Homeಮುಖಪುಟಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

ಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

- Advertisement -
- Advertisement -

2020 ಇನ್ನೇನು ಮುಗಿಯಲಿದೆ. ಜಗತ್ತಿಗೆ ಇದು ಐತಿಹಾಸಿಕ ಸಂಗತಿಯಾಗಿ ಉಳಿದುಕೊಳ್ಳಲಿದೆ. ಅನ್ಯಾಯಯುತ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗಳು ನಮ್ಮ ರಾಜಕೀಯ ಕಲ್ಪನೆಯನ್ನು ಪ್ರಭಾವಿಸುತ್ತಿರುವ ಈ ಸಂದರ್ಭದಲ್ಲಿ ನಾವು ಭಾರತೀಯರು ಪೂರ್ತಿ ಒಂದು ಸುತ್ತು ಹಾಕಿ ಅಲ್ಲಿಗೇ ಬಂದು ನಿಂತಿದ್ದೇವೆ. ಈ ಹೋರಾಟಗಳಲ್ಲಿ ನಾವು ಏಕಾಂಗಿಯಲ್ಲ. ವಿವಿಧ ಹೋರಾಟಗಳಲ್ಲಿ ನಿರತವಾಗಿರುವ ಜಾಗತಿಕ ಸಮುದಾಯದ ಭಾಗವಾಗಿದ್ದೇವೆ ನಾವು.

ಅರಬ್ ಹೋರಾಟದಿಂದ (ಅರಬ್ ವಸಂತದಿಂದ) 2019ರವರೆಗೆ ಜಗತ್ತು ಹೊಸ ತಲೆಮಾರಿನ ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿತ್ತು. ಬದಲಾವಣೆಗೆ ಆಗ್ರಹಿಸುವ ಮತ್ತು ಪ್ರಭುತ್ವಕ್ಕೆ ಪ್ರತಿಕ್ರಿಯಿಸುವ ಈ ಹೋರಾಟಗಳು ಸ್ವಯಂಪ್ರೇರಿತವಾಗಿದ್ದು, ನಾಯಕರಹಿತ ಆದರೆ ಸಾಮೂಹಿಕ ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುವುದು ಇವುಗಳ ಸಾಮಾನ್ಯ ಲಕ್ಷಣವಾಗಿದೆ. ಸಂಪತ್ತಿನ ಅಸಮಾನತೆ, ಕಲ್ಯಾಣ ಕಾರ್ಯಕ್ರಮಗಳ ಹಿಂತೆಗೆತ, ಪ್ರಭುತ್ವದ ಭ್ರಷ್ಟಾಚಾರ, ಪ್ರಜಾತಾಂತ್ರಿಕ ಹೊಣೆಗಾರಿಕೆಯ ಕೊರತೆ ಈ ಹೋರಾಟ-ಪ್ರತಿಭಟನೆಗಳ ಕೇಂದ್ರ ವಿಷಯಗಳಾಗಿದ್ದು, ನಡೆದದ್ದೇ ಮಾರ್ಗ ಎಂಬುದಕ್ಕೆ ತಡೆಯಾಗಿದೆ. ಸಾಕಷ್ಟು ವೈವಿಧ್ಯಮಯವಾದ ಒಂದು ಹೊಸ ಬಗೆಯ ರಾಜಕೀಯ ಪ್ರಜ್ಞೆಯು ಜಾಗೃತಗೊಳ್ಳುತ್ತಿರುವುದನ್ನು ಈ ಪ್ರತಿಭಟನೆಗಳು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಕೆಲವು ಪ್ರತಿಗಾಮಿಯಾಗಿದ್ದರೆ, ಹೆಚ್ಚು ಪ್ರಗತಿಶೀಲವಾಗಿದ್ದವು. ಕೆಲವು ಪ್ರತಿಭಟನೆಗಳು ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿದ್ದರೆ, ಇನ್ನು ಕೆಲವು ದೇಶದ ಸಂವಿಧಾನವನ್ನು ಕಿತ್ತು ಹಾಕುವುದಕ್ಕಾಗಿ-ಬದಲಿಸುವುದಕ್ಕಾಗಿ ನಡೆದವು. ಇನ್ನು ಕೆಲವು, ದೇಶ ಸಾಗುತ್ತಿರುವ ದಿಕ್ಕಿನ ವಿರುದ್ಧದ ನಿರಾಶೆಯ ಅಭಿವ್ಯಕ್ತಿಯಾಗಿದ್ದವು.

2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಈ ಹೋರಾಟಗಳು ಹೊಸ ಸವಾಲುಗಳನ್ನು ಎದುರಿಸಿದವು. ಸಾರ್ವಜನಿಕ ಸಭೆಗಳ ನಿಷೇಧವು, ಪ್ರತಿಭಟನೆಗಳನ್ನು ತಡೆಯಲು ಪ್ರಭುತ್ವಕ್ಕೆ ಪರವಾನಗಿ ನೀಡಿದಂತಾಗಿತ್ತು. ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ, ಜಗತ್ತಿನಾದ್ಯಂತ ಚಳವಳಿಗಳು ಆನ್‌ಲೈನ್ ಸಭೆ, ಟ್ವಿಟರ್ ಕ್ಯಾಂಪೇನ್ ಮತ್ತು ವೆಬಿನಾರ್‌ಗಳಂತಹ ಆನ್‌ಲೈನ್ ಸ್ವರೂಪಕ್ಕೆ ಬದಲಿಸಿಕೊಂಡು ಮುಂದುವರೆದವು.

ನಿಕರಾಗುವಾ ಮತ್ತು ಲೆಬನಾನ್‌ನಂತಹ ದೇಶಗಳಲ್ಲಿ, ಕಲ್ಯಾಣ ಕಾರ್ಯಕ್ರಮಗಳ ಕೊರತೆಯು ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿತು. ನೈಜೀರಿಯಾ, ಅಮೆರಿಕ ಮತ್ತು ಕೊಲಂಬಿಯಾದಂತಹ ದೇಶಗಳಲ್ಲಿ, ಸಾಂಕ್ರಾಮಿಕದ ಸಂದರ್ಭದಲ್ಲೂ ಅನಿಯಂತ್ರಿತ ಪೊಲೀಸ್ ಬಲಪ್ರಯೋಗ ಪ್ರತಿಭಟನೆಗಳ ಕೇಂದ್ರ ವಸ್ತುವಾಗಿತ್ತು. ಸುಡಾನ್, ಚಿಲಿ ಮತ್ತು ಅಲ್ಜಿರಿಯಾದಂತಹ ದೇಶಗಳಲ್ಲಿ ಸಂವಿಧಾನ ಬದಲಾವಣೆಯ ವಿಷಯವಾಗಿ ಪ್ರತಿಭಟನೆಗಳು ನಡೆದವು. ಬೊಲಿವಿಯಾ, ಕಿರ್ಗಿಸ್ತಾನ್ ಮತ್ತು ಪೆರುನಂತಹ ದೇಶಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತಿರುಚುವುದರ ವಿರುದ್ಧ ಪ್ರತಿಭಟನೆಗಳು ನಡೆದವು. ನೈಜಿರಿಯಾ, ಭಾರತ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಜನವಿರೋಧಿ ಕಾನೂನುಗಳಿಗೆ ಅಂಗೀಕಾರ ಮಾಡಿದ್ದರ ವಿರುದ್ಧ ಚಳವಳಿಗಳು ನಡೆಯುತ್ತಿವೆ.

ಬಹುಪಾಲು ಸಾಮೂಹಿಕ ಪ್ರತಿಭಟನೆಗಳು ಪ್ರಭುತ್ವಕ್ಕೆ ನೀಡಿದ ಪ್ರತಿಕ್ರಿಯೆಯಾಗಿದ್ದವು. ಕೆಲವು ಪ್ರತಿಗಾಮಿಯಾಗಿದ್ದವು, ಕೆಲವು ಪ್ರಗತಿಶೀಲವಾಗಿದ್ದವು, ಆದರೆ ಎಲ್ಲವೂ ಪ್ರಭುತ್ವದೊಂದಿಗಿನ ಅಸಮಾಧಾನದ ಅಭಿವ್ಯಕ್ತಿಯೇ ಆಗಿದ್ದವು. ಉಗ್ರ ರಾಷ್ಟ್ರೀಯವಾದದ ಬೆಳವಣಿಗೆಯ ಜೊತೆಜೊತೆಗೇ ಪ್ರಭುತ್ವದ ಮೇಲಿನ ಅಸಮಾಧಾನವು ಹೊರಹೊಮ್ಮಿತು. ಮೂಲದಲ್ಲಿ ಜನರು ಮತ್ತು ಪ್ರಭುತ್ವದ ನಡುವೆ ಸಾಮಾಜಿಕ ಒಪ್ಪಂದವನ್ನು ಪ್ರತಿನಿಧಿಸುವ ರಾಷ್ಟ್ರೀಯತೆಯು ಜಗತ್ತಿನ ಜನತೆಯನ್ನು ನಿರಾಶೆಗೊಳಿಸುತ್ತಿದೆ. ಪರ್ಯಾಯದ ಸಾಧ್ಯತೆ ಗೋಚರಿಸದ ಕಾರಣ ಜನರು ಈ ಬಗೆಯ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ. ಪ್ರಭುತ್ವವು ಜನರನ್ನು ವಿಫಲಗೊಳಿಸುತ್ತಿದೆ ಎಂದು ಹೇಳುತ್ತಿರುವ ಜನರು, ತಮ್ಮ ದೇಶದ ಜೊತೆಗಿನ ಸಾಮಾಜಿಕ ಒಪ್ಪಂದದ ಮಾದರಿಗಳನ್ನು ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರ-ಪ್ರಭುತ್ವವು ತಮ್ಮ ಸಾಮಾಜಿಕ ವ್ಯವಸ್ಥೆಯನ್ನು ಒತ್ತಾಯಪೂರ್ವಕವಾಗಿ ಜಾರಿಗೊಳಿಸಬೇಕೆಂದು ಪ್ರತಿಗಾಮಿಗಳು ಒತ್ತಾಯಿಸಿದರೆ, ಪ್ರಗತಿಪರರು ಪ್ರಭುತ್ವದಿಂದ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುತ್ತಿದ್ದಾರೆ. ಬಹುಪಾಲು ದೇಶಗಳಲ್ಲಿ ಇವುಗಳ ನಡುವಿನ ಗೆರೆ ಮಸುಕಾಗಿದೆ.

ಇದೇ ಸಂದರ್ಭದಲ್ಲಿ, 2020ರಲ್ಲಿನ ಪ್ರತಿಭಟನೆಗಳ ಕುರಿತ ಪ್ರಶ್ನೆಗಳು ನಮ್ಮನ್ನು ಕಾಡತೊಡಗುತ್ತವೆ. ಪ್ರತಿಭಟನೆಗಳು ಕೆಲವೊಮ್ಮೆ ಪ್ರತಿಗಾಮಿಯಾಗಿರಬಹುದು ಆದರೆ ಬಹುತೇಕ ಕಡೆಗಳಲ್ಲಿ ಜನಪರವಾದ ಪ್ರತಿಭಟನೆಗಳೇ ನಡೆದಿರುವುದು ಮುಖ್ಯವಾಗಿದೆ. ಅಮೆರಿಕದಲ್ಲಿ ಜನಾಂಗೀಯ ಹಿಂಸೆಯ ವಿರುದ್ಧ ಸಾಮೂಹಿಕ ಪ್ರತಿಭಟನೆಗಳು ನಡೆದವು. ಸಾಂಕ್ರಾಮಿಕದ ಸಂದರ್ಭದಲ್ಲಿ ಬಡವರ ಸುರಕ್ಷತೆಗಾಗಿ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಒತ್ತಾಯಿಸಿಯೂ ಪ್ರತಿಭಟನೆಗಳು ನಡೆದವು. ಬೊಲಿವಿಯದಂತಹ ದೇಶಗಳಲ್ಲಿ ಆಡಳಿತವನ್ನು ಕಿತ್ತೆಸೆದಿದ್ದನ್ನು ನಾವು ನೋಡಿದ್ದೇವೆ. ಪ್ರತಿಭಟನೆಗಳು, ಅದರಲ್ಲೂ ಮುಖ್ಯವಾಗಿ, ಭ್ರಷ್ಟಾಚಾರದ ವಿರುದ್ಧ ವೃತ್ತಿಪರ ಮಧ್ಯಮವರ್ಗಗಳು ನಡೆಸುತ್ತಿರುವ ಪ್ರತಿಭಟನೆಗಳು ಸಂಶಯಾಸ್ಪದವಾಗಿವೆ. ಅವು ಸಾಮಾನ್ಯವಾಗಿ ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ದುರ್ಬಲ ಸಮುದಾಯಗಳ ವಿರೋಧಿಯಾಗಿವೆ. ಇನ್ನು ವಿವಿಧ ದೇಶಗಳಲ್ಲಿ ಅಲ್ಲಿನ ಗಣ್ಯರ ಮತ್ತು ಸಿರಿವಂತರ ಹಿತಾಸಕ್ತಿಗಳನ್ನು ಕಾಪಾಡಲು ಪ್ರತಿಭಟನೆಗಳ ಕವರೇಜ್ ಮಾಡಲಾಗುತ್ತಿದೆ. ವಿವಿಧ ದೇಶಗಳ ತುಳಿತಕ್ಕೊಳಗಾದ ಜನರು ಒಂದು ಸಮಾನ ಹೋರಾಟವನ್ನು ಕಾಣಲು ಇದು ಸಾಕಷ್ಟು ಅವಕಾಶವನ್ನು ನೀಡಲಾರದು. ಆದರೆ ಇದು ಈ ಪ್ರತಿಭಟನೆಗಳ ಸಾರ್ಥಕತೆಯ ಬಗ್ಗೆ ನಾವು ಸಂಶಯಿಸಲು ಕಾರಣವಾಗಬಾರದು. ಪ್ರಗತಿಶೀಲ ಹೋರಾಟಗಳ ಮೂಲಕ ಪ್ರತಿಗಾಮಿ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಎದುರಿಸಬಹುದು.

2021ಕ್ಕೆ ಕಾಲಿಡುತ್ತಿದ್ದರೂ ಇನ್ನೂ ಸಾಂಕ್ರಾಮಿಕ ಪಿಡುಗು ತೊಲಗಿಲ್ಲ. ಕೋವಿಡ್‌ನ ಹೊಸ ಸ್ವರೂಪ ಮತ್ತು ಹೊಸ ಅಲೆಗಳ ಬಗ್ಗೆ ಆತಂಕಗಳಿವೆ. ಜಗತ್ತಿನಾದ್ಯಂತ ಪ್ರತಿಭಟನೆಗಳು ಈ ಅಪಾಯಕ್ಕೆ ಹೊಂದಿಕೊಳ್ಳುವ ಸಾಹಸ ಮಾಡುತ್ತಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿದ್ದರೆ, ಪ್ರತಿಭಟನೆಗಳು ಸಾಂಕ್ರಾಮಿಕ ಹರಡುವಿಕೆಗೆ ಕಾರಣವಾಗುವುದಿಲ್ಲ ಎಂದು ಅಮೆರಿಕದಲ್ಲಿ ಅಧ್ಯಯನವೊಂದು ದೃಢೀಕರಿಸಿದೆ. ಹೀಗಿದ್ದೂ, ಸಾರ್ವಜನಿಕ ಸಭೆಗಳನ್ನು ತಡೆಯಲು ಪ್ರಭುತ್ವವು ಈಗಲೂ ಒಂದು ನೈತಿಕ ನ್ಯಾಯಸಮ್ಮತತೆಯನ್ನು ಹೊಂದಿದೆ ಎಂಬಂತೆ ನಡೆದುಕೊಳ್ಳುತ್ತಿದೆ.

2021ರ ಆಗಮನವನ್ನು ನಿರೀಕ್ಷಿಸುತ್ತಿರುವಂತೆಯೇ, ಹೊಸ ಪ್ರಜಾತಾಂತ್ರಿಕ ಪ್ರಕ್ರಿಯೆಯ ಬಹುಮುಖ್ಯ ಭಾಗವಾಗಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಲಿವೆ. ನಾವು ಮುಂದಕ್ಕೆ ಚಲಿಸಿದಂತೆ, ಯಾರಿಗಾಗಿ ಪ್ರತಿಭಟನೆಗಳು, ಪ್ರತಿಭಟನೆ ಮಾಡಲು ಯಾರಿಗೆ ಸಮ್ಮತಿಸಬೇಕು, ಯಾವುದಕ್ಕಾಗಿ ಪ್ರತಿಭಟಿಸಲು ನಮಗೆ ಅನುಮತಿಯಿದೆ- ಇಂತಹ ಪ್ರಶ್ನೆ ಗಳನ್ನು ಕೇಳಲು ಆರಂಭಿಸಬಹುದು. ಆದರೆ, ಪ್ರಭುತ್ವದ ಅಧಿಕಾರದ ಮೇಲೆ ನಿಗಾ ಇಡಲು, ಪ್ರತಿರೋಧ ತೋರಲು ಈ ಪ್ರತಿಭಟನೆಗಳು ಬಹುಮುಖ್ಯ ಎಂಬುದನ್ನು ಇನ್ನು ಮುಂದೆ ಪ್ರಶ್ನಿಸಲಾಗದು.

ಅನುವಾದ: ಮಲ್ಲನಗೌಡರ್

ಕಿಶೋರ್ ಗೋವಿಂದ

ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಕಂಗಾನಾ ಮುಂಬೈಗೆ ಮರಳಿದ್ದಾರೆಂದು ಎನ್‌‌ಸಿಬಿಗೆ ನೆನಪಿಸಿದ ಕಾಂಗ್ರೆಸ್- ಕಾರಣವೇನು ಗೊತ್ತೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...