Homeಅಂಕಣಗಳುಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

ಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

- Advertisement -
- Advertisement -

ಜಗತ್ತಿನ ಅತಿ ಬಡರಾಷ್ಟ್ರಗಳಲ್ಲಿ ಸೋಮಾಲಿಯಾ ಒಂದು. ಆಫ್ರಿಕಾ ಖಂಡದ ಪೂರ್ವಭಾಗದಲ್ಲಿ ಸೌದಿ ಅರೇಬಿಯಾದಂತಹ ಶ್ರೀಮಂತ ರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಸೋಮಾಲಿಯಾ ಬಡತನ, ಅನಕ್ಷರತೆ, ಅಂತರ್ಯುದ್ಧ ಮತ್ತು ದಂಗೆಗಳಿಂದ ತತ್ತರಿಸಿರುವ ದೇಶ.

ಸೋಮಾಲಿಯಾ ಜನರನ್ನು ಒಗ್ಗೂಡಿಸುವುದು ಅವರ ಧರ್ಮ (ಇಸ್ಲಾಂ) ಮತ್ತು ಭಾಷೆ. ಆದರೆ ತಮ್ಮ ಸಾಂಸ್ಕೃತಿಕ ಒಗ್ಗಟ್ಟಿನ ಬಗ್ಗೆ ಹೆಮ್ಮೆ ಪಡುವ ಸೋಮಾಲಿಗಳು ಅವಕಾಶ ಸಿಕ್ಕಾಗಲೆಲ್ಲಾ ತಮ್ಮವರೇ ಆದ ನೆರೆಯ ಬುಡಕಟ್ಟಿನವರೊಂದಿಗೆ ಕಾಳಗಕ್ಕೆ ಇಳಿಯುವುದೇ ಒಂದು ವೈಚಿತ್ರ್ಯ.

ಶೇ.76ರಷ್ಟು ಸೋಮಾಲಿಗಳು ಇವತ್ತಿಗೂ ಅಲೆಮಾರಿ ಗೊಲ್ಲರು. ತಮ್ಮ ಕುರಿ, ಮೇಕೆ, ಒಂಟೆ ಮತ್ತು ಜಾನುವಾರುಗಳೊಂದಿಗೆ ಅಲೆಮಾರಿ ಜೀವನ ಸಾಗಿಸುವ ಸೋಮಾಲಿಗಳು ಇವತ್ತಿಗೂ ಅವಲಂಬಿಸಿರುವುದು ತಮ್ಮ ಸಾಕುಪ್ರಾಣಿಗಳನ್ನೇ. ಅಷ್ಟೇ ಏಕೆ, ಸೋಮಾಲಿಯಾ ದೇಶದ ಆರ್ಥಿಕತೆ ಕೂಡ ಅವಲಂಬಿತವಾಗಿರುವುದು ತನ್ನ ಅಲೆಮಾರಿ ಜನರ ಜೀವನಾಧಾರಗಳನ್ನೇ. ತನ್ನ ಗೊಲ್ಲರ ಸಾಕುಪ್ರಾಣಿಗಳ ಮಾಂಸ, ಚರ್ಮ ಇತ್ಯಾದಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದರಲ್ಲಿಯೇ ಸೋಮಾಲಿಯಾ ದೇಶ ತನ್ನ ವಿದೇಶ ವಿನಿಮಯದ ಶೇ.90ರಷ್ಟನ್ನು ಗಳಿಸುತ್ತದೆ. ಸೋಮಾಲಿಯಾದ ಜೀವನೋತ್ಪನ್ನಗಳು ಹೆಚ್ಚಾಗಿ ರಫ್ತಾಗುತ್ತಿದ್ದದ್ದು ತನ್ನ ನೆರೆಯಲ್ಲಿರುವ ಸೌದಿ ಅರೇಬಿಯಾಕ್ಕೆ.

ಅಲೆಮಾರಿ ಗೊಲ್ಲರ ಸರಳ ಜೀವನ ಮತ್ತು ಅವರ ಉತ್ಪನ್ನವನ್ನೇ ನಂಬಿದ್ದ ಸೋಮಾಲಿಯಾ ದೇಶ ಸಂಕಷ್ಟದ ದಿನಗಳಿಗೆ ಸಿಲುಕಿದ್ದು 90ರ ದಶಕದಲ್ಲಿ ಅಂತರ್ಯುದ್ಧ ಶುರುವಾದಾಗ. ಆ ಯುದ್ಧದ ಪರಿಣಾಮವಾಗಿ ಮೂರು ಲಕ್ಷ ಜನ ಸಾವನ್ನಪ್ಪಿದರಲ್ಲದೆ, 45 ಲಕ್ಷ ಜನ ಕಾಯಿಲೆ ಹಾಗೂ ಉಪವಾಸದಿಂದ ನರಳಿದರು.

ಈ ದುರಂತದಿಂದ ಸೋಮಾಲಿಯಾ ಚೇತರಿಸಿಕೊಳ್ಳುತ್ತಿರುವಾಗಲೇ, ಸೋಮಾಲಿಯಾದ ಗೊಲ್ಲರ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿಸುತ್ತಿದ್ದ ಸೌದಿ ಅರೇಬಿಯಾ ಒಂದು ಶಾಕ್ ನೀಡಿತು. ಸೋಮಾಲಿಯಾದ ಪ್ರಾಣಿಗಳು ’ಕಣಿವೆ ಜ್ವರ’ದಿಂದ (Rift valley fever) ಬಳಲುತ್ತಿವೆಯೆಂದು ಅವುಗಳ ರಫ್ತನ್ನು ನಿಷೇಧಿಸಿತು. ಅಷ್ಟೇ ಅಲ್ಲದೆ, ಸೋಮಾಲಿಯಾದ ಪ್ರಾಣಿಗಳಿಗೆ ಬದಲಾಗಿ, ಅಲ್ಲಿನ ಮರಮಟ್ಟುಗಳತ್ತ ಸೌದಿ ಅರೇಬಿಯಾ ಕಣ್ಣುಗಳನ್ನಿಟ್ಟಿತು. ಇದ್ದಲಿನ (ಚಾರ್ಕೋಲ್) ಮುಖ್ಯ ಆಧಾರ ಈ ಮರಗಳು. ಅಷ್ಟು ಹೊತ್ತಿಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸೋಮಾಲಿಗಳು ಕಂಡಕಂಡಲ್ಲಿ ಮರಮಟ್ಟುಗಳನ್ನು ಕೆಡವಲಾರಂಭಿಸಿದ್ದರು. ನಿಧಾನವಾಗಿ ಸೋಮಾಲಿಯಾದ ಅರಣ್ಯಗಳು ನಾಶವಾಗಲಾರಂಭಿಸಿದವು.

ಆಗ, ತನ್ನ ದೇಶದ ಜನರಿಗೆ ಬುದ್ದಿ ಹೇಳಿದವಳು ಫಾತಿಮಾ ಜಿಬ್ರೆಲ್. ಈಕೆ ಸೋಮಾಲಿಯಾದ ಅಲೆಮಾರಿ ಗೊಲ್ಲರ ಕುಟುಂಬವೊಂದರಲ್ಲಿ ಜನಿಸಿದಾಕೆ. ಆದರೆ ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದವಳು. ಸಹಸ್ರಾರು ವರ್ಷಗಳಿಂದ ಪರಿಸರವನ್ನೇ ನಂಬಿ ಬದುಕಿದ್ದ ತನ್ನ ಜನ ಹೀಗೆ ಪರಿಸರಕ್ಕೇ ಕೊಡಲಿ ಹಾಕಿದ್ದನ್ನು ಕಂಡ ಫಾತಿಮಾ ತಕ್ಷಣವೇ ಕ್ರಿಯಾಶೀಲವಾದಳು.

ಮರಗಳನ್ನು ಕೆಡವಿದರೆ, ಕಾಡುಗಳನ್ನು ನಾಶಮಾಡಿದರೆ, ಪರಿಸರಕ್ಕೆ ಧಕ್ಕೆ ತಂದರೆ, ಐತಿಹಾಸಿಕವಾಗಿ ಸೋಮಾಲಿಗಳು ನಂಬಿರುವ ಸಾಕುಪ್ರಾಣಿಗಳಿಗೂ ಮತ್ತು ತಮ್ಮ ಅಲೆಮಾರಿ ಜೀವನಶೈಲಿಗೂ ಹಾನಿ ತಂದುಕೊಂಡಂತೆ ಎಂದು ಭಾವಿಸಿದಳು ಫಾತಿಮಾ. “ನಾವು ಅವಲಂಬಿಸಿರುವ ಪರಿಸರವನ್ನು ಒಮ್ಮೆ ನಾಶ ಮಾಡಿದರೆ ಮತ್ತೆ ಲಕ್ಷಾಂತರ ವರ್ಷಗಳಾದರೂ ಅದನ್ನು ಸರಿಪಡಿಸಲಾರೆವು” ಎಂದ ಫಾತಿಮಾ, “ತನಗೆ ಬೇಕಾಗಿರುವ ಇದ್ದಲಿಗಾಗಿ ಸೌದಿ ಅರೇಬಿಯಾ ಸೋಮಾಲಿಯಾಕ್ಕೆ ಮಾಡುತ್ತಿರುವ ಹಾನಿಯನ್ನು ಅರ್ಥೈಸಿಕೊಂಡು ನಮ್ಮ ಬಡದೇಶಕ್ಕೆ ಮಾಡುತ್ತಿರುವ ಅನ್ಯಾಯವನ್ನು ನಿಲ್ಲಿಸಲಿ.” ಎಂದು ಘೋಷಿಸಿದಳು.

ಅಂದಿನಿಂದ ಸೋಮಾಲಿಯಾದ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಫಾತಿಮಾ. ಈಗ ಮುದುಕಿಯಾಗಿರುವ ಫಾತಿಮಾ ಚಿಕ್ಕಪುಟ್ಟ ಗ್ರಾಮಗಳಲ್ಲೂ ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾಳೆ. ಇನ್ನು ಸೋಮಾಲಿಯಾದಲ್ಲಿ ಕಾಡುಗಳು ಸುರಕ್ಷಿತವಾಗಿದ್ದರೆ, ಹಳ್ಳಿಗಳಲ್ಲಿ ಸೌರಶಕ್ತಿ ಬಳಕೆ ಆಗುತ್ತಿದ್ದರೆ ಅದಕ್ಕೆ ಫಾತಿಮಾ ಕಾರಣ. ಆದರೆ ಇದು ಫಾತಿಮಾ ಸುಲಭವಾಗಿ ಗಳಿಸಿದ ಸಾಧನೆಯಲ್ಲ.

ಒಂದು ದಶಕದಿಂದ ಅಂತರ್ಯುದ್ಧವನ್ನು ಎದುರಿಸುತ್ತಿರುವ ಸೋಮಾಲಿಯಾ ಈಗ ಬರಗಾಲದಿಂದ ತತ್ತರಿಸುತ್ತಿದೆ. ಈಗ ಅದು ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಕೂಡ ಆಗಿದೆ. ಈ ಎಲ್ಲದರ ಮಧ್ಯೆ ಫಾತಿಮಾ ಪರಿಸರವನ್ನು ರಕ್ಷಿಸುವುದಕ್ಕಾಗಿ, ಮಹಿಳೆಯರನ್ನು ಒಗ್ಗೂಡಿಸುತ್ತಿರುವುದಕ್ಕಾಗಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾಳೆ. ಆದರೂ, ಈ ಎಲ್ಲಾ ತೊಂದರೆಗಳ ನಡುವೆಯೂ ಇತ್ತೀಚೆಗೆ ಸೋಮಾಲಿಯಾದ ಒಂದು ರಾಜ್ಯವಾದ ಪುಂಟ್‌ಲ್ಯಾಂಡ್‌ನಿಂದ ಇದ್ದಿಲು ರಫ್ತನ್ನು ನಿಷೇಧ ಮಾಡುವುದರಲ್ಲಿ ಯಶಸ್ವಿಯಾಗಿದ್ದಾಳೆ.

ತನ್ನ ಜನರ ಜೀವನಶೈಲಿಯನ್ನು ಮತ್ತು ಪರಿಸರವನ್ನು ಸಂರಕ್ಷಿಸುವುದರಲ್ಲಿ ಫಾತಿಮಾಳದ್ದು ಏಕಾಂಗಿ ಹೋರಾಟ. ಕಳೆದ ವಾರ ಈ ದಿಟ್ಟ ಮಹಿಳೆಯ ಕೊಡುಗೆಯನ್ನು ಪರಿಗಣಿಸಿ ಪರಿಸರ ಸಂರಕ್ಷಣೆಗಾಗಿ ’ಗೋಲ್ಡ್ ಮ್ಯಾನ್ ಎನ್‌ವೈರ್ನಮೆಂಟ್ ಪ್ರೈಜ’ನ್ನು ಈಕೆಗೆ ನೀಡಲಾಗಿದೆ. ಈ ಪ್ರಶಸ್ತಿ ಬರುವವರೆಗೂ ಫಾತಿಮಾ ಜಿಬ್ರೆಲ್ ಬಗ್ಗೆ ಸೋಮಾಲಿಯಾ ಹೊರತುಪಡಿಸಿ ಹೊರಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಕಾಳಜಿ ಮತ್ತು ಅರ್ಪಣಾಭಾವ ಇದ್ದರೆ ಯಾರಾದರೂ ತಮ್ಮ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಫಾತಿಮಾ ಜಿಬ್ರೆಲ್ ಒಂದು ಉದಾಹರಣೆ.

(ಇದು ಗೌರಿಯವರ ಕಂಡಹಾಗೆ ಅಂಕಣ ಬರಹವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೀಗೆ ಉತ್ತಮ ಬರಹಗಳನ್ನು ಮರು ಪ್ರಕಟಣೆ ಮಾಡುತ್ತಿರಿ. ಧನ್ಯವಾದ. ‌

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...