Homeಕರ್ನಾಟಕಎಲೆಮರೆ-8 : ನಮ್ಮ ನಡುವಿನ ಮಂದಣ್ಣ - ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

ಎಲೆಮರೆ-8 : ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

- Advertisement -
- Advertisement -

ಎಲೆಮರೆ-8

ಅರುಣ್‌ ಜೋಳದ ಕೂಡ್ಲಿಗಿ

ಕಳೆದ ಹದಿನಾಲ್ಕು ವರ್ಷದಿಂದ ಪಂಪಯ್ಯನ ಜತೆಗಿನ ಒಡನಾಟವನ್ನು `ಮಳೇಮಠದ ಪಂಪಯ್ಯನಿಂದಿಡಿದು ಪರಿಸರದ ಪಂಪಯ್ಯನವರೆಗೆ ಎನ್ನಬಹುದೇನೋ’. ಹೌದು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾನು ಎಂ.ಎ.ಪಿಹೆಚ್.ಡಿಗೆ 2002-03 ರ ಹೊತ್ತಿಗೆ ವಿದ್ಯಾರ್ಥಿಯಾಗಿ ಸೇರಿದ ಆಸುಪಾಸಿನಲ್ಲೆ ಮೆಕಾನಿಕಲ್ ಡಿಪ್ಲೊಮಾ ಓದಿದ್ದ ಪಂಪಯ್ಯ ಕನ್ನಡ ವಿವಿಯ ವಿದ್ಯಾರಣ್ಯದಲ್ಲಿ ಬುಕ್ ಅಂಡ್ ಜನರಲ್ ಸ್ಟೋರ್ ತೆರೆದು ವ್ಯಾಪಾರಿಯಾಗಿ ಕ್ಯಾಂಪಸ್ ಪ್ರವೇಶಿಸಿದರು. ನಾವು ಆತನ ಅಂಗಡಿಯ ನಿತ್ಯದ ಒಡನಾಡಿಗಳಾದೆವು. ಅವರ ಮಾತುಕತೆ ನಮ್ಮನ್ನು ಆಪ್ತರನ್ನಾಗಿಸಿತು. ಹಕ್ಕಿ, ಹಾವು, ಕ್ರಿಮಿ, ಕೀಟ, ಕರಡಿಗಳ ಬಗ್ಗೆ ನಮಗೆ ತಿಳಿಯದ ಸಂಗತಿಗಳನ್ನು ಅಚ್ಚರಿಪಡುವಂತೆ ಕಥನ ಮಾಡಿ ವಿವರಿಸುತ್ತಿದ್ದರು. ಕನ್ನಡ ಸಾಹಿತ್ಯ ಜಾನಪದ ಅಂತೆಲ್ಲಾ ಪಾಠ ಮಾಡುವ ಅಧ್ಯಾಪಕರ ಜತೆ ಪಂಪಯ್ಯನೂ ಆಗ ಪರಿಸರದ ಅಧ್ಯಾಪಕನಂತೆ ಕಂಡದ್ದು ವಿಶೇಷವೇನಲ್ಲ. ಹಾಗಾಗಿಯೇ ಪ್ರೊ.ರಹಮತ್ ತರೀಕೆರೆ ಅವರು ಪಂಪಯ್ಯನನ್ನು ತೇಜಸ್ವಿ ಜೊತೆಗಿನ ಮಂದಣ್ಣನಿದ್ದಂತೆ ಎನ್ನುತ್ತಾರೆ.

ವಿದ್ಯಾರಣ್ಯ ಕ್ಯಾಂಪಸ್ಸಿನ ಮತ್ತು ಕಮಲಾಪುರದ ಅವರ ಜನರಲ್ ಸ್ಟೋರುಗಳಿಗೆ ಗುಡ್‍ಬೈ ಹೇಳಿದ ನಂತರ ವ್ಯಾಪಾರಿ ಪಂಪಯ್ಯನು ಪೂರ್ಣಪ್ರಮಾಣದಲ್ಲಿ `ಪರಿಸರದ ಪಂಪಯ್ಯ’ನಾಗಿ ಬದಲಾದರು. ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಇವರು ಹಂಪಿ ಪರಿಸರದ ಪಕ್ಷಿಪ್ರಾಣಿಗಳನ್ನು ಒಳಗೊಂಡ ವನ್ಯಜೀವಿಗಳನ್ನು ಸೆರೆಹಿಡಿದು ಈ ಭಾಗದ ಜೀವವೈವಿಧ್ಯಗಳನ್ನು ಲೋಕದೆದುರು ತೆರೆದಿಟ್ಟರು.

ಈತನಕ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅಂತೆಯೇ ಹಾವುಗಳ ಬಗೆಗೆ ಜನರಿಗೆ ತಿಳಿವನ್ನೂ ಮೂಡಿಸಿದ್ದಾರೆ. ಇದರ ಪರಿಣಾಮವಾಗಿ, ಹಾವುಕಂಡರೆ ಹೊಡೆಯಲು ಕೋಲು ಹುಡುಕುತ್ತಿದ್ದವರು ಈಗ ಪಂಪಯ್ಯನ ನಂಬರಿಗೆ ಕಾಲ್ ಮಾಡಿ ಹಾವು ಹಿಡಿಯಲು ಕರೆಯುತ್ತಾರೆ.

ಹಂಪಿಗೆ ಬರುವ ವನ್ಯಜೀವಿ ಪ್ರೇಮಿಗಳಿಗೆ, ಫೋಟೋಗ್ರಾಫರ್‍ಗಳಿಗೆ ಈ ಭಾಗದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿತ್ತು. ಕಾರಣ ಹಂಪಿಯ ಗೈಡ್‍ಗಳೆಲ್ಲಾ ಸ್ಮಾರಕಗಳಿಗೆ ಸೀಮಿತರಾದವರು. ಅಂತಹ ಕೊರತೆಯನ್ನು ಪಂಪಯ್ಯ ತುಂಬಿದರು. ಮೂರ್ನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಪಂಪಯ್ಯ ಇದೀಗ ಯಾರೇ ವನ್ಯಜೀವಿ ಫೋಟೋಗ್ರಾಫರ್ಸ್ ಬಂದರೆ ಆತನೆ ಮಾರ್ಗದರ್ಶಿ. ಸ್ವತಃ ಪಂಪಯ್ಯ ಅತ್ಯುತ್ತಮ ವನ್ಯಜೀವಿ ಫೋಟೋಗ್ರಾಫರ್. ಹಾರ್ನ್‍ಬಿಲ್‍ನಂತಹ ಅಂತಾರಾಷ್ಟ್ರೀಯ ವನ್ಯಜೀವಿ ಪತ್ರಿಕೆ ಮುಖಪುಟದಲ್ಲಿ ಪಂಪಯ್ಯ ಕ್ಲಿಕ್ಕಿಸಿದ ಬೆನ್ನ ಮೇಲೆ ಮರಿಗಳ ಹೊತ್ತ ಕರಡಿಯ ಫೋಟೋ ಪ್ರಕಟವಾಗಿತ್ತು. ದರೋಜಿಯ ಕರಡಿಧಾಮವನ್ನು ಒಳಗೊಂಡ ಅರಣ್ಯ ಇಲಾಖೆಯ ವರದಿ ಇತ್ಯಾದಿಗಳ ಸರಕಾರಿ ದಾಖಲೆಗಳ ಮುಖಪುಟವನ್ನೂ, ಕನ್ನಡ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರುಗಳನ್ನೂ ಪಂಪಯ್ಯನ ಫೋಟೋಗಳು ಆವರಿಸಿವೆ. ಹಂಪಿ ಉತ್ಸವಗಳಲ್ಲಿ ಫೋಟೋಪ್ರದರ್ಶನ ಮಾಡಿ ಜನಸಾಮಾನ್ಯರ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಹೀಗೆ ವನ್ಯಜೀವಿ ಫೋಟೋಗ್ರಫಿಗೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ವನ್ಯಜೀವಿ ಫೋಟೋಗ್ರಫಿಯಲ್ಲಿ ಪಂಪಯ್ಯ ತನ್ನದೇ ಆದ ಗುರುತನ್ನು ಕಾಯ್ದುಕೊಂಡಿದ್ದಾರೆ.

ವ್ಯಕ್ತಿಯಾಗಿ ಪಂಪಯ್ಯ ವನ್ಯಜೀವಿ ಪರಿಸರ ಅಂತೆಲ್ಲಾ ಹತ್ತಾರು ಸೂಕ್ಷ್ಮಗಳನ್ನು ಅರಿತಿರುವ ಇವರು ಶಾಲಾ ಮಕ್ಕಳಿಗೂ, ಹಲವು ಬಗೆಯ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರಿಗೂ ಭಾಷಣ, ಸಂವಾದ, ಚರ್ಚೆಗಳ ಮೂಲಕ ಈ ಅರಿವನ್ನು ಸಮುದಾಯಕ್ಕೆ ವಿಸ್ತರಿಸುತ್ತಿದ್ದಾರೆ. ಈ ಕಾರಣಕ್ಕೆ ಪಂಪಯ್ಯ ಸಮುದಾಯದ ಪರಿಸರ ಪ್ರಜ್ಞೆಯನ್ನು ಸೂಕ್ಷ್ಮಗೊಳಿಸುತ್ತಿದ್ದಾರೆ. ಇವರು ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದಾಗಲೂ, ಕಮಲಾಪುರ ಪಟ್ಟಣ ಪಂಚಾಯ್ತಿಯ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾಗಲೂ ಈ ಸರಕಾರಿ ಸಂಸ್ಥೆಗಳನ್ನು ಪರಿಸರ ಪ್ರಜ್ಞೆಯನ್ನು ರೂಪಿಸುವುದಕ್ಕೆ ಬಳಸಿಕೊಂಡದ್ದು ವಿಶೇಷ.

ಇದೀಗ ತನ್ನ ಪರಿಸರದ ಅರಿವು ಮತ್ತು ಕಾಳಜಿಯನ್ನು ವಿಸ್ತರಿಸುವ ಪ್ರಾಯೋಗಿಕ ಹಂತಕ್ಕೆ ಪಂಪಯ್ಯ ಬಂದಿದ್ದಾರೆ. ಐದು ವರ್ಷದ ಹಿಂದೆ ಬರಡಾಗಿದ್ದ ನೆಲವೊಂದನ್ನು ಹಸಿರಾಗಿಸಿ ಗಮನ ಸೆಳೆದಿದ್ದಾರೆ. ಹೊಸಪೇಟೆ ತಾಲೂಕಿನ ಕಮಲಾಪುರದಿಂದ ನಾಲ್ಕು ಕಿಲೋಮೀಟರ್ ಅಂತರದ ತುಂಗಭದ್ರಾ ಜಲಾಶಯದ (ಎಚ್.ಎಲ್.ಸಿ) ಮೇಲ್ಮಟ್ಟದ ಕಾಲುವೆಯ ಬಳಿ ತುಂಗಭದ್ರ ಮಂಡಳಿಗೆ ಸೇರಿದ ಮೂರುವರೆ ಎಕರೆ ಪ್ರದೇಶದಲ್ಲಿ 60 ಬಗೆಯ 800ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದದ್ದು ಬಿಟ್ಟರೆ, ನೀರು ಗೊಬ್ಬರ ಪಾಲನೆಯನ್ನು ಪಂಪಯ್ಯನೇ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದಾರೆ.

ಇದಕ್ಕೆ ಹೊಂದಿಕೊಂಡಂತೆ ಪಂಪಯ್ಯನ ಸ್ವಂತದ ಒಂದೆಕರೆ ಹೊಲವೂ ಕಾಡಿನಂತಿದೆ. ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳ ನೀರಿನ ದಾಹ ತಣಿಸಲು ಕೃಷಿಹೊಂಡ ಹಾಕಿಸಿದ್ದಾರೆ. ಫೋಟೋಗ್ರಫಿಗಾಗಿ ಬಂಕರ್ ನಿರ್ಮಿಸಿದ್ದಾರೆ. ಇದೀಗ ಹತ್ತಾರು ವಿಧದ ಪಕ್ಷಿ ಪ್ರಾಣಿ ವನ್ಯಜೀವಿಗಳು ಈ ಪುಟ್ಟ ಅರಣ್ಯದ ಸಂಗಾತಿಗಳಾಗಿವೆ. ಹೀಗೆ ಕಮಲಾಪುರದ ಮಳೇಮಠದ ಪಂಪಯ್ಯ ನಿಧಾನಕ್ಕೆ `ಪರಿಸರದ ಪಂಪಯ್ಯ’ನಾಗಿ ರೂಪಾಂತರಗೊಂಡ ಪಯಣವೇ ಕುತೂಹಲಕಾರಿಯಾಗಿದೆ.

`1994 ರಲ್ಲಿ ದರೋಜಿ ಕರಡಿಧಾಮ ಆದಾಗ ಅದರ ಓಡಾಟದಲ್ಲಿ ಸಿಕ್ಕ ಫೋಟೋಗ್ರಾಫರ್ಸ್, ವನ್ಯಜೀವಿ ತಜ್ಞರುಗಳ ಜತೆಗಿನ ಒಡನಾಟವೇ ನನ್ನನ್ನು ಪರಿಸರಕ್ಕೆ ಹತ್ತಿರ ತಂದಿತು. ಅಲ್ಲಿಂದ ನನ್ನ ಆಸಕ್ತಿ ವನ್ಯಜೀವಿ ಪರಿಸರ ಫೋಟೋಗ್ರಫಿ ಅಂತೆಲ್ಲಾ ಹೆಚ್ಚಾಯಿತು, ಇದೀಗ ಪುಟ್ಟ ಕಾಡು ಬೆಳೆಸುವ ಮಟ್ಟಕ್ಕೆ ಬಂದಿದೆ. ಪರಿಸರದ ಬಗೆಗೆ ಸಮುದಾಯಗಳಿಗೆ, ಈಗ ಬೆಳೆಯುವ ಮಕ್ಕಳಿಗೆ ಹೆಚ್ಚಿನ ತಿಳವಳಿಕೆ ಕೊಡಬೇಕು ಎನ್ನುವುದು ನನ್ನ ಕನಸು’ ಎಂದು ಪಂಪಯ್ಯ ಹೇಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...