Homeಮುಖಪುಟಕಾರ್ಮಿಕರಿಗೆ ರೇಷನ್ ಕಿಟ್ ನೀಡಲು ಅರ್ಜಿ ತುಂಬಲು ಹೇಳಿದ ಶಾಸಕ: ಪ್ರಶ್ನಿಸಿದವರ ಮೇಲೆ ಪೊಲೀಸರಿಂದ ಧಮಕಿ!

ಕಾರ್ಮಿಕರಿಗೆ ರೇಷನ್ ಕಿಟ್ ನೀಡಲು ಅರ್ಜಿ ತುಂಬಲು ಹೇಳಿದ ಶಾಸಕ: ಪ್ರಶ್ನಿಸಿದವರ ಮೇಲೆ ಪೊಲೀಸರಿಂದ ಧಮಕಿ!

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಹರಸಾಹಸಪಡುತ್ತಿರುವಾಗಲೇ, ಇಲ್ಲಿರುವ ನೇಕಾರ ಕಾರ್ಮಿಕರು ಸಹ ಸಂಕಷ್ಟ ಒಳಗಾಗಿದ್ದಾರೆ.

- Advertisement -
- Advertisement -

ಕೊರೊನಾ ಕಾರಣಕ್ಕೆ ಹೇರಿದ ಲಾಕ್‌ಡೌನ್‌ಗೆ 50 ದಿನಗಳಾಗುತ್ತಾ ಬಂದಿದೆ. ಕೆಲಸವಿಲ್ಲದೇ ಸಂಕಷ್ಟದಲ್ಲಿ ಸಿಕ್ಕಿಕೊಂಡ ಬಡವರ, ಕೂಲಿಜನರ ಗೋಳು ಹೇಳತೀರದು. ಇಂತಹ ಸಂಕಷ್ಟದ ಸಮಯದಲ್ಲಿ ಬಡನೇಕಾರ ಕಾರ್ಮಿಕರ ಮೇಲೆ ಬೆಳಗಾವಿಯ ಪೊಲೀಸರು‌ ದರ್ಪ ಮೆರೆದಿರುವ ಅಮಾನವೀಯ ಘಟನೆ ವರದಿಯಾಗಿದೆ.

ನಡೆದುದಿಷ್ಟು..

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್‌ ಪಾಟೀಲ್‌‌ರವರ ಪರವಾಗಿ ಅದೇ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಗೀತಾ ಸುತಾರರವರು ಕರಪತ್ರ ಮತ್ತು ಅರ್ಜಿಯೊಂದನ್ನು ಮುದ್ರಿಸಿ ಖಾಸಬಾಗದ ಬಸವೇಶ್ವರ ಸರ್ಕಲ್‌ನಲ್ಲಿ ಹಂಚಲಾಗುವುದು ಎಂದು ಘೋಷಿಸಿದ್ದರು. ಲಾಕ್‌ಡೌನ್‌ ಕಾರಣಕ್ಕೆ ತೊಂದರೆಯಲ್ಲಿರುವ ಕಾರ್ಮಿಕರಿಗೆ ರೇಷನ್‌ ಕಿಟ್‌ ವಿತರಿಸಲು ಅರ್ಜಿಗಳನ್ನು ನೀಡುತ್ತಿದ್ದು, ಅದನ್ನು ತುಂಬಿದವರಲ್ಲಿ ಅರ್ಹರಿಗೆ ಮಾತ್ರ ಕಿಟ್‌ ವಿತರಿಸಲಾಗುವುದು ಎಂದು ಅದರಲ್ಲಿ ಬರೆದಿದ್ದು ಮೇ 03ರಂದು ಅರ್ಜಿ ತುಂಬ ಬೇಕು ಎಂದು ಪ್ರಕಟಣೆ ಹೊರಡಿಸಿದ್ದರು.

ಇದನ್ನು ಕಂಡ ಕೆಲ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದರು. ವಡಂಗಾವ್‌ನ ಖಾಸಬಾಗದಲ್ಲಿ ಬಹುತೇಕ ನೇಕಾರ ಸಮುದಾಯ ಬಡ ಕಾರ್ಮಿಕರೆ ವಾಸಿಸುತ್ತಿದ್ದು, ಅವರೆಲ್ಲರೂ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಅವರ ಪ್ರತಿ ಮನೆಗೂ ರೇಷನ್‌ ಕಿಟ್‌ ವಿತರಿಸುವುದನ್ನು ಬಿಟ್ಟು ಅರ್ಜಿ ಸಲ್ಲಿಸಿ. ಸಾಲಾಗಿ ನಿಲ್ಲಿ ಎಂದು ಆದೇಶ ಹೊರಡಿಸಿರುವುದು ಎಷ್ಟು ಸರಿ? ನಿಮಗೆ ಮತ ಹಾಕಿದ ಪ್ರಜೆಗಳನ್ನು ಇಷ್ಟು ಕೀಳಾಗಿ ಕಾಣುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಂಥ ಚೀಪ್ ಗಿಮಿಕ್ ಗಳಪ್ಪ ನಮ್ಮ ಜನ ನಾಯಕರದ್ದು.. ???ಇಲ್ಲಿ ನೋಡಿ.. ಇವರು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ್….

Posted by Sarala Satpute on Saturday, May 2, 2020

ಅಲ್ಲದೇ ಅಲ್ಲಿನ ಜನರು ಈ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ನಂತರ ಶಾಸಕರು ಹಂಚಿದ್ದ ರೇಷನ್‌ ಕಿಟ್‌ಗಳು ಎರಡು ದಿನಕ್ಕೂ ಸಾಲುವುದಿಲ್ಲ, ಇದು ಪ್ರಚಾರ ತಂತ್ರವೇ ಹೊರತು ಇದರಿಂದ ಬಡವರಿಗೆ ಏನೇನು ಪ್ರಯೋಜನವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರಿದ್ದರು.

ನಾವು ಇರಬೇಕೋ ಇಲ್ಲ ಸಾಯಬೇಕೋ? ನೇಕಾರರ ಆಕ್ರೋಶ

ನಾವು ಇರಬೇಕೋ ಇಲ್ಲ ಸಾಯಬೇಕೋ? ಬೆಳಗಾವಿಯಲ್ಲಿ ನೇಕಾರರ ಆಕ್ರೋಶ

Posted by Naanu Gauri on Wednesday, May 13, 2020

ಆದರೆ ಮೇ 11ರ ರಾತ್ರಿ ಕೆಲವು ಪೊಲೀಸ್‌ ಅಧಿಕಾರಿಗಳು ಬಂದು ಖಾಸಬಾಗದಲ್ಲಿ ವಾಸವಿದ್ದ ಸಾಮಾಜಿಕ ಕಾರ್ಯಕರ್ತ ಗಣಪತಿ ಸೊಂಟಕ್ಕಿಯವರನ್ನು ಪೊಲೀಸ್‌ ಠಾಣೆಗೆ ಬಾ ಎಂದು ಕರೆದಿದ್ದಾರೆ. ಅವರು ಕಾರಣ ಕೇಳಿದಾಗ ನಿಮ್ಮ ಮೇಲೆ ಕಂಪ್ಲೈಂಟ್‌ ಆಗಿದೆ ಎಂದು ಪೊಲೀಸರು ಉತ್ತರಿಸಿದ್ದಾರೆ. ಎಫ್‌ಆರ್‌ಐ ತೋರಿಸಿದರೆ ಮಾತ್ರ ನಾವು ಪೊಲೀಸ್‌ ಠಾಣೆಗೆ ಬರುತ್ತೇವೆ ಇಲ್ಲದಿದ್ದರೆ ಬರುವುದಿಲ್ಲ ಎಂದು ಗಣಪತಿಯವರು ಉತ್ತರಿಸಿದ್ದಾರೆ. ನಂತರ ಪೊಲೀಸರು ವಿಡಿಯೋ ಹೇಳಿಕೆ ನೀಡಿದ್ದ ಹಲವು ಕುಟುಂಬಗಳಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ, ಮೂರು ಜನ ಕಾರ್ಮಿಕರನ್ನು ಬೆಳಿಗ್ಗೆ ಮಾರ್ಕೆಟ್‌ ಪೊಲೀಸ್‌ ಠಾಣೆಗೆ ಕರೆದೊಯ್ದು ಸಂಜೆವರೆಗೂ ಇರಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ ಎಂದು ಗಣಪತಿಯವರು ದೂರಿದ್ದಾರೆ.

ಜವಾಬ್ದಾರಿ ಹುದ್ದೆಯಲ್ಲಿರು ಪೊಲೀಸ್ ಅಧಿಕಾರಿಗಳೇ ಯಾವುದೇ ಘಟನೆ ನಡೆದ ಸಂಧರ್ಭದಲ್ಲಿ ಸ್ಥಳಕ್ಕೆ ಬೇಗನೆ ಬಾರದ ನೀವುಗಳು ಯಾವುದೇ ನೋಟೀಸು ಇಲ್ಲದೇ ವಿಚಾರಣೆಗೆ ಕರೆದೊಯ್ಯಲು ಪೊಲೀಸ್ ವಾಹನಸಹಿತ ಎಷ್ಟು ಬೇಗನೆ ಹಾಜರಾದ ನೀವುಗಳು ಯಾವ ಕಾರಣಕ್ಕೆ ಬಂದು ವಾಪಸು ಹೋಗಿದ್ದಿರಿ? ನಾನೇನು ಕೊಲೆ ಮಾಡಿದ್ದೇನಾ, ಇಲ್ಲಾ ಕಳ್ಳತನ ಮಾಡಿದ್ದೇನಾ, ಇಲ್ಲಾ "ಬಾಂಬ್ " ಇಡಲು ಹೊರಟಿದ್ದೇನಾ ಜನಗಳ ಪರವಾಗಿ ಶಾಸಕರನ್ನು ಪ್ರಶ್ನೆ ಮಾಡಿದ್ದಕ್ಕೆ ತಾನೇ ನೀವುಗಳು ಇಷ್ಟೇಲ್ಲಾ ಸಾಹಸ ಮಾಡಿದ್ದು, ಶಾಸಕತ್ವ ಅನ್ನೋದು ಶಾಸಕರ ವಯಕ್ತಿಕ ಆಸ್ತಿಯಲ್ಲ ತಪ್ಪು ಅನಿಸಿದ್ದನ್ನ ಪ್ರಶ್ನೆಮಾಡುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೆ ಇದೆ. ಇದರ ಬಗ್ಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಈ ಘಟನೆ ಬಗ್ಗೆ ನನಗೆ ಬಹಿರಂಗವಾಗಿ ಉತ್ತರ ನೀಡಿ. ( ಇನ್ನು ಇಂತಹ ಕೀಳು ಮಟ್ಟದ ಗಿಮಿಕ್, ಮಾಡಿಸುವ ಧುರುಳರೇ ಸರಿಯಾಗಿ ಕೇಳಿಸಿಕೊಳ್ಳಿ, ಇವತ್ತು ನನಗೆ ನಾಳೆ ಆ( ಸರಳಾ ಸಾತಪುತೆ ) ಹೆಣ್ಣುಮಗಳಿಗೆ ಈ ರೀತಿಯ ಹೆದರಿಸುವ ಎಲ್ಲಾತರದ ಪ್ರಯತ್ನದಲ್ಲಿ ಇರಬಹುದು ಆದರೆ ಇದಕ್ಕೆಲ್ಲ ಹೆದರುವದಿಲ್ಲ ಇಂತಹ ಪ್ರಯತ್ನಗಳು ನಡೆದರೆ, ಮುಂದೆ ರಾಜ್ಯ ಮಟ್ಟದಲ್ಲೂ ಚೆರ್ಚೆಯಾಗುವದರಲ್ಲಿ ಯಾವುದೇ ಸಂದೇಹವಿಲ್ಲಾ. ) ಇನ್ನು ಇಂತಹ ಸಣ್ಣತನವನ್ನು ಬಿಟ್ಟು ನಿಮ್ಮಲ್ಲಿ ಧೈರ್ಯ ವಿದ್ದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಧ್ಯಮ, ಹಾಗೂ ಬಹಿರಂಗವಾಗಿ ಚೆರ್ಚೆಗೆ ಬನ್ನಿ ಇದಕ್ಕೆ ನಮ್ಮ ಕೂಲಿ ನೇಕಾರರ ಬಳಗ ಸಿದ್ಧವಿದೆ. ( ಇದು ಬೆಳಗಾವಿ ದಕ್ಷಿಣ ಮತ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನ )

Posted by Ganapati Sontakki on Monday, May 11, 2020

ನಾನು ವಿಕಲಚೇತನವಾಗಿದ್ದೇನೆ. ಪೊಲೀಸರು ನನ್ನ ವಿಕಲಚೇತನತೆ ಕುರಿತು ನಮ್ಮ ಅಳಿಯನಿಗೆ ಫೋನ್ ಮಾಡಿ ವ್ಯಂಗ್ಯವಾಡಿದ್ದಾರೆ. ಇದರಿಂದ ನನಗೆ ತೀವ್ರ ನೋವಾಗಿದೆ. ಒಟ್ಟಾರೆ ಪೊಲೀಸರು ಶಾಸಕರ ಕುಮ್ಮಕ್ಕಿನಿಂದ ಈ ರೀತಿ ನಿಯಮಬಾಹಿರವಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಪೊಲೀಸ್‌ ಕಮಿಷನರ್‌‌ನವರು ಈ ಕುರಿತ ನನಗೆ ಹೆಚ್ಚಿನ ಮಾಹಿತಿಯಿಲ್ಲ. ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಮಾತ್ರ ಯಾವುದೇ ಕೇಸು ಇಲ್ಲದೇ ವಿಚಾರಣೆ ನೆಪದಲ್ಲಿ ಬಡಕಾರ್ಮಿಕರಿಗೆ ತೊಂದರೆ ನೀಡಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಹರಸಾಹಸಪಡುತ್ತಿರುವಾಗಲೇ, ಇಲ್ಲಿರುವ ನೇಕಾರ ಕಾರ್ಮಿಕರು ಸಹ ಸಂಕಷ್ಟ ಒಳಗಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನೇಕರರ ಗೋಳು ಕೇಳುವವರಿಲ್ಲ. ಸೀರೆ ನೆಯ್ಯೆದು ಯಲ್ಲರ ಮಾನಾ ಮುಚ್ಹೋ ನೇಕರ್ ಜೀವನವೇ ಅರ್ತ ವಿಲ್ಲದಂತಾಗಿದೆ…?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...