Homeಮುಖಪುಟಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ...

ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ಬಿಡುಗಡೆ

‘ಮಾತಿಂದ ಮಾವಿನ ಕಾಯಿ ಉದುರುವುದಿಲ್ಲ’. ಶ್ರಮಜೀವಿಗಳನ್ನು ಈ ಸಂಕಟದಿಂದ ಕಾಪಾಡಲು ಸರ್ಕಾರದ ಕಡೆಯಿಂದ ಬದ್ಧತೆಯಿಂದ ಕೂಡಿದ ದಿಟ್ಟ ಕ್ರಮ ಆಗತ್ಯ. ಹಾಗಾಗಿ ಅತಿ ಶ್ರೀಮಂತರಿಗೆ ಅವರ ಸಂಪತ್ತಿನ ಮೇಲೆ ಶೇ.2ರಷ್ಟು ತುರ್ತು ‘ಕೊರೋನಾ ತೆರಿಗೆ’ಯನ್ನು ವಿಧಿಸಬೇಕು,

- Advertisement -
- Advertisement -

ಲಾಕ್‌ಡೌನ್‌ನಿಂದ ಉಂಟಾಗಿರುವ ಭಾರೀ ನಷ್ಟವನ್ನು ಭರಿಸಲು, ಆರ್ಥಿಕತೆ ಚೇತರಿಸಿಕೊಳ್ಳಲು ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಬಿಡುಗಡೆ ಮಾಡಿದ ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ತಿಳಿಸಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನಹಳ್ಳಿ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಇಂದು ಲಾಕ್ ಡೌನ್ ಸಮಯದಲ್ಲಿ ಕರ್ನಾಟಕದ ಶ್ರಮಜೀವಿಗಳ ಮೇಲೆ ಉಂಟಾದ ಆರ್ಥಿಕ‌, ಸಾಮಾಜಿಕ, ರಾಜಕೀಯ ಪರಿಣಾಮಗಳನ್ನು ಬಿಚ್ಚಿಡುವ ಅಧ್ಯಯನ ವರದಿ ಬಿಡುಗಡೆಯಾಗಿದೆ. ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ಅಲೆಮಾರಿ, ಆದಿವಾಸಿ ಸಮುದಾಯವಿರುವಲ್ಲಿಯೇ ವರದಿ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.

ಹಕ್ಕಿ ಪಿಕ್ಕಿ ಸಮುದಾಯದ ಮುಖಂಡರಾದ ರೈಸ್‌ರವರು‌ ಮಾತನಾಡಿ “ನಮ್ಮ ಜೀವನ ಮೊದಲೇ ನಿಕೃಷ್ಟವಾಗಿತ್ತು. ಈಗ ಇರುವ ಲಾಕ್‌ಡೌನ್‌ನಿಂದಾಗಿ ಇನ್ನು ಹದಗೆಟ್ಟಿದೆ. ಸಮರ್ಪಕ ಮನೆಗಳಿಲ್ಲದ ನಮಗೆ ಬಹಳ ತೊಂದರೆಯಾಗಿದೆ. ಮಳೆ ಶುರುವಾಗಿ ನಮ್ಮ ಜನರೆಲ್ಲರೂ ನೆನಯುತ್ತಿರುವಾಗ ತಾಲ್ಲೂಕು ಆಡಳಿತದ ಬಳಿ ಕನಿಷ್ಠ ಟಾರ್ಪಲ್‌ ಕೊಡಿಸಿ ಎಂದು ಸಹಾಯ ಕೇಳಿದರೆ ಆರ್‌ಟಿಸಿ ಕೇಳುತ್ತಾರೆ. ಮನೆಯೇ ಇಲ್ಲದ ನಾವು ಆರ್‌ಟಿಸಿ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದ್ದಾರೆ. ಕಷ್ಟಗಳು ನಮಗೆ ಹೊಸದಲ್ಲ, ಆದರೆ ಈ ರೀತಿ ದುಡಿದು ಬದುಕಲು ಸಾಧ್ಯವಿಲ್ಲ ಎಂದಾದಮೇಲೆ ಬದುಕಿದ್ದು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.

#ಶ್ರಮಜೀವಿಗಳ_ಲಾಕ್ಡೌನ್#ಅಧ್ಯಯನವರದಿ_ಬಿಡುಗಡೆ#ಕರ್ನಾಟಕ_ಜನಶಕ್ತಿ#ಹಕ್ಕಿಪಿಕ್ಕಿ_ಅಲೆಮಾರಿ_ಸಮುದಾಯದವರಿಂದ#ಶ್ರೀರಂಗಪಟ್ಟಣ_ಮಂಡ್ಯ

Posted by Karnataka janashakthi ಕರ್ನಾಟಕ ಜನಶಕ್ತಿ on Wednesday, June 3, 2020

ಶೇ.59.9 ರಷ್ಟು ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಶೇ.79 ಮಂದು ಲಾಕ್‌ಡೌನ್‌ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳು ಸಿಗದೆ ಒದ್ದಾಡಿದ್ದಾರೆ. ಶೇ.92 ರಷ್ಟು ಮಂದಿಗೆ ಆರೋಗ್ಯ ತಪಾಸಣೆ ಮಾಡಿಸಲು ಸಾಧ್ಯವಾಗಿಲ್ಲ. ಶೇ.73 ರಷ್ಟು ರೈತರು ತಮ್ಮ ಬೆಳೆಯನ್ನು ನಷ್ಟಕ್ಕೆ ಮಾರಿದ್ದಾರೆ. ಶೇ.95 ಆದಿವಾಸಿಗಳಿಗೆ ಈ ಅವಧಿಯಲ್ಲಿ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಅಧ್ಯಯನ ವರದಿಯು ಎತ್ತಿತೋರಿಸಿದೆ.

‘ಮಾತಿಂದ ಮಾವಿನ ಕಾಯಿ ಉದುರುವುದಿಲ್ಲ’. ಶ್ರಮಜೀವಿಗಳನ್ನು ಈ ಸಂಕಟದಿಂದ ಕಾಪಾಡಲು ಸರ್ಕಾರದ ಕಡೆಯಿಂದ ಬದ್ಧತೆಯಿಂದ ಕೂಡಿದ ದಿಟ್ಟ ಕ್ರಮ ಆಗತ್ಯ. ಹಾಗಾಗಿ ಅತಿ ಶ್ರೀಮಂತರಿಗೆ ಅವರ ಸಂಪತ್ತಿನ ಮೇಲೆ ಶೇ.2ರಷ್ಟು ತುರ್ತು ‘ಕೊರೋನಾ ತೆರಿಗೆ’ಯನ್ನು ವಿಧಿಸಬೇಕು ಎಂದು ಅಧ್ಯಯನ ವರದಿಯ ಶಿಫಾರಸ್ಸುಗಳಲ್ಲಿ ತಿಳಿಸಲಾಗಿದೆ.

ಜೀವನಾವಶ್ಯಕ ಕನಿಷ್ಟ ಮೊತ್ತದ ನೇರ ಹಣ ವರ್ಗಾವಣೆಯನ್ನು ದೇಶದ ಎಲ್ಲ, ಶ್ರಮಜೀವಿಗಳಿಗೆ ಬಿಪಿಎಲ್ ಕಾರ್ಡುದಾರರ ಅಕೌಂಟುಗಳಿಗೆ ಮಾಡಬೇಕು ಆಗ ಮಾತ್ರವೇ ಅವರ ಚೇತರಿಸಿಕೊಳ್ಳಲು ಸಾಧ್ಯ ಎಂದು ಅಧ್ಯಯನ ವರದಿ ಒತ್ತಾಯಿಸಿದೆ.

ಸರ್ಕಾರಕ್ಕೆ ಇತರ ಪ್ರಮುಖ ಶಿಫಾರಸ್ಸುಗಳು

  1. ಪಡಿತರ ಹಂಚಿಕೆಯ ವ್ಯವಸ್ಥೆಯ ಮೂಲಕ ಕೇವಲ ಅಕ್ಕಿ/ಗೋಧಿ ಮಾತ್ರವಲ್ಲದೆ ಜೀವನಾವಶ್ಯಕ ಆಹಾರ ಸಾಮಗ್ರಿಗಳನ್ನು ವಿತರಿಸುವ ತುರ್ತು ಕ್ರಮವನ್ನು ಕೈಗೊಳ್ಳಬೇಕು.
  2. ರೇಷನ್ ಕಾರ್ಡ್‌ಗಳಿಲ್ಲದ ಜನರಿಗೂ ಮತ್ತು ವಲಸೆ ಕಾರ್ಮಿಕರಿಗೂ ಆಹಾರ ಧಾನ್ಯಗಳ ಕೊರತೆಯಾಗದಂತೆ ತಾತ್ಕಾಲಿಕ ಪಡಿತರ ಗುರುತಿನ ಚೀಟಿಗಳ ವ್ಯವಸ್ಥೆ ಆಗಬೇಕು.
  3. 2 ತಿಂಗಳು ದುಡಿಮೆಯಿಲ್ಲದೆ ಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳು, ಟ್ಯಾಕ್ಸಿ-ಕ್ಯಾಬ್ ಡ್ರೈವರ್‌ಗಳು, ಆಟೋ ಚಾಲಕರು ಮತ್ತು ಸಣ್ಣ ಪುಟ್ಟ ಉದ್ದಿಮೆಗಳ ಉದ್ಯೋಗಸ್ಥರಿಗೆ ಸಹಾಯಧನವನ್ನು ಈ ಕೂಡಲೇ ನೀಡಬೇಕು.
  4. ಬಡವರು ಮತ್ತು ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಅಗತ್ಯವಿರುವಷ್ಟು ಆರೋಗ್ಯ ಸಲಕರಣೆಗಳ ಪೂರೈಕೆಗೆ ಈಗಲೇ ಕ್ರಮ ಕೈಗೊಳ್ಳಬೇಕು
  5. ಲಾಕ್‌ಡೌನ್ ಹೊತ್ತಿಗೆ ತಾತ್ಕಾಲಿಕವಾಗಿ ಹೇರಿದ್ದ ಮದ್ಯನಿಷೇಧವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಮುಂದುವರಿಯಬಹುದಾಗಿದ್ದ ಸರ್ಕಾರ ಅದರ ಬದಲಿಗೆ, ಲಾಕ್‌ಡೌನ್ ನಡುವೆಯೇ, ಕೊರೊನಾ ಅಪಾಯವಿದ್ದಾಗಲೂ ಮದ್ಯ ಮಾರಾಟ ಆರಂಭಿಸಿತು. ಇದನ್ನು ನಿಲ್ಲಿಸಬೇಕು. ಸಂಪೂರ್ಣ ಮದ್ಯನಿಷೇಧದ ಕಡೆಗೆ ವೈಜ್ಞಾನಿಕವಾದಂತಹ ರೀತಿಯಲ್ಲಿ ಮುಂದಡಿಯಿಡಲು ಇರುವ ಅವಕಾಶಗಳ ಬಗ್ಗೆ ಹೋರಾಟಗಾರರು ಮತ್ತು ಪರಿಣತರೊಂದಿಗೆ ಚರ್ಚಿಸಿ, ಮುಂದುವರೆಯಬೇಕು.
  6. ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ವಿಶೇಷ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು: ನರೇಗಾ ಯೋಜನೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು.
  7. ‘ನಗರ ಉದ್ಯೋಗ ಖಾತರಿ ಯೋಜನೆ’ಯನ್ನು ಜಾರಿಗೆ ತರಬೇಕು.
  8. ವಲಸೆ ಕಾರ್ಮಿಕರ ಸರ್ವೇ ಮತ್ತು ದಾಖಲಾತಿ ನಡೆಯಬೇಕು.
  9. ಸಣ್ಣ-ಮಧ್ಯಮ ಉದ್ದಿಮೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.

ಅಧ್ಯಯನ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಚಂದ್ರಶೇಖರ್‌, ವರದರಾಜು, ಜ್ಯೋತಿ ಮುಂತಾದವರು ಭಾಗವಹಿಸಿದ್ದರು.


ಇದನ್ನೂ ಓದಿ: ಲಾಕ್‌ಡೌನ್‌ ಶ್ರಮಜೀವಿಗಳ ಬದುಕನ್ನು ದುಸ್ತರಗೊಳಿಸಿದೆ: ಬಡಜನರ ಸ್ಥಿತಿಗತಿ ಬಿಚ್ಚಿಟ್ಟ ಜನಶಕ್ತಿಯ ಅಧ್ಯಯನ ವರದಿ


Also Read: COVID-19: How Effective is the lockdown in India?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...