HomeUncategorizedಥೂತ್ತೇರಿ : ಈಟು ದಿನ ಎಲ್ಲಿ ಮಲಗಿದ್ದ್ಯೆವ್ವಾ?

ಥೂತ್ತೇರಿ : ಈಟು ದಿನ ಎಲ್ಲಿ ಮಲಗಿದ್ದ್ಯೆವ್ವಾ?

- Advertisement -
- Advertisement -

ಯಾಹೂ |

ನಮ್ಮ ಸಾಣೆಹಳ್ಳಿ ರಂಗಭೂಮಿ ದೇಶದಲ್ಲೇ ಹೆಸರುವಾಸಿಯಾದ ರಂಗ ಪ್ರದೇಶ. ಏಕೆಂದರೆ, ಅಲ್ಲಿನ ಜಗದ್ಗುರುವಾದ ಪಂಡಿತಾರಾಧ್ಯರು ತಮ್ಮ ವಂಶವನ್ನು ನಾಟಕದ ಚಟುವಟಿಕೆಗೆ ಮೀಸಲಾಗಿರಿಸಿದ್ದಾರೆ. ಇಂತಹ ಸಾಹಸವನ್ನು ಯಾರೂ ಮಾಡಿಲ್ಲ. ಹೆಗ್ಗೋಡನ್ನು ಬಿಟ್ಟರೆ ರಾಜ್ಯಾದ್ಯಂತ ರಂಗಸಂಚಾರ ಆರಂಭಿಸಿದ ಸಾಣೆಹಳ್ಳಿ ಮಠ, ಹೆಗ್ಗೋಡನ್ನು ಸೈಡಿಗೆ ಸರಿಸಿದ್ದು ಈಗ ಇತಿಹಾಸ. ಏಕೆಂದರೆ ಹೆಗ್ಗೋಡು ಬರುಬರುತ್ತಾ ಹೆಗ್ಗೋಳಾಗಿ ಕಾಟಾಚಾರಕ್ಕೆ ತಿರುಗಾಟ ಶುರುವಿಟ್ಟುಕೊಂಡಾಗ ನಮ್ಮ ಪ್ರೇಕ್ಷಕರು ಅತ್ತ ತಾತ್ಸಾರ ತೋರಿದ್ದು, ಇದಕ್ಕೆ ಉತ್ತರವಾಗಿ ಹೆಗ್ಗೋಡಿನ ಹವ್ಯಕರು ಆಪ್ತರಂಗಭೂಮಿ ಮಾಡಿಕೊಂಡು ತಾವೇ ಎಂಟತ್ತು ಜನ ಸುತ್ತ ಕುಳಿತು ಎಲೆಯಡಿಕೆ ಜಗಿದು ನಾಟಕ ಅಂತ ನೋಡಿದ್ದು ಈಗ ಇತಿಹಾಸ. ಇದಕ್ಕೆ ಉತ್ತರವೆಂಬಂತೆ ಸಾಣೆಹಳ್ಳಿಯ ರಂಗಭೂಮಿ, ಏಕಕಾಲಕ್ಕೆ ನಾಲ್ಕೈದು ಸಾವಿರ ಜನ ಒಮ್ಮೆಲೆ ನಾಟಕ ನೋಡುವಂತೆ ಮಾಡಿದ್ದು, ಆಡಿದ್ದೂ ಒಂದು ದಾಖಲೆ. ಇಂತಿರುವಾಗ ಈಚೆಗೆ ನಾಟಕೋತ್ಸವ ಮಾಡಿದ ಸಾಣೆಹಳ್ಳಿ ಶ್ರೀಗಳು ಉತ್ಸವಕ್ಕೆ ಕರೆಸಿದ ಗೆಸ್ಟುಗಳ ಲಿಸ್ಟು ನೋಡಿದಾಗ ಬಿಜೆಪಿ ಲೀಡರ್‌ಗಳ ಪರಿಷೆಯೇ ನೆರೆದಂತಿತ್ತಲ್ಲಾ! ಈ ಬಗ್ಗೆ ಪೂರ್ವಗ್ರಹಪೀಡಿತ ಪ್ರಶ್ನೆ ಕೇಳಿದಾಗ, ಸಾಣೆಹಳ್ಳಿ ಅಂಗಳದಿಂದ ಬಂದ ಉತ್ತರ ದಂಗುಬಡಿಸುವಂತಿತ್ತು. ಜಾತ್ಯತೀತ ಮನೋಭಾವ, ಭಾರತೀಯ ಸಹಿಷ್ಣು ಚಿಂತನೆಯ ಸಾರ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ತಾವೂ ಒಂದು ಗಿಡವಾಗಿ, ಮರವಾಗಿ, ಕಡೆಗೆ ಹುಲ್ಲಾಗುವ ಜ್ಞಾನ ಬೇಕಿರುವುದು ಈ ಬಿಜೆಪಿಯ ಜನಕ್ಕೆ. ಅದಕ್ಕೆ ಸಾಣೆಹಳ್ಳಿ ಗುರುಗಳು ಬಿಜೆಪಿಯ ಹೆಚ್ಚು ಜನರನ್ನ ಕರೆಸಿದ್ದಾರಂತಲ್ಲಾ, ಥೂತ್ತೇರಿ!

* * * *

ಸಾಣೆಹಳ್ಳಿಯ ರಂಗಭೂಮಿಗೆ ಉಪಮುಖ್ಯಮಂತ್ರಿ ಪರಮೇಶ್ವರರೂ ಬಂದಿದ್ದರು. ಅಪರೂಪದ ಜೀವಿಯಾದ ಪರಮೇಶ್ವರರ ಭೋಜನವನ್ನು ಜೀವರಕ್ಷಕರಾದ ವೈದ್ಯರು ಕಡ್ಡಿಯಲ್ಲಿ ಕೆದಕಿ, ಪರೀಕ್ಷಿಸಿ ಪರಮೇಶ್ವರ್‌ಗೆ ತಿನ್ನಿಸಬಹುದೆಂದು ಪರವಾನಗಿ ಕೊಟ್ಟದ್ದು ಜಗದ್ಗುರುಗಳ ಕೋಪಾಗ್ನಿಗೆ ಕಾರಣವಾಯ್ತಂತಲ್ಲಾ. ಸಾವಿರಾರು ಜನ ಪ್ರಸಾದ ಸ್ವೀಕರಿಸುವ ಜಾಗಕ್ಕೆ ಬಂದು ಅತಿಥಿಯೊಬ್ಬನ ಭೋಜನಕ್ಕೆ ಕಡ್ಡಿ ಎಟ್ಟಿ ಪರಿಶೀಲಿಸುವುದು ಎಷ್ಟು ಸರಿ. ಸಾವಿರಾರು ಜನರ ಪ್ರಾಣ ಮುಖ್ಯವೋ ಅಥವಾ ಒಬ್ಬನ ಪ್ರಾಣ ಮುಖ್ಯವೋ. ಒಂದು ಜೀವ ಹೋದರೆ ನಷ್ಟವೇನು ಎಂದರಂತಲ್ಲಾ. ಶ್ರೀಗಳು ತಮ್ಮ ನಿಷ್ಠುರ ಮಾತಿನ ಸಾಣೆಯನ್ನು ಹರಿತಗೊಳಿಸಿಕೊಳ್ಳಲು ಆಡಿದ ಮಾತು, ನಾಡಿನ ಪರಮ ಶಿಷ್ಯರನ್ನು ಕೆಣಕಿದೆಯಂತಲ್ಲಾ. ಪರಮೇಶ್ವರರ ಜೀವದ ಬಗ್ಗೆ ಹೀಗೆ ಹಗುರವಾಗಿ ಮಾತಾಡಿರುವ ಶ್ರೀಗಳು ಎಡೂರಪ್ಪನ ಹೀಗೆ ಮಾತಾಡಬಲ್ಲರೆ, ಇಲ್ಲ ಸಿದ್ದರಾಮಯ್ಯನ ಬಗ್ಗೆ ಹೀಗೆ ಹೇಳಬಲ್ಲರೆ. ಅಗ್ಗವಾಗಿ ಸಿಕ್ಕಿದ ನಮ್ಮ ಪರಮಣ್ಣನಿಗೆ ಹೀಗಂದಿರುವುದು ಸರಿಯಲ್ಲ ಎಂದು ಸಣ್ಣದಾಗಿ ಗೊಣಗಿದರಲ್ಲಾ. ನಮ್ಮ ಪರಮಣ್ಣನ ಜೀವ ಸದ್ಯಕ್ಕೆ ಅಮೂಲ್ಯವಾದುದೇ ಸರಿ. ಇಷ್ಟು ವರ್ಷಗಳ ನಂತರ ಮುಖ್ಯಮಂತ್ರಿ ಪದವಿ ಸನಿಹಕ್ಕೆ ತೆವಳಿದ್ದಾರೆ. ಅದೂ ಶಿಕ್ಷಣ ಸಂಸ್ಥೆ ಮಾಡಿಕೊಂಡು ಶಾಮನೂರರ ತಮ್ಮನಂತಾದ ಕಾರಣಕ್ಕೆ. ದೇವೇಗೌಡರ ಮಗ ಎಂಬ ಕಾರಣಕ್ಕೆ ಅನಾಯಾಸವಾಗಿ ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಣ್ಣನವರಿಗೆ ಹೋಲಿಸಿದರೆ ಪರಮಣ್ಣನ ಜೀವ ಬಹು ಬೆಲೆಯದ್ದು ಎಂದು ಡಿಎಸ್‌ಎಸ್ ವೈರಿ ವೆಂಕಟಸ್ವಾಮಿಯ ವ್ಯಾಖ್ಯಾನವಾಗಿದೆಯಲ್ಲಾ, ಥೂತ್ತೇರಿ!

* * * *

ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲದ ಸಮಸ್ಯೆಯನ್ನು ಚಿಟಕಿ ಹೊಡೆದಂತೆ ಬಗೆಹರಿಸುತ್ತೇನೆಂದು ಅಧಿಕಾರಕ್ಕೆ ಬಂದ ಕುಮಾರಣ್ಣನನ್ನು ಬೆಳಗಾವಿಯ ಕಬ್ಬಿನ ಬೆಳೆ ರೈತರು ಗಾಣಕ್ಕೆ ಹಾಕಿ ಹರೆಯತೊಡಗಿದ್ದಾರಂತಲ್ಲಾ. ಇದಕ್ಕೆ ಕಾರಣ ಕುಮಾರಣ್ಣನ ನುಡಿಮುತ್ತುಗಳೇ ಹೊರತು ರೈತರಲ್ಲಾ ಎಂಬುದು ರೈತ ಸಂಘದ ದೂರಾಗಿದೆಯಲ್ಲಾ. ಬೆಳಗಾವಿ ಕಡೆ ರೈತರು ಕಬ್ಬು ಬೆಳೆಗಾರರು ಕಬ್ಬು ಬೆಳೆಯಷ್ಟು ರಗಳೆ ಬೆಳೆಯಲ್ಲ. ನೆಟ್ಟು, ನೀರು ಗೊಬ್ಬರ ಕೊಟ್ಟರಾಯ್ತು ಕಟಾವಿಗೆ ಬರುವವರೆಗೆ ಬೆಳಗಾವಿಯಲ್ಲಿ ಅಡ್ಡಾಡಬಹುದು ಅಥವಾ ಆರಾಮವಾಗಿರಬಹುದು. ಇದನ್ನು ಗ್ರಹಿಸಿಯೋ ಏನೋ ಕುಮಾರಣ್ಣ ರೈತ ಮಹಿಳೆಯೊಬ್ಬರಿಗೆ `ಯಾವುದೋ ಕಂಪನಿಯಿಂದ ಬರಬೇಕಾದ ಸಾಲಕ್ಕೆ ನನ್ನನ್ನು ದೂರುವ ನೀನು ಇಷ್ಟು ದಿನ ಎಲ್ಲಿ ಮಲಗಿದ್ದೆವ್ವ’ ಎಂದು ಬುಟ್ಟಿದ್ದಾರಲ್ಲಾ. ಈ ಸಮಯದಲ್ಲಿ ಲಂಕೇಶರ ಹಾಡಾದ ‘ಎಲ್ಲಿದ್ದೆ ಇಲ್ಲಿತಂಕ ಎಲ್ಲಿಂದ ಬಂದ್ಯವ್ವ’ ಎಂಬ ಹಾಡು ನೆನಪಾಗುವುದರ ಜೊತೆಗೆ ಮುಖ್ಯಮಂತ್ರಿಯಾದವನು ಮಾತನ್ನು ಬಂಗಾರದಂತೆ ತೂಗಿ ಆಡಬೇಕು, ಎಲ್ಲಿ ಮಲಗಿದ್ದೆ ಎಂದರೆ ಏನರ್ಥ, ನಿನ್ನಂತೆ ಎಲ್ಲೆಲ್ಲೋ ಮಲಗಿ ಉಪಸಂಸಾರ ಮಾಡಿಕೊಂಡಿಲ್ಲ, ನನ್ನ ಜಮೀನಿನಲ್ಲಿ ಕಬ್ಬು ಬೆಳೆದು, ಅ ಬೆಳೆಯೊಳಗೆ ಮಲಗಿದ್ದೆ, ಇಂತಹ ಮಾತನಾಡುವ ನೀನು ಮುಖ್ಯಮಂತ್ರಿಯಾಗಲು ನಾಲಾಯಕ್ ಎಂದು ಬೆಳಗಾವಿಯ ಭೂದೇವಿ ಅಬ್ಬರಿಸಿದ್ದಾಳಲ್ಲ. ಬೆಳಗಾವಿ ಅಧಿವೇಶನದ ವೇಳೆ ರೈತರನ್ನು ಎತ್ತಿಕಟ್ಟಿ ಸಿದ್ದುಗೆ ಸಮಸ್ಯೆಯೊಡ್ಡಿದ್ದ ಕುಮಾರಣ್ಣನ ಕತೆಯೀಗ ಮಾಡಿದ್ದುಣ್ಣೋ ಮಾರಾಯನಂತಾಯ್ತಲ್ಲಾ, ಥೂತ್ತೇರಿ!

* * * *

ಮೀಟು ಪ್ರಖರಣಗಳ ಕಾವು ಕಡಿಮೆಯಗುತ್ತಿರುವ ಈ ಹೊತ್ತಿನಲ್ಲಿ, ಡಾಬಸ್‌ಪೇಟೆಯ ಕನ್ನಡದ ಪ್ರಖರ ವಿಮರ್ಶಕರು ಎಚ್ಚೆತ್ತುಕೊಂಡು ಮೀಟೂ ಕಡೆ ಬ್ಯಾಟರಿ ಹಚ್ಚಿ ನೋಡ ತೊಡಗಿದ್ದಾರಂತಲ್ಲಾ. ವಯೋಮಾನದ ಕಾರಣಕ್ಕೆ ಮೀಟು ಪ್ರಕರಣ ಮಬ್ಬಾಗಿ ಕಂಡದ್ದರಿಂದಲೋ ಏನೋ, ಸಿಟ್ಟಾಗಿರುವ ವಿಮರ್ಶಕರು ಮೀಟುಗೆ ತುತ್ತಾದ ನಟಿ ಇಷ್ಟು ದಿನ ಎಲ್ಲಿದ್ದಳು? ಆ ಸಮಯದಲ್ಲೇಕೆ ಸುಮ್ಮನಿದ್ದಳು? ಕೇಳಿದಕೂಡಲೆ ಅಂಗಾತ ಮಲಗಲು ಆಕೆಯೇನು ಹಳ್ಳಿಯವಳೆ? ಪ್ರತಿಷ್ಠಿತ ಶಿಕ್ಷಿತ ಸಮಾಜದವಳಾದ ಆಕೆ ಸುಮ್ಮನಿದ್ದುದ್ದೇಕೆ? ಅಮೆರಿಕಾದಿಂದ ಆಮದಾದ ಆ ಮೀಟುವನ್ನು ಇಲ್ಲಿ ಒಪ್ಪಲು ಸಾಧ್ಯವೆ? ಇತ್ಯಾದಿ ಪ್ರಶ್ನಿಸಿ ನಟಿಯ ನಡವಳಿಕೆ ಮೇಲೆ ಹರಿಹಾಯ್ದಿದ್ದಾರಂತಲ್ಲಾ. ಹರಿತವಾದ ಆಯುಧ ಹೊಂದಿರುವ ಸದರಿ ವಿಮರ್ಶಕರು. ಯಾರ ಮೇಲಾದರೂ ಹರಿಹಾಯಲೇಬೇಕಾಗುತ್ತದೆ. ವಿಮರ್ಶಕರ ಈ ಮಾನದಂಡವಿಡಿದು ಮಾತನಾಡುವುದಾದರೆ ನಮ್ಮ ರಾಮಚಂದ್ರಾಪುರ ಮಠದ ಕೆಂದು ಹೋರಿ ಇನ್ನು ಕಡಸುಗಳ ಮೇಲೆ ಹಾರುತ್ತ ಹಾಯಾಗಿರುತ್ತಿತ್ತು. ವಿಮರ್ಶಕರೇ ಹೇಳುವಂತೆ ನಮ್ಮ ಸಂಸ್ಕೃತಿಯೇ ನಮ್ಮ ಕಾಮವನ್ನು ನಿಯಂತ್ರಿಸುವುದಾಗಿದ್ದರೆ, ರಾಘವ ರೂಢಿಸಿಕೊಂಡ ಸಂಸ್ಕೃತಿ ಯಾವುದು. ಹೆಂಡತಿಯಿಂದ ಸುಕ್ಷೇಮ ದೂರ ಕಾಪಾಡಿಕೊಂಡು ಬದುಕುವ ಸಾಹಿತಿಗಳ ಸಮಸ್ಯೆ ಸಾರ್ವತ್ರಿಕವಾಗಲು ಸಾಧ್ಯವಿಲ್ಲವಂತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...