯರು ಹಾಲು ಉತ್ಪಾದನೆಯಲ್ಲಿ ತೊಡಗಿ ಇದನ್ನೆ ತಮ್ಮ ಜೀವನಾಧಾರ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ಜನ ಗ್ರಾಮೀಣ ಕಡುಬಡವರು ಇದರ ಮೇಲೇನೆ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚಾಗಿ ಮಹಿಳೆಯರ ಬದುಕು ಇದನ್ನು ಅವಲಂಬಿಸಿಯೇ ಉಸಿರಾಡುತ್ತಿದೆ. ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಉತ್ಪನ್ನಗಳು ಭಾರತಕ್ಕೆ ಬಂದು ದಾಳಿ ಮಾಡುತ್ತವೆ. ಈ ಹಾಲಿನ ಯುದ್ಧವಾದರೆ, ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ಮಟಾಷ್ ಆಗುತ್ತದೆ. ಮಹಿಳೆಯರೂ ಆತ್ಮಹತ್ಯೆಗೆ ಶರಣಾಗತೊಡಗುತ್ತಾರೆ.

ಯಾಕೆ ಪುರುಷರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮಹಿಳೆಯರು ಇಲ್ಲ, ಎಂದು ಸರ್ಕಾರ ಚಿಂತಿಸಿ ಈ ಒಪ್ಪಂದಕ್ಕೆ ರುಜು ಹಾಕುತ್ತಿರಬಹುದೇ? ಗಾಂಧಿ ಹೇಳುವ – ನನ್ನ ದೇಶದಲ್ಲಿ ಈ ಅರೆಹೊಟ್ಟೆಯ ಲಕ್ಷಾಂತರ ಜನರ  ಜೀವ ಕೊನೆಗೊಂಡರೆ ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ – ಎನ್ನುವ ಮಾತು ನಿಜವಿರಬಹುದೆ?

ಜಾಗತೀಕರಣದ ನಂತರ ಜಗತ್ತಿನ ಪ್ರವಾಹ ಇರುವುದೇ ಹೀಗೆ, ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಎಲ್ಲರೂ ಕೊಚ್ಚಿ ಹೋಗುತ್ತಿದ್ದೇವೆ.

ಕೊಚ್ಚಿ ಹೋಗುತ್ತಿರುವ ನಾವು, ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹಮದ್ ಕಡೆಗೆ ನೋಡಬೇಕಾಗಿದೆ. ಬೆಳಕು ಕಾಣಬಹುದು. ಗೊತ್ತಲ್ಲ? ಇಥಿಯೋಪಿಯಾ ಅಂದರೆ ಹಸಿವಿನಿಂದ ಎಲುಬಿನ ಗೂಡಾಗಿದ್ದ ದೇಶ. ಇಂಥ ದೇಶಕ್ಕೆ ಆತ ಪ್ರಧಾನಿಯಾಗಿ ಬರುತ್ತಾನೆ. ಇನ್ನೂ ಎರಡು ವರ್ಷಗಳು ತುಂಬಿಲ್ಲ, ಅವನ ಕಾರ್ಯವೈಖರಿಗಳು, ಯುದ್ಧವಿಲ್ಲದೆ ಎಲ್ಲವನ್ನು ಎಲ್ಲರನ್ನು ಗೆದ್ದುಕೊಳ್ಳುತ್ತಿದೆ. ಆತ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಸಂವಾದ ನಡೆಸಿದ. ಉಗ್ರಗಾಮಿ ಸಂಘಟನೆಗಳ ಜೊತೆ ಮಾತುಕತೆ ಮಾಡಿದ. ದೌರ್ಜನ್ಯ ನಡೆಸುವ ಮಿಲಿಟರಿ ಅಧಿಕಾರಿಗಳಿಗೆ ಗೇಟ್ ಪಾಸ್ ಕೊಟ್ಟ. ಜನಾಂಗೀಯ ಹಿಂಸಾಚಾರಗಳನ್ನು ಮಟ್ಟ ಹಾಕಿದ, ಯುವಜನತೆಗೆ ಉದ್ಯೋಗ ನೀಡಲು ಮುಂದಾದ. ಅಧಿಕಾರಕ್ಕೆ ಬಂದ ದಿನದಿಂದ ತನ್ನ ಕಚೇರಿ ಬಾಗಿಲನ್ನು ಅವನು ಮುಚ್ಚಲಿಲ್ಲ. ಅಷ್ಟೇ ಅಲ್ಲ, ಆತನ ಕ್ಯಾಬಿನೆಟ್ ನಲ್ಲಿ ಅರ್ಧಕ್ಕರ್ಧ ಮಹಿಳೆಯರೇ ಇದ್ದಾರೆ. ಸುಪ್ರಿಂ ಕೋರ್ಟ್ ನ್ಯಾಯಾಧೀಶರುಗಳಾಗಿ ಮಹಿಳೆಯರೇ ಇರುವಂತೆ ಎಚ್ಚರ ವಹಿಸಿದ್ದಾನೆ. ಆತ  ದೂರದ ವಿದೇಶ ಪ್ರವಾಸವನ್ನು ಮಾಡಲಿಲ್ಲ. ದ್ವೇಷದ ನಾಡಲ್ಲಿ ಶಾಂತಿ, ಕ್ಷಮೆ, ಸಹಬಾಳ್ವೆ ಕಟ್ಟತೊಡಗಿದ. ತನ್ನ ಪಕ್ಕಾ ಎದುರಾಳಿಯನ್ನು ಚುನಾವಣೆ ಆಯೋಗದ ಅಧ್ಯಕ್ಷನನ್ನಾಗಿ ಮಾಡಿದ! ಒಂದೇ ದಿನ ತನ್ನ ದೇಶದ ಮಣ್ಣಲ್ಲಿ 35 ಕೋಟಿ ಮರಗಿಡಗಳ ಸಸಿನೆಟ್ಟು ಹಸಿರು ಮಾಡತೊಡಗಿದ್ದಾನೆ. ಅಲ್ಲೂ ಒಬ್ಬ ಗೋಡ್ಸೆ ಇರುತ್ತಾನೆ. ಪ್ರದಾನಿ ಅಬಿಯ್ ಅಹಮದ್ ಹತ್ಯೆಗೆ ಪ್ರಯತ್ನಿಸುತ್ತಾನೆ. ಈ ಮರಿ ಗಾಂಧಿ ಹೇಳುತ್ತಾನೆ –“Love always wins. Killing others is a defeat. To those who tried to divide us, I want to tell you that you have not succeeded”.

ಇಷ್ಟಾದ ಮೇಲೆ, ಬಹಳ ಮುಖ್ಯವಾಗಿ ಇಥಿಯೊಪಿಯಾದ ಜೊತೆಗೆ ಯಾವಾಗಲೂ ಗಡಿ ತಕರಾರು ಮಾಡುತ್ತ ಬಡಿದಾಡುತ್ತಿದ್ದ ಪಕ್ಕದ ದೇಶ ಎರಿಟ್ರಿಯಾ ಜೊತೆ ಮಾತುಕತೆ ನಡೆಸುತ್ತಾನೆ. ವೈರಿ ದೇಶವನ್ನು ತನ್ನ ಪ್ರೀತಿಯ ವರಸೆಯಲ್ಲಿ ಗೆಲ್ಲುತ್ತಾನೆ. ಅಂತರ್ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಸೂಡಾನ್‍ನಲ್ಲಿ ಶಾಂತಿ ಮಾತುಕತೆ ಮಾಡಿಸುತ್ತಾನೆ. ಏರಿಟ್ರಿಯಾ ಸೋಮಾಲಿಯ ನಡುವೆ ಶಾಂತಿ ಒಪ್ಪಂದ ಮಾಡಿಸುತ್ತಾನೆ. ಕಿನ್ಯಾ ಮತ್ತು ಸೋಮಾಲಿಯಾ ನಡುವೆ ರಾಜಿ ಮಾಡಿಸುತ್ತಾನೆ. ಇಡೀ ಆಪ್ರಿಕಾದ ಬೆಳವಣಿಗೆಗೆ ನೀಲಿ ನಕ್ಷೆ ರೂಪಿಸುತ್ತಾನೆ.
ಇದಕ್ಕೆ ಏನು ಬೇಕು? 56 ಇಂಚಿನ ಎದೆ ಅಲ್ಲ, ಆ ಎದೆ ಒಳಗಿನ ಹೃದಯದೊಳಗೆ ಮಾನವೀಯ ಸ್ಪಂದನೆಗಳು ಬೇಕು, ಅಷ್ಟೆ.

[ಕೃತಜ್ಞತೆ: ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಇಥಿಯೋಪಿಯಾ ಪ್ರಧಾನಿ ಅಭಿ ಅಹಮದ್ ಬಗ್ಗೆ ಮಾಹಿತಿಯನ್ನು ಶ್ರೀಗೋಪಾಲಕೃಷ್ಣ ಕುಂಟಿನಿ ಅವರ ಬರಹದಿಂದ ಆಯ್ದು ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಗೋಪಾಲಕೃಷ್ಣ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.-ದೇಮ]

ಕೃಪೆ: ನಮ್ಮ ಬನವಾಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...