Homeಕರ್ನಾಟಕ2 ಸಾವಿರ ಕೋಟಿ ರೂ ಖರ್ಚಾದರೂ ’ಸ್ಮಾರ್ಟ್‌’ ಆಗದ ತುಮಕೂರು.. ಏಕೆ?

2 ಸಾವಿರ ಕೋಟಿ ರೂ ಖರ್ಚಾದರೂ ’ಸ್ಮಾರ್ಟ್‌’ ಆಗದ ತುಮಕೂರು.. ಏಕೆ?

- Advertisement -
- Advertisement -

ತುಮಕೂರು ಸ್ಮಾರ್ಟ್ ಸಿಟಿ ಎಂಬೋ ‘ಸಮರ್ಥ ನಗರ’ ಅಕ್ಷರಶಃ ಗಬ್ಬೆದ್ದು ಹೋಗಿದೆ. ನಗರದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ರಸ್ತೆಗಳ ಮೇಲೆ ಕಣ್ಣಾಡಿಸಿದರೆ ಸಾಕು ಇದು ಹದಗೆಟ್ಟ ಪರಿಸ್ಥಿತಿಯನ್ನು ಹೇಳುತ್ತವೆ. ಇಂಥಾ ಕೆಟ್ಟ ಪರಿಸ್ಥಿತಿ ಹಿಂದೆಲ್ಲೂ ಕಂಡಿರಲಿಲ್ಲವೆಂದು  ನಾಗರಿಕರು ಪಕ್ಷಾತೀತವಾಗಿ ಛೀಮಾರಿ ಹಾಕುತ್ತಿದ್ದಾರೆ.

ನಗರದ ಮೂಲೆ ಮೂಲೆಗಳಲ್ಲೂ ಅಗೆದ ಗುಂಡಿಗಳು, ಮೇಲೆದ್ದ ಮಣ್ಣಿನ ಗುಡ್ಡೆ, ಮಳೆ ಬಂದು ಕೊರಕಲಾದ ರಸ್ತೆಯ ಎರಡೂ ಬದಿಗಳು ಇವೆಲ್ಲವನ್ನೂ ನೋಡಿ ನರಕಯಾತನೆ ಅನುಭವಿಸುತ್ತಿದ್ದಾರೆ ಜನ. ಜನರಲ್ಲಿ ವ್ಯಕ್ತವಾಗುತ್ತಿರುವ ರೋಷಕ್ಕೆ ಮಿತಿಯೇ ಇಲ್ಲ. ಕಂಡಕಂಡಲ್ಲಿ ಜನ ಪಾಲಿಕೆ ಅಧಿಕಾರಿಗಳನ್ನು ಉಗಿಯುತ್ತಿದ್ದಾರೆ. ಸಮರ್ಥ ನಗರ ಎಂದರೆ ಇದೇನಾ ಎಂದು ಪ್ರಶ್ನಿಸುತ್ತಿದ್ದಾರೆ.

ನಗರದ ಯಾವ ಕಡೆ ಯಾವಾಗ ಗುಂಡಿ ತೋಡುತ್ತಾರೆ. ಯಾವ ಕಾರಣಕ್ಕಾಗಿ ಅಗೆಯುತ್ತಾರೆ. ಯಾವ ಉದ್ದೇಶಕ್ಕಾಗಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ತುಮಕೂರು ಮಹಾನಗರ ಪಾಲಿಕೆಯಿಂದ ಇದಕ್ಕೆ ಪರವಾನಿಗೆ ಪಡೆಯಲಾಗಿದೆಯೇ ಎಂದರೆ ಅದೂ ಕೂಡ ಇಲ್ಲವೆನ್ನುತ್ತಾರೆ ಕೆಲ ಪಾಲಿಕೆ ಸದಸ್ಯರು. ಸ್ಮಾರ್ಟ್ ಸಿಟಿ ನೆಪದಲ್ಲಿ ರಸ್ತೆಗಳನ್ನು ಅಗೆದುಬಗೆದು ಗುಂಡಿಮಾಡುತ್ತಿದ್ದಾರೆ. ಇವರನ್ನು ಕೇಳುವವರೇ ಇಲ್ಲವಾಗಿದೆ.

ಒಂದು ಕಡೆ 24*7 ಕುಡಿಯುವ ನೀರು ಒದಗಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿ, ಇದು ಮುಗಿಯಿತು ಅಂದರೆ ಜಿಯೋ ನೆಟ್‌ವರ್ಕ್‌ಗೆ ಕೇಬಲ್ ಹಾಕುವ ಕಾಮಗಾರಿ, ಇದು ಮುಗಿಯುತಪ್ಪ ಅನ್ನುವುದರೊಳಗೆ 24*7 ಗ್ಯಾಸ್ ಪೈಪ್ ಗಾಮಗಾರಿ, ಅಯ್ಯೋ ಎಲ್ಲವೂ ಪೂರ್ಣವಾಗಿದೆ ಇನ್ನೇನು ನೆಮ್ಮದಿಯಾಗಿರಬಹುದು ಅಂತೀರಾ. ಇಲ್ಲ ಮತ್ತೆ ಅಗೆತ. ಆ ಕಡೆ ಮತ್ತು ಈ ಕಡೆ ಮನೆಗಳಿಗೆ ಸಂಪರ್ಕ ಕಲ್ಪಿಸಲು ಅಗೆತ. ಹೀಗೆ ಮಾಡಿ ತುಮಕೂರೆಂಬೋ ತುಮಕೂರಿನ ರಸ್ತೆಗಳನ್ನೇ ಹಾಳುಗೆಡವಿದ್ದಾರೆ.

ಮಳೆ ಬಂದರೆ ಕೆಸರು, ಹೆಜ್ಜೆ ಇಡಲು ಆಗದಷ್ಟು ಕೆಸರು. ವಾಹನಗಳು ಸಂಚರಿಸಿದರೆ ಸಾಕು ರಸ್ತೆಯಲ್ಲಿ ನಡೆದುಹೋಗುವವರು ಜೀವ ಹಿಡಿದುಕೊಂಡೇ ಓಡಾಡಬೇಕು. ಕೆಸರು ಮೇಲೆ ರಪ್ ಅಂತ ಎಲ್ಲಿ ಸಿಡಿಯುತ್ತೋ ಅನ್ನುವ ಭಯ. ಭೂಮಿ ನೆನೆದು ಸಿಕ್ಕಿಕೊಳ್ಳುವ ಕಾರುಗಳು, ಲಾರಿಗಳು, ಇದಾದ ಮೇಲೆ ಭೂಮಿ ಒಣಗಿತು ಅನ್ನಿ. ದೂಳು, ವಾಹಗಳು ಬಂದರೆ ಸಾಕು ದೂಳು ಮೈಮೇಲೆ ಸುರಿಯುತ್ತದೆ. ಉಸಿರು ಕಟ್ಟಿದಂತಾಗುತ್ತದೆ. ಪರ್ಟಿಕ್ಯೂಲೇಟ್ ಮ್ಯಾಟರ್ ಅತಿ ಹೆಚ್ಚು ಇದ್ದು ಮಾಲಿನ್ಯ ನಗರವಾಗಿರುವ ತುಮಕೂರು ಅದ್ಹೇಗೆ ಸ್ಮಾರ್ಟ್ ಸಿಟಿ ಅನಿಸಿಕೊಳ್ಳುತ್ತೋ ಆ ಸ್ಮಾರ್ಟ್ ಸಿಟಿ ನಿರ್ಮಾತೃಗಳಿಗೇ ಗೊತ್ತು. ಆದರೆ ಜನರಂತು ಬಾಯಿಗೆ ಬಂದಂತೆ ಕ್ಯಾಕರಿಸುತ್ತಿದ್ದಾರೆ.

ರಸ್ತೆಯ ಎರಡು ಬದಿಯನ್ನು ಅಗೆದವರು ಅದರ ಮೇಲೆ ಟಾರ್ ಮುಖವನ್ನೂ ತೋರಿಸಿ ತೇಪೆ ಹಚ್ಚುವ ಕೆಲಸವನ್ನೂ ಮಾಡಿಲ್ಲ. ಹೀಗಾಗಿ ತುಮಕೂರು ಸ್ಮಾರ್ಟ್ ಸಿಟಿ ಜನರಿಂದ ಗೇಲಿಗೆ ಒಳಗಾಗಿದೆ. ಆದರೆ ನಿತ್ಯವೂ ಪೊಲೀಸರು, ಟ್ರಾಫಿಕ್ ಪೊಲೀಸರು ವಾಹನಗಳನ್ನು ಹಿಡಿದು, ಹೆಲ್ಮೆಟ್ ಧರಿಸಿಲ್ಲ. ಡಿ.ಎಲ್. ಹೊಂದಿಲ್ಲ, ಹೊಗೆ ಪರೀಕ್ಷೆ ನಡೆಸಿಲ್ಲ ಹೀಗೆ ಹಲವು ರೀತಿಯಲ್ಲಿ ಜನರಿಂದ ವಸೂಲಿ ಮಾಡುತ್ತಲೇ ಇದ್ದಾರೆ. ಏನ್ ರಸ್ತೆಗಳು ಹೀಗಿವೆಯಲ್ಲಾ ಎಂದರೆ ಅದರ ಬಗ್ಗೆ ನಮ್ಮನ್ನು ಕೇಳಬೇಡಿ ಅನ್ನುತ್ತಾರೆ. ರಸ್ತೆಗಳ ಉತ್ತಮವಾಗಿರಬೇಕು. ಆಗ ದಂಡ ವಿಧಿಸಿದರೂ ಕಟ್ಟಬಹುದು. ಆದರೆ ನಮ್ಮ ನಗರದ ಯಾವುದೇ ರಸ್ತೆಗಳು ಚನ್ನಾಗಿವೆ ಎಂದು ಹೇಳವುದಕ್ಕೇ ಆಗುವುದಿಲ್ಲ ಎನ್ನುತ್ತಾರೆ ಬೈಕ್ ಸವಾರರು.

ಸಮರ್ಥ ನಗರದ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹತ್ತಿರತ್ತಿರ 2 ಸಾವಿರ ಕೋಟಿ ರೂಪಾಯಿ ನಗರ ಪಾಲಿಕೆಗೆ ಬಂದಿದೆ. ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಪಾರ್ಕ್ ಗಳ ಅಭಿವೃದ್ದಿ, ಬಸ್ ನಿಲ್ದಾಣಗಳ ನಿರ್ಮಾಣ ಹೀಗೆ ಹಲವು ಕಾಮಗಾರಿಗಳನ್ನು ಮಾಡುವ ಮೂಲಕ ಕೋಟಿ ಕೋಟಿ ಲೂಟಿ ಮಾಡುವಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಿರತರಾಗಿದ್ದಾರೆ. ಸ್ಮಾರ್ಟ್ ಸಿಟಿ ಅಂದರೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಅಯ್ಯೋ ಈ ಕಾಮಗಾರಿಗಳು ಎಷ್ಟು ಬೇಗ ಮುಗಿಯುತ್ತೋ ಅಂತ ಕಾಯುತ್ತಿದ್ದಾರೆ. ಆದರೆ ಮಬ್ಬು ಭಕ್ತರು, ಸ್ಮಾರ್ಟಿ ಸಮರ್ಥಕರು ಅಭಿವೃದ್ಧಿ ಕೆಲಸ ನಡೆಯುತ್ತಿದೆ ಅಂದರೆ ಸಹಿಕೊಳ್ಳಬೇಕು ಎಂದು ಮಂಡುವಾದ ಮಾಡುತ್ತಿದ್ದಾರೆ. ಆದರೆ ಜನ ಮಾತ್ರ ಕಾಮಗಾರಿಗಳು ಮುಗಿಯುತ್ತೋ ಇಲ್ಲವೋ? ಎಂಬ ಗೊಂದಲದಲ್ಲಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...