HomeUncategorizedಅಣುವೆಂಬ ಅಣು

ಅಣುವೆಂಬ ಅಣು

- Advertisement -
- Advertisement -

ಬೆರಳುಗಳು ಹಾಗೆ ಕೆಳಗೆ ಬೀಳುತ್ತಲಿದ್ದವು. ತೋಡುವವನಿಗೆ ಅರಿವೆ ಇರಲಿಲ್ಲ. ರಕ್ತ ಮಣ್ಣಿನಲ್ಲಿ ಮಣ್ಣಾಗಿ ಹೋಗಹತ್ತಿತ್ತು. ಮಣ್ಣಿನ ಬಣ್ಣದಿಂದಲೋ, ರಕ್ತದ ಬಣ್ಣದಿಂದಲೋ ಎರಡು ಒಂದೇ ಆಗಿದ್ದವು.
ಕೆಳಗೆ ಬಿದ್ದ ಆಕೃತಿ ಉದ್ದನೆಯ ಡೊಣ್ಣೆ ಹುಳುವೋ ಎಂದು ತೆಗೆÉದುಕೊಳ್ಳಲು ಹೋz.À ತನಗೆ ಬೆರಳೆ ಇರಲಿಲ್ಲ. ಒಂದು ಕತ್ತಿ ಇಲ್ಲ, ಮೊನಚಾದ ಯಾವ ಆಕೃತಿ ಇಲ್ಲ. ತನ್ನ ಬೆರಳು ಕೆಳಗೆ ಬಿದ್ದಿದೆ. ಅದೆ, ಅದು ಕೆಳಗೆ ಬಿದ್ದಾಗಲೂ ಗೊತ್ತಾಗಲಿಲ್ಲ.
ಅವನಿಗೆ ಭಯವಾಯಿತು, ಆತ ಕೇಳಿದ್ದ, ಇಲ್ಲಿ ಅಗಿಯಲು ಹೋದರೆ ಬೆರಳುಗಳು ತಿಳಿಯದ ಹಾಗೆ ಕೆಳಗೆ ಬೀಳುತ್ತವೆ ಎಂದು, ಇದು ನಿಜವಾಗಿದೆ. ನೋವಿಲ್ಲದೆ ಅದು ಭಾವವಿಲ್ಲದೆ, ಸ್ಪರ್ಶವಿಲ್ಲದೆ ಬೆರಳುಗಳು ಕೆಳಗೆ ಬಿದ್ದಿದ್ದವು. ಚಾಕು ಚೂರಿ ರಿಕಾಪುಗಳು ಹಾಗೆ ಶೂನ್ಯದಲ್ಲಿ ಪಳಪಳ ಹೊಳೆದಂತಾಯಿತು.
ಆ ಗವಿ ಗಂವೆನ್ನುತ್ತಿತ್ತು, ಬಾವಲಿಗಳು ತಲೆಕೆಳಗಾಗಿ ಜೋತು ಬಿದ್ದು ಮಲಗಿದ್ದವು, ಅಗಿಯುವಿಕೆ ನಿಲ್ಲಿಸಲೋ ಅಥವಾ ಏನು ಮಾಡುವುದು? ಬೆರಳು ಕಳೆದುಕೊಂಡ ಮೇಲೆ ಅಗೆಯುವುದೇತಕ್ಕೆ? ಇನ್ನೂ ಸ್ವಲ್ಪವಿದ್ದರೆ ಅಂಗೈ, ಕೈ, ತಲೆ, ಕಾಲು ಕಾಲ್ಬೆರಳು ಇಡೀ ಸಮಸ್ತ ದೇಹವೇ ಇಲ್ಲವಾಗಬಹುದೇನೋ ಹಾಗೆಯೇ ಆ ಗವಿಯಿಂದ ಹೊರಬಂದ.
ಕಣ್ಣಿಗೆ ಕಾಣದ ಆ ಅಮೂರ್ತ ಯಾವುದು?
ಬಯಲು ಬಾಗಿಲೊಳಗೆ ನಿಂತ ಯಾವದೋ ರಾಕ್ಷಸವೋ, ದೆವ್ವವೋ, ಭೂತವೋ ಕರಾಳು ರಾತ್ರಿಯೇ ಮೂರ್ತತೆ ಹೊಂದಿ ತÀನ್ನ ಬೆರಳು ನುಂಗಿತೋ. ಇದು ಏನು? ಯಾವ ಮಾಯೆ, ಯಾವ ಪವಾಡ, ಯಾವ ಕಾಲನ ಕಾರ್ಕೂಟ ದರ್ಶನ.
ತನ್ನ ಲುಂಗಿಯ ಚುಂಗನ್ನು ಕೈಗೆ ಕಟ್ಟಿದ. ಹೊರಬಂದು ಬಯಲೊಳಗೆ ನಿಂತುಕೊಂಡ.
ಅದಮ್ಯ ಬಯಲು, ಘನದ್ರವ ಅನಿಲಗಳ ಆಳದಲ್ಲಿ ಇನ್ನೂ ಏನೋ ಇದೇ ಅನ್ನಿಸಿತು. ಬೆಟ್ಟಗಳು ದೊಡ್ಡವೋ, ಚಿಕ್ಕವೋ ಬೃಹದಾಕಾರವಾಗಿ ಸಾಲುಸಾಲಾಗಿ ಮಲಗಿಕೊಂಡಿದ್ದವು. ಅವನ್ನು ವ್ಯಾಖ್ಯಾನಿಸಲು ಅವನಲ್ಲಿ ಏನು ಮಾಪನಗಳಿರಲಿಲ್ಲ. ದೊಡ್ಡವು ಎಂದರೆ ಹೇಗೆ ದೊಡ್ಡವು, ಆಕಾರದಲ್ಲೋ? ಕೃತಿಯಲ್ಲೋ? ಪರಿಣಾಮ ಸೃವಿಸುವ ರೀತಿಯಲ್ಲೋ ಎಲ್ಲವನ್ನು ಬೆರಳುಗಳ ಕಳೆದುಕೊಂಡ ಕ್ರಮದಿಂದಲೇ ನೋಡಹತ್ತಿದ. ಈ ಬೆಟ್ಟಗಳು ದಟ್ಟ ಗಾಳಿ ಕಣ್ಣಿಗೆ ಕಾಣುವ ಅನಿಲಗಳಿಂದ ಹಾಗೆ ಕಾಣುತ್ತಿದ್ದವು.
ಮನೆಗೆ ಬಂದ, ಅವನ ಬೆರಳಿಲ್ಲದ ಕೈಗಳ ನೋಡಿ ಹೆಂಡತಿ ಎದೆ ಒಡೆದುಕೊಂಡಳು. ಅಲ್ಲಿಯೇ ಇರುವ ವೈದ್ಯರಲ್ಲಿ ಕರೆದುಕೊಂಡು ಹೋದಳು. ವೈದ್ಯರು ಹೇಳಿದರು, ಇದು ಚಿಗುರಲಾರದ್ದು. ಆಕೆ ಕೇಳಿದಳು ಎರಡು ಬೆರಳುಗಳು ಇಲ್ಲದೆ ಇರಬಹುದೇ?
ಅದು ನಿನ್ನ ಕರ್ಮ, ಇಲ್ಲಿ ಆ ತೋಡುವ ಗಣಿ ಬಂದ ಮೇಲೆ ಈ ಮಣ್ಣಿನಲ್ಲಿ ರೆಸಿಡೂಯಲ್ ಸೇರಿಕೊಂಡಿದೆ. ಅದು ಗೊತ್ತಾಗದ ಹಾಗೆ, ಈ ಊರಲ್ಲಿ ತೋಡುವದೇ ಅಪಾಯ. ಇನ್ನು ಸ್ವಲ್ಪ ದಿನ? ಇಲ್ಲಿಯ ಧೂಳಿನ ಕಣವೇ ಮನುಷ್ಯನನ್ನು ಕತ್ತು ಹಿಸುಕಿ ಕೊಲ್ಲುತ್ತದೆ.
ಹಾಗಾದರೆ ನಾನು ದಿನನಿತ್ಯ ಮಾಡುವ ವ್ಯವಸಾಯ?
ಅದು ಬಿಡಬೇಕಾಗಿ ಬರಬಹುದು
ಈ ಪ್ರಶ್ನೆ ನನ್ನ ಡಾಕ್ಟರ್ ಪ್ರೊಫೇಶನ್‍ಗೆ ಸಂಬಂಧಿಸಿದ್ದು ಅಲ್ಲ, ಇನ್ನೂ ಸ್ವಲ್ಪ ದಿನ, ಈ ಊರಲ್ಲಿ ನನ್ನಂಥವರು ಇರಲಿಕ್ಕೆ ಇಲ್ಲ. ಯಾಕೆಂದರೆ ನಮಗೆ ಆರಾಮವಾಗಿ ಸಾಯಲಿಕ್ಕೆ ಅನೇಕ ಸ್ಥಳಗಳಿವೆ, ಈ ಊರೇ ಬೇಕಾಗಿಲ್ಲ. ಇದನ್ನು ಕಂಡು ಹಿಡಿದವರೇ ಇದರಿಂದಲೇ ಸತ್ತು ಹೋಗಿದ್ದಾರೆ. ನಿಮ್ಮಂಥವರ ಪಾಡೇನು? ಇನ್ನೂ ಸ್ವಲ್ಪ ದಿನ ಊರಲ್ಲಿರುವ ನೀರು, ಗಾಳಿ ಎಲ್ಲವೂ ನಿಮ್ಮನ್ನು ಕೊಲ್ಲುವ ಶೂಲಗಳಾಗುತ್ತವೆ.
ತೋಡದೆ ಊಳದೆ ಉತ್ತದೆ ಬಿತ್ತದೆ ಬದುಕಲು ಸಾಧ್ಯವಿರಲಿಲ್ಲ. ತೋಡಿದರೆ ಸಾವು ಎಂಬುದು ಮತ್ತೆ ಮಾರ್ಧನಿಸುತ್ತದೆ. ಕೈಬೆರಳು ಕಳೆದುಕೊಂಡ ಸ್ಥಿತಿ ನೋಡಿ ಹೆಂಡತಿ ರೊಯ್ಯನೆ ಆಳಹತ್ತಿದಳು. ಮೇಳೆ ಹಿಡಿಯುವುದು ಹೇಗೆ? ಬಿತ್ತುವುದು ಹೇಗೆ? ಬೆಳೆ ಬೆಳೆಯುವುದು ಹೇಗೆ? ಇದು ಒಂದು ಪ್ರಶ್ನೆ.
ಅಲ್ಲಿ ತೋಡಲು ನಿನಗೇನು ಅ,,,,,,,,.ಸಿತ್ತು. ನೀನು ಎರಡು ದಿನದಿಂದ ಗುದ್ದಲಿ, ಸಲಿಕೆ ಹಿಡಿದುಕೊಂಡು ಗವಿಯಲ್ಲಿ ಅಗಿಯಲು ಹೋದಾಗಲೆ ಅನ್ನುಕೊಂಡೆ ಈಗ ಅನುಭವಿಸು ಎಂದು ಬಿಕ್ಕಿಬಿಕ್ಕಿ ಅಳಹತ್ತಿದಳು.
ಅದರ ಮಣ್ಣು ಮಾರಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ನಾನು ಹಾಗೆ ತೋಡಿ ದುಡ್ಡು ಮಾಡಿಕೊಳ್ಳಲು ಹೋಗಿ ಬೆರಳುಗಳ ಕಳೆದುಕೊಂಡೆ. ಬಯ್ಯಬೇಡ, ಬಯ್ಯಲು ಇದು ಸಮಯವಲ್ಲ. ನನ್ನ ಅಂಗವೈಕಲ್ಯದ ನೋವು ನನ್ನನ್ನು ಬಿಡಬೇಕಲ್ಲ. ಗಾಢವಾಗಿ ಕಾಡುತ್ತದೆ. ಅದರಲ್ಲಿ ನಿನ್ನ ಇರಿತ.
ಈ ಊರು ಮನುಷ್ಯರು ವಾಸಿಸಲಿಕ್ಕೆ ಅಲ್ಲ ಕ್ರಿಮಿಕೀಟ, ಪಕ್ಷಿ, ಸರೀಸೃಪಗಳು ವಾಸಿಸಲಿಕ್ಕೂ ಅಯೋಗ್ಯವಾಗಿರುವಂತಹುದು. ಈಗಾಗಲೇ ಈ ಊರಲ್ಲಿ ಅಂತರ್ಗಾಮಿಯಾಗಿ ವಿಷದ ಹೊನಲು ಹರಿಯುತ್ತಿದೆ. ಇನ್ನು ಸ್ವಲ್ಪ ದಿನ, ಅನೇಕರು ಉಸಿರಾಡುವ ಪುಪ್ಪಸ ಕಳೆದುಕೊಂಡಿದ್ದಾರೆ. ಅವರಿಗೆ ರೋಗ ತಗುಲಿಸಿಕೊಂಡಿದ್ದಾರೆ. ಕುಂಡೆಗೆ ಕ್ಯಾನ್ಸರ್ ಹಚ್ಚಿಕೊಂಡಿದ್ದಾರೆ. ಈಗ ನಿನ್ನ ಎರಡು ಬೆರಳುಗಳು ಉದರಿ ಬಿದ್ದುದು ಆಶ್ಚರ್ಯವಿಲ್ಲ. ಇನ್ನೂ ಸ್ವಲ್ಪ ದಿನವಾದರೆ ರುಂಡಮುಂಡಗಳು ಉದುರಿ ಬೀಳಬಹುದು
2
ಬೆರಳುಗಳ ಗಾಯದ ಜಾಗಕ್ಕೆ ಬ್ಯಾಕ್ಟೀರಿಯಗಳೂ ಬಂದಿದ್ದವು. ಸಮೃದ್ಧ ಭೂಮಿಯ ತಿನ್ನಲು.
ಇಂದು ನೋವು ಕೊಂಚ ಹೆಚ್ಚಾಯಿತೋ ಏನೋ? ಚೀರಹತ್ತಿದ. ಹೆಂಡತಿ ನಿನ್ನೆ ಡಾಕ್ಟರ್ ಕೊಟ್ಟ ನೋವು ನಿವಾರಕವನ್ನು ನುಂಗಿಸಿದಳು, ಹಾಗೆ ಮಲಗಿಕೊಂಡ.
ಪರಿಸರ ಹೋರಾಟಗಾರರಾದ ಮಾನಯ್ಯ ಬಂದಿದ್ದಾರೆ. ಯುರೋನಿಯಂ ಅಣು ಯೋಜನೆಗೆ ಧಿಕ್ಕಾರ ಎಂದು ಕೂಗುತ್ತಿದ್ದಾರೆ. ಅವನಿಗೆ ಹಿಂಸೆಯಾಗುತ್ತಿದೆ. ಇಪ್ಪತ್ತು ವರ್ಷದಿಂದ ಅವರು ಕೂಗಿದ ಕೂಗಿನ ಸ್ವರ ಸ್ವಲ್ಪವೂ ಬದಲಾಗಿಲ್ಲ.
ಸ್ವರ ತಾಳ ಲಯ ಎಲ್ಲವೂ ಹಾಗೆಯೇ ಇದೆ. ಅವರ ಜೊತೆÀ ಹತ್ತು ಜನರೂ ಬಂದಿದ್ದಾರೆ. ಇಪ್ಪತ್ತು ವರ್ಷದಿಂದ ಇದ್ದ ಬಡಕಲು ದೇಹ ಕೋಲು ಮುಖದ ಮಾನಯ್ಯನ ಮುಖ ದೇಹ ಈಗ ಬದಲಾಗಿದೆ. ಮುಖದ ಮೇಲ್ಪದರು ಎಣ್ಣೆ ತುಂಬಿಕೊಂಡಿದೆ
ಬಡಕಲು ದೇಹವಿದ್ದದ್ದು ಮೈ ಕೊಬ್ಬಿನಿಂದ ಆವೃತವಾಗಿದೆÉ. ಧ್ವನಿಯಲ್ಲಿ ಆತ್ಮಸ್ಥೈರ್ಯ ಇದೆ. ನಾವು ಈ ಯೋಜನೆ ಊರಿಗೆ ಬಂದಾಗಲೇ ಪ್ರತಿಭಟಿಸಿದೆವು. ಅದನ್ನು ಮೀರಿ ಸರ್ಕಾರ ಈ ಕಸಾಯಿಖಾನೆಯನ್ನು ಇಲ್ಲಿ ಸ್ಥಾಪಿಸಿತು ಎಂದರು ಮಾನಯ್ಯ. ಕಸಾಯಿ ಖಾನೆಯ ಫಲಾನುಭವಿಗಳಲ್ಲಿ ಇವರು ಒಬ್ಬರು ಎಂದು ಅವನಿಗೂ ತಿಳಿದಿತ್ತು. ಅವನಿಗೇಕೆ, ಜಗತ್ತಿಗೂ ತಿಳಿದಿತ್ತು.
ಮಾನಯ್ಯನ ಗುಡಿಸಲು ಮನೆ ಇಂದು ಮೂರು ಅಂತಸ್ತಿನ ಕಟ್ಟಡವಾಗಿದ್ದು ಹಾಗೆಯೇ ಅಲ್ಲವೇ?
ನಿಮಗೆ ಪರಿಹಾರ ಕೊಡಿಸುತ್ತೇವೆ ಎಂದರು ಮಾನಯ್ಯ.
ಯಪ್ಪಾ ಈವತ್ತೋ ಈ ಗತಿ ಇದೆ, ನಾಳೆ ನಾವು ಹೆಂಗ್ ತಿನ್ನಾನು? ಹೆಂಗ್ ಊಳಾನು? ಹೆಂಗಾ…….? ಅಂದಳು ಬೆರಳು ಕಳೆದುಕೊಂಡವನ ಹೆಂಡತಿ. ಈ ಬೆವರ್ಸಿ ಸೂ ಮಗನಿಗೆ ಹೇಳಿದೆ. ಇದ್ದುದರಲ್ಲಿ ತಿನ್ನೋನಾ ಉಣ್ಣೋನ ಬದುಕೋಣ ಇಲ್ಲಾದ ಉಸಾಬರಿ ನಮಗ್ಯಾಕೆ ಎಂದು ಹೇಳಿದರೂ ಕೇಳಬೇಕಲ್ಲ?
ಮಾನಯ್ಯನ ಮುಖದಲ್ಲಿ ಮಿಂಚೊಂದು ಹೊಳೆಯಿತು. ಅವನಿಗೆ ಇದು ವ್ಯಾಪಾರ ಮಾತ್ರ, ಹೋರಾಟ ದಲ್ಲಾಳಿಕರಣಗೊಂಡಿದ್ದು ಆತನ ಮುಖ ಪ್ರಕಟಿಸಿತು.
ಆ ಕಂಪನಿ ಎಂ.ಡಿಯ ಜೊತೆ ಮಾತಾಡುತ್ತೇನೆ. ನೀವು ಯಾವುದೇ ವರ್ತಮಾನ ಪತ್ರಿಕೆ, ಟಿ.ವಿ. ಮುಂದೆ ಹೋಗಬೇಡಿ, ಅಲ್ಲಿಗೆ ಹೋದರೆ ಇದು ಬಗೆಹರಿಯುವ ವಿಷಯವಲ್ಲ, ಆಮೇಲೆ ಕೋರ್ಟ್ ಕವಡೆ ಎಂದು ವ್ಯರ್ಥ ಕಾಲಹರಣ. ಸುಮಾರು 20-25 ವರ್ಷ ನಡೆಯುತ್ತದೆ. ಇಷ್ಟರಲ್ಲಿ ನೀವೇ ಇಲ್ಲವಾಗಬಹುದು.
ಪಕ್ಕದ ಮನೆಯ ಶಿಕ್ಷಕನೊಬ್ಬ ಬಂದು ನೋಡಿ ಮುಂದೊಂದು ದಿನ ನಾವೆಲ್ಲ ಇಲ್ಲವಾಗುತ್ತೇವೆ. ಕಣ್ಣಿಗೆ ಕಾಣದ್ದು ನಮ್ಮ ಅಂಗಗಳನ್ನು ಕತ್ತರಿಸುತ್ತದೆ ಎಂದರೆ ಅದು ಇರಬಹುದೇ? ಎಂದು ಗುನುಗಿದ. ಜಪಾನಿನ ಹಿರೋಶಿಮಾ ನಾಗಾಸಾಕಿ ನಾಶವಾದದ್ದು ಇದರಿಂದಲೇ, ಅಲ್ಲಿ ಏನು ಉತ್ಪತ್ತಿಯಿಲ್ಲ, ಬಿತ್ತುತ್ತಿಲ್ಲ, ಬೆಳೆಯುತ್ತಿಲ್ಲ, ಅಂಗವೈಕಲ್ಯ, ರೋಗ ರುಜಿನ, ಇನ್ನೂ ಇದೆ ಎಂದು ಹೇಳಿದ.
ಎಲ್ಲ ಹೇಳಿದ ಸಂಗತಿಗಳು ಅವನ ಮನಸ್ಸಿನಲ್ಲಿ ಬಿತ್ತಿ ಬೆಳೆಯಹತ್ತಿದವು. ಹೆಂಡತಿ ಮೊದಲ ಗುರು, ಅವಳ ಮಾತು ಕೇಳಿದರೆ ಇದು ಆಗುತ್ತಿರಲಿಲ್ಲವೇನೋ?
ದೊಡ್ಡ ತಪ್ಪು ಮೂಡಿದೆ. ಇದು ಅಲ್ಲದೆ ನನ್ನ ಅಂಗಗಳನ್ನು ಮೂತ್ರಕೋಶವನ್ನು ಹೃದಯವನ್ನು ಒಡೆದು ಹಾಕಬಹುದು ಎಂದು ಹಾಸಿಗೆಗೆ ಉರುಳಿದ, ನಿದ್ರೆ ಎಂಬುದು ಮರೀಚಿಕೆಯಾಗಿತ್ತು.
ಎದ್ದು ಕುಳಿತ, ನೀರು ಕುಡಿದ, ಅಡ್ಡಾಡಿದ, ಬೋಳ ಕೈ ಕಳೆ ಕಳೆದುಕೊಂಡಿತ್ತು. ಮಧ್ಯರಾತ್ರಿಯಾದರೂ ನಿದ್ರೆ ಇಲ್ಲ.
ಡಾಕ್ಟರ್ ಮತ್ತೆ ಹೇಳಿದ್ದರು, ಇದು ಏಳು ತಲೆಮಾರು ಆದರೂ ಮೆಲ್ಲಗೆ ಬಿಡದೆ ಕೊಲ್ಲುವಂತಹುದು. ಆತನಿಗೆ ತಾನು ಮಾಡಿದ ಸಣ್ಣ ತಪ್ಪು ಹೀಗೆ ತಲೆಮಾರನ್ನು ನುಂಗಿ ಹಾಕಬಹುದು ಎಂದು ಅಂದುಕೊಂಡಿರಲಿಲ್ಲ. ನಿದ್ರೆ ಎಂಬುದು ಬಂದುಹೋಗುವ ಜೋಕಾಲಿ ಆಗಿತ್ತು. ಆದರೆ ಮುಂಜಾನೆ ಕೋಳಿ ಕೂಗಿದಂತೆಲ್ಲ ತಣ್ಣನೆಯ ಗಾಳಿ ಜೊಂಪನ್ನು ಹೆಚ್ಚಿಸಲು ಸಹಾಯ ಮಾಡಿತ್ತು. ಕಂಗಳು ಮುಚ್ಚಿದ. ನಿದ್ರೆ ಎಂಬುದು ದಟ್ಟವಾಗುತ್ತ ಹೋಗಹತ್ತಿತ್ತು. ದಟ್ಟತೆಯ ನಿದ್ರೆಯ ಮಧ್ಯೆ ಇನ್ನೂ ಅದರ ಧ್ಯಾನದಲ್ಲೇ ಇತ್ತೇನೋ ಮದ. ಆತನಿಗೆ ಒಂದು ಶೂನ್ಯವೇ ಭಯಾನಕವಾಗಿ ಕಂಡಿತ್ತು. ಅದು ಕನಸೋ, ಭಾವನೆಯೋ ತಿಳಿಯದಾಯಿತು.
ಸಣ್ಣನೆ ಅಣುವೊಂದು ರಭಸವಾಗಿ ಮುನ್ನುಗ್ಗುತ್ತ ಇಲ್ಲಿರುವ ಕಟ್ಟಡಗಳನ್ನು ಒಡೆದು ಹಾಕಿತು. ನದಿಕೊಳ್ಳಗಳನ್ನು ಆಪೋಷನ ತೆಗೆದುಕೊಂಡಿತು. ಸಕಲ ಜೀವರಾಶಿಗಳನ್ನು ನುಂಗುತ್ತ ನುಂಗುತ್ತ ತನ್ನ ಮನೆಯ ಬಾಗಿಲಿಗೆ ಬಂದಿತ್ತು. ತನ್ನ ಮನೆಯೇ ಅದರ ಬಾಯಲ್ಲಿ ಮನೆಯೊಳಗೆ ತಾನು ಎಂಬ ಭಾವನೆ ದಟ್ಟವಾಯಿತು. ಇದು ನಿಜವೋ, ಭ್ರಮೆಯೋ ಅರಿಯದಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...