Homeಕರ್ನಾಟಕಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ

ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ

"ಕಾರ್ಯಕ್ರಮದಲ್ಲಿ ನಾವು ಯಾವುದೆ ತಪ್ಪು ಮಾತುಗಳನ್ನು ಆಡಿಲ್ಲ. ಅದರಾಚೆಗೂ ಕೆಲವರು ಹಾಕುತ್ತಿರುವ ಅಶ್ಲೀಲ ಕಮೆಂಟುಗಳು ನಮಗೆ ತೀರಾ ಬೇಜಾರು ಮಾಡಿದೆ. ನಾವು ಏನೂ ತಪ್ಪಿ ಮಾತನಾಡಿಲ್ಲ ಆದರೂ ನಮ್ಮ ಮಾತಿನಿಂದ ನಿಮಗೆ ಬೇಜಾರು ಆಗಿದ್ದರೆ ಕ್ಷಮಿಸಿ"

- Advertisement -
- Advertisement -

ಖಾಸಗಿ ಚಾನೆಲ್ ಒಂದರ ಹಾಸ್ಯ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದ್ದಕ್ಕೆ ತುಳು ರಂಗಭೂಮಿ ಹಾಗೂ ಸಿನೆಮಾದ ಹಿರಿಯ ಕಲಾವಿದ ಅರವಿಂದ್ ಬೋಳಾರ್ ಹಾಗೂ ಚಾನೆಲ್ ವಿರುದ್ದ ಮಂಗಳೂರಿನ ಕಾವೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕರಾವಳಿಯ ಸ್ಥಳೀಯ ಚಾನೆಲ್ ಡೈಜಿವರ್ಲ್ಡ್ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ “ಪ್ರೈವೆಟ್ ಚಾಲೆಂಜ್” ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ಪುರೋಹಿತರು ಹಾಗೂ ಜ್ಯೋತಿಷಗಳ ಧಾರ್ಮಿಕ ಭಾವನೆಗೆ ದಕ್ಕೆ ತರಲಾಗಿದೆ ಎಂದು ಚಾನೆಲ್ ನಿರೂಪಕ ವಾಲ್ಟರ್‌ ನಂದಳಿಕೆ ಮತ್ತು ಕಲಾವಿದ ಅರವಿಂದ ಬೋಳಾರ್ ವಿರುದ್ದ ಶಿವರಾಜ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.

ಆಗಸ್ಟ್ 9 ರಂದು ಪ್ರಸಾರವಾದ ಈ ಹಾಸ್ಯ ಕಾರ್ಯಕ್ರಮದಲ್ಲಿ ಕಲಾವಿದ ಅರವಿಂದ್ ಬೋಳಾರ್‌ ”ಬರೆದಿಪಿ ಜ್ಯೋತಿಷಿ”(ಬರೆದಿಡುವ ಜ್ಯೋತಿಷಿ) ಎಂಬ ಪಾತ್ರದಲ್ಲಿ ನಟಿಸಿ, ಜ್ಯೋತಿಷ್ಯವನ್ನು ವಿಡಂಭನೆಗೆ ಒಳಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಜ್ಯೋತಿಷ್ಯರು ಸ್ತೀ ವಶೀಕರಣ, ಭವಿಷ್ಯ ನುಡಿಯುವುದರ ಬಗ್ಗೆ ಹಾಸ್ಯವಾಗಿ ಚಾಟಿ ಬೀಸಲಾಗಿತ್ತು. ಇದಕ್ಕೆ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂಬ ತಕರಾರು ಎದ್ದಿದ್ದು, ಇದೀಗ ಕೇಸು ದಾಖಲಾಗಿದೆ.

ಘಟನೆಯ ಬಗ್ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು, ಕಲಾವಿದನ ಮೇಲೆ ಕೇಸು ದಾಖಲಾಗಿರುವುದನ್ನು ವಿರೋಧಿಸಿದ್ದಾರೆ. ಈ ಕೇಸು ಕೇವಲ ಇವತ್ತಿನ ಆಕ್ರೋಶ ಮಾತ್ರವಲ್ಲ. ಅರವಿಂದ ಬೋಳಾರ್ ಈ ಹಿಂದೆ ರಾಜಕಾರಣಿಯೊಬ್ಬರನ್ನು ವಿಡಂಭನೆ ಮಾಡಿರುವುದರ ಅಸಮಾಧಾನವನ್ನು ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಕಾರ್ಯಕ್ರಮದಲ್ಲಿ ಯಾವುದೇ ಅವಹೇಳಕಾರಿ ಅಂಶಗಳಿಲ್ಲ. ಕಾರ್ಯಕ್ರಮದಲ್ಲಿ ಕಪಟ ಜ್ಯೋತಿಷಿಗಳು, ವಾಮಾಚಾರಿಗಳು ಮತ್ತು ಮಂತ್ರವಾದಿಗಳಿಂದ ಜನರು ಅತ್ಯಂತ ಹೆಚ್ಚು ಕಷ್ಟನಷ್ಟಗಳಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ. ಅಲ್ಲಿನ ವಿಡಂಭನೆ ಆರೋಗ್ಯಕರವಾಗಿದೆ. ಆದರೆ ಅದನ್ನೆ ಇಟ್ಟುಕೊಂಡು ತುಳುನಾಡಿನ ಖ್ಯಾತ ನಟನೊಬ್ಬನನ್ನು ಹಣಿಯಲು ಪ್ರಯತ್ನಿಸುವುದು ಖಂಡನಾರ್ಹ. ಇದು ಕೇವಲ ಮೇಲ್ನೋಟಕ್ಕೆ ಕಂಡ ರೀತಿ ಕೇವಲ ಜ್ಯೋತಿಷಿಗಳ ವಿಷಯ ಮಾತ್ರವಲ್ಲ, ಇದರ ಹಿಂದೆ ಸಮಾಜದ ಅಂಕುಡೊಂಕುಗಳನ್ನು ಎತ್ತಿತೋರಿಸುವ ಕಲಾವಿದನ ಬಾಯಿಮುಚ್ಚಿಸುವ ಪ್ರಯತ್ನ ಕೂಡಾ ಇದೆ. ನಾವು ಅವರ ಜೊತೆ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.

ರಂಗಕರ್ಮಿ ಐ. ಕೆ. ಬೊಳುವಾರು “ಅರವಿಂದ ಬೋಳಾರ್ ಅವರ ಹಾಸ್ಯ ವಿಡಂಬನೆಗೆ ಒಳಗಾಗಿರುವ ಎಲ್ಲ ಸಾಮಾಜಿಕ ಅಪಾಯಕಾರೀ ಶಕ್ತಿಗಳು ಒಂದಾಗುವ ಅಪಾಯ ಬರಬಹುದು. ಕಲಾವಿದ ಅರವಿಂದ ಬೋಳಾರ್ ಸರ್, ವಾಲ್ಟರ್ ನಂದಳಿಕೆಯವರ ಜೊತೆ ನಾನೂ ಇದ್ದೇನೆ” ಎಂದು ಹೇಳಿದ್ದಾರೆ.

 

ಸಿನೆಮಾ ಪತ್ರಕರ್ತ ಶಶಿಕರ ಪಾತೂರು “ಜನರ ನೋವು, ಸಂಕಟಗಳನ್ನು ಬಳಸಿ ದರ್ಬಾರ್ ನಡೆಸುವ ಮಂತ್ರವಾದಿ, ಜ್ಯೋತಿಷಿಗಳು, ದೆವ್ವ ಬಿಡಿಸುವವರ ಮನೆಹಾಳುತನದ ಮುಂದೆ ತನ್ನ ಹಾಸ್ಯ, ನಟನೆಯ ಮೂಲಕ ಜನರ ನೋವು ಮರೆಸಲು ಯತ್ನಿಸುವ ಅರವಿಂದ ಬೋಳಾರ್ ತುಳುನಾಡಿನ‌ ಆಸ್ತಿ. ನಾನು ಬೋಳಾರ್ ಜೊತೆಗೆ ಇದ್ದೇನೆ” ಎಂದು ಹೇಳಿದ್ದಾರೆ.

ತುಳುವರನ್ನು ನೋವು ನುಂಗಿ ನಗುವಂತೆ ಮಾಡಿದವರು ಅರವಿಂದ ಬೋಳಾರ್. ತುಳುವರ ನೋವುಗಳನ್ನೇ ಎನ್ ಕ್ಯಾಶ್ ಮಾಡಿ ಖಜಾನೆ ತುಂಬಿಸಿಕೊಂಡವರು…

Posted by ಶಶಿಕರ ಪಾತೂರು on Tuesday, August 11, 2020

ಯುವ ಸಂಶೋಧಕ ಬರಹಗಾರ ಚರಣ್ ಐವರ್ನಾಡ್, “ಕರಾವಳಿಯ ಸಂಸ್ಕೃತಿಯನ್ನು ಮಾರುಕಟ್ಟೆ ಮಾಡಿಕೊಂಡು ಕೋಟಿ ಕೋಟಿ ಕೊಳ್ಳೆ ಹೊಡೆದು ಚೀಲ ತುಂಬಿಸಿಕೊಂಡು ಮಹಡಿ ಮೇಲೆ ಮಹಡಿ ಕಟ್ಟುವ ಅಷ್ಟ ಮಂಗಳದವರು ತುಳುನಾಡಿನ ಸಂಸ್ಕೃತಿಗೆ ಮಾರಕ. ನಾನು ಅರವಿಂದ್ ಬೋಳಾರ್ ಜೊತೆ ಇದ್ದೇನೆ” ಎಂದು ವಿಸ್ತಾರವಾದ ಬರಹವನ್ನು ಬರೆದಿದ್ದಾರೆ.

#am_with_aravind_bolarAravind Bolarತುಳು ಚಿತ್ರರಂಗದ ಮತ್ತು ರಂಗಭೂಮಿಯ ಹಾಸ್ಯ ನಟ ಅರವಿಂದ ಬೋಳಾರ್ ಮೇಲೆ ಧಾರ್ಮಿಕ ಭಾವನೆಗೆ ದಕ್ಕೆ…

Posted by Charan Aivarnad on Monday, August 10, 2020

ಉದ್ಯಮಿ ಹರೀಶ್ ಪೂಜಾರಿ, “ನನ್ನ ಅತ್ಯಂತ ಇಷ್ಟದ ರಂಗನಟ, ಸಿನಿಮಾ ನಟ ಅರವಿಂದ ಬೋಳಾರ್ ಮೇಲೆ ’ಜ್ಯೋತಿಷಿ’ ಗಳು ಪ್ರಕರಣ ದಾಖಲಿಸಿದ್ದಾರೆಂಬ ಸುದ್ಧಿ ಹರಿದಾಡುತ್ತಿದೆ ಇದು ನಿಜವೇ ಆಗಿದ್ದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಬೋಳಾರ್ ಜೊತೆ ನಾನಿದ್ದೇನೆ” ಎಂದು ಹೇಳಿದ್ದಾರೆ.

ನನ್ನ ಅತ್ಯಂತ ಇಷ್ಟದ ರಂಗನಟ , ಸಿನಿಮಾ ನಟ ಅರವಿಂದ ಬೋಳಾರ್ ಮೇಲೆ "ಜ್ಯೋತಿಷಿ" ಗಳು ಪ್ರಕರಣ ದಾಖಲಿಸಿದ್ದಾರೆಂಬ ಸುದ್ಧಿ ಹರಿದಾಡುತ್ತಿದೆ ಇದು ನಿಜವೇ ಆಗಿದ್ದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆ ಬೋಳಾರ್ ಜೊತೆ ನಾನಿದ್ದೇನೆ ನೀವು..

Posted by Harisha D Poojary on Tuesday, August 11, 2020

ಇಂಜಿನಿಯರ್ ಆಗಿರುವ ಆಸ್ಕರ್ ಲೂಯಿಸ್ “ಒಬ್ಬ ವಿಚಾರವಾದಿಯಾಗಿ, ಪ್ರಜ್ಞಾವಂತನಾಗಿ ಈ ಕಾರ್ಯಕ್ರಮವನ್ನು ನೋಡಿದವರಿಗೆ, ಇದರಲ್ಲಿ ಜ್ಯೋತಿಷ್ಯದ ಸುತ್ತ ಹೆಣೆದುಕೊಂಡಿರುವ ಮೌಢ್ಯವನ್ನು ಇನ್ನಷ್ಟು ತೀಕ್ಷ್ಣವಾಗಿ, ಆಳವಾಗಿ ವಿಮರ್ಶೆಗೆ ಒಳಪಡಿಸಬಹುದಿತ್ತು. ಕೊರೋನಾದಂತಹ ಕಷ್ಟಕಾಲದಲ್ಲಿ ಬಿಲಸೇರಿ ಕೂತಿರುವ ಕಪಟಿಗಳನ್ನು ಬಾಲ ಹಿಡಿದು ಹೊರ ಎಳೆಯಬಹುದಿತ್ತು. ಆದರೆ ಕಾರ್ಯಕ್ರಮದ ಈ ಕಂತು ಅಷ್ಟೊಂದು ಆಳಕ್ಕೆ ಹೋಗದೇ, ಹಾಸ್ಯ ಕೇಂದ್ರಿತವಾಗಿ ಜ್ಯೋತಿಷ್ಯದ ಮೌಢ್ಯತೆಯನ್ನು ಮೇಲಿಂದ ಮೇಲೆ ವಿಮರ್ಶಿಸುತ್ತಾ ಹೋಗಿದೆ… ಧಾರ್ಮಿಕ ವಿಚಾರಗಳಂತೂ ಇಲ್ಲಿ ಪ್ರಸ್ತಾವನೆ ಆಗಿಯೇ ಇಲ್ಲ.. ಇಷ್ಟಕ್ಕೇ ಇಂತಹ ಅರಚಾಟ.. ಇನ್ನು ಜ್ಯೋತಿಷ್ಯದ ಸುತ್ತ ಅಡಕವಾಗಿರುವ ಪೂರ್ತಿ ಕಪಟತನವನ್ನು ಬಯಲು ಮಾಡಿದ್ದರೆ ಇನ್ನೇನಾಗುತ್ತಿತ್ತೋ.” ಎಂದು ಕೇಳಿದ್ದಾರೆ.

ಈ ನಡುವೆ ಚಾನೆಲ್ ನಿರೂಪಕ ವಾಲ್ಟರ್ ನಂದಳಿಕೆ ಹಾಗೂ ಕಲಾವಿದ ಅರವಿಂದ ಬೋಳಾರ್ ಚಾನೆಲ್‌ನಲ್ಲಿ ಬಂದು, “ಕಾರ್ಯಕ್ರಮದಲ್ಲಿ ನಾವು ಯಾವುದೆ ತಪ್ಪು ಮಾತುಗಳನ್ನು ಆಡಿಲ್ಲ. ಅದರಾಚೆಗೂ ಕೆಲವರು ಹಾಕುತ್ತಿರುವ ಅಶ್ಲೀಲ ಕಮೆಂಟುಗಳು ನಮಗೆ ತೀರಾ ಬೇಜಾರು ಮಾಡಿದೆ. ನಾವು ಏನೂ ತಪ್ಪಿ ಮಾತನಾಡಿಲ್ಲ ಆದರೂ ನಮ್ಮ ಮಾತಿನಿಂದ ನಿಮಗೆ ಬೇಜಾರು ಆಗಿದ್ದರೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ.


ಓದಿ: ಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...