ನೋಟು ನಿಷೇಧಕ್ಕೆ ಈಗ ೩ ವರ್ಷ ಸಂದಿದೆ. ನವೆಂಬರ್ ೮ರಂದು ರಾತ್ರೋರಾತ್ರಿ ಬಿಜೆಪಿ ನೋಟು ನಿಷೇಧ ಮಾಡಿತ್ತು. ಭಾರತದ ಇವತ್ತಿನ ಆರ್ಥಿಕ ದುಸ್ಥಿತಿಗೆ ಕಾರಣಗಳಲ್ಲಿ ಒಂದೆನ್ನಲಾಗುತ್ತಿರುವ ಆ ನೋಟು ಬ್ಯಾನಿಗೆ ಇಂದು ಮೂರು ವರ್ಷ. ನರೇಂದ್ರ ಮೋದಿ ಸರ್ಕಾರ ಜಾರಿಗೆ ಬಂದ ನಂತರ ಕೈಗೊಂಡ ನೋಟ್ ಬ್ಯಾನ್ ಕ್ರಮದಿಂದ ಶೇ. ೮೬ ರಷ್ಟು ಕರೆನ್ಸಿ ಅಪಮೌಲ್ಯಕ್ಕೀಡಾಯಿತು. ನೋಟ್ ಬ್ಯಾನ್ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಯೋತ್ಪಾದಕರ ದಾಳಿಗೆ ಹೋಲಿಸಿ, ಟೀಕಿಸಿದ್ದಾರೆ.
’ಸಣ್ಣ ಸಣ್ಣ ಉದ್ಯಮಗಳು ನೋಟ್ ಬ್ಯಾನ್ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋದವು. ಅನೇಕ ಜನರು ಲಾಭದಾಯಕ ಉದ್ಯಮಗಳನ್ನು ಕಳೆದುಕೊಂಡರು. ಲಕ್ಷಾನುಗಟ್ಟಲೇ ಯುವಕರು ಕೆಲಸ, ನೌಕರಿಯಿಲ್ಲದೇ ಅಲೆಯುವಂತಾಗಿದೆ.’ ನರೇಂದ್ರ ಮೋದಿ ಸರ್ಕಾರದ ನೋಟು ನಿಷೇಧ ಸಾಧನೆಯಿಂದ ಭಾರತದ ಆರ್ಥಿಕತೆ ತಲೆಕೆಳಗಾಗಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
3 years since #Demonetisation and every claim made by the government and those hailing it as a slayer of all evils has been turned on its head. It proved to be a disaster that has all but destroyed our economy.
Anyone want to claim responsibility?#DeMonetisationDisaster
— Priyanka Gandhi Vadra (@priyankagandhi) November 8, 2019
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ, ನೋಟ್ ಬ್ಯಾನ್ನಿಂದ ದೇಶಕ್ಕೆ ವಿಪತ್ತು ಉಂಟಾಗಿದೆ. ಭಾರತದ ಆರ್ಥಿಕತೆ ನಾಶವಾಗಿದೆ. ಈಗ ತುಘಲಕ್ ಆಡಳಿತದಿಂದ ಆದ ನಷ್ಟವನ್ನು ಯಾರು ಹೊರಲಿದ್ದಾರೆ ಎಂದು ಪ್ರಶ್ನಿಸಿ, ನೋಟ್ ಬ್ಯಾನ್ ಡಿಸಾಸ್ಟರ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಕುಟುಕಿದ್ದಾರೆ.
Three years after #Demonetisation the pain & fear still lingers in people's lives & the devastating effect on the economy reverberates through every sector.
Does the BJP govt have the courage to accept their faults? #NotebandiSeMandiTak pic.twitter.com/UcVWWohrQB
— Congress (@INCIndia) November 8, 2019
೧೦೫ ಮಂದಿ ಸರ್ಕಾರದ ನಿರ್ಧಾರಗಳಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ನವೆಂಬರ್ ೮, ೨೦೧೬ರಂದು ಪ್ರಧಾನಿ ನರೇಂದ್ರ ಮೋದಿ ೫೦೦ ಮತ್ತು ೧೦೦೦ ರೂ. ನೋಟ್ ಬ್ಯಾನ್ ಘೋಷಣೆ ಮಾಡಿದ್ದರು.