Homeಮುಖಪುಟಚರ್ಚ್ ನಲ್ಲಿ ದಲಿತ ಕ್ಯಾಥೊಲಿಕರ ಮೇಲಿನ ದಬ್ಬಾಳಿಕೆ ಕೊನೆಗೊಳಿಸಲು ಮನವಿ: ಈ ಕುರಿತು ದೇಶದಲ್ಲಿಯೇ ಪ್ರಥಮ...

ಚರ್ಚ್ ನಲ್ಲಿ ದಲಿತ ಕ್ಯಾಥೊಲಿಕರ ಮೇಲಿನ ದಬ್ಬಾಳಿಕೆ ಕೊನೆಗೊಳಿಸಲು ಮನವಿ: ಈ ಕುರಿತು ದೇಶದಲ್ಲಿಯೇ ಪ್ರಥಮ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್ 

- Advertisement -
- Advertisement -

ದೇಶದ ಇತಿಹಾಸದಲ್ಲಿ ಮೊದಲನೆಯದು ಎಂದು ಹೇಳಲಾಗುವ ಈ ಪ್ರಕರಣದಲ್ಲಿ, ತಮಿಳುನಾಡಿನ ಕೊಟ್ಟಪಾಳಯಂ ಧರ್ಮಪ್ರಾಂತ್ಯದಲ್ಲಿ ಸಾಮಾಜಿಕವಾಗಿ ಬಡ ದಲಿತ ಕ್ಯಾಥೊಲಿಕರ ವಿರುದ್ಧ ಮೇಲ್ಜಾತಿಯ ಕ್ಯಾಥೋಲಿಕರಿಂದ ನಡೆಯುತ್ತಿರುವ ತಾರತಮ್ಯವನ್ನು ಕೊನೆಗೊಳಿಸಲು ಕೋರಿ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಕುಂಭಕೋಣಂ ಡಯಾಸಿಸ್‌ನಲ್ಲಿ ಕೊಟ್ಟಪಾಳಯಂ ಧರ್ಮಪ್ರಾಂತ್ಯದ ಕೆಲವು ಕ್ಯಾಥೊಲಿಕರ ಜಾತಿ ಆಧಾರಿತ ತಾರತಮ್ಯವನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಮಿಳುನಾಡು ರಾಜ್ಯದ ಹೈಕೋರ್ಟ್ ವಜಾಗೊಳಿಸಿದ ನಂತರ ಈ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಬಂದಿತು.

ರಾಜ್ಯ ಹೈಕೋರ್ಟ್‌ನ ಮಧುರೈ ಪೀಠವು ಅರ್ಜಿಯನ್ನು ವಜಾಗೊಳಿಸಿ, ನ್ಯಾಯಾಲಯಕ್ಕೆ ಈ ವಿಷಯದ ಬಗ್ಗೆ ಯಾವುದೇ “ನ್ಯಾಯವ್ಯಾಪ್ತಿ” ಇಲ್ಲ ಎಂದು ಹೇಳಿತ್ತು.

ಕೊಟ್ಟಪಾಳಯಂ ಧರ್ಮಪ್ರಾಂತ್ಯದಲ್ಲಿ ಎರಡು ಸ್ಮಶಾನಗಳಿವೆ.  ಒಂದು ಮೇಲ್ಜಾತಿ ಕ್ಯಾಥೋಲಿಕರಿಗೆ ಮತ್ತು ಇನ್ನೊಂದು ದಲಿತ ಕ್ಯಾಥೋಲಿಕರಿಗೆ ನಿಗದಿಗೊಳಿಸಬೇಕು ಎಂಬ ಬೇಡಿಕೆ ಸೇರಿದಂತೆ ಕೊಟ್ಟಪಾಳಯಂ ಧರ್ಮಪ್ರಾಂತ್ಯದಲ್ಲಿನ ತಾರತಮ್ಯ ಪದ್ಧತಿಗಳನ್ನು ಕೊನೆಗೊಳಿಸಲು ನ್ಯಾಯಾಲಯವು ಆದೇಶಿಸಬೇಕೆಂದು ಅರ್ಜಿಯು ಬಯಸಿದೆ.

ಅರ್ಜಿದಾರರು ರಾಜ್ಯ ನ್ಯಾಯಾಲಯವು ವಜಾಗೊಳಿಸಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಫೆಬ್ರವರಿ 21ರಂದು ನಡೆದ ಪ್ರಾಥಮಿಕ ವಿಚಾರಣೆಯ ನಂತರ, ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿ ಪ್ರತಿವಾದಿಗಳಿಂದ ಪ್ರತಿಕ್ರಿಯೆಗಳನ್ನು ಪಡೆಯಲು ಆದೇಶಿಸಲಾಗಿದೆ.

ಪ್ರತಿವಾದಿಗಳಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಬಿಷಪ್‌ಗಳ ವೇದಿಕೆಗಳ ಮುಖ್ಯಸ್ಥರು, ಸ್ಥಳೀಯ ಬಿಷಪ್, ಆರ್ಚ್‌ಬಿಷಪ್ ಮತ್ತು ಕೆಳಜಾತಿಯ ಮೂಲದ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶಿತ ಇಲಾಖೆಗಳ ಜಿಲ್ಲಾ ಮತ್ತು ರಾಜ್ಯ ಅಧಿಕಾರಿಗಳು ಸೇರಿದಂತೆ 17 ವ್ಯಕ್ತಿಗಳು ಮತ್ತು ಕಚೇರಿಗಳು ಸೇರಿವೆ.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಫ್ರಾಂಕ್ಲಿನ್ ಸೀಸರ್ ಥಾಮಸ್, ಚರ್ಚ್‌ನೊಳಗಿನ ತಾರತಮ್ಯದ ವಿರುದ್ಧ ದಲಿತ ಕ್ಯಾಥೊಲಿಕರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸ್ವೀಕರಿಸುವುದು “ಭಾರತದ ಇತಿಹಾಸದಲ್ಲಿ ಮೊದಲನೆಯದು” ಎಂದು ಹೇಳಿದ್ದಾರೆ.

ಕುಂಭಕೋಣಂ ಡಯಾಸಿಸ್‌ನಲ್ಲಿರುವ ದಲಿತ ಕ್ಯಾಥೊಲಿಕರು ಉನ್ನತ ಜಾತಿಯ ಕ್ಯಾಥೋಲಿಕ ಸಮುದಾಯದಿಂದ “ಅಸ್ಪೃಶ್ಯತೆ ಮತ್ತು ಆಕ್ರಮಣಶೀಲತೆ” ಸೇರಿದಂತೆ ಅಮಾನವೀಯ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಥಾಮಸ್ ತಿಳಿಸಿದ್ದಾರೆ.

ಮೇಲ್ಮನವಿಯಲ್ಲಿ ಅರ್ಜಿದಾರರು ಈ ಪದ್ಧತಿಯನ್ನು ಕೊನೆಗೊಳಿಸಲು ಜಿಲ್ಲಾ ಮತ್ತು ರಾಜ್ಯ ಅಧಿಕಾರಿಗಳ ಸಹಾಯವನ್ನು ಕೋರಿದ್ದಾರೆ. ಆದರೆ “ಯಾವುದೇ ಅಧಿಕಾರಿಗಳು ಸರಿಯಾದ ಅಥವಾ ಸಂಪೂರ್ಣ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದ್ದಾರೆ.

ಫೆಬ್ರವರಿ 24ರಂದು ಥಾಮಸ್ ಅವರು ಯುಸಿಎ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಕೊಟ್ಟಪಾಳಯಂ ಧರ್ಮಪ್ರಾಂತ್ಯದಲ್ಲಿ ಸುಮಾರು 150 ದಲಿತ ಕ್ಯಾಥೋಲಿಕ್ ಕುಟುಂಬಗಳಿವೆ. ಆದರೆ ಇಲ್ಲಿ ಈ ದಲಿತರ ಕೊಡುಗೆಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಚರ್ಚ್ ಚಟುವಟಿಕೆಗಳು ಮತ್ತು ಆಚರಣೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ದಲಿತ ಕ್ಯಾಥೋಲಿಕರ ಕೊಡುಗೆಗಳು ತಮ್ಮನ್ನು ಮತ್ತು ತಮ್ಮ ಸಂಪೂರ್ಣ ಆಚರಣೆಗಳನ್ನು ಕಲುಷಿತಗೊಳಿಸಬಹುದು ಎಂದು ಮೇಲ್ಜಾತಿಯವರು ನಂಬುತ್ತಾರೆ ಎಂದು ಥಾಮಸ್ ಹೇಳಿದ್ದಾರೆ.

ಕೊಟ್ಟಪಾಳಯಂ ಧರ್ಮಪ್ರಾಂತ್ಯದಲ್ಲಿರುವ ಉನ್ನತ ಜಾತಿಯ ಕುಟುಂಬಗಳು 12,000 ಚದರ ಮೀಟರ್ ಭೂಮಿಯನ್ನು ತಮ್ಮ ಸ್ಮಶಾನಕ್ಕಾಗಿ ಮೀಸಲಿಟ್ಟಿವೆ. ಆದರೆ ದಲಿತ ಕ್ಯಾಥೋಲಿಕರಿಗೆ 820 ಚದರ ಮೀಟರ್ ಭೂಮಿಯನ್ನು ಸ್ಮಶಾನಕ್ಕಾಗಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಹೆಸರು ಹೇಳಲು ಇಚ್ಛಿಸದ ಕ್ಯಾಥೋಲಿಕ್ ನಾಯಕರೊಬ್ಬರು ಯುಸಿಎ ನ್ಯೂಸ್‌ಗೆ “ತಮಿಳುನಾಡು ಅಥವಾ ಇತರ ರಾಜ್ಯಗಳಲ್ಲಿ ದಲಿತ ಕ್ರಿಶ್ಚಿಯನ್ ಸಮುದಾಯವು ತೀವ್ರ ತಾರತಮ್ಯವನ್ನು ಎದುರಿಸುತ್ತಿದೆ” ಎಂದು ಹೇಳಿದರು.

ದಲಿತರು ಅಥವಾ ಅಸ್ಪೃಶ್ಯರು ಹಿಂದೂ ಸಮಾಜದ ಅತ್ಯಂತ ಕೆಳಜಾತಿ. ದಶಕಗಳಲ್ಲಿ ಅಪಾರ ಸಂಖ್ಯೆಯ ದಲಿತರು ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ, ಆದಾಗ್ಯೂ ವಾಸ್ತವದಲ್ಲಿ, ಧರ್ಮಗಳು ಸಾಮಾಜಿಕ ಪೂರ್ವಾಗ್ರಹದಿಂದ ಸೀಮಿತ ರಕ್ಷಣೆಯನ್ನು ನೀಡುತ್ತವೆ.

ದಲಿತ ಎಂಬ ಪದವು ಸಂಸ್ಕೃತದಲ್ಲಿ “ತುಳಿತಕ್ಕೊಳಗಾದ” ಎಂದರ್ಥ ಮತ್ತು ಒಮ್ಮೆ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮತ್ತು ನಾಲ್ಕು ಹಂತದ ಹಿಂದೂ ಜಾತಿ ವ್ಯವಸ್ಥೆಯ ಹೊರಗಿನ ಎಲ್ಲಾ ಗುಂಪುಗಳನ್ನು ಸೂಚಿಸುತ್ತದೆ. ಭಾರತದ 1.2 ಬಿಲಿಯನ್ ಜನರಲ್ಲಿ 201 ಮಿಲಿಯನ್ ಜನರು ಈ ಸಾಮಾಜಿಕವಾಗಿ ವಂಚಿತರಾಗಿದ್ದಾರೆ ಎಂದು ಸರ್ಕಾರಿ ದತ್ತಾಂಶವು ತೋರಿಸುತ್ತದೆ.

ಭಾರತದ 25 ಮಿಲಿಯನ್ ಕ್ರಿಶ್ಚಿಯನ್ನರಲ್ಲಿ ಸುಮಾರು 60 ಪ್ರತಿಶತದಷ್ಟು ಜನರು ದಲಿತ ಮತ್ತು ಬುಡಕಟ್ಟು ಮೂಲದವರು.

ಪರಿಶಿಷ್ಟ ವ್ಯಕ್ತಿಗೆ ಚಿತ್ರಹಿಂಸೆ ನೀಡಿ ಕೊಲೆ; ಕಲಬುರಗಿ ಪೊಲೀಸರ ಮೇಲೆ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...