Homeಚಳವಳಿ’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ...

’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ…

- Advertisement -
- Advertisement -

ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಪಕ್ಷಪಾತಿಯಾಗಿವೆಯೇ? ಹಣಕ್ಕಾಗಿ ಕೆಲವರ ಹಿತಾಸಕ್ತಿ ಕಾಪಾಡಲು ಮಾತ್ರ ಕೆಲಸ ಮಾಡುತ್ತಿವೆಯೇ? ಜಾತಿವಾದಿಯಾಗಿ ಮತ್ತು ಕೋಮುವಾದಿಯಾಗಿ ನಡೆದುಕೊಳ್ಳುತ್ತಿವೆಯೇ ಎಂಬ ಪ್ರಶ್ನೆಗಳು ಎದುರಾದರೆ ಅದಕ್ಕಿರುವ ಒಂದೇ ಉತ್ತರ ’ಹೌದು’ ಆಗಿರುತ್ತದೆ.

ಹೌದು ನಾವಂದೂಕೊಂಡಿರುವ ಈ ಸೋಷಿಯಲ್‌ ಸ್ಪೇಸ್‌ಗಳು ಕೂಡ ಜಾತಿ, ಧರ್ಮದಿಂದ ಮುಕ್ತವಾಗಿಲ್ಲ. ಅಲ್ಲದೇ ನಿಷ್ಪಕ್ಷಪಾತವಾಗಿಲ್ಲ. ಏಕೆಂದರೆ ಎಲ್ಲರಿಗೂ ಅವರದೇ ಆದ ಹಿತಾಸಕ್ತಿಯಿರುವಂತೆ ಟ್ವಿಟ್ಟರ್‌ ಫೇಸ್‌ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳ ನಿರ್ವಾಹಕರಿಗೂ ತಮ್ಮದೇ ಆದ ಹಿತಾಸಕ್ತಿಗಳಿರುವುದು ಸ್ಪಷ್ಟ. ಇವುಗಳ ಮುಖ್ಯಸ್ಥರು ಹಣಕ್ಕಾಗಿ ಕೆಲ ಖಾಸಗಿ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ, ವ್ಯಾಪಾರಿ ಕಂಪನಿಗಳಿಗೆ ಮಾರಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇದರ ಕುರಿತು ಹಲವು ಕೋರ್ಟ್‌ ಕೇಸುಗಳನ್ನು ಸಹ ಎದುರಿಸುತ್ತಿದ್ದಾರೆ.

ಇನ್ನು ಇವು ಜಾತಿವಾದಿಯೇ? ಕೋಮುವಾದಿಯೇ ಎಂದರೆ ಅದು ಸಹ ಸತ್ಯ. ಸ್ವತಃ ಈ ಕಂಪನಿಗಳ ಮುಖ್ಯಸ್ಥರು ಜಾತಿವಾದಿ, ಕೋಮುವಾದಿ ಅಲ್ಲದಿದ್ದರೂ ಈ ಸಂಸ್ಥೆಗಳ ಆಯಾಕಟ್ಟಿನ ಜಾಗದಲ್ಲಿ ಕೂತಿರುವ ಸಾವಿರಾರು ಉದ್ಯೋಗಿಗಳು ಮಾತ್ರ ತಮ್ಮ ತಲೆಯಲ್ಲಿ ಜಾತಿ ಕೋಮು ವಿಷವನ್ನು ತುಂಬಿಕೊಂಡಿರುವುದು ದುರಂತ.

ಇಷ್ಟೇಲ್ಲಾ ವಿವರಣೆ ಏಕೆಂದರೆ ನಿನ್ನೆ ಟ್ವಿಟ್ಟರ್‌ನಲ್ಲಿ ಕ್ಯಾಸ್ಟಿಸ್ಟ್‌ ಟ್ವಿಟ್ಟರ್‌ ಎಂದೂ ಜೊತೆಗೆ ಇಂದು ಜೈಭೀಮ್‌ ಟ್ವಿಟ್ಟರ್‌ ಎಂಬಂತಹ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ. ಇನ್ನು ಸ್ಯಾಕ್ ಮನೀಶ್ ಮಹೇಶ್ವರಿ ಎಂಬ ಟ್ವಿಟ್ಟರ್‌ ಟ್ರೆಂಡಿಂಗ್‌ ಅನ್ನು ಟ್ವಿಟ್ಟರ್‌ ಕ್ಷಣಾರ್ಧದಲ್ಲಿ ಅಳಿಸಿಬಿಟ್ಟಿತ್ತು. ಇದು ಟ್ಟಿಟ್ಟರ್‌ನಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಇದೆಲ್ಲಾ ಯಾಕಾಯಿತು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವುದು ಈ ಸಾಮಾಜಿಕ ಜಾಲತಾಣಗಳ ಜಾತಿರಾಜಕೀಯವನ್ನು ಅರಿಯಲು ಸುಲಭವಾಗುತ್ತದೆ.

ಕೆಲದಿನಗಳ ಹಿಂದೆ ಹಿರಿಯ ಪತ್ರಕರ್ತ ದಿಲೀಪ್ ಮಂಡಲ್ ಅವರ ಖಾತೆಯನ್ನು ಟ್ವಿಟ್ಟರ್‌ ನಿರ್ಬಂಧಿಸಿ‍ತ್ತು. ಇದಕ್ಕೆ ಕೊಟ್ಟ ಕಾರಣವೆಂದರೆ ದ್ವೇಷಪೂರಿತ ಹೇಳಿಕೆಗಳನ್ನು ತಡೆಯುವುದಕ್ಕಾಗಿ ಹಲವಾರು ಜನರ ಖಾತೆಯನ್ನು ಹೀಗೆ ನಿರ್ಭಂದಿಸುತ್ತಿದ್ದೇವೆ ಎಂದು ಟ್ವಿಟ್ಟರ್‌ ವಿವರಣೆ ನೀಡಿತ್ತು.

ಹಾಗೆ ನೋಡಿದರೆ ದಿಲೀಪ್‌ ಮಂಡಲ್‌ರವರು ಆ ರೀತಿಯ ಯಾವುದೇ ದ್ವೇಷಪೂರಿತ ಹೇಳಿಕೆಗಳನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪ್ರಕಟಿಸಿರಲಿಲ್ಲ. ಬದಲಿಗೆ ನಿಜವಾಗಿಯೂ ದ್ವೇಷ ಬಿತ್ತುತ್ತಿದ್ದ, ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರುತ್ತಿದ್ದ ಬಹಳಷ್ಟು ಜನರ, ಪತ್ರಕರ್ತರ ಟ್ವಿಟ್ಟರ್‌ಗಳು ಹಾಗೆ ರಾರಾಜಿಸುತ್ತಿದ್ದವು. ಇದು ದಿಲೀಪ್ ಮಂಡಲ್‌ರವರಿಗೆ ಮಾತ್ರವಲ್ಲದೇ ಬಹಳಷ್ಟು ಪ್ರಗತಿಪರ ಟ್ವಿಟ್ಟರ್‌ಗಳಿಗೆ ಇದೇ ಪರಿಸ್ಥಿತಿ ಇದುರಾಗಿತ್ತು.

ಇದರಿಂದ ಕೋಪಗೊಂಡ ದಿಲೀಪ್ ಮಂಡಲ್ ಅವರು ಟ್ವಿಟ್ಟರ್‌ನ ಈ ಪಕ್ಷಪಾತವನ್ನು ಅದೇ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದರು. ಇದೆಲ್ಲದಕ್ಕೂ ಉತ್ತರ ಬೇಕೆಂದು ಆಗ್ರಹಿಸಿದರು. ಅವರು #SackManishMaheshari ಎಂಬ ಹ್ಯಾಶ್‌ಟ್ಯಾಗ್ ಬಳಸಿ ತಮ್ಮ ಪ್ರಶ್ನೆಗಳನ್ನು ಕೇಳಿದರು.

ಮಣಿಶ್ ಮಹೇಶ್ವರಿಯವರು ಭಾರತದ ಟ್ವಿಟ್ಟರ್‌ನ ಎಂಡಿಯಾಗಿದ್ದಾರೆ. ದ್ವೇಷ ಹರಡುವ ಖಾತೆಗಳನ್ನು ಹಾಗೆ ಬಿಟ್ಟು ಜನಪರ ಪತ್ರಕರ್ತರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ವಿರೋಧಿಸಿ ಸಾವಿರಾರು ಜನರು ಅಸಮಾಧಾನಗೊಂಡಿದ್ದಾರೆ. ಮತ್ತು ಅವರೆಲ್ಲರೂ #SackManishMaheshari ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ಆಕ್ರೊಶವನ್ನು ಹೊರಹಾಕಿದರು.

ಶೀಘ್ರದಲ್ಲೇ ಇದು ಮೇಲ್ಭಾಗದಲ್ಲಿ ಟ್ರೆಂಡಿಂಗ್ ಆಗಿತ್ತು. ನೋಡನೋಡುತ್ತಿದ್ದಂತೆಯೇ ಭಾರತದಲ್ಲಿ ಎಂಟರಿಂದ ಮೂರನೆಯ ಸ್ಥಾನಕ್ಕೆ ಜಿಗಿಯಿತು. ಇದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತು. ಆದರೆ ಕ್ಷಣಾರ್ಧದಲ್ಲಿಯೇ ಅದು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.

ಅಂದರೆ ಟ್ವಿಟ್ಟರ್‌ ಇಂಡಿಯಾ ಆ ಹ್ಯಾಸ್‌ಟ್ಯಾಗ್‌ ಅನ್ನು ಟ್ರೆಂಡಿಂಗ್‌ ನಿಂದ ತೆಗೆದುಹಾಕಿತ್ತು. ಇದರಿಂದ ಜಾಲತಾಣಿಗರು ಮತ್ತಷ್ಟು ಕ್ರೋಧಗೊಂಡರು. ಟ್ವಿಟರ್ ದ್ವೇಷದ ಮಾತನ್ನು ನಿಲ್ಲಿಸುವುದಿಲ್ಲ, ದ್ವೇಷಿಸುವವರಿಗೆ ಜಾಗವನ್ನು ನೀಡುತ್ತದೆ ಮತ್ತು ಟ್ವಿಟ್ಟರ್‌ನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸುವ ಜನರ ಮೇಲೆ ಮೃದುಭಾವನೆ ತಳೆಯುತ್ತದೆ ಆದರೆ ಅಂಚಿನಲ್ಲಿರುವ ವಿಭಾಗಗಳಾದ ದಲಿತರು, ಮುಸ್ಲಿಮರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಮತ್ತು ಈ ಗುಂಪುಗಳ ಬಳಕೆದಾರರ ಮೇಲೆ ಅತ್ಯಂತ ಕಠಿಣ ನಿರ್ಭಂಧಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದಾದ ಸ್ವಲ್ಪ ಸಮಯದಲ್ಲಿಯೇ ಟ್ವಿಟ್ಟರ್‌ ಬಳಕೆದಾರರು #ಕ್ಯಾಸ್ಟಿಸ್ಟ್ ಟ್ವಿಟರ್ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಅದನ್ನು ಸಹ ಟ್ರೆಂಡ್ ಮಾಡಿದ್ದಾರೆ. ವಿಚಿತ್ರವೆಂದರೆ, ಯಾವುದೇ ಉಲ್ಲಂಘನೆ ಇಲ್ಲದಿದ್ದರೂ ತಳಸಮುದಾಯಕ್ಕೆ ಸೇರಿದ ಖಾತೆಗಳನ್ನು ಟ್ವಿಟ್ಟರ್‌ ತ್ವರಿತವಾಗಿ ನಿರ್ಬಂಧಿಸಲಾಗುತ್ತದೆ. ಇದಕ್ಕೆ ಕಾರಣ ಟ್ವಿಟರ್ ಇಂಡಿಯಾದಲ್ಲಿ ಸಾಮಾಜಿಕ ಅಸಮತೋಲನವಿದೆ (ಕಂಪನಿಯಲ್ಲಿ ಹಲವಾರು ಪ್ರಮುಖ ಹುದ್ದೆಗಳಲ್ಲಿ ವಿವಿಧ ಸಮುದಾಯಗಳ ಪ್ರಾತಿನಿಧ್ಯದ ಕೊರತೆ) ಅದರ ಬಗ್ಗೆ ಗಮನಹರಿಸಲು ಅದರ ಸಿಇಒಗೆ ಬಹಳಷ್ಟು ಜನರು ಒತ್ತಾಯಿಸಿದ್ದಾರೆ.

ಪತ್ರಕರ್ತ ದಿಲೀಪ್‌ ಮಂಡಲ್‌ರವರ ಟ್ವಿಟ್ಟರ್‌ ಖಾತೆಯನ್ನು ವೆರಿಫೈಡ್‌ ಎಂದು ಘೋಷಿಸಿದ ಟ್ವಿಟ್ಟರ್‌ಗೆ ಹಿರಿಯ ಪತ್ರಕರ್ತ ದಿ ಪ್ರಿಂಟ್‌ನ ಶೇಖರ್‌ ಗುಪ್ತಾ ಸಹ ಛೀಮಾರಿ ಹಾಕಿದ್ದಾರೆ.

ಟ್ವಿಟ್ಟರ್‌ಗೆ ಎಲ್ಲಾ ಸಮುದಾಯದವರನ್ನು ಒಳಗೊಳ್ಳುವ ಮತ್ತು ಸಮಾನತೆಯ ಪಾಠ ಬೋಧಿಸಲು ನೆಟ್ಟಿಗರು ತೀರ್ಮಾನಿಸಿದರು. ಅದಕ್ಕಾಗಿ ಭಾರತದಲ್ಲಿ ಸಮಾನತೆಗಾಗಿ ಜೀವಮುಡಿಪಿಟ್ಟ ಬಾಬಾಸಾಹೇಬ್ ಅಂಬೇಡ್ಕರ್‌ರವರನ್ನು ನೆನಪಿಸಲು ಇಂದು ಬೆಳಿಗ್ಗೆಯೇ ಜೈಭೀಮ್‌ ಟ್ವಿಟ್ಟರ್‌ ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಹರಿಯಬಿಟ್ಟರು. ಕಾಂಗ್ರೆಸ್‌ನ ದಲಿತ ವಿಭಾಗದ ಅಧ್ಯಕ್ಷ ಮತ್ತು ಶಾಸಕ ಡಾ.ನಿತಿನ್‌ ರಾವತ್‌, ಗುಜರಾತ್‌ನ ಹೋರಾಟಗಾರ ಮತ್ತು ಶಾಸಕ ಜಿಗ್ನೇಶ್‌ ಮೇವಾನಿ ಅಲ್ಲವೇ ದಲಿತ್ ಏಕತಾ, ಬಹುಜನ್‌ಫಾರ್‌ ಇಂಡಿಯಾ, ಟ್ರೈಬಲ್‌ ಆರ್ಮಿ ಸೇರಿದಂತೆ ಸಾವಿರಾರು ಖಾತೆಗಳಿಂದ ಜೈಭೀಮ್‌ ಟ್ವಿಟ್ಟರ್‌ ಟ್ರೆಂಡ್‌ ಆಗಿದೆ.

ಅಂತೂ ಇದರಿಂದ ಟ್ವಿಟ್ಟರ್‌ ಮುಜುಗರಕ್ಕೆ ಒಳಗಾಗಿದೆ. ಇದು ಇಂದಿನ ತಳಸಮುದಾಯದ ಯುವತಲೆಮಾರಿನ ಸ್ವಾಭಿಮಾನ ಪ್ರದರ್ಶನದ ಧ್ಯೋತಕವಾಗಿದೆ. ಹೆಚ್ಚು ಹೆಚ್ಚು ಯುವಜನರು ಈ ಸಾಮಾಜಿಕ ಫ್ಲಾಟ್‌ಫಾರಂಗಳಿಗೆ ಬಂದಂತೆ ತಮ್ಮ ಅಸರ್ಸನ್‌ ಅನ್ನು ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟ್ಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಈ ವಿದ್ಯಮಾನದಿಂದ ಪಾಠ ಕಲಿಯಬೇಕಿದೆ. ಇಲ್ಲದಿದ್ದಲ್ಲಿ ಮತ್ತಷ್ಟು ಪ್ರತಿರೋಧ ವ್ಯಕ್ತವಾಗುವುದರಲ್ಲಿ ಸಂಶಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...