ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಪಕ್ಷವು, ಶಿವಸೇನೆಯ ಉದ್ಧವ್ ಬಣದ ಹೆಜ್ಜೆಗಳನ್ನು ಅನುಸರಿಸಿ ಮುಂಬೈ ನಾಗರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ.
ಪವಾರ್ ಅವರ ಈ ಹೇಳಿಕೆ ಮಹಾ ವಿಕಾಸ್ ಅಘಾಡಿ (ಎಂವಿಎ) ಯಲ್ಲಿನ ಬಿರುಕು ಎಂಬ ವದಂತಿಗಳಿಗೆ ಮತ್ತಷ್ಟು ಬಲ ತುಂಬಿದೆ. ಮುಂಬೈನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪವಾರ್, ಇಂಡಿಯಾ ಬಣವನ್ನು ರಾಷ್ಟ್ರೀಯ ಮಟ್ಟದ ಚುನಾವಣೆಗಳಿಗಾಗಿ ಮಾತ್ರ ರಚಿಸಲಾಗಿದೆ. ಪುರಸಭೆ ಅಥವಾ ರಾಜ್ಯ ಚುನಾವಣೆಗಳಲ್ಲಿ ಒಟ್ಟಿಗೆ ಸ್ಪರ್ಧೆ ಮಾಡುವ ಬಗ್ಗೆ ಏನೂ ಚರ್ಚಿಸಲಾಗಿಲ್ಲ ಎಂದು ಹೇಳಿದರು.
“ಇಂಡಿಯಾ ರಂಗ ರಚನೆಯಾದಾಗ, ಚರ್ಚೆ ರಾಷ್ಟ್ರೀಯ ಸಮಸ್ಯೆಗಳು ಮತ್ತು ಚುನಾವಣೆಗಳ ಬಗ್ಗೆ ಮಾತ್ರ. ಸ್ಥಳೀಯ ಸಂಸ್ಥೆ ಚುನಾವಣೆ ಅಥವಾ ರಾಜ್ಯ ಚುನಾವಣೆಗಳ ಬಗ್ಗೆ ಯಾವುದೇ ಚರ್ಚೆ ಇರಲಿಲ್ಲ” ಎಂದು ಪವಾರ್ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷಗಳು ಒಟ್ಟಾಗಿ ಅಥವಾ ಏಕಾಂಗಿಯಾಗಿ ಸ್ಪರ್ಧಿಸುತ್ತವೆಯೇ ಎಂದು ನಿರ್ಧರಿಸಲು ಎಂವಿಎ ಘಟಕಗಳ ನಡುವೆ ಸಭೆ ನಡೆಸಲಾಗುವುದು ಎಂದು ಹಿರಿಯ ನಾಯಕ ಹೇಳಿದರು.
“ಮಹಾರಾಷ್ಟ್ರದಲ್ಲಿ ಮುಂಬರುವ ಪುರಸಭೆ ಚುನಾವಣೆಯಲ್ಲಿ, ನಾವು ಒಟ್ಟಾಗಿ ಅಥವಾ ಏಕಾಂಗಿಯಾಗಿ ಹೋರಾಡುತ್ತೇವೆಯೇ ಎಂದು ಎಲ್ಲರೂ 8-10 ದಿನಗಳಲ್ಲಿ ಸಭೆ ನಡೆಸುವ ಮೂಲಕ ನಿರ್ಧರಿಸುತ್ತೇವೆ. ಮೈತ್ರಿಕೂಟದೊಳಗೆ ನಮಗೆ ಸಂವಹನವಿದೆ” ಎಂದು ಪವಾರ್ ಹೇಳಿದರು.
ಇದನ್ನೂ ಓದಿ; ಪ್ರಧಾನಿ ಮೋದಿಗೂ, ಕೇಜ್ರಿವಾಲ್ಗೂ ಯಾವುದೇ ವ್ಯತ್ಯಾಸವಿಲ್ಲ – ರಾಹುಲ್ ಗಾಂಧಿ ವಾಗ್ದಾಳಿ


