ವಂಚನೆ ಪ್ರಕರಣದಲ್ಲಿ ಜಾಮೀನು ನೀಡಲು 5 ಲಕ್ಷ ರೂ.ಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಮಹಾರಾಷ್ಟ್ರದ ಸತಾರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ನ್ಯಾಯಾಧೀಶ ಧನಂಜಯ್ ಮತ್ತು ಇತರ ಮೂವರು ಆರೋಪಿಗಳನ್ನು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ. ಜಾಮೀನಿಗಾಗಿ 5 ಲಕ್ಷ ರೂ
ಉದ್ಯೋಗ ಕೊಡಿಸುವುದಾಗಿ 41 ಲಕ್ಷ ರೂ. ಹಣ ವಸೋಲಿ ಮಾಡಿ ವಂಚಿಸಿದ್ದ ಆರೋಪಿಗೆ ಜಾಮೀನು ಕೊಡಲು ಆರೋಪಿಯ ಮಗಳ ಬಳಿ ನ್ಯಾಯಾಧೀಕರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಉದ್ಯೋಗದ ಆಮಿಷವೊಡ್ಡಿ ವಂಚನೆ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಲು ಆತನ 24 ವರ್ಷದ ಮಗಳ ಬಳಿ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ನ್ಯಾಯಾಧೀಶರು ಮತ್ತು ಇತರ ಮೂವರು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಯುವತಿ ದೂರು ದಾಖಲಿಸಿದ್ದರು” ಎಂದು ಪುಣೆ ಉಪ ಪೊಲೀಸ್ ವರಿಷ್ಠಾಧಿಕಾರಿ ದಯಾನಂದ ಗಾವಡೆ ಹೇಳಿದ್ದಾರೆ.
“ಈ ಬಗ್ಗೆ ಯುವತಿ ಡಿಸೆಂಬರ್ 2ರಂದು ಎಸಿಬಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಡಿಸೆಂಬರ್ 3ರಿಂದ 9ರವೆಗೆ ಪರಿಶೀಲಿನೆ ನಡೆಸುತ್ತಿದ್ದೆವು. ಡಿಸೆಂಬರ್ 9ರಂದು ಸತಾರಾ ನ್ಯಾಯಾಲಯದ ಸಂಕೀರ್ಣದ ಹೊರಗೆ ಯುವತಿಯನ್ನು ನ್ಯಾಯಾಧೀಶರು ಭೇಟಿಯಾಗಿ, ಕಾರಿನಲ್ಲಿ ಕುಳಿತು ಮಧ್ಯವರ್ತಿಗಳೊಂದಿಗೆ ಲಂಚದ ಒಪ್ಪಂದದ ಬಗ್ಗೆ ಚರ್ಚಿಸಿದ್ದರು” ಎಂದು ಎಸಿಬಿ ದಾಖಲಿಸಿರುವ ಎಫ್ಐಆರ್ನಲ್ಲಿ ವಿವರಿಸಲಾಗಿದೆ. ಜಾಮೀನಿಗಾಗಿ 5 ಲಕ್ಷ ರೂ
ಇದನ್ನೂ ಓದಿ: ದೇಶದಾದ್ಯಂತ ಮಸೀದಿಗಳ ಸಮೀಕ್ಷೆ ಮತ್ತು ಪ್ರಕರಣಗಳಿಗೆ ಸುಪ್ರೀಂಕೋರ್ಟ್ ತಡೆ
ದೇಶದಾದ್ಯಂತ ಮಸೀದಿಗಳ ಸಮೀಕ್ಷೆ ಮತ್ತು ಪ್ರಕರಣಗಳಿಗೆ ಸುಪ್ರೀಂಕೋರ್ಟ್ ತಡೆ


